ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30/06/2020

By blogger on ಮಂಗಳವಾರ, ಜೂನ್ 30, 2020







                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30/06/2020 
                                                                                                               
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- ಕೊಡೇಕಲ್ ಪೊಲೀಸ್ ಠಾಣೆ : ಇಂದು ದಿನಾಂಕ 30.06.2020 ರಂದು 7:00 ಪಿಎಮ್ ಕ್ಕೆ ಫಿಯರ್ಾದಿ ಶ್ರೀ. ಸೋಮನಾಥ ತಂದೆ ದೇನಪ್ಪ ಪವಾರ ವ:35 ವರ್ಷ ಉ: ಕೂಲಿಕೆಲಸ ಜಾ: ಲಂಬಾಣಿ ಸಾ: ಜುಮಾಲಪೂರ ದೊಡ್ಡ ತಾಂಡ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಹೇಳಿ ಟೈಪ್ ಮಾಡಿಸಿದ ಹೇಳಿಕೆಯ ಸಾರಾಂಶವೆನೆಂದರೆ  ನಮ್ಮ ತಂದೆ-ತಾಯಿಗೆ ನಾನು, ತುಕಾರಾಮ, ವೆಂಕಟೇಶ, ಶಿವಪ್ಪ ಅಂತ 4 ಜನ ಗಂಡು ಮಕ್ಕಳಿದ್ದು. ನಾವು ನಾಲ್ಕು ಜನರದು ಮದುವೆಯಾಗಿದ್ದು ನಾವೆಲ್ಲರೂ ಬೇರೆ-ಬೇರೆಯಾಗಿದ್ದು. ನನಗೆ ಜ್ಯೋತಿಬಾಯಿ. ಮಂಜುಬಾಯಿ, ಆಯಸ್ಸು, ಮೈತ್ರಾ ಅಂತ 4 ಜನ ಹೆಣ್ಣು ಮಕ್ಕಳು ಮತ್ತು ದರ್ಶನ್  ಅಂತ ಒಬ್ಬ ಗಂಡು ಮಗನಿದ್ದು. ನನ್ನ ತಂದೆಯು ತೀರಿಕೊಂಡಿದ್ದು ನನ್ನ ತಾಯಿ ಶಾಲುಬಾಯಿಯು ನನ್ನ ತಮ್ಮ ಶಿವಪ್ಪನ ಹತ್ತಿರ ಇದ್ದು. ನನ್ನ ಪಾಲಿಗೆ ಹಳೆ ಮನೆ ಬಂದಿದ್ದು. ಅದರಲ್ಲಿಯೇ ನಾನು ಮತ್ತು ನನ್ನ ಹೆಂಡತಿ ಮಕ್ಕಳು ವಾಸವಾಗಿದ್ದು. ನನ್ನ ಹಿರಿಯ ಮಗಳಾದ ಜ್ಯೋತಿಬಾಯಿ ಇವಳಿಗೆ ಈಗ ಒಂದು ವರ್ಷದ ಹಿಂದೆ ಕನಗಂಡನ ಹಲ್ಳಿ ತಾಂಡಾದ ದೇವರಾಜ ತಂದೆ ಹಣಮಂತ ಚವ್ಹಾಣ ಇತನೊಂದಿಗೆ ಕೊಟ್ಟು ಮದುವೆಮಾಡಿದ್ದು ಮದುವೆಯನ್ನು ನಮ್ಮ ಮನೆಯ ಮುಂದೆ ನಾನೆ ಮಾಡಿ ಕೊಟ್ಟಿದ್ದು ಇರುತ್ತದೆ. ಹೀಗಿದ್ದು ಪ್ರತಿ ವರ್ಷದಂತೆ ಈ ವರ್ಷವು ನಮ್ಮ ಧರ್ಮದ ಸಂಪ್ರದಾಯದ ಪ್ರಕಾರ ಗುಗ್ಗರಿ ಹಬ್ಬ ಮಾಡುತ್ತಿದ್ದರಿಂದ ಮಂಗಳವಾರ ದಿನಾಂಕ:23.06.2020 ರಂದು ನನ್ನ ಮಗಳಾದ ಜ್ಯೋತಿಬಾಯಿ ಹಾಗೂ ಅಳಿಯ ದೇವರಾಜನಿಗೆ ಹಬ್ಬಕ್ಕೆ ಬರಲು ತಿಳಿಸಿದ್ದರಿಂದ ಇವರಿಬ್ಬರೂ ಮಂಗಳವಾರ ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಕನಗಂಡನ ಹಳ್ಳಿ ತಾಂಡಾದಿಂದ ನಮ್ಮ ಮನೆಗೆ ಬಂದಿದ್ದು ಇರುತ್ತದೆ. ನಂತರ ನಾನು ಅದೇ ದಿನ ನನ್ನ ಸಂಸಾರದ ಅಡಚೆಣೆಗಾಗಿ ನನಗೆ ಕಾಕನಾಗಬೇಕಾದ ನಮ್ಮ ತಾಂಡಾದ ಶಂಕ್ರೆಪ್ಪ ತಂದೆ ಭೀಮಪ್ಪ ಪವಾರ ಇವರ ಹತ್ತಿರ ಒಂದು ಲಕ್ಷ ಎಪ್ಪತೈದು ಸಾವಿರ ರೂಪಾಯಿಗಳನ್ನು  ಕೈಸಾಲ ಪಡೆದುಕೊಂಡು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದು ಮನೆಯಲ್ಲಿಯ ದೇವರ ಕೋಣಿಯಲ್ಲಿ ಟ್ರಂಕಿನಲ್ಲಿ ಈ ಹಣವನ್ನು ಇಟ್ಟಿದ್ದು ನಾನು ಈಹಣವನ್ನು ಎಣಿಸಿ ಟ್ರಂಕಿನಲ್ಲಿ ಇಡುವಾಗ ನನ್ನ ಅಳಿಯನಾದ ದೇವರಾಜ ತಂದೆ ಹಣಮಂತ ಇತನು ಅಲ್ಲಿಯೇ ಇದ್ದು ನಾನು ಹಣ ಟ್ರಂಕಿನಲ್ಲಿ ಇಡುವದನ್ನು ನೋಡಿದ್ದು ಇರುತ್ತದೆ. ನಾನು ಟ್ರಂಕಿನಲ್ಲಿ ಹಣವನ್ನು ಇಟ್ಟು ಕೀಲಿ ಹಾಕಿ ಕೀಲಿ ಕೈ ಯನ್ನು ಟ್ರಂಕಿನ ಕೆಳಗೆ ಇಟ್ಟಿದ್ದು ಇರುತ್ತದೆ. ನಂತರ ನಾವು ಮನೆಯವರೆಲ್ಲರೂ ಹಾಗೂ ನನ್ನ ಅಳಿಯ ದೇವರಾಜ ಮಗಳಾದ ಜ್ಯೋತಿಬಾಯಿ ಎಲ್ಲರೂ ಕೂಡಿ ಆ ದಿವಸ ಸಾಯಂಕಾಲ 4:00 ಗಂಟೆಯಿಂದ ರಾತ್ರಿ 8:00 ಗಂಟೆಯ ವರೆಗೆ ಗುಗ್ಗರಿ ಹಬ್ಬವನ್ನು ಆಚರಿಸಿದ್ದು. ನಂತರ ಎಲ್ಲರೂ ಊಟ ಮಾಡಿ ರಾತ್ರಿ ಮಲಗಿಕೊಂಡಿದ್ದು ಇರುತ್ತದೆ.  ದಿನಾಂಕ:24.06.2020 ರಂದು ಬುದುವಾರ ಬೆಳಿಗ್ಗೆ 8:00 ಗಂಟೆಯ ಸುಮಾರಿಗೆ ನನ್ನ ಅಳಿಯ ದೇವರಾಜನು ನಮಗೆ ಹೇಳದೇ-ಕೇಳದೇ ನಮ್ಮ ಮನೆಯಿಂದ ಹೋಗಿದ್ದು. ನಂತರ ಆ ದಿವಸ ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ನನಗೆ ಖಚರ್ಿಗಾಗಿ ಹಣ ಬೇಕಾಗಿದ್ದರಿಂದ ನಾನು ಕೈಸಾಲ ಮಾಡಿಕೊಂಡು ತಂದಿಟ್ಟಿದ್ದ ದೇವರ ಮನೆಯಲ್ಲಿಯ ಟ್ರಂಕನ್ನು ತೆರೆದು ಹಣ ತೆಗೆದುಕೊಳ್ಳಲು ಹೋದಾಗ ಕೀಲಿ ತೆರೆದು ನೋಡಲಾಗಿ ಟ್ರಂಕಿನಲ್ಲಿ ಇಟ್ಟಿದ್ದ ಒಂದು ಲಕ್ಷ ಎಪ್ಪತೈದು ಸಾವಿರ ರೂಪಾಯಿಗಳು ಟ್ರಂಕಿನಲ್ಲಿ ಇರಲಿಲ್ಲಾ. ನಾನು ಮತ್ತು ನನ್ನ ಹೆಂಡತಿ ಶಿವುಬಾಯಿ ಮನೆಯಲ್ಲಿ ನಮ್ಮ ಮಕ್ಕಳಿಗೆ ವಿಚಾರಿಸಲಾಗಿ ಅವರು ನಮಗೆ ಏನು ಗೋತ್ತಿಲ್ಲಾ ಅಂತ ತಿಳಿಸಿದ್ದು. ಗುಗ್ಗರಿ ಹಬ್ಬಕ್ಕೆ ಬಂದ ನನ್ನ ಅಳಿಯ ದೇವರಾಜನು ನಾನು ಟ್ರಂಕಿನಲ್ಲಿ ಹಣ ಇಡುವಾಗ ನೋಡಿದ್ದು. ಅಲ್ಲದೇ ಮರುದಿನ ಬೆಳಿಗ್ಗೆ ಮನೆಯಲ್ಲಿ ಯಾರಿಗೂ ಹೇಳದೇ-ಕೇಳದೇ ಹೋಗಿದ್ದರಿಂದ ಈ ಹಣವನ್ನು ನನ್ನ ಅಳಿಯನೇ ಕಳವು ಮಾಡಿಕೊಂಡು ಹೋದ ಬಗ್ಗೆ ನನಗೆ ಬಲವಾದ ಸಂಶಯ ಬಂದಿದ್ದು ಇರುತ್ತದೆ. ನನ್ನ ಅಳಿಯ ದೇವರಾಜನು ದಿನಾಂಕ:27.06.2020 ರಂದು ಶನಿವಾರ ದಿವಸ ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ಪುನಃ ನಮ್ಮ ಮನೆಗೆ ಬಂದಿದ್ದು ಆಗ  ನಾನು ನಮ್ಮ ತಾಂಡಾದ ನಮ್ಮ ಸಂಬಂಧಿಕರಾಗಬೇಕಾದ ಲಕ್ಕಪ್ಪ ತಂದೆ ಧೀರಪ್ಪ ರಾಠೋಡ, ನಾರಾಯಣ ತಂದೆ ಭೀಮಪ್ಪ ಪವಾರ, ಶಂಕ್ರೆಪ್ಪ ತಂದೆ ಧೀರಪ್ಪ ರಾಠೋಡ, ಚಂದ್ರಸೇನ ತಂದೆ ಸೂರಪ್ಪ ಪವಾರ, ಶರಣಪ್ಪ ತಂದೆ ಗೋವಿಂದಪ್ಪ ಪೂಜಾರಿ, ತಿರುಪತಿ ತಂದೆ ಕಸನಪ್ಪ ಪವಾರ ಇವರಿಗೆ ನಮ್ಮ ಮನೆಗೆ ಕರೆಯಿಸಿ ಇವರ ಸಮಕ್ಷಮದಲ್ಲಿ ನನ್ನ ಅಳಿಯ ದೇವರಾಜನಿಗೆ ನನ್ನ ಹಣ ಕಳುವಾದ ಬಗ್ಗೆ ವಿಚಾರಿಸಲಾಗಿ ಅವನು ನನಗೆ ಏನು ಗೊತ್ತಿಲ್ಲಾ ಅಂತ ತಿಳಿಸಿದ್ದು ಆಗ ನಮ್ಮ ಮನೆಗೆ ಕರೆಯಿಸಿದ ಎಲ್ಲರೂ ನನ್ನ ಅಳಿಯನಿಗೆ ಗದರಿಸಿ ನೀನು ನಿಜ ಹೇಳದಿದ್ದರೇ ಪೊಲೀಸರಿಗೆ ಕರೆಯಿಸುತ್ತೇವೆ ನಿಜ ಹೇಳು ಅಂತ ಕೇಳಿದಾಗ ನನ್ನ  ಅಳಿಯನು ತಾನು ದಿನಾಂಕ:24.06.2020 ರಂದು ಬುದುವಾರ ದಿವಸ ಬೆಳಿಗ್ಗೆ 7:00 ಗಂಟೆಯ ಸುಮಾರಿಗೆ ನೀವು ದೇವರ ಮನೆಯಲ್ಲಿ ಯಾರು ಇಲ್ಲದ ವೇಳೆಯನ್ನು ನೋಡಿ ಟ್ರಂಕಿನ ಕೆಳಗೆ ಇಟ್ಟಿದ್ದ ಕೀಲಿ ಕೈಯನ್ನು ತೆಗೆದುಕೊಂಡು ಟ್ರಂಕಿನ ಕೀಲಿಯನ್ನು ತೆರೆದು ಅದರಲ್ಲಿ ಇಟ್ಟಿದ್ದ ಎಲ್ಲಾ ಹಣವನ್ನು ಕಳುವು ಮಾಡಿಕೊಂಡು ಮತ್ತೆ ಟ್ರಂಕಿಗೆ ಕೀಲಿ ಹಾಕಿ ಕೀಲಿ ಕೈಯನ್ನು  ಅಲ್ಲಿಯೇ ಟ್ರಂಕಿನ ಕೆಳಗೆ ಇಟ್ಟು ಹೋಗಿದ್ದಾಗಿ ತಿಳಿಸಿದ್ದು ಮತ್ತು ನಾನು  ನೀನು ಹಣವನ್ನು ತಂದು ಟ್ರಂಕಿನಲ್ಲಿ ಇಟ್ಟ ವಿಷಯವನ್ನು ನನ್ನ ತಾಯಿಯಾದ ರತ್ನಬಾಯಿ ಗಂಡ ಹಣಮಂತ ಚವ್ಹಾಣ ರವರಿಗೆ  ಮಂಗಳವಾರ ದಿವಸ ದಿನಾಂಕ:23.06.2020 ರಂದು ಸಾಯಂಕಾಲ ಪೋನ್ ಮಾಡಿ ತಿಳಿಸಿದ್ದು. ನನ್ನ ತಾಯಿಯು ನನಗೆ ಹೇಗಾದರೂ ಮಾಡಿ ನೀವು ಇಟ್ಟ ಹಣವನ್ನು ಕಳುವು ಮಾಡಿಕೊಂಡು ಬಾ ಅಂತ ನನಗೆ ತಿಳಿಸಿದ್ದರಿಂದ ನಾನು ಹಣವನ್ನು ಕಳುವು ಮಾಡಿಕೊಂಡು ಹೋಗಿದ್ದಾಗಿ ತಿಳಿಸಿದ್ದು. ದೇವರಾಜನಿಗೆ  ನೀನು ಕಳುವು ಮಾಡಿಕೊಂಡ ಹೋದ ಹಣ ಎಲ್ಲಿವೆ ಕೊಡು ಅಂತ ಕೇಳಲಾಗಿ ಅವನು ನಾನು ಕಳವು ಮಾಡಿಕೊಂಡು ಹೋದ ನಿಮ್ಮ ಒಂದು ಲಕ್ಷ ಎಪ್ಪತೈದು ಸಾವಿರ ರೂಪಾಯಿಗಳಲ್ಲಿ ನಾನು ಈಗ ಕೆಲದಿನಗಳ ಹಿಂದೆ ಖರೀದಿಸಿದ ಅಶೋಕ ಲೈಲ್ಯಾಂಡ ಕಂಪನಿಯ ದೊಸ್ತ ವಾಹನ ನಂ:ಕೆಎ-28 ಸಿ-5630 ನೇದ್ದರ ಮಾಲಿಕನಿಗೆ  ಒಂದು ಲಕ್ಷ ರೂಪಾಯಿ ಕೊಟ್ಟಿದ್ದು.  ಹಾಗೂ ನಾನು ಖರೀದಿಸಿದ ಮೋಟರ್ ಸೈಕಲ್ ಮಾಲಿಕನಿಗೆ 40,000/- ಕೊಟ್ಟಿದ್ದು. ಉಳಿದ 35,000/- ರೂಪಾಯಿಗಳನ್ನು ನನ್ನ ತಾಯಿ ರತ್ನಬಾಯಿಗೆ ಕೊಟ್ಟಿದ್ದಾಗಿ ತಿಳಿಸಿದ್ದು. ನಾವೆಲ್ಲರೂ ಅವನಿಗೆ ನಾವು ಬಡವರಿದ್ದೇವೆ ನಾನು ನನ್ನ ಸಂಸಾರ ಅಡಚಣೆಗಾಗಿ ಬೇರೆಯವರಿಂದ ಕೈ ಸಾಲ ಪಡೆದುಕೊಂಡು ತಂದ ಹಣವನ್ನು ಕಳುವು ಮಾಡಿಕೊಂಡು ಹೋಗಿದ್ದು. ಆ ಹಣವನ್ನು ತಂದು ಕೊಡು ಅಂತ ಅಂದಾಗ ನನ್ನ ಅಳಿಯ ದೇವರಾಜನು 3-4 ದಿವಸ ತಡೆಯಿರಿ ನಾನು ನಿಮ್ಮ ಹಣ ತಂದು ಕೊಡುತ್ತೇನೆ ಅಂತ ನಮ್ಮ ತಾಂಡಾದ ಮೇಲೆ ನಮೂದಿಸಿದ ನಮ್ಮ ಸಂಬಂಧಿಕರ ಮುಂದೆ ತಿಳಿಸಿದ್ದರಿಂದ ದೇವರಾಜನು ನನ್ನ ಮಗಳ ಗಂಡನಾಗಿದ್ದರಿಂದ ಅವನು ಹಣವನ್ನು ತಂದು ಕೊಡಬಹುದೆಂದು ನಾನು ಆದಿವಸ ಸುಮ್ಮನಾಗಿದ್ದು ಆದರೆ ನನ್ನ ಅಳಿಯ ದೇವರಾಜನು ಇಂದಿನ ವರೆಗೂ ಕಳುವು ಮಾಡಿಕೊಂಡ ಹೋದ ನನ್ನ ಒಂದು ಲಕ್ಷ ಎಪ್ಪತೈದು ಸಾವಿರ ಹಣವನ್ನು ತಂದು ಕೊಟ್ಟಿರುವದಿಲ್ಲಾ. ನನ್ನ ಅಳಿಯ ದೇವರಾಜನು ತನ್ನ ತಾಯಿಯಾದ ರತ್ನಬಾಯಿ ಗಂಡ ಹಣಮಂತ ಚವ್ಹಾಣ ಇವರ ಮಾತನ್ನು ಕೇಳಿ ಅವಳ ಕುಮ್ಮಕ್ಕಿನಿಂದ ನಾನು ಕೈ ಸಾಲ ಮಾಡಿ ತಂದು ನಮ್ಮ ಮನೆಯ ದೇವರ ಮನೆಯಲ್ಲಿ ಟ್ರಂಕಿನಲ್ಲಿ ತಂದಿಟ್ಟಿದ್ದ ಹಣವನ್ನು ಕಳುವು ಮಾಡಿಕೊಂಡು ಹೋಗಿದ್ದು ನನ್ನ ಹಣವನ್ನು ಕಳುವ ಮಾಡಿಕೊಂಡು ಹೋದ ಆಳಿಯ ದೇವರಾಜ ತಂದೆ ಹಣಮಂತ ಚವ್ಹಾಣ ಹಾಗೂ ಹಣ ಕಳವು ಮಾಡಲು ಕುಮ್ಮಕ್ಕು ನೀಡಿದ ಅವನ ತಾಯಿ ರತ್ನಾಬಾಯಿಯ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು  ಅಂತಾ ಕೊಟ್ಟ ಫಿಯರ್ಾದಿ  ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:53/2020 ಕಲಂ: 380, 109 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 87/2020 ಕಲಂ 279, 337, 338, 304(ಎ) ಐಪಿಸಿ ಸಂ 187 ಐ.ಎಂ.ವಿ. ಕಾಯ್ದೆ : ಇಂದು ದಿನಾಂಕ 30/06/2020 ರಂದು ಸಾಯಂಕಾಲ 5-00 ಗಂಟೆಗೆ ಆರೋಪಿತನು ತನ್ನ ಕ್ರೂಜರ ವಾಹನ ನಂ ಕೆ.ಎ-33-ಎಮ್-5771 ನೆದ್ದನ್ನು ರಾಮಸಮುದ್ರ ಕಡೆಯಿಂದ ಅರಿಕೇರಾ(ಕೆ) ಕಡೆಗೆ ಹೋಗುವಾಗ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗಿ ಎದುರಿಗೆ ಬರುತ್ತಿದ್ದ ಮೋಟಾರ ಸೈಕಲ್ ನಂ ಕೆ.ಎ-33-ವಿ-4531 ನೆದ್ದಕ್ಕೆ ಜೋರಾಗಿ ಡಿಕ್ಕಿಪಡಿಸಿದಾಗ ಮೋಟಾರ ಸೈಕಲ ಮೇಲಿದ್ದ ಮೂವರೂ ಕೆಳಗಡೆ ಬಿದ್ದು, ಭಾರಿ ಮತ್ತು ಸಾದಾ ಗಾಯಗಳು ಹೊಂದಿದ್ದು, ಅವರೆಲ್ಲರೂ ಅಂಬುಲೆನ್ಸದಲ್ಲಿ ಉಪಚಾರಕ್ಕೆ ಯಾದಗಿರಿ ಸರಕಾರಿ ಆಸ್ಪತ್ರೆಗೆ ಬರುವಾಗ ಆಸ್ಪತ್ರೆಯ ಆವರಣದಲ್ಲಿಸಾಯಂಕಾಲ 6-00 ಗಂಟೆಗೆ ಸಾಬಣ್ಣ ತಂದೆ ಹಣಮಂತ ಐಕೂರ ಇತನು ಮೃತಪಟ್ಟಿದ್ದು, ಡಿಕ್ಕಿಪಡಿಸಿದ ಕ್ರೂಜರ ವಾಹನ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಹಾಗೇ ಓಡಿಸಿಕೊಂಡು ಹೋಗಿದ್ದು ಇರುತ್ತದೆ, ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 87/2020 ಕಲಂ 279, 337, 338, 304(ಎ) ಐಪಿಸಿ ಸಂ 187 ಐ.ಎಂ.ವಿ. ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 179/2020  ಕಲಂ 188 ಐ.ಪಿ.ಸಿ   : ಇಂದು ದಿನಾಂಕ 30/06/2020 ರಂದು ಸಾಯಂಕಾಲ 17-00 ಗಂಟೆಗೆ ಫಿರ್ಯಾಧಿ ಶ್ರೀ ಭೀಮಶೆಪ್ಪ ತಂದೆ ಕೇಶಪ್ಪ ಕುಂಬಾರ ವಯ 57 ವರ್ಷ ಜಾತಿ ಕುಂಬಾರ ಉಃ ಟಿ.ವಡಗೇರಾ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಾಃ ಹೊರಟುರ ತಾಃ ವಡಗೇರಾ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ,  ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶದಂತೆ, ಟಿ.ವಡಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹೈಯ್ಯಾಳ(ಕೆ)  ಗ್ರಾಮದ ನಿವಾಸಿತನಾದ ಮಲ್ಲಿಕಾಜರ್ುನ ತಂದೆ ಸಿದ್ದಣ್ಣ ಬಿರಾದಾರ ವಯ 25 ವರ್ಷ ಜಾತಿ ಲಿಂಗಾಯತ ಎಂಬುವರು ಹೈದ್ರಾಬಾದನಿಂದ ದಿನಾಂಕ 09/06/2020 ರಂದು ಗುರುಮಿಠಕಲ್ಲಿಗೆ ಬಂದು ದಿನಾಂಕ 24/06/2020 ರ ವರೆಗೆ 14 ದಿನ ಕ್ವಾರಂಟೈನನಲ್ಲಿದ್ದು, ಕ್ವಾರೆಂಟೈನ್  ಅವಧಿ ಮುಗಿದ  ನಂತರ ಗುರುಮಿಠಕಲ್ನಲ್ಲಿ  ವೈದ್ಯಾಧಿಕಾರಿಗಳು ಸದರಿ ವ್ಯಕ್ತಿಗೆ  ಊರಿಗೆ ಹೋದ ನಂತರ ದಿನಾಂಕ 07/07/2020 ರ ವರೆಗೆ 14 ದಿನ ಹೋಮ್ ಕ್ವಾರೆಂಟೈನ್ ಇರುವಂತೆ ಮೌಖಿಕವಾಗಿ ಸೂಚಿಸಿ ಕಳುಹಿಸಿದ್ದರು. ಮಲ್ಲಿಕಾಜರ್ುನ ಇವರು ಹೈಯ್ಯಾಳ(ಕೆ) ಗ್ರಾಮಕ್ಕೆ  ಬಂದಾಗ ಹೋಮ್ ಕ್ವಾರೆಂಟೈನ್ನ ಅವಧಿ ಮುಗಿಯದೆ  ಗ್ರಾಮದಲ್ಲಿ ಸುತ್ತಾಡುತಿದ್ದ ಬಗ್ಗೆ  ಮಾಹಿತಿ ಬಂದ ಮೇರೆಗೆ ಇಂದು ದಿನಾಂಕ 30/06/2020 ರಂದು ಮದ್ಯಾಹ್ನ 2-00 ಗಂಟೆಗೆ ನಾನು ಮತ್ತು ಹೈಯ್ಯಾಳ(ಕೆ) ಗ್ರಾಮದ ಗ್ರಾಮ ಲೇಕ್ಕಾಧಿಕಾರಿ ಜಾವೀದ್ ತಂದೆ ಮಹ್ಮದ ಇಕ್ಬಾಲ್ ಮುಸಾ ಹಾಗೂ ಬಿಲ್ ಕಲೇಕ್ಟರ ನಿಂಗಣ್ಣ ತಂದೆ ದೇವಿಂದ್ರಪ್ಪ ಹುಂಡೆಕಲ್ ರವರೊಂದಿಗೆ ಸದರಿ ಗ್ರಾಮಕ್ಕೆ ಭೇಟಿ ಮಾಡಿದಾಗ ಹೋಮ್ ಕ್ವಾರಂಟೈನಲ್ಲಿರಬೇಕಾದ ವ್ಯಕ್ತಿ ಮಲ್ಲಿಕಾಜರ್ುನ ತಂದೆ ಸಿದ್ದಣ್ಣ ಬಿರಾದಾರ ವಯ 25 ವರ್ಷ ಇವರು ಗ್ರಾಮದ ಹನುಮಾನ ಗುಡಿಯ ಹತ್ತಿರ ತಿರುಗಾಡುತಿದ್ದರು. ಕಾರಣ ಉಲ್ಲೇಖದಲ್ಲಿ ನಮೂದು ಮಾಡಿದ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ  ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ. ಕಾರಣ ಹೈಯ್ಯಾಳ(ಕೆ) ಗ್ರಾಮದ ನಿವಾಸಿತನಾದ ಮಲ್ಲಿಕಾಜರ್ುನ ತಂದೆ ಸಿದ್ದಣ್ಣ ಬಿರಾದಾರ ವಯ 25 ವರ್ಷ ಈತನ ವಿರುದ್ದ ಕಾನೂನು ರೀತಿಯ ಕ್ರಮ ಕೈಕೊಳ್ಳಲು ವಿನಂತಿ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 179/2020 ಕಲಂ 188 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 178/2020.ಕಲಂ 341.323 504 506 ಸಂ 34 ಐ.ಪಿ.ಸಿ.; ದಿನಾಂಕ 30/06/2020 ರಂದು 13-30 ಗಂಟೆಗೆ ಪಿಯರ್ಾದಿ ಶ್ರೀ ರಾಘವೆಂದ್ರ ತಂದೆ ಹಣಮಂತರಾಯ ಭಜಾರಮನಿ ವ|| 39 ಜಾ|| ಕಬ್ಬಲಿಗ ಉ|| ಕೂಲಿ ಸಾ|| ಗಂಗಾನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನನಗೆ ನನ್ನ ಸಂಬಂದಿಕಾದ ಯಮನಪ್ಪ ತಂದೆ ಅಂಬಣ್ಣ ಬಿಜಾಪೂರ ಈತನು ನನ್ನೊಂದಿಗೆ ಪೈನಾನ್ಸ ಹಣದ ಸಂಬಂದವಾಗಿ ತಕರಾರು ಮಾಡುತ್ತ ಬಂದಿದ್ದು ನಾನು ಹೋಗಲಿಂತ ಸುಮ್ಮನೆ ಆಗಿದ್ದೆನು. 
        ಹೀಗಿದ್ದು ನಮ್ಮ ಸಂಬಂದಿಕನಾದ ಯಮನಪ್ಪ ತಂದೆ ಅಂಬಣ್ಣ ಈತನು ನನಗೆ ಫೈನಾನ್ಸ ಲೆಕ್ಕ ಪತ್ರ ಮಾಡುವದಿದೆ ಬಾ ಅಂತ ನನಗೆ ತಿಳಿಸಿದ್ದರಿಂದ ನಾನು ಸುಬೇದಾರ ಆಸ್ಪತ್ರೆಯ ಹತ್ತಿರ ಇರುವ ಬಾಗ್ಯವಂತಿ ಫೈನಾನ್ಸ ಹತ್ತಿರ ದಿನಾಂಕ 15/06/2020 ರಂದು 11-30 ಗಂಟೆಗೆ ಹೋದಾಗ ನನ್ನ ಸಂಬಂದಿಕನಾದ 1] ಯಮನಪ್ಪ ತಂದೆ ಅಂಬಣ್ಣ ಬಿಜಾಪೂರ, 2] ವಿಶ್ವನಾಥ ತಂದೆ ಯಮನಪ್ಪ ಬೀಜಾಪೂರ, 3] ಯಂಕಪ್ಪ ತಂದೆ ಭೀಮಣ್ಣ ಬೀಜಾಪೂರ, 4] ಅಂಬಣ್ಣ ತಂದೆ ಭೀಮಣ್ಣ ಬಿಜಾಪೂರ, ಸಾ|| ಎಲ್ಲರು ಮಮದಾಪೂರ ಶಹಾಪೂರ ಇವರೆಲ್ಲರು ಪೈನಾನ್ಸ ಮುಂದೆ ನಿಂತಿದ್ದರು, ನನಗೆ ನೋಡಿದವರೆ ಲೇ ರಾಘ್ಯಾ ಸೂಳಿ ಮಗನೆ ನಿನ್ನದು ಬಹಳ ವಾಗಿದೆ ನಮ್ಮೋದಿಗೆ ಯಾವಾಗಲು ತಕರಾರು ಮಾಡುತ್ತಿ ಅಂತ ಅಂದವರೆ ಯಮನಪ್ಪ ತಂದೆ ಅಂಬಣ್ಣ ಈತನು ನನಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ತನ್ನ ಕಾಲಿನಿಂದ ನನ್ನ ಎಡಗಾಲಿಗೆ ಒದ್ದು ಗುಪ್ತಗಾಯಮಾಡಿದನು, ವಿಶ್ವಾರಾದ್ಯ ತಂದೆ ಯಮನಪ್ಪ ಈತನು ನನಗೆ ಕೈಹಿಡಿದು ಜಗ್ಗಾಡಿದನು, ಯಂಕಪ್ಪ ತಂದೆ ಬೀಮಣ್ಣ ಈತನು ತನ್ನ ಕೈಯಿಂದ ನನ್ನ ಬಲಗೈ ಜುಬ್ಬಕ್ಕೆ ಹೋಡೆದು ಗುಪ್ತಗಾಯ ಮಾಡಿದನು, ಅಂಬಣ್ಣ ಈತನು ನನಗೆ ನೆಲಕ್ಕೆ ಹಾಕಿ ತನ್ನ ಕೈಯಿಂದ ಬೆನ್ನಿಗೆ ಹೋಡೆದು ಗುಪ್ತಗಾಯ ಮಾಡಿದನು. ಆಗ ನಾನು ನನ್ನ ಹೆಂಡತಿ ರಾಜೇಶ್ವರಿಗೆ ಪೋನ ಮಾಡಿ ಜಗಳದ ಬಗ್ಗೆ ತಿಳಿಸಿದ್ದರಿಂದ ರಾಜೇಶ್ವರಿ ಗಂಡ ರಾಘವೆಂದ್ರ ಇವರು ನನ್ನ ಹತ್ತಿರ ಬಂದು ನನಗೆ ನೋಡಿ ವಿಚಾರಿಸಿದ್ದು ಇರುತ್ತದೆ. ಆಗ ಅವರೆಲ್ಲರು ಮಗನೆ ರಾಘ್ಯಾ ಇವತ್ತು ಉಳಿದುಕೊಂಡಿದ್ದು ಇನ್ನೋಮ್ಮಿ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಕಲಾಸ ಮಾಡುತ್ತೆವೆ ಅಂತ ಜೀವದ ಭಯ ಹಾಕಿ ಹೋದರು. ಸದರಿ ಘಟನೆಯು ಸುಬೆಗೆದಾರ ಆಸ್ಪತ್ರೆಯ ಹತ್ತಿರ ಇರುವ ಬಾಗ್ಯವಂತಿ ಫೈನಾನ್ಸ ಮುಂದೆ 11-30 ಗಂಟೆಯ ಸುಮಾರಿಗೆ ಜರುಗಿರುತ್ತದೆ. ನಂತರ ನಾವು ಮನೆಗೆ ಹೊದೆವು ಸದರಿ ಜಗಳವದ ವಿಷಯವನ್ನು ಮನಸ್ಸಿನ ಮೇಲೆ ತೆಗೆದುಕೊಂಡು ದಿನಾಂಕ 17/06/2020 ರಂದು ನಾನು ವಿಷ ಕುಡಿದ್ದಿದ್ದರಿಂದ ನನ್ನ ಹೆಂಡತಿ ನನಗೆ ಉಪಚಾರ ಕುರಿತು ಶಹಾಪುರದ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ನಾನು ಉಪಚಾರ ಪಡೆದು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ. ಸದರಿ ಅಜರ್ಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 178/2019 ಕಲಂ 341.323.504.506. ಸಂ.34. ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 177/2020. ಕಲಂ 379 ಐ.ಪಿ.ಸಿ:    ದಿನಾಂಕ:25-06-2020 ರಂದು 3:30 ಪಿ.ಎಮ್.ದಿಂದ   5:30 ಪಿ.ಎಮ್.ದ ಮದ್ಯದ ಅವಧಿಯಲ್ಲಿ ಶಹಾಪೂರದ ದೇವಿನಗರ ಏರಿಯಾನ ಫಿಯರ್ಾದಿಯ ಬಾಡಿಗೆ ಮನೆಯ ಮುಂದೆ ನಿಲ್ಲಿಸಿದ  ಸ್ಪ್ಲೆಂಡರ ಪ್ರೋ ಮೊಟಾರ ಸೈಕಲ್ ನಂ  ಕೆ.ಎ.33-ಆರ್.4606  ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಳ್ಳರನ್ನು ಪತ್ತೆ ಹಚ್ಚಿ  ಮೊಟಾರ ಸೈಕಲ್ ನ್ನು ಹುಡುಕಿ ಕೊಡಲು ತಮ್ಮಲ್ಲಿ ವಿನಂತಿ.ಅಂತಾ ಇದ್ದ  ಫಿಯರ್ಾದಿಯ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ.177/2020 ಕಲಂ. 379 ಐ.ಪಿ.ಸಿ. ಅಡಿಯಲ್ಲಿ  ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 07/2020 ಕಲಂ 107 ಸಿಆರ್ಪಿಸಿ: ಇಂದು ದಿನಾಂಕ:30/06/2020 ರಂದು 08.30 ಎಎಂ ಸುಮಾರಿಗೆ ನಾನು ಹಳ್ಳಿ ಬೇಟಿ ಕುರಿತು ಪಿಸಿ-331 ರವರೊಂದಿಗೆ ವನದುಗರ್ಾ ಗ್ರಾಮದ ಬೇಟಿ ಮಾಡಿದಾಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿರುವದೇನಂದರೆ, ವನದುಗರ್ಾ ಗ್ರಾಮದಲ್ಲಿನ ನಿವಾಸಿತರಾದ 1) ನಾಗಪ್ಪ ತಂದೆ ಭೀಮಣ್ಣ ಪಾಂದಾನ ವಯಾ:27, 2) ಚಿನ್ನಣ್ಣ ತಂದೆ ಲಚಮಣ್ಣ ದೂದಕೊಂಡ ವಯಾ:27 3) ಹಣಮಂತ್ರಾಯ ತಂದೆ ಭೀಮಣ್ಣ ಮರಾಠಿ ವಯಾ: 30 ವರ್ಷ, 4) ಭೀಮರಾಯ ತಂದೆ ಕಂಟೆಪ್ಪ ಮರಾಠಿ ವ:30, 5) ಲಚಮಣ್ಣ ತಂದೆ ಬಸ್ಸಣ್ಣ ಪಾಂದಾನ ವ:30, 6) ಪರಶುರಾಮ ತಂದೆ ಭಿಮರಾಯ ಗೆಜ್ಜಿ ವ:25 ವರ್ಷ 7) ಶಶಿ ತಂದೆ ಭೀಮರಾಯ ಗೆಜ್ಜಿ ವ:20 8) ಶೇಖಪ್ಪ ತಂದೆ ಭಾಗಪ್ಪ ಪಾಂದಾನ ವಯಾ: 19 ವರ್ಷ, 9) ಭಾಗಪ್ಪ ತಂದೆ ಬಸ್ಸಪ್ಪ ಪಾಂದಾನ ವಯಾ: 35 ವರ್ಷ 10) ಪರಶುರಾಮ ತಂದೆ ಭಾಗಣ್ಣ ಹುಣಸಿಗಿಡ ವ:24, ಎಲ್ಲರೂ ಜಾ: ಬೇಡರ ಸಾ: ವನದುಗರ್ಾ, ಇವರುಗಳು, ವನದುಗರ್ಾ ಗ್ರಾಮದವರೇ ಆದ ಚಂದ್ರಶೇಖರ ತಂದೆ ದೇವಿಂದ್ರಪ್ಪ ಸೊಂಡರಪಲ್ಲಿ ವ:26 ಉ: ಒಕ್ಕಲುತನ ಜಾ: ಬೇಡರ ಸಾ: ವನದುಗರ್ಾ ತಾ: ಶಹಾಪೂರ ಜಿ: ಯಾದಗಿರಿ ಇವರೊಂದಿಗೆ ಜಗಳ ಮಾಡುತ್ತ ಬಂದಿದ್ದು ಈ ಇಬ್ಬರುಗಳ ನಡುವೆ ಗಲಾಟೆಯಾಗಿ ಕಳೆದ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: ಗುನ್ನೆ ನಂ: 64/2020 ಕಲಂ, 143, 147, 148, 188, 323, 326 504, 506 ಸಂ: 149 ಐಪಿಸಿ ಮತ್ತು ಗುನ್ನೆ ನಂ: ಮತ್ತು 65/2020 ಕಲಂ, 143, 147, 148, 188, 323, 326 504, 506 ಸಂ: 149 ಐಪಿಸಿ ನೇದ್ದವುಗಳು ಗುನ್ನೆ ಪ್ರತಿಗುನ್ನೆ ಆಗಿ ವರದಿಯಾಗಿರುತ್ತವೆ. ಆರೋಪಿತರು ತಲೆಮರೆಸಿಕೊಂಡಿದ್ದು, ಈ ಎರಡೂ ಪಾಟರ್ಿಯ ಜನರ ನಡುವೆ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ 10 ಜನರ ವಿರುದ್ಧ ಇಂದು ದಿನಾಂಕ:30/06/2020 ರಂದು 10.30 ಎಎಮ್ ಕ್ಕೆ ಠಾಣೆಗೆ ಬಂದು ಠಾಣೆ ಪಿ.ಎ.ಆರ್ ನಂ: 07/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 08/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ:30/06/2020 ರಂದು 08.30 ಎಎಂ ಸುಮಾರಿಗೆ ನಾನು ಹಳ್ಳಿ ಬೇಟಿ ಕುರಿತು ಪಿಸಿ-331 ರವರೊಂದಿಗೆ ವನದುಗರ್ಾ ಗ್ರಾಮದ ಬೇಟಿ ಮಾಡಿದಾಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿರುವದೇನಂದರೆ, ವನದುಗರ್ಾ ಗ್ರಾಮದಲ್ಲಿನ ನಿವಾಸಿತರಾದ 1) ರಾಮಕೃಷ್ಣ ತಂದೆ ಮಲ್ಲಪ್ಪ ಹಯ್ಯಾಳ ವಯಾ:, 27 2) ಚಂದ್ರಶೇಖರ ತಂದೆ ದೇವಿಂದ್ರಪ್ಪ ಸೊಡರಪಲ್ಲಿ 3) ದೇವರಾಜ ತಂದೆ ನಿಂಗಪ್ಪ ದೂದಕೊಂಡ ವಯಾ:26, 4) ಅಂಜಮ್ಮ ತಂದೆ ಚನ್ನಪ್ಪ ಗುಂಡ್ಲಕೊಂಡ ವಯಾ:30 ವರ್ಷ 5) ಸದಮ್ಮ ಗಂಡ ಚನ್ನಪ್ಪ ಗುಂಡ್ಲಕೊಂಡ ವಯಾ:45, 6) ಮುದುಕಪ್ಪ ತಂದೆ ಅಚ್ಚಪ್ಪಗೌಡ ಸೊಂಡರಪಲ್ಲಿ ವಯಾ: 28, 7) ಶರಣು ತಂದೆ ದೇವಿಂದ್ರಪ್ಪ ಸೋಂಡರಪಲ್ಲಿ ವಯಾ:28 ವರ್ಷ 8) ಪ್ರವೀಣ ತಂದೆ ದ್ಯಾವನ್ಣ ಪಡದಳ್ಳಿ ವಯಾ: 26 ವರ್ಷ 9) ಸುಭಾಷ ತಂದೆ ಚನ್ನಪ್ಪ ಗುಂಡ್ಲಕೊಂಡ ವಯಾ:40 10) ಕೃಷ್ಣಾನಾಯ್ಕ ತಂದೆ ಹಣಮಂತ್ರಾಯ ಸೊಂಡರಪಲ್ಲಿ ವಯಾ:28 ವರ್ಷ ಎಲ್ಲರೂ ಜಾ: ಬೇಡರ ಸಾ: ವನದುಗರ್ಾ ಇವರುಗಳು, ವನದುಗರ್ಾ ಗ್ರಾಮದವರೇ ಆದ ಮೌನೇಶ @ ಮಾನಯ್ಯ ತಂದೆ ರಾಮಣ್ಣ ಗೆಜ್ಜಿ ವಯಾ: 21 ವರ್ಷ ಉ: ಒಕ್ಕಲುತನ ಜಾ: ಬೇಡರ ಸಾ: ವನದುಗರ್ಾ ತಾ: ಶಹಾಪೂರ ಜಿ: ಯಾದಗಿರಿ ಇವರೊಂದಿಗೆ ಜಗಳ ಮಾಡುತ್ತ ಬಂದಿದ್ದು ಈ ಇಬ್ಬರುಗಳ ನಡುವೆ ಗಲಾಟೆಯಾಗಿ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 64/2020 ಕಲಂ, 143, 147, 148, 188, 323, 326 504, 506 ಸಂ: 149 ಐಪಿಸಿ ಮತ್ತು ಗುನ್ನೆ ನಂ: ಮತ್ತು 65/2020 ಕಲಂ, 143, 147, 148, 188, 323, 326 504, 506 ಸಂ: 149 ಐಪಿಸಿ ನೇದ್ದವುಗಳು ಗುನ್ನೆ ಪ್ರತಿಗುನ್ನೆ ಆಗಿ ವರದಿಯಾಗಿರುತ್ತವೆ. ಆರೋಪಿತರು ತಲೆಮರೆಸಿಕೊಂಡಿದ್ದು, ಈ ಎರಡೂ ಪಾಟರ್ಿಯ ಜನರ ನಡುವೆ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ 10 ಜನರ ವಿರುದ್ಧ ಇಂದು ದಿನಾಂಕ:30/06/2020 ರಂದು 10.30 ಎಎಮ್ ಕ್ಕೆ ಠಾಣೆಗೆ ಬಂದು ಠಾಣೆ ಪಿ.ಎ.ಆರ್ ನಂ: 08/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.



ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 09/2020 ಕಲಂ 107 ಸಿಆರ್ಪಿಸಿ : ನಾನು ಸೋಮಲಿಂಗ ಒಡೆಯರ ಪಿ.ಎಸ್.ಐ ಗೋಗಿ ಪೊಲೀಸ್ ಠಾಣೆ ಇದ್ದು ಮಾನ್ಯರವರಲ್ಲಿ ವಿನಂತಿಸಿಕೊಳ್ಳುವದೇನಂದರೆ, ಶ್ರೀ. ಮಲ್ಲಿಕಾಜರ್ುನ ಬಂಡಿ ಹೆಚ್.ಸಿ-35 ರವರು ಇಂದು ದಿನಾಂಕ:30/06/2020 ರಂದು 12.30 ಪಿಎಂ ಕ್ಕೆ ಒಂದು ವರದಿ ಸಲ್ಲಿಸಿದ್ದರ ಸಾರಂಶ ಏನಂದರೆ, ದಿನಾಂಕ: 28/03/2020 ರಂದು 10.30 ಎಎಂ ಸುಮಾರಿಗೆ ಕರಕಳ್ಳಿ ಗ್ರಾಮದವರಾದ ನಾಗಪ್ಪ ತಂದೆ ಶರಣಪ್ಪ ಹೂಗಾರ ಇವರು ತಮ್ಮ ಹೊಲದ ಮೂಲಕ ಇತರರ ಹೊಲಕ್ಕೆ ಹೋಗುವ ವಿದ್ಯೂತ್ ಸರಬರಾಜು ಕಂಬವನ್ನು ನಾಗಪ್ಪ ಈತನು ಮುರಿದಿದ್ದರಿಂದ ಸದರಿ ನಾಗಪ್ಪ ಮತ್ತು ಇತರರ ಜೋತೆಯಲ್ಲಿ ಕರಕಳ್ಳಿ ಗ್ರಾಮದವರೇ ಆದ ಸಿದ್ದಯ್ಯ ತಂದೆ ಮಲ್ಲೇಶಯ್ಯ ಸ್ವಾಮಿ, ವ: 57 2) ಅಶೋಕ ತಂದೆ ಮಡಿವಾಳಪ್ಪ ಮಾಸ್ತಾರ ವ:43 3) ಮಲ್ಲಣ್ಣಗೌಡ ತಂದೆ ಬಸ್ಸಣ್ಣಗೌಡ, ವ: 41, 4) ಜಗಪ್ಪ ತಂದೆ ಹಣಮಂತ್ರಾಯ ವಡ್ಡೊಡಗಿ, ವ: 28, 5) ಮೋಹನ ರಡ್ಡಿ ತಂದೆ ಹಣಮಂತ್ರಾಯಗೌಡ ಚಳ್ಳಗಿ ವ:40, 6) ಮಲ್ಲಣ್ಣ ತಂದೆ ಭೀಮಣ್ಣಗೌಡ ಪೊಲೀಸ್ ಪಾಟೀಲ ವ:31, 7) ಗೀರಿಶ ತಂದೆ ಭಿಮಣ್ಣಗೌಡ ಪೊಲೀಸ್ ಪಾಟೀಲ ವ:28, 8) ಸಂಗಣ್ಣ ತಂದೆ ಚಂದಣ್ಣ ಹೂಗಾರ ವ:30, 9) ದೇವರಡ್ಡಿ ತಂದೆ ಅಂಬ್ರಣ್ಣ ವಡ್ಡೊಡಗಿ ವ:55, 10) ಅಂಬ್ರಣ್ಣ ತಂದೆ ದೇವರಡ್ಡಿ ವಡ್ಡಡಗಿ ವ;32, 11) ಭೀಮಣ್ಣ ತಂದೆ ದೇವರಡ್ಡಿ ವಡ್ಡಡಗಿ ವ; 30, 12) ಬಲವಂತ್ರಾಯ ತಂದೆ ಹಣಮಂತ್ರಾಯ ವಡ್ಡಡಗಿ ವ:42 13) ಸಂಗಯ್ಯ ತಂದೆ ಮಲ್ಲಯ್ಯ ಹೀರೇಮಠ ವ: 35 14) ಶಿವಣ್ಣ ತಂದೆ ಅಂಬ್ಲಣ್ಣ ಕರಣಗಿ ವ: 24 ಸಾ: ಎಲ್ಲರೂ ಕರಕಳ್ಳಿ ತಾ: ಶಹಾಪೂರ ಜಿ: ಯಾದಗಿರಿ ಇವರೆಲ್ಲರೂ ತಂಟೆ ತಕರಾರು ಮಾಡಿಕೊಂಡಿದ್ದು, ಈ ಬಗ್ಗೆ ಗುನ್ನೆ ನಂ: 48/2020 ಕಲಂ, 143, 147, 148, 341, 504, 506 ಸಂ: 149 ಐಪಿಸಿ ನೇದ್ದು, ವರದಿ ಆಗಿರುತ್ತದೆ. ಆವಾಗಿನಿಂದ ಈ ಎಲ್ಲಾ 10 ಜನರು ನಾಗಪ್ಪ ಹೂಗಾರ ಇವರೊಂದಿಗೆ ತಂಟೆ ತಕರಾರು ಮಾಡಿಕೊಂಡು ಈ ಎರಡೂ ಪಾಟರ್ಿಯ ಜನರ ನಡುವೆ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ 14 ಜನರ ವಿರುದ್ಧ ಇಂದು ದಿನಾಂಕ:30/06/2020 ರಂದು 12.30 ಪಿಎಮ್ ಕ್ಕೆ ಈ ವರದಿ ಸಲ್ಲಿಸಿರುತ್ತೆನೆ, ಮಾನ್ಯರವರು ಮುಮದಿನ ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀ ಮಲ್ಲಿಕಾಜರ್ುನ ಬಂಡಿ ಹೆಚ್.ಸಿ-35 ರವರು ಕರಕಳ್ಳಿ ಗ್ರಾಮದ ಬೀಟ ಪೊಲೀಸ್ ರವರು ಈ ಅಜರ್ಿ ನೀಡಿದ್ದರ ಸಾರಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಪಿ.ಎ.ಆರ್ ನಂ: 09/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 10/2020 ಕಲಂ 107 ಸಿಆರ್ಪಿಸಿ :           ಶ್ರೀ ಮಲ್ಲಿಕಾಜರ್ುನ ಬಂಡಿ ಹೆಚ್.ಸಿ-35 ಗೋಗಿ ಪೊಲೀಸ್ ಠಾಣೆ ರವರು ವರದಿ ಸಲ್ಲಿಸಿದ್ದೇನಂದರೆ, ದಿನಾಂಕ: 28/03/2020 ರಂದು 10.30 ಎಎಂ ಸುಮಾರಿಗೆ ಕರಕಳ್ಳಿ ಗ್ರಾಮದವರಾದ ಸಿದ್ದಯ್ಯ ಸ್ವಾಮಿ ಮತ್ತು ಇತರರ ಜೋತೆಯಲ್ಲಿ 1) ನಾಗಪ್ಪ ತಂದೆ ಶರಣಪ್ಪ ಹೂಗಾರ 2) ಈರಪ್ಪ ತಂದೆ ಶರಣಪ್ಪ ಹೂಗಾರ 3) ದೇವಪ್ಪ ತಂದೆ ಶರಣಪ್ಪ ಹೂಗಾರ  ಸಾ: ಎಲ್ಲರೂ ಕರಕಳ್ಳಿ ತಾ: ಶಹಾಪೂರ ಜಿ: ಯಾದಗಿರಿ ಇವರುಗಳು ದೇವಸ್ಥಾನದ ಆಸ್ತಿ ಮತ್ತು ಹೊಲದಲ್ಲಿನ ಲೈಟಿನ ಕಂಬಗಳನ್ನು ಮುರಿದು ಹಾಕಿದ ವಿಷಯದಲ್ಲಿ ಗುನ್ನೆ ನಂ: 41/2020 ಕಲಂ: 427, 353 ಸಂ/ 34 ಐಪಿಸಿ ಪ್ರಕರಣ ದಾಖಲಾದ ಕಾರಣ  ಇವರೆಲ್ಲರೂ ಆರೋಫಿತರೆಲ್ಲರೂ ಗುನ್ನೆ ನಂ: 48/2020 ಕಲಂ, 143, 147, 148, 341, 504, 506 ಸಂ: 149 ಐಪಿಸಿ ನೇದ್ದು, ದಾಖಲಿಸಿರುತ್ತಾರೆ. ಆವಾಗಿನಿಂದ ಈ 03 ಜನರು ಊರಲ್ಲಿಯ ಇತರರೊಂದಿಗೆ ತಂಟೆ ತಕರಾರು ಮಾಡಿಕೊಂಡು ಈ ಎರಡೂ ಪಾಟರ್ಿಯ ಜನರ ನಡುವೆ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ 03 ಜನರ ವಿರುದ್ಧ ಇಂದು ದಿನಾಂಕ:30/06/2020 ರಂದು 01.55 ಪಿಎಮ್ ಕ್ಕೆ ಈ ವರದಿ ಸಲ್ಲಿಸಿರುತ್ತೆನೆ, ಮಾನ್ಯರವರು ಮುಮದಿನ ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀ ಮಲ್ಲಿಕಾಜರ್ುನ ಬಂಡಿ ಹೆಚ್.ಸಿ-35 ರವರು ಕರಕಳ್ಳಿ ಗ್ರಾಮದ ಬೀಟ ಪೊಲೀಸ್ ರವರು ವರದಿ ನೀಡಿದ್ದರ ಸಾರಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಪಿ.ಎ.ಆರ್ ನಂ: 10/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.


ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 188 269 270 ಐಪಿಸಿ : ದಿನಾಂಕ:30/06/2020 ರಂದು 20.10ಗಂಟೆಗೆ ಶ್ರೀ ಹಸನಸಾ ತಂದೆ ದಸ್ತಗಿರಿಸಾಬ ಮುಲ್ಲಾ ವಯ:32 ವರ್ಷ ಉ: ಗ್ರಾಮ ಲೆಕ್ಕಾಧಿಕಾರಿ ಹುಣಸಗಿ ಸಾ:ತಳ್ಳಳ್ಳಿ (ಬಿ) ತಾ:ಸುರಪುರ ಹಾವ:ಹುಣಸಗಿ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿದ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರ ರವರ ಆದೇಶ ಸಂಖ್ಯೆ:ಸಂ/ಕಂ /ನೈ.ವಿ.ಪ/ ಕೋವಿಡ್-19/33/2020-21 ದಿನಾಂಕ:29/05/2020 ನೇದ್ದರ ಪ್ರಕಾರ ಹುಣಸಗಿ ಪಟ್ಟಣದಲ್ಲಿ ಬೇರೆ ರಾಜ್ಯದಿಂದ ಬಂದಂತಹ ಮಾಧರಾಮ ತಂದೆ ಮನರೂಪರಾಮ ಸಾ: ಚತ್ತುವಾರ ರಾಜ್ಯ:ರಾಜಸ್ತಾನ ಹಾವ:ಹುಣಸಗಿ ಇವರು ದಿನಾಂಕ:18/06/2020 ರಂದು ರಾಜ್ಯಸ್ಥಾನ ದಿಂದಾ ಹುಣಸಗಿ ಪಟ್ಟಣಕ್ಕೆ ಬಂದಿದ್ದು, ಸದರಿಯವರಿಗೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಸರಕಾರಿ ಆಸ್ಪತ್ರೆ ಹುಣಸಗಿಯಲ್ಲಿ ಕೋವಿಡ್-19 ಥರ್ಮಲ್ ಸ್ಕ್ರೀನಿಂಗ್ ಪರಿಕ್ಷೇಗೆ ಒಳಪಡಿಸಿ, 14 ದಿನಗಳ ಕಾಲ ಗೃಹ ದಿಗ್ಬಂಧನಲ್ಲಿ ಇರುವಂತೆ ತಿಳುವಳಿಕೆ ಹೇಳಿ ಕಳುಹಿಸಿದ್ದು ಇರುತ್ತದೆ. ಆದರೆ ಸದರಿಯವರು ದಿನಾಂಕ:18/06/2020 ರಿಂದಾ ಇಲ್ಲಿಯವರಗೆ ಅಂದರೆ ದಿ:30/06/2020 ರ ವರಗೆ 14 ಸಲ ಗೃಹ ದಿಗ್ಬಂಧನ ಉಲ್ಲಂಘನೆ ಮಾಡಿದ್ದು ಅವರ ಮೊಬೈಲ್ ನಂ.9740481895 ನೇದ್ದರ ಕರೆಗಳ ಮಾಹಿತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರ ರವರ ಸಭೆಯ ನಿದರ್ೆಶನದಂತೆ ತಿಳಿದು ಬಂದಿರುತ್ತದೆ. ಕಾರಣ ಮಾಧರಾಮ ತಂದೆ ಮನರೂಪರಾಮ ಸಾ: ಚತ್ತುವಾರ ರಾಜ್ಯ:ರಾಜಸ್ತಾನ ಹಾವ:ಹುಣಸಗಿ ಇವರ ವಿರುದ್ದ ಕಾನೂನ ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 100/2020 ಕಲಂ: 279,338 ಐ.ಪಿ.ಸಿ ಸಂಗಡ 187 ಐಎಮ್ವಿ ಯಾಕ್ಟ : ಇಂದು ದಿನಾಂಕ: 30/06/2020 ರಂದು 7.30 ಎ.ಎಮ್ ಕ್ಕೆ ಸನರೈಸ್ ಆಸ್ಪತ್ರೆ ಕಲಬುರಗಿಯಿಂದ ಎಮ್ಎಲ್ಸಿ ಇದೆ ಅಂತಾ ಪೋನ ಮೂಲಕ ಮಾಹಿತಿ ಬಂದ ಮೇರೆಗೆ ಇಂದು 1.30 ಪಿ.ಎಮ್ ಕ್ಕೆ ಆಸ್ಪತ್ರೆಗೆ ಬೇಟಿ ನೀಡಿ ಪಿರ್ಯಾದಿ ಶ್ರೀ ನಿಂಗಬಸಪ್ಪ ತಂದೆ ನಿಂಗಪ್ಪ ಹೀರೆಮನಿ ಜಾತಿ: ಕುರುಬ ವಯಾ: 60 ವರ್ಷ ಉ: ನಿವೃತ್ತ ಸರಕಾರಿ ನೌಕರ ಸಾ: ವಸ್ತಾರಿ ತಾ: ಜೇವರಗಿ ಹಾ:ವ: ಭೀಮರಾಯಗುಡಿ ಕ್ಯಾಂಪ ಹೀಗಿದ್ದು ನಿನ್ನೆ ದಿನಾಂಕ: 29/06/2020 ರಂದು ಬೆಳಿಗ್ಗೆ ಸುಮಾರಿಗೆ ನಾನು ಮತ್ತು ನನ್ನ ಮಗನಾದ ಮಂಜುನಾಥ ಇಬ್ಬರೂ ಕೂಡಿ ನಮ್ಮ ಹೊಂಡಾ ಯುನಿಕ್ರಾನ ಮೋಟಾರ ಸೈಕಲ್ ನಂ ಕೆಎ/05-ಹೆಚ್.ಎನ್-3154 ನೇದ್ದರ ಮೇಲೆ ನಮ್ಮ ಗ್ರಾಮವಾದ ಜೇವರಗಿ ತಾಲೂಕಿನ ವಸ್ತಾರಿ ಗ್ರಾಮಕ್ಕೆ ಹೋಗಿ ವಾಪಸ್ಸು ಬೀಮರಾಯನಗುಡಿಗೆ  ಹೋಗುವ ಕುರಿತು ಅಂದಾಜು ಸಾಯಾಂಕಾಲ 6.00  ಗಂಟೆ ಸುಮಾರಿಗೆ ಮಲ್ಲಾ-ಏವೂರ ಮುಖ್ಯ ರಸ್ತೆಯ ಸಾಹೇಬಗೌಡ ಅಗತೀರ್ಥ ಇವರ ಹೊಲದ ಹತ್ತಿರ ಹೋಗುತ್ತಿರುವಾಗ, ಎದುರುಗಡೆಯಿಂದ ಯಾವುದೋ ಒಂದು ಮೋಟಾರ ಸೈಕಲ್ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ, ಮೊಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ. ನಾವಿಬ್ಬರೂ ರಸ್ತೆಯ ಮೇಲೆ ಗಾಡಿ ಸಮೇತ ಬಿದ್ದಾಗ ನನಗೆ ಯಾವುದೆ ಗಾಯ ವಗೈರೆ ಆಗಿರುವುದಿಲ್ಲ, ಮೊಟಾರ ಸೈಕಲ್ ನಡೆಸುತ್ತಿದ್ದ ನನ್ನ ಮಗ ಮಂಜುನಾಥನಿಗೆ ಎಡಕಿವಿಯಿಂದ, ಮೂಗಿನಿಂದ, ಬಾಯಿಂದ ರಕ್ತಸ್ರಾವ ಆಗುತ್ತಿದ್ದಾಗ ನಾನು ಮತ್ತು ಅಲ್ಲೇ ರಸ್ತೆಯ ಮೇಲೆ ಹೋಗುತ್ತಿದ್ದ ದೇವಿಂದ್ರಪ್ಪಗೌಡ ತಂದೆ ಭೀಮನಗೌಡ ಪೊಲೀಸ್ ಪಾಟೀಲ ಹಾಗೂ ಲಕ್ಕಪ್ಪ ತಂದೆ ಮಲ್ಲಪ್ಪ ಬಳಬಟ್ಟಿ ಇಬ್ಬರೂ ಸಾ: ಗುಂಡಾಪೂರ ತಾ: ಶಹಾಪೂರ ಎಲ್ಲರೂ ಕೂಡಿ ನನ್ನ ಮಗನಿಗೆ ತಲೆಗೆ ಬಾರೀ ರಕ್ತಗಾಯ ಆಗಿದ್ದರಿಂದ 1 ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಸನರೈಜ್ ಖಾಸಗಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿರುತ್ತೇವೆ. ನಮಗೆ ಡಿಕ್ಕಿ ಪಡಿಸಿ ಓಡಿ ಹೋದ ಮೋಟಾರ ಸೈಕಲ್ ಮತ್ತು ಚಾಲಕನಿಗೆ ನೋಡಿದರೆ ಗುತರ್ಿಸುತ್ತೇನೆ. ಕಾರಣ ನಮ್ಮ ಮೋಟಾರ ಸೈಕಲ್ಗೆ ಯಾವುದೋ ಒಂದು ಮೋಟಾರ ಸೈಕಲ್ ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ನನ್ನ ಮಗನಿಗೆ ಭಾರೀ ಗಾಯಪೆಟ್ಟು ಮಾಡಿ ಮೋಟಾರ ಸೈಕಲ್ ಸಮೇತ ಓಡಿ ಹೋದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಇಂದು ದಿನಾಂಕ 30/06/2020 ರಂದು 6.00 ಪಿ.ಎಮ್ ಕ್ಕೆ ಪಿರ್ಯಾದಿ ಹೇಳಿಕೆ ನೀಡಿದ 

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 101/2020 ಕಲಂ:323.324.326,504.506 ಸಂಗಡ 34 ಐ.ಪಿ.ಸಿ : ಇಂದು ದಿನಾಂಕ 30.06.2020 ರಂದು 9.30 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಬಸಪ್ಪ ತಂದೆ ನಿಂಗಯ್ಯ ಪೂಜಾರಿ ವ|| 55 ವರ್ಷ ಉ|| ಒಕ್ಕಲುತನ ಜಾ|| ಕಬ್ಬಲಿಗ ಸಾ|| ಹೆಗ್ಗಣದೊಡ್ಡಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನಮ್ಮ ಹೊಲ ಹಾಗು ನಮ್ಮ ಸಂಬಂದಿಯಾದ ಹೈಯಾಳಪ್ಪ ತಂದೆ ಹಣಮಂತ್ರಾಯ ಪೂಜಾರಿ ಇವರ ಹೊಲ ಆಜುಬಾಜು ಇದ್ದು ಸದರಿಯವರು ಹೊಲದ ದಾರಿಯ ವಿಷಯದಲ್ಲಿ ಆಗಾಗ ನಮ್ಮೊಂದಿಗೆ ತಕರಾರು ಮಾಡಿ ಹಗೆತನ ಸಾದಿಸುತ್ತಿದ್ದರು. ಹೀಗಿದ್ದು ಇಂದು ದಿನಾಂಕ 30/06/2020 ರಂದು ಸಾಯಂಕಾಲ 5.30 ಗಂಟೆಯ ಸುಮಾರಿಗೆ ನಾನು ನಮ್ಮ ಸಂಬಂದಿಕರ ಹೊಲಕ್ಕೆ ಹೋಗಿ ನಿಮ್ಮ ಕುರಿಗಳು ನಮ್ಮ ಹೊಲದಲ್ಲಿ ಬಂದು ಬೆಳೆ ಹಾಳು ಮಾಡುತ್ತಿವೆ ಸ್ವಲ್ಪ ಹೊಡೆದುಕೊಳ್ಳಿರಿ ಅಂತ ಅಂದಾಗ ನಮ್ಮ ಅಣ್ಣ ತಮ್ಮಕಿಯವರಾದ 1] ಹೈಯಾಳಪ್ಪ ತಂದೆ ಹಣಮಂತ್ರಾಯ ಪೂಜಾರಿ 2] ಗೊಲ್ಲಾಳಪ್ಪ ತಂದೆ ಹಣಮಂತ್ರಾಯ ಪೂಜಾರಿ 3] ಬಸವರಾಜ ತಂದೆ ಹಣಮಂತ್ರಾಯ ಪೂಜಾರಿ 4] ಹಣಮಂತ್ರಾಯ ತಂದೆ ಸಹಾದೇವಪ್ಪ ಪೂಜಾರಿ ಸಾ|| ಎಲ್ಲರೂ ಹೆಗ್ಗಣದೊಡ್ಡಿ ಈ ಎಲ್ಲಾ ಜನರು ಸೇರಿ ಏನಲೇ ಸೂಳೇ ಮಗನೆ ಬಸ್ಯಾ ನಮ್ಮ ಹೊಲದಲ್ಲಿ ದಾರಿ ಕೊಟ್ಟಿದ್ದು, ಅಲ್ಲದೇ ನಮಗೆ ನಮ್ಮ ಕುರಿಗಳು ಹೊಡೆದುಕೊಳ್ಳಲು ಹೇಳಿತ್ತೀಯಾ, ರಂಡಿ ಮಗನೆ  ಅಂತ ಎಲ್ಲರೂ ನನಗೆ ಕೈಯಿಂದ ಹೊಡೆದು ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ನಮ್ಮ ಹೊಲದಲ್ಲಿ ಇದ್ದ ನನ್ನ ಮಕ್ಕಳಾದ ಸಹಾದೇವಪ್ಪ ತಂದೆ ಬಸಪ್ಪ ಪೂಜಾರಿ ಹಾಗು ರಮೇಶ ತಂದೆ ಬಸಪ್ಪ ಪೂಜಾರಿ ಇವರಿಬ್ಬರೂ ಓಡಿ ಬಂದು ಬಿಡಿಸಿಕೊಳ್ಳಲು ಬಂದಾಗ ಮಗ ಸಹಾದೇವಪ್ಪ ಈತನಿಗೆ ಹೈಯಾಳಪ್ಪ ಈತನು ಅಲ್ಲಿಯೇ ಬಿದ್ದ ಕುಡುಗೋಲಿನಿಂದ  ಟೊಂಕದ ಹಿಂದಿನ ಭಾಗಕ್ಕೆ ಬಲವಾಗಿ ಹೊಡೆದು ಭಾರೀ ರಕ್ತಗಾಯ ಪಡಿಸಿದನು. ಅಲ್ಲದೇ ಬಿಡಿಸಲು ಬಂದ ಇನ್ನೊಬ್ಬ ಮಗ ರಮೇಶ ಈತನಿಗೂ ಸಹ ಸದರ ಹೈಯಾಳಪ್ಪ ಈತನು ಅದೇ ಕುಡುಗೋಲಿನಿಂದ ಎಡಗಾಲ ತೊಡೆಗೆ ಹೊಡೆದು ರಕ್ತಗಾಯ ಪಡಿಸಿದನು. ನಂತರ ನಾವೆಲ್ಲರೂ ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ದೇವಪ್ಪ ಮುಂಡರಗಿ ಹಾಗು ಸಾಹೇಬಗೌಡ ಮಾಲಿ ಪಾಟೀಲ ಇವರು ಬಂದು ಸದರಿಯವರು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು.  ನಂತರ ಎಲ್ಲರೂ  ನಮಗೆ ಉದ್ದೇಶಿಸಿ ಮಕ್ಕಳೆ ಇನ್ನು ಮುಂದೆ ನಮ್ಮ ಹೊಲದಲ್ಲಿ ಹಾದು ಹೋದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯಹಾಕಿ ಹೋದರು. ಕಾರಣ ಮೇಲ್ಕಾಣಿಸಿದ ನಾಲ್ಕು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 101/2020 ಕಲಂ 323,324,326,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಕೆಂಭಾವಿ  ಪೊಲೀಸ ಠಾಣೆ ಗುನ್ನೆ ನಂ:- 101/2020 ಕಲಂ:323.324.326,504.506 ಸಂಗಡ 34 ಐ.ಪಿ.ಸಿ : ಇಂದು ದಿನಾಂಕ 30.06.2020 ರಂದು 9.30 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಬಸಪ್ಪ ತಂದೆ ನಿಂಗಯ್ಯ ಪೂಜಾರಿ ವ|| 55 ವರ್ಷ ಉ|| ಒಕ್ಕಲುತನ ಜಾ|| ಕಬ್ಬಲಿಗ ಸಾ|| ಹೆಗ್ಗಣದೊಡ್ಡಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನಮ್ಮ ಹೊಲ ಹಾಗು ನಮ್ಮ ಸಂಬಂದಿಯಾದ ಹೈಯಾಳಪ್ಪ ತಂದೆ ಹಣಮಂತ್ರಾಯ ಪೂಜಾರಿ ಇವರ ಹೊಲ ಆಜುಬಾಜು ಇದ್ದು ಸದರಿಯವರು ಹೊಲದ ದಾರಿಯ ವಿಷಯದಲ್ಲಿ ಆಗಾಗ ನಮ್ಮೊಂದಿಗೆ ತಕರಾರು ಮಾಡಿ ಹಗೆತನ ಸಾದಿಸುತ್ತಿದ್ದರು. ಹೀಗಿದ್ದು ಇಂದು ದಿನಾಂಕ 30/06/2020 ರಂದು ಸಾಯಂಕಾಲ 5.30 ಗಂಟೆಯ ಸುಮಾರಿಗೆ ನಾನು ನಮ್ಮ ಸಂಬಂದಿಕರ ಹೊಲಕ್ಕೆ ಹೋಗಿ ನಿಮ್ಮ ಕುರಿಗಳು ನಮ್ಮ ಹೊಲದಲ್ಲಿ ಬಂದು ಬೆಳೆ ಹಾಳು ಮಾಡುತ್ತಿವೆ ಸ್ವಲ್ಪ ಹೊಡೆದುಕೊಳ್ಳಿರಿ ಅಂತ ಅಂದಾಗ ನಮ್ಮ ಅಣ್ಣ ತಮ್ಮಕಿಯವರಾದ 1] ಹೈಯಾಳಪ್ಪ ತಂದೆ ಹಣಮಂತ್ರಾಯ ಪೂಜಾರಿ 2] ಗೊಲ್ಲಾಳಪ್ಪ ತಂದೆ ಹಣಮಂತ್ರಾಯ ಪೂಜಾರಿ 3] ಬಸವರಾಜ ತಂದೆ ಹಣಮಂತ್ರಾಯ ಪೂಜಾರಿ 4] ಹಣಮಂತ್ರಾಯ ತಂದೆ ಸಹಾದೇವಪ್ಪ ಪೂಜಾರಿ ಸಾ|| ಎಲ್ಲರೂ ಹೆಗ್ಗಣದೊಡ್ಡಿ ಈ ಎಲ್ಲಾ ಜನರು ಸೇರಿ ಏನಲೇ ಸೂಳೇ ಮಗನೆ ಬಸ್ಯಾ ನಮ್ಮ ಹೊಲದಲ್ಲಿ ದಾರಿ ಕೊಟ್ಟಿದ್ದು, ಅಲ್ಲದೇ ನಮಗೆ ನಮ್ಮ ಕುರಿಗಳು ಹೊಡೆದುಕೊಳ್ಳಲು ಹೇಳಿತ್ತೀಯಾ, ರಂಡಿ ಮಗನೆ  ಅಂತ ಎಲ್ಲರೂ ನನಗೆ ಕೈಯಿಂದ ಹೊಡೆದು ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ನಮ್ಮ ಹೊಲದಲ್ಲಿ ಇದ್ದ ನನ್ನ ಮಕ್ಕಳಾದ ಸಹಾದೇವಪ್ಪ ತಂದೆ ಬಸಪ್ಪ ಪೂಜಾರಿ ಹಾಗು ರಮೇಶ ತಂದೆ ಬಸಪ್ಪ ಪೂಜಾರಿ ಇವರಿಬ್ಬರೂ ಓಡಿ ಬಂದು ಬಿಡಿಸಿಕೊಳ್ಳಲು ಬಂದಾಗ ಮಗ ಸಹಾದೇವಪ್ಪ ಈತನಿಗೆ ಹೈಯಾಳಪ್ಪ ಈತನು ಅಲ್ಲಿಯೇ ಬಿದ್ದ ಕುಡುಗೋಲಿನಿಂದ  ಟೊಂಕದ ಹಿಂದಿನ ಭಾಗಕ್ಕೆ ಬಲವಾಗಿ ಹೊಡೆದು ಭಾರೀ ರಕ್ತಗಾಯ ಪಡಿಸಿದನು. ಅಲ್ಲದೇ ಬಿಡಿಸಲು ಬಂದ ಇನ್ನೊಬ್ಬ ಮಗ ರಮೇಶ ಈತನಿಗೂ ಸಹ ಸದರ ಹೈಯಾಳಪ್ಪ ಈತನು ಅದೇ ಕುಡುಗೋಲಿನಿಂದ ಎಡಗಾಲ ತೊಡೆಗೆ ಹೊಡೆದು ರಕ್ತಗಾಯ ಪಡಿಸಿದನು. ನಂತರ ನಾವೆಲ್ಲರೂ ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ದೇವಪ್ಪ ಮುಂಡರಗಿ ಹಾಗು ಸಾಹೇಬಗೌಡ ಮಾಲಿ ಪಾಟೀಲ ಇವರು ಬಂದು ಸದರಿಯವರು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು.  ನಂತರ ಎಲ್ಲರೂ  ನಮಗೆ ಉದ್ದೇಶಿಸಿ ಮಕ್ಕಳೆ ಇನ್ನು ಮುಂದೆ ನಮ್ಮ ಹೊಲದಲ್ಲಿ ಹಾದು ಹೋದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯಹಾಕಿ ಹೋದರು. ಕಾರಣ ಮೇಲ್ಕಾಣಿಸಿದ ನಾಲ್ಕು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 101/2020 ಕಲಂ 323,324,326,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!