ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/06/2020

By blogger on ಶುಕ್ರವಾರ, ಜೂನ್ 26, 2020





                        ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/06/2020 
                                                                                                               
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 53/2020 ಕಲಂ 3&7 ಇಸಿ ಆ್ಯಕ್ಟ-1955 : ಇಂದು ದಿನಾಂಕ.26/06/2020 ರಂದು 6-45 ಪಿಎಂಕ್ಕೆ ಶ್ರೀ ಮಲ್ಲಿನಾಥ ತಂ. ಚನ್ನಮಲ್ಲಪ್ಪ ಹೊನಳ್ಳಿ ವಃ 48 ಉಃಆಹಾರ ಶಿರಸ್ತೇದಾರರು ಜಾಃ ಲಿಂಗಾಯತ ಸಾಃ ತಹಸೀಲ ಕಾಯರ್ಾಲಯ ಯಾದಗಿರಿ ರವರು ಠಾಣೆಗೆ ಒಂದು ಅಜರ್ಿ ಮತ್ತು ಜಪ್ತಿ ಪಂಚನಾಮೆ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ; 26/06/2020 ರಂದು ಬೆಳೆಗ್ಗೆ 7-30 ಗಂಟೆ ಸುಮಾರಿಗೆ ಅನಾಮಧೇಯ ಕರೆಯ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಬಸವರಾಜ ಪತ್ತಾರ, ಮಹೇಶ ಎಮ್.ಜೆ ಆಹಾರ ನಿರಿಕ್ಷಕರು ರವರು ಕೂಡಿಕೊಂಡು ಯಾದಗಿರಿಯ ಸುಭಾಷವೃತ್ತದಲ್ಲಿ ಹಾಜರಾಗಿ ಅಕ್ಕಿ ತುಂಬಿದ ವಾಹನ ಸಂಖ್ಯೆ. ಕೆಎ.33.ಎ.3479 ನೇದ್ದನ್ನು ತಡೆದು ನಿಲ್ಲಿಸಿ  ಸದರಿ ವಾಹನವನ್ನು ನಗರ ಪೊಲೀಸ ಠಾಣೆ ಯಾದಗಿರಿಗೆ ತಂದು ಪೊಲೀಸ ಠಾಣೆ ಎದುರ ಇಬ್ಬರು ಪಂಚರಾದ 1) ನವಾಬ ತಂದೆ ಜಲಾಲೊದ್ದೀನ್ ವ;21 ಉ; ಕೂಲಿಕೆಲಸ ಸಾ; ಕೋಲಿವಾಡ ಯಾದಗಿರಿ. 2) ಸತೀಶ ತಂದೆ ಮಲ್ಲಿಕಾಜರ್ುನ ವ;21 ಉ; ಕೂಲಿಕೆಲಸ ಸಾ; ಹಿರೇಅಗಸಿ ಯಾದಗಿರಿ ರವರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ವಾಹನದಲ್ಲಿದ್ದ ಅಕ್ಕಿ ಪರಿಶೀಲಿಸಿ ಸದರಿ ವಾಹನದಲ್ಲಿ 50 ಚೀಲ ಪ್ಲಾಸ್ಟಿಕ ಚೀಲಗಳಲ್ಲಿ ತುಂಬಿದ್ದು ಪ್ರತಿ ಚೀಲದಲ್ಲಿ  ಅಂದಾಜು 50 ಕೆ.ಜಿ ಅಕ್ಕಿ ಇದ್ದು ಒಟ್ಟು 25 ಕ್ವಿಂಟಾಲ ಅಕ್ಕಿ ಇರುತ್ತದೆ. ಅಕ್ಕಿಯ ಅಂದಾಜು ಮೊತ್ತ 57,500/- ರೂ. ಮತ್ತು ಬುಲೇರೋ ವಾಹನದ ಮೊತ್ತ 5,50,000/-ರೂ. ಒಟ್ಟು ಅಕ್ಕಿ ಮತ್ತು ಬುಲೆರೋ ವಾಹನದ ಮೊತ್ತ 6,07,500/- ರೂ. ಅಕ್ಕಿಯನ್ನು ಪರಿಶೀಲಿಸಿದ ನಂತರ ವಾಹನದ ಚಾಲಕನಾದ ಶಂಕರ ಪವಾರ ಸಾ; ಬೋರಬಂಡಾ ಇವರಿಗೆ ವಾಹನದಲ್ಲಿ ಅಕ್ಕಿ ತುಂಬಿರುವ ಬಗ್ಗೆ ದಾಖಲಾತಿಗಳನ್ನು ಕೇಳಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತಾ ತಿಳಿಸಿದನು ನಂತರ  ಅಕ್ಕಿಯನ್ನು ಸೋನ್ಯಾ ತಂದೆ ಚೋಕ್ಲಾ ಸಾ; ಬಸವಂತಪುರ ತಾಂಡಾ ರವರಿಂದ ತುಂಬಿಸಿದ್ದು ಸದರಿ ಅಕ್ಕಿಯು ಸೋನ್ಯಾ ಈತನಿಗೆ ಸಂಭಂಧಪಟ್ಟಿರುತ್ತದೆ ಅಂತಾ ತಿಳಿಸಿದನು. ಅಕ್ಕಿಯ ಮತ್ತು ವಾಹನದ ಪರಿಶೀಲನೆಯ ನಂತರ ಸದರಿ ಅಕ್ಕಿಯು ಸಾರ್ವಜನಿಕ ಪಡಿತರ ವಿತರಣೆ ಅಕ್ಕಿ ಅಂತಾ ಕಂಡು ಬಂದಿರುತ್ತದೆ. ಸದರಿ ಅಕ್ಕಿಯು ಸಾರ್ವಜನಿಕ ಪಡಿತರ ವಿತರಣೆ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟದ ಉದ್ದೇಶಕ್ಕಾಗಿ ಸಾಗಿಸುತ್ತಿರುವುದು ಕಂಡು ಬಂದಿರುತ್ತದೆ. ಸದರಿ ಪಂಚನಾಮೆಯನ್ನು ಇಂದು ದಿನಾಂಕ; 26/06/2020 ರಂದು 8-30 ಎಎಮ್ ದಿಂದ 11-00 ಎಎಮ್ ದವರೆಗೆ ಪಂಚರ ಸಮಕ್ಷಮ ಪಂಚನಾಮೆ ಕೈಕೊಂಡು ಜಪ್ತಿಪಡಿಸಿಕೊಂಡ ಅಕ್ಕಿಯಲ್ಲಿ ಶ್ಯಾಂಪಲ್ ಕುರಿತು 3 ಕೆ.ಜಿ ಅಕ್ಕಿಯನ್ನು 1 ಕೆ.ಜಿ ಯಂತೆ ಪ್ರತ್ಯೇಕವಾಗಿ ಪ್ಲಾಸ್ಟಿಕ ಪಾಕೆಟದಲ್ಲಿ ಹಾಕಿ ತೆಗೆದುಕೊಂಡಿದ್ದು ಇರುತ್ತದೆ. ಕಾರಣ ಸಾರ್ವಜನಿಕ ಪಡಿತರ ವಿತರಣೆಗಾಗಿ ಇರುವ ಅಕ್ಕಿಯನ್ನು ಅಕ್ರಮವಾಗಿ ತಮ್ಮ ಸ್ವಂತ ಲಾಭಕ್ಕಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿರುವ ಬುಲೆರೋ ವಾಹನದ ಚಾಲಕ ಶಂಕರ ಪವಾರ ತಂದೆ ಭಾಗ್ಯಾ ನಾಯಕ, ವಾಹನದ ಮಾಲೀಕನಾದ ಗೋಪಾಲ ತಂದೆ  ತುಕ್ಯಾ ನಾಯಕ ಸಾ; ಬೆಟ್ಟದಹಳ್ಳಿ ತಾ; ಗುರುಮಿಠಕಲ್, ಅಕ್ಕಿಯ ಮಾಲೀಕನಾದ ಸೋನ್ಯಾ ತಂದೆ ಚೋಕ್ಲಾ ಸಾ; ಬಸವಂತಪುರ ತಾಂಡಾ ಇವರ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ-1955 ಪ್ರಕಾರ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.53/2020 ಕಲಂ. 3&7 ಇಸಿ ಆ್ಯಕ್ಟ-1955 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:-82/2020 ಕಲಂ 379 ಐಪಿಸಿ ಮತ್ತು 4(1), 4(1-ಎ), 21 ಎಮ್.ಎಮ್.ಆರ್.ಡಿ. ಕಾಯ್ದೆ 1957 : ಇಂದು ದಿನಾಂಕ 26/06/2020 ರಂದು ಮಧ್ಯಾಹ್ನ 1-30 ಪಿ.ಎಂ.ಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಸರಕಾರದ ಖನೀಜ ರವಾನೆ ಪರವಾನಿಗೆ ಇಲ್ಲದೆ ತಮ್ಮ ಟಿಪ್ಪರಗಳಾದ ಟಿಪ್ಪರ ನಂಬರ ಕೆ.ಎ-28-4350 ಮತ್ತು ಟಿಪ್ಪರ ನಂಬರ ಎಮ್.ಎಚ್-43-ಬಿಜಿ-9255 ನೆದ್ದವುಗಳಲ್ಲಿ ಜಲ್ಲಿ ಕಲ್ಲುಗಳು ಮತ್ತು ಕಟ್ಟಡ ಕಲ್ಲುಗಳನ್ನ ತುಂಬಿಕೊಂಡು ಯಾದಗಿರಿ ಕಡೆಗೆ ಸಾಗಾಣಿಕೆ ಮಾಡುವಾಗ ಭೂ-ಗಣಿ ಇಲಾಖೆ ಅಧಿಕಾರಿಗಳು ಮತ್ತು ತಹಸಿಲ್ದಾರರು ಕೂಡಿಕೊಂಡು ಜಂಟಿ ದಾಳಿ ಮಾಡಿ ಅಂದಾಜ 17,000/ರೂ ಕಿಮ್ಮತ್ತಿನ ಜಲ್ಲಿ ಕಲ್ಲುಗಳು ಮತ್ತು ಕಟ್ಟಡ ಕಲ್ಲುಗಳು ತಮ್ಮ ವಶಕ್ಕೆ ಪಡೆದುಕೊಂಡ ಬಗ್ಗೆ ಕ್ರಮ ಕೈಕೊಂಡಿದ್ದು ಇರುತ್ತದೆ



ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 23/2020  ಕಲಂ 107 ಸಿಆರ್ ಪಿಸಿ : ನಾನು ಸಕ್ರೇಪ್ಪ ಹೆಚ್.ಸಿ-180 ಸೈದಾಪೂರ ಪೊಲೀಸ್ ಠಾಣೆ ಇದ್ದು  ದಿನಾಂಕ: 26-06-2020 ರಂದು ಬೆಳಿಗ್ಗೆ 09-00 ಗಂಟೆಗೆ  ಹಳ್ಳಿ ಭೇಟಿ ಕುರಿತು ಕ್ಯಾತ್ನಾಳ ಗ್ರಾಮಕ್ಕೆ ಬೇಟಿ ನೀಡಿ ನಂತರ ನಂತರ ಬೆಳಿಗ್ಗೆ 10-00 ಗಂಟೆಗೆ ಹೆಗ್ಗಣಗೇರಾ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಪೊಲೀಸ ಬಾತ್ಮಿದಾರರ ಮುಖಾಂತರ ಮಾಹಿತಿಯನ್ನು ಸಂಗ್ರಹಿಸಲಾಗಿ ಮಾಹಿತಿ ತಿಳಿದುಬಂದಿದ್ದೆನೆಂದರೆ   ಹೆಗ್ಗಣಗೇರಾ ಸೀಮಾಂತರದ ಹೊಲ ಸವರ್ೆ ನಂಬರ 53/1 ರಲ್ಲಿ 03 ಎಕರೆ 15 ಗುಂಟೆ ಜಮೀನು ಸುಮಾರು ವರ್ಷಗಳಿಂದ  ಬಾಬು ತಂದೆ ಹಣಮಂತ ಬಲಸೆ ಈತನು ಸದರಿ ಹೊಲವು ನಮ್ಮ ತಂದೆ ಖರೀದಿ ಮಆಡಿದ ಹೊಲವಾಗಿದ್ದು ಇದನ್ನು ನಾನು ಸಾಗುವಳಿ ಮಾಡುತ್ತೇನೆ ಅಂತಾ ಊರಲ್ಲಿ ಹೇಳುತಿದ್ದು ಬಾಬುನ ಅಣ್ಣತಮ್ಮರಾದ ಕಾಶಪ್ಪ ತಂದೆ ತಿಮ್ಮಪ್ಪ ಈತನು ಆ ಹೊಲವನ್ನು ನಮ್ಮ ತಂದೆ ಮತ್ತು ನಮ್ಮ ದೊಡ್ಡಪ್ಪ ಇಬ್ಬೂ ಒಂದಲ್ಲೆ ಇರುವಾಗಲೆ ಖರಿದಿ ಮಾಡಿದ್ದಾರೆ ಸದರಿ ಹೊಲವು ಇಬ್ಬರಿಗೆ ಸಂಬಂಧಪಟ್ಟಿರುತ್ತದೆ ಅಂತಾ ಬಾಬು ತಂದೆ ಹಣಮಂತ ಈತನು ಸಾಗುವಳಿ ಮಾಡುವ ಹೊಲವನ್ನು ಕಾಶಪ್ಪ ತಂದೆ ತಿಮ್ಮಪ್ಪ ಈತನು ತಕರಾರು ಮಾಡಿದ್ದು ಇದರಿಂದ ಎರಡು ಪಾಟರ್ಿಯವರ ನಡವೆ ಜಗಳವಾಗಿ ಸೈದಾಪೂರ ಠಾಣೆಯಲ್ಲಿ ಗುನ್ನೆ ನಂ.88/2020 ಕಲಂ. 323. 324, 447, 504,506 ಸಂಗಡ 34 ಐಪಿಸಿ ನೆದ್ದರಲ್ಲಿ ಗುನ್ನೆ ದಾಖಲಾಗಿದ್ದು ಇದಕ್ಕೆ ಪ್ರತಿ ಗುನ್ನೆ ಯಾಗಿ ಗುನ್ನೆ ನಂಬರ 89/2020 ಕಲಂ.323,354, 504, 506 ಸಂಗಡ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇದರಿಂದ  ಒಬ್ಬರಿಗೊಬ್ಬರು ತಿವ್ರ ವೈಮನಸ್ಸು ಬೆಳಿಸಿಕೊಂಡಿದ್ದು ಇವರು ಊರಲ್ಲಿ ಯಾವ ವೇಳೆಯಲ್ಲಿ ಜಗಳ ಮಾಡಿಕೊಂಡು ಜೀವ ಮತ್ತು ಆಸ್ತಿ ಪಾಸ್ತಿಗೆ ಧಕ್ಕೆ ಉಂಟುಮಾಡಿಕೊಳ್ಳುವ ಸಂಭವ ಕಂಡು ಬಂದಿದ್ದು ಸದ್ಯ ಇವರು ಊರಲ್ಲಿ ಶಾಂತಿ ಸುವ್ಯವಸ್ಥಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿರುವದು ಕಂಡು ಬಂದಿದ್ದರಿಂದ ಮರಳಿ 02-00 ಪಿ.ಎಮ್ ಕ್ಕೆ ಠಾಣೆಗೆ ಬಂದು ಹೆಗ್ಗಣಗೇರಾ ಗ್ರಾಮದ 1) ಕಾಶಪ್ಪ  ತಂದೆ ತಿಮ್ಮಪ್ಪ ವ|| 30 ವರ್ಷ 2) ರವಿ ತಂದೆ ತಿಮ್ಮಪ್ಪ ವ|| 23 ವರ್ಷ 3) ತಿಮ್ಮಪ್ಪ ತಂದೆ ಬಾಲಪ್ಪ ವ|| 53 ವರ್ಷ ಎಲ್ಲರೂ ಸಾ|| ಹೆಗ್ಗಣಗೇರಾ ತಾ|| ಜಿ|| ಯಾದಗಿರಿ ಇವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಪಿಎಆರ್ ನಂ.23/2020 ಕಲಂ. 107 ಸಿಆರ್.ಪಿಸಿ ನೆದ್ದರಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ. ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಬರ ಮಾಡಿಕೊಂಡು ಕಲಂ.116(3) ಸಿಆರ್ಪಿಸಿ ಅಡಿಯಲ್ಲಿ ಇಂಟಿರಿಯಮ್ ಬಾಂಡ ಬರೆಯಿಸಿಕೊಳಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ.


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 24/2020  ಕಲಂ 107 ಸಿಆರ್ ಪಿಸಿ:ನಾನು ಸಕ್ರೇಪ್ಪ ಹೆಚ್.ಸಿ-180 ಸೈದಾಪೂರ ಪೊಲೀಸ್ ಠಾಣೆ ಇದ್ದು  ದಿನಾಂಕ: 26-06-2020 ರಂದು ಬೆಳಿಗ್ಗೆ 09-00 ಗಂಟೆಗೆ  ಹಳ್ಳಿ ಭೇಟಿ ಕುರಿತು ಕ್ಯಾತ್ನಾಳ ಗ್ರಾಮಕ್ಕೆ ಬೇಟಿ ನೀಡಿ ನಂತರ ನಂತರ ಬೆಳಿಗ್ಗೆ 10-00 ಗಂಟೆಗೆ ಹೆಗ್ಗಣಗೇರಾ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಪೊಲೀಸ ಬಾತ್ಮಿದಾರರ ಮುಖಾಂತರ ಮಾಹಿತಿಯನ್ನು ಸಂಗ್ರಹಿಸಲಾಗಿ ಮಾಹಿತಿ ತಿಳಿದುಬಂದಿದ್ದೆನೆಂದರೆ   ಹೆಗ್ಗಣಗೇರಾ ಸೀಮಾಂತರದ ಹೊಲ ಸವರ್ೆ ನಂಬರ 53/1 ರಲ್ಲಿ 03 ಎಕರೆ 15 ಗುಂಟೆ ಜಮೀನು ಸುಮಾರು ವರ್ಷಗಳಿಂದ ಬಾಬು ತಂದೆ ಹಣಮಂತ ಬೆಲಸೆ ಈತನು ಸದರಿ ಹೊಲವು ನಮ್ಮ ತಂದೆ ಖರೀದಿ ಮಾಡಿದ ಹೊಲವಾಗಿದ್ದು ಇದನ್ನು ನಾನು ಸಾಗುವಳಿ ಮಾಡುತ್ತೇನೆ ಅಂತಾ ಊರಲ್ಲಿ ಹೇಳುತಿದ್ದು ಬಾಬುನ ಅಣ್ಣತಮ್ಮರಾದ ಕಾಶಪ್ಪ ತಂದೆ ತಿಮ್ಮಪ್ಪ ಈತನು ಆ ಹೊಲವನ್ನು ನಮ್ಮ ತಂದೆ ಮತ್ತು ನಮ್ಮ ದೊಡ್ಡಪ್ಪ ಇಬ್ಬರೂ ಒಂದಲ್ಲೆ ಇರುವಾಗಲೆ ಹೊಲ ಖರಿದಿ ಮಾಡಿದ್ದಾರೆ ಸದರಿ ಹೊಲವು ಇಬ್ಬರಿಗೆ ಸಂಬಂಧಪಟ್ಟಿರುತ್ತದೆ ಅಂತಾ ಹೇಳಿತಿದ್ದು ಆದರೆ ಬಾಬು ಈತನು ಸದರಿ ಹೊಲವನ್ನು ನಾನು ಸಾಗುವಳಿ ಮಾಡುತ್ತೇನೆ ಅಂತಾ ಹೇಳಿ ಹೊಲವನ್ನು ಸಾಗುವಳಿ ಮಾಡಿದ್ದು  ಇದರಿಂದ ಎರಡು ಪಾಟರ್ಿಯವರ ನಡವೆ ಜಗಳವಾಗಿ ಸೈದಾಪೂರ ಠಾಣೆಯಲ್ಲಿ ಗುನ್ನೆ ನಂ.88/2020 ಕಲಂ. 323. 324, 447, 504,506 ಸಂಗಡ 34 ಐಪಿಸಿ ನೆದ್ದರಲ್ಲಿ ಗುನ್ನೆ ದಾಖಲಾಗಿದ್ದು ಇದಕ್ಕೆ ಪ್ರತಿ ಗುನ್ನೆ ಯಾಗಿ ಗುನ್ನೆ ನಂಬರ 89/2020 ಕಲಂ.323,354, 504, 506 ಸಂಗಡ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇದರಿಂದ  ಒಬ್ಬರಿಗೊಬ್ಬರು ತಿವ್ರ ವೈಮನಸ್ಸು ಬೆಳಿಸಿಕೊಂಡಿದ್ದು ಇವರು ಊರಲ್ಲಿ ಯಾವ ವೇಳೆಯಲ್ಲಿ ಜಗಳ ಮಾಡಿಕೊಂಡು ಜೀವ ಮತ್ತು ಆಸ್ತಿ ಪಾಸ್ತಿಗೆ ಧಕ್ಕೆ ಉಂಟುಮಾಡಿಕೊಳ್ಳುವ ಸಂಭವ ಕಂಡು ಬಂದಿದ್ದು ಸದ್ಯ ಇವರು ಊರಲ್ಲಿ ಶಾಂತಿ ಸುವ್ಯವಸ್ಥಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿರುವದು ಕಂಡು ಬಂದಿದ್ದರಿಂದ ಮರಳಿ 02-00 ಪಿ.ಎಮ್ ಕ್ಕೆ ಠಾಣೆಗೆ ಬಂದು ಹೆಗ್ಗಣಗೇರಾ ಗ್ರಾಮದ ಬಾಬು ತಂದೆ ಹಣಮಂತ ಬೆಲಸೆ ವ|| 35 ವರ್ಷ ಸಾ|| ಹೆಗ್ಗಣಗೇರಾ ತಾ|| ಜಿ|| ಯಾದಗಿರಿ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪಿಎಆರ್ ನಂ.24/2020 ಕಲಂ. 107 ಸಿಆರ್.ಪಿಸಿ ನೆದ್ದರಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ. ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಬರ ಮಾಡಿಕೊಂಡು ಕಲಂ.116(3) ಸಿಆರ್ಪಿಸಿ ಅಡಿಯಲ್ಲಿ ಇಂಟಿರಿಯಮ್ ಬಾಂಡ ಬರೆಯಿಸಿಕೊಳಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 173/2020.ಕಲಂ. 379. ಐ.ಪಿ.ಸಿ : ಇಂದು ದಿನಾಂಕ 26/06/2020 ರಂದು 13-00 ಗಂಟೆಗೆ ಠಾಣೆಗೆ ಪಿಯರ್ಾದಿ ಶ್ರೀ ರಾಜೇಶ ತಂದೆ ಶಮರ್ುದ್ದಿನ್ ಬುರಂಜಿ ವ|| 31 ಜಾ|| ಮುಸ್ಲಿಂ ಉ|| ಖಾಸಗಿ ಶಿಕ್ಷಕ ಸಾ|| ಸೈದಾಪೂರ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ತಂದು ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶ ವೆನೆಂದರೆ,      ಹೀಗಿದ್ದು ದಿನಾಂಕ 28/05/2020 ರಂದು ಬೆಳಿಗ್ಗೆ 9-00 ಗಂಟೆಗೆ ದಿನನಿತ್ಯದಂತೆ ನಮ್ಮೂರಿನಿಂದ ಶಹಾಪೂರದ ಡಿಡಿಯು ಶಾಲೆಗೆ ಬಂದು ಕಾನ್ವೆಂಟ ಶಾಲೆಯ ಮುಂದೆ ಇರುವ ಟೆಂಗಿನ ಗಿಡದ ನೆರಳಿನಲ್ಲಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಶಾಲೆಯ ಆಫೀಸ್ ಕೆಲಸಮಾಡಿ ಬೆಳಿಗ್ಗೆ 11-00 ಗಂಟೆಗೆ ಹೋರಗಡೆ ಬಂದಾಗ ನನ್ನ ಮೋಟರ್ ಸೈಕಲ್ ನೋಡಲಾಗಿ ಇದ್ದು ನಂತರ ಶಾಲೆಯ ಆಫೀಸ್ದಲ್ಲಿ ಹೋಗಿ ಕೆಲಸ ಮುಗಿಸಿಕೊಂಡು ಮದ್ಯಾನ್ಹ 12-00 ಗಂಟೆಯ ಸುಮಾರಿಗೆ ಹೋರಗಡೆ ಬಂದಾಗ ನನ್ನ ಮೋಟರ್ ಸೈಕಲ್ ನೋಡಲಾಗಿ ಕಾಣಲಿಲ್ಲ ಆಗ ನಮ್ಮ ಊರಿನವರಾದ ದೇವಿಂದ್ರಪ್ಪ ತಂದೆ ನಿಂಗಪ್ಪ ಮೇಟಿ ಇವರಿಗೆ ಪೋನ ಮಾಡಿ ವಿಷಯ ತಿಳಿಸಿದಾಗ ಅವರು ಕಾನ್ವೆಂಟ ಶಾಲೆಯ ಮುಂದೆ ನನ್ನ ಹತ್ತಿರ ಬಂದಾಗ ನನ್ನ ಮೋಟರ್ ಸೈಕಲ್ ಯಾರೋ ತೆದುಕೊಂಡು ಹೋದ ಬಗ್ಗೆ ತಿಳಿಸಿದೆನು. ಆಗ ನಾನು ದೇವಿಂದ್ರಪ್ಪ  ಇಬ್ಬರು ಕೂಡಿ ನನ್ನ ಮೋಟರ್ ಸೈಕಲ್ ನಂ ಕೆಎ-33ಎಸ್-9782 ನೇದ್ದು ಹುಡುಕಾಡಲಾಗಿ ಸಿಕ್ಕಿರುವದಿಲ್ಲ ನನ್ನ ಹೊಂಡಾ ಸೈನ ಕಂಪನಿಯ ಮೋಟರ್ ಸೈಕಲ್ ನಂ. ಏಂ-33ಖ-9782 ಇಓಉಓಇ ಓಔ-ಎಅ65ಇಖಿ0335326. ಅಊಇಖಖ ಓಔ-ಒಇ4ಎಅ651ಆಉಖಿ225628 ಅ:ಕಿ: 49000=00 ರೂ ನೇದ್ದನ್ನು ನಮ್ಮ ಶಾಲೆಯ ಮುಂದೆ ಇರುವ ಟೆಂಗಿನ ಗಿಡದ ನೆರಳಿನಲ್ಲಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ಸಮಯದಲ್ಲಿ ದಿನಾಂಕ 28/05/2020 ರಂದು 11-00 ಎ.ಎಂ. ರಿಂದ 12-00 ಪಿ.ಎಂ. ಗಂಟೆಯ ಅವದಿಯಲ್ಲಿ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ಹುಡುಕಾಡಲಾಗಿ ಸಿಕ್ಕಿರುವದಿಲ್ಲಾ. ಕಳ್ಳತನವಾದ ನನ್ನ ಮೋಟರ್ ಸೈಕಲ್ ಇಂದಲ್ಲಾ ನಾಳೆ ಸಿಗಬಹುದು ಎಂದು ತಿಳಿದು ಹುಡುಕಾಡಿದರು ಸಿಗದೆ ಇದ್ದಾಗ ಇಂದು ದಿನಾಂಕ 26/06/2020 ರಂದು ತಡವಾಗಿ ಠಾಣೆಗೆ ಹಾಜರಾಗಿ ಕಳುವಾದ ನನ್ನ ಮೋಟರ್ ಸೈಕಲ್ ಪತ್ತೆ ಮಾಡಿಕೊಡಲು ಅಜರ್ಿ ಸಲ್ಲಿಸಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 173/2020 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಕಲಿಸಿ ಕೊಂಡು ತನಿಕೆ ಕೈಕೊಂಡೆನು



ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 76/2020 323, 324, 325, 504, 506, ಸಂಗಡ 149 ಐಪಿಸಿ:ಇಂದು ದಿನಾಂಕ: 26/06/2020 ರಂದು 11.45 ಎಎಮ್ ಕ್ಕೆ ಸರಕಾರಿ ಆಸ್ಪತ್ರೆ ಶಹಾಪೂರದಿಂದ ಹರ್ಟ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಶಹಾಪುರ ಸರಕಾರಿ ಆಸ್ಪತ್ರೆಗೆ ಬೇಟಿ ಮಾಡಿ ುಪಚಾರದಲ್ಲಿದ್ದ ಗಾಯಾಳು ಮಲ್ಲಣ್ಣ ತಂದೆ ಸಾಹೇಬಗೌಡ ಗಂಗೋಳಿ ವಯಾ:40 ಉ: ಒಕ್ಕಲುತನ ಜಾ: ರಡ್ಡಿ ಸಾ: ಗೋಗಿ ಕೆ ತಾ: ಶಹಾಪೂರ ಜಿ: ಯಾದಗಿರಿ ಇವರ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು, ಸದರಿ ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ, ನಮ್ಮ ತಾಯಿಯಾದ ಮಹಾದೇವಮ್ಮ ಗಂಡ ಸಾಹೇಬಗೌಡ ಗಂಗೋಳಿ ವಯಾ:65 ವರ್ಷ ಮತ್ತು ನನ್ನ ಹೆಂಡತಿ, ಮಕ್ಕಳ ಜೋತೆಯಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜಿವಿಸುತ್ತೇನೆ. ನಮ್ಮ ತಂದೆಯವರು 06 ಎಕರೆ ಜಮೀನು ಖರಿದಿಸಿ ನಮ್ಮ ತಾಯಿಯವರ ಹೆಸರಿಗೆ ಮಾಡಿಸಿರುತ್ತಾರೆ. ನನ್ನ ತಾಯಿ ನಮ್ಮ ಹತ್ತಿರ ಇದ್ದುದರಿಂದ ಸದರಿ ಹೊಲವನ್ನು ನನ್ನ ಹೊಲದ ಜೋತೆಗೆ ನಾನೆ ಬಿತ್ತುತ್ತೇನೆ. ನಮ್ಮ ಅಣ್ಣಂದಿರಾದ ನಾಗರಡ್ಡಿ ತಂದೆ ಸಾಹೇಬಗೌಡ ಗಂಗೋಳಿ, ಚಂದ್ರಶೇಖರ ತಂದೆ ನಾಗರಡ್ಡಿ ಗಂಗೋಳಿ,  ಇವರುಗಳು ತಮ್ಮ ಪಾಲಿಗೆ ಪಿತ್ರಾಜರ್ಿತವಾಗಿ ಬಂದ ಹೊಲವನ್ನು ಮಾರಾಟ ಮಾಡಿಕೊಂಡು ಈಗ ನಮ್ಮ ತಾಯಿಯವರ ಹೆಸರಿನಲ್ಲಿ ಇರುವ ಹೊಲವನ್ನು ತಮ್ಮೆಲ್ಲರರ ಹೆಸರಿನಲ್ಲಿ ನೋಂದಾಯಿಸಿರುತ್ತಾರೆ. ಅದಕ್ಕೆ ನಮ್ಮ ತಾಯಿ ನಾನು ಇರುವ ವರೆಗೆ ಸದರಿ ಜಮೀನು ನಾನು ಯಾರಿಗೂ ಕೊಡುವದಿಲ್ಲ ಅಂತಾ ಹೇಳಿದ್ದು ಇರುತ್ತದೆ. 
        ನಮ್ಮ ತಾಯಿಯವರ ಪಾಲಿಗೆ ಇದ್ದ ಹೊಲದಲ್ಲಿ ನಾಳೆಯಿಂದ ಹತ್ತಿ ಊರ ಬೇಕು ಅಂತಾ ಇಂದು ದಿನಾಂಕ: 26/06/2020 ರಂದು ಬೆಳಿಗ್ಗೆ ಹೊಲ ಸಾಗ ಮಾಡಿ ಸ್ವಲ್ಪ ಹತ್ತಿ ಊರಿ ಬರಬೇಕು ಅಂತಾ ನಾನು ಮತ್ತು ನಾನು ನನ್ನ ಹೆಂಡತಿಯಾದ ಪ್ರಭಾವತಿ ಗಂಡ ಮಲ್ಲಣ್ಣ, ಗಂಗೋಳಿ ವಯಾ: 35 ವರ್ಷ, ನಮ್ಮ ತಾಯಿಯಾದ ಮಹಾದೇವಮ್ಮ ಗಂಡ ಸಾಹೇಬಗೌಡ ಗಂಗೋಳಿ ವಯಾ; 65 ನಾವು ಮೂರು ಜನರು ನಮ್ಮ ಹೊಲಕ್ಕೆ ಹೋಗಿ ಹತ್ತಿ ಬೀಜ ಊರುತ್ತಿದ್ದಾಗ, ನಮ್ಮ ಅಣ್ಣಂದಿರು ಮತ್ತು ಹೆಂಡತಿ ಮಕ್ಕಳು, 1) ನಾಗರಡ್ಡಿ ತಂದೆ ಸಾಹೇಬಗೌಡ ಗಂಗೋಳಿ, 2) ಶಿವರಾಜ ತಂದೆ ನಾಗರಡ್ಡಿ ಗಂಗೋಳಿ 3) ಚಂದ್ರಶೇಖರ ತಂದೆ ನಾಗರಡ್ಡಿ ಗಂಗೋಳಿ 4) ಶಿವರಾಜ ತಂದೆ ನಾಗರಡ್ಡಿ ಗಂಗೋಳಿ, 5) ರಾಜೇಶ್ವರಿ ಗಂಡ ಚಂದ್ರಶೇಖರ ಗಂಗೋಳಿ ಎಲ್ಲರೂ ಜಾ: ರಡ್ಡಿ ಸಾ: ಗೋಗಿ (ಕೆ) ತಾ: ಶಹಾಪೂರ ಜಿ: ಯಾದಗಿರಿ. ಇವರೆಲ್ಲರೂ ಬಂದು ನಮ್ಮ ನಮ್ಮ ಹೆಸರಿಗೆ ಪಾಹಣಿಯಲ್ಲಿ ಹೊಲ ಆಗಿದೆ ಈ ವರ್ಷ ನೀವು ಬಿತ್ತ ಬೇಡರಿ ಅಂತಾ ನಮ್ಮ ಅಣ್ಣ ನಾಗರಡ್ಡಿ ಈತನು ನಮ್ಮ ತಾಯಿಗೆ ಬೆದರಿಸುತ್ತಾ ಮೈಮೇಲೆ ಬಂದನು, ಆಗ ನಮ್ಮ ತಾಯಿ ನಿಮ್ಮ ಪಾಲಿನ ಹೊಲ ನಿಮಗೆ ಕೊಟ್ಟಿದೆ ಅದನ್ನು ಮಾರಿ ಹಾಳ ಮಾಡಿ ಈಗ ನನ್ನ ಹೊಲ ಮಾರಲಿಕ್ಕೆ ಬಂದಿರಿ ಏನು ಅಂತಾ ಅಂದಾಗ ನಾಗರಡ್ಡಿ ಮತ್ತು ಚಂದ್ರಶೇಖರ ಇವರುಗಳು, ನಮ್ಮ ತಾಯಿಗೆ ನಿನ್ನ ಹೊಲ ಎಲ್ಲಿಂದ ಬರುತ್ತೆ ಅಂತಾ ದಬ್ಬಿಕೊಟ್ಟರು, ಆಗ ನಾನು ನಮ್ಮ ತಾಯಿಗೆ ಹಿಡಿದು ಸಹಾಯಕ್ಕೆ ಹೋದಾಗ ನಾಗರಡ್ಡಿ ಈತನು ಇದೆ ಸೂಳೆ ಮಗನಿಂದ ಈಕೆ ನಮಗೆ ಹಿಂಗ ಮಾತಾಡತಾಳ ಒದಿರಿ ಈವನಿಗೆ ಅಂತಾ ಬೈಯುತ್ತಾ, ನನಗೆ ಕೈಯಿಂದ ಕಪಾಳಕ್ಕೆ ಹೊಡೆದನು, ಆಗ ಚಂದ್ರಶೇಖರ ಈತನು ಕೈಯಿಂದ ಬೆನ್ನಿಗೆ ಒದ್ದನು, ಶಿವರಾಜ ತಂದೆ ನಾಗರಡ್ಡಿ ಮತ್ತು ಶಿವರಾಜ ತಂದೆ ಚಂದ್ರಶೇಖರ ಇವರುಗಳು ಕೂಡ ನನಗೆ ಕೈಯಿಂದ ಬೆನ್ನಿಗೆ ಹೊಡೆದರು, ರಾಜೇಶ್ವರಿ ಇವರು ನನ್ನ ತಾಯಿಯವರಿಗೆ ಒಂದು ಕಲ್ಲಿನಿಂದ ಹಣೆಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ. ಅಷ್ಟರಲ್ಲಿ ನಾಗರಡ್ಡಿ ಈತನು ಅಲ್ಲೆ ಗೊಬ್ಬರ ಚೀಲ ಕೋಯ್ಯಲು ತಂದಿದ್ದ, ಒಂದು ಚಾಕುವಿನಿಂದ ನನ್ನ ಎರಡು ಕೈಗಳಿಗೆ ಮುಂಗೈ ಹತ್ತಿರ ಚುಚ್ಚಿದ ಮತ್ತು ಎರಡು ಕಾಲುಗಳಿಗೆ ಮೋಳಕಾಲಿನ ಮೇಲೆ ಚುಚ್ಚಿದ, ಆಗ ನಾನು ಚೀರಾಡುವದನ್ನು ನೋಡಿ ಪಕ್ಕದ ಹೊಲದಲ್ಲಿಂದ ಬಂದ ಹುಸೇನಿ ತಂದೆ ಬಾಷಾ ಜಾಲಿಕಾಯಿ ಸಾ; ಸಿಂಗನಳ್ಳಿ ಇವನು ಮತ್ತು ನನ್ನ ಹೆಂಡತಿ ಪ್ರಭಾವತಿ ಇವರು ಬಿಡಿಸಿಕೊಂಡರು, ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದರು, ಆಗ ಎಲ್ಲರೂ ನಮಗೆ ಹೊಲ ಕೊಡಲಿಲ್ಲ ಅಂದರೆ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 155/2020 ಕಲಂ 143, 147, 148, 323, 324, 448, 354, 504, 506 ಸಂ. 149 ಐಪಿಸಿ : ಇಂದು ದಿನಾಂಕ: 26/06/2020 ರಂದು6 ಪಿ.ಎಂ. ಕ್ಕೆ ಠಾಣೆಯಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗಶ್ರೀ ಸಾಯಬಣ್ಣತಂದೆದೊಡ್ಡ ಭೀಮಣ್ಣ ಬನ್ನೆಟ್ಟಿ ವ|| 40 ವರ್ಷಜಾ|| ಕುರಬರ ಉ|| ಕೂಲಿ ಕೆಲಸ ಸಾ|| ಬೈರಿಮಡ್ಡಿತಾ|| ಸುರಪುರಇವರುಠಾಣೆಗೆ ಹಾಜರಾಗಿಒಂದುಕನ್ನಡದಲ್ಲಿಟೈಪ್ ಮಾಡಿಸಿದ ದೂರುಅಜರ್ಿ ನೀಡಿದ್ದು, ಸಾರಾಂಶವೆನೆಂದರೆ ನಮ್ಮ ಪ್ಲಾಟ್ ನಂ.2/103 ಜಾಗದಲ್ಲಿ ಮನೆ ಇದ್ದು, ಅದರ ಮುಂದಿನ ಖುಲ್ಲಾಜಾಗದಲ್ಲಿ 3 ತಿಂಗಳ ಹಿಂದೆ ನಮ್ಮತಾಯಿಯಾದದ್ಯಾಮವ್ವಗಂಡದೊಡ್ಡ ಭೀಮಣ್ಣ ಬನ್ನೆಟಿಇವರ ಹೆಸರಿನಲ್ಲಿ ಸರಕಾರದಿಂದ ಮಂಜುರಾಗಿದ್ದಟೈಲೆಟ್ರೂಮ್ ಕಟ್ಟಿಸಿದ್ದು ಇರುತ್ತದೆ. ನಮ್ಮೂರಿನವನಾದ ಶಿವಪ್ಪ ತಂದೆ ಭೀಮಣ್ಣ ತಳವಾರ ಇತನು ಬಂದುಟೈಲೆಟ್ರೂಮ್ ನಮ್ಮಜಾಗದಲ್ಲಿ ಕಟ್ಟಿಸಿರಿ ಅಂತಾ ಆಗಾಗ ನಮ್ಮಜೊತೆತಂಟೆತಕರಾರು ಮಾಡುತ್ತಾ ಬಂದಿದ್ದುಇರುತ್ತದೆ. ಹಿಗಿದ್ದುಇಂದು ದಿನಾಂಕ:26/06/2020 ರಂದು ಮುಂಜಾನೆ 7:30 ಗಂಟೆ ಸುಮಾರಿಗೆ ನಾನು ಮತ್ತು ನನ್ನತಾಯಿಯಾದದ್ಯಾಮವ್ವ ಹಾಗೂ ನನ್ನ ಹೆಂಡತಿಯಾದ ಮರೆಮ್ಮ ಮೂವರು ನಮ್ಮ ಮನೆಯಲ್ಲಿರುವಾಗ ನಮ್ಮೂರಿನವರಾದ 1) ಹಣಮಂತತಂದೆ ಶಿವಪ್ಪ ತಳವಾರ, 2) ಸಕ್ರೆಪ್ಪತಂದೆ ಹಣಮಂತ ತಳವಾರ, 3) ಶಿವಪ್ಪ ತಂದೆ ಭೀಮಣ್ಣ ತಳವಾರ, 4) ದೇವಿಂದ್ರಪ್ಪತಂದೆ ಭೀಮಣ್ಣ ತಳವಾರ, 5) ಮಾನಪ್ಪತಂದೆ ಶಿವಪ್ಪ ತಳವಾರ, 6) ಯಲ್ಲಮ್ಮಗಂಡ ಹಣಮಂತ ತಳವಾರ, 7) ಶಿವಮ್ಮ ಗಂಡ ಶಿವಪ್ಪ ತಳವಾರ, 8) ಸಕ್ರೆಮ್ಮಗಂಡದೇವಿಂದ್ರಪ್ಪ ತಳವಾರ ಎಲ್ಲರುಗುಂಪುಕಟ್ಟಿಕೊಂಡುಕೈಯಲ್ಲಿಕಲ್ಲು ಮತ್ತು ಬಡಿಗೆ ಹಿಡಿದುಕೊಂಡು ಮನೆಯ ಮುಂದೆ ಬಂದು ನಮ್ಮಜಾಗದಲ್ಲಿದ್ದಟೈಲೆಟ್ರೂಮ್ಕೆಡವುತ್ತಿರುವಾಗ ನಾನು ಯಾಕೆಅದನ್ನುಕೆಡವುತ್ತಿರಿಅಂತಾ ಕೆಳಿದ್ದಕ್ಕೆ ಸೂಳೆ ಮಗನೆ ನಮ್ಮಜಾಗದಲ್ಲಿಟೈಲೆಟ್ರೂಮ್ಕಟ್ಟಿ ನಿಮ್ಮಜಾಗಅಂತಿಯಾಅಂತಾಅವಾಚ್ಯ ಶಬ್ದಗಳಿಂದ ಬೈದವರೆಅವರಲ್ಲಿಯ ಹಣಮಂತಇತನುತನ್ನಕೈಯಲ್ಲಿದ್ದ 1 ಬಡಿಗೆಯಿಂದ ನನ್ನಎಡಗೈ ಮುಂಗೈ ಕೆಳಗೆ ಹೊಡೆದುಗುಪ್ತಗಾಯ ಮಾಡಿದನು ಮತ್ತು ಸಕ್ರೆಪ್ಪಇತನುತನ್ನಕೈಯಲ್ಲಿದ್ದಕಲ್ಲಿನಿಂದ ನನ್ನ ಹಣೆಗೆ ಹೊಡೆದುರಕ್ತಗಾಯ ಮಾಡಿದನು. ನನಗೆ ಹೊಡೆಯುವದನ್ನು ನೋಡಿ ನನ್ನತಾಯಿ ಮತ್ತು ಹೆಂಡತಿ ಬಿಡಿಸಲು ಬಂದಾಗ ನನ್ನ ಹೆಂಡತಿಗೆ ಶಿವಪ್ಪ ಇತನು ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿತನ್ನಕೈಯಲ್ಲಿದ್ದ ಬಡಿಗೆಯಿಂದಎಡಗಣ್ಣಿನ ಹತ್ತಿರ ಹೊಡೆದುರಕ್ತಗಾಯ ಮಾಡಿದನು, ಆಗ ಶಿವಮ್ಮ ಇವಳು ಕೂದಲು ಹಿಡಿದುಜಗ್ಗಾಡಿ ನೆಲಕ್ಕೆ ಕಡೆವಿದಾಗಯಲ್ಲಮ್ಮ ಇವಳು ಕೈಯಿಂದ ಬೆನ್ನಿಗೆ ಹೊಡೆದಳು. ಹಾಗೂ ನನ್ನತಾಯಿಗೆದೇವಿಂದ್ರಪ್ಪಇತನುತನ್ನಕೈಯಲ್ಲಿದ್ದ ಬಡಿಗೆಯಿಂದ ಬಲಗಣ್ಣಿನ ಕೆಳಗೆ ಹೊಡೆದುರಕ್ತಗಾಯ ಮಾಡಿದನು, ಮಾನಪ್ಪಇತನುಕೈಯಿಂದ ಮುಷ್ಠಿ ಮಾಡಿ ಬಾಯಿಗೆ ಹೊಡೆದನು, ಸಕ್ರಮ್ಮ ಇವಳು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದಳು. ನಂತರ ನಾವು ಚಿರಾಡುವದನ್ನು ಕೇಳಿ ಬಸವರಾಜತಂದೆ ಭಗವಂತಪ್ಪ ಬನ್ನೆಟ್ಟಿ, ಮತ್ತು ಸಾಯಬಣ್ಣತಂದೆ ಬಸಣ್ಣ ಸಣ್ಣಮಲ್ಲಪ್ಪರಇಬ್ಬರು ಬಂದು ಜಗಳವನ್ನು ನೋಡಿ ಬಿಡಿಸಿದರು. ಇವರು ಬಂದು ಜಗಳ ಬಿಡಿಸಿದಾರೆ ಅಂತಾಇವತ್ತು ನಿಮ್ಮನ್ನು ಬಿಟ್ಟಿವಿ ಇನ್ನೊಮ್ಮೆ ನಮ್ಮತಂಟೆಗೆ ಬಂದರೇಜೀವ ಸಹಿತ ಉಳಿಸುವದಿಲ್ಲ ಅಂತಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ನಂತರ ನಾವು ಮೂವರು ಖಾಸಗಿ ವಾಹನದಲ್ಲಿಉಪಚಾರಕ್ಕಾಗಿ ಸುರಪೂರ ಸಕರ್ಾರಿಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮಾಡಿಸಿಕೊಂಡು ತಡವಾಗಿದೂರುಕೊಡಲು ಬಂದಿರುತ್ತೇವೆ. ಕಾರಣಅಕ್ರಮಕೂಟ ರಚಿಸಿಕೊಂಡು ಬಂದುಕೈಯಿಂದ, ಕಲ್ಲಿನಿಂದ ಹಾಗೂ ಬಡಿಗೆಗಳಿಂದ ನಮಗೆ ಹೊಡಬಡೆ ಮಾಡಿಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಪ್ರಕಾರಕ್ರಮಜರುಗಿಸಬೇಕಾಗಿ ವಿನಂತಿಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.




ಕೋಡೆಕಲ್ ಪೊಲೀಸ ಠಾಣೆ ಗುನ್ನೆ ನಂ:-. 51/2020 ಕಲಂ: 143, 147, 148,  341, 323,  324, 504, 506, ಸಂಗಡ 149 ಐಪಿಸಿ : ಇಂದು ದಿನಾಂಕ:26.06.2020 ರಂದು ಸಾಯಂಕಾಲ 8:15 ಗಂಟೆಗೆ  ಪಿರ್ಯಾಧಿ ಶ್ರೀ ದೇವಪ್ಪ ತಾಯಿ ಪರಮವ್ವ ಹೊಸಮನಿ ವ:48 ವರ್ಷ ಜಾ: ಮಾದಿಗ ಉ: ಕೂಲಿಕೆಲಸ ಸಾ:ಮಂಜಲಾಪೂರ ಕಕ್ಕೇರಾ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಹೇಳಿಕೆಯನ್ನು ಹೇಳಿ ಟೈಪ್ ಮಾಡಿಸಿದ್ದು ಅದರ ಸಾರಾಂಶವೆನೆಂದರೆ, ನನ್ನ ತಾಯಿಗೆ ನಂದಪ್ಪ, ನಾನು, ಹುಲಗಪ್ಪ, ಪರಮಣ್ಣ ಅಂತ 4 ಜನ ಗಂಡು ಮಕ್ಕಳಿದ್ದು. ನಮ್ಮೆಲ್ಲೆರದು ಮದುವೆಯಾಗಿದ್ದು. ನಾವೆಲ್ಲರೂ ನಮ್ಮ-ನಮ್ಮ ಹೆಂಡತಿ ಮಕ್ಕಳೊಂದಿಗೆ ಬೇರೆ-ಬೇರೆ ಇರುತ್ತೇವೆ. ನಮ್ಮ ಹರಿಜನಕೇರಿ ಪಕ್ಕದ ನೀರಿನ ಟಾಕಿಯಿಂದ ಈ ಮೊದಲು ಗ್ರಾಮ ಪಂಚಾಯತಿ ವತಿಯಿಂದ ನಮ್ಮ ಓಣಿಗೆ ನೀರಿನ ಸರಭರಾಜು ಮಾಡಿದ್ದು. ನಮ್ಮೂರ ಪರಶುರಾಮ ತಂದೆ ಭೀಮಣ್ಣ ಮಾದರ ಹಾಗೂ ಅವರ ಮನೆಯವರು ನಮಗೆ ಮತ್ತು ಕೆಲವು ಜನರಿಗೆ ನೀರು ತೆಗೆದುಕೊಳ್ಳಲು ತಕರಾರು ಮಾಡುತ್ತಿದ್ದರಿಂದ. ನಾವು ಪುರಸಭೆ ಕಕ್ಕೇರಾ ರವರಿಗೆ ನಮ್ಮ ಕೇರಿಗೆ ನೀರಿನ ಟಾಕಿಯಿಂದ ನೀರು ಸರಬುರಾಜು ಮಾಡುವಂತೆ ವಿನಂತಿಸಿಕೊಂಡಿದ್ದು. ಅದರಂತೆ ಪುರಸಭೆಯವರು ನೀರಿನ ಟಾಕಿಯಿಂದ ನಮ್ಮ ಕೇರಿಗೆ ನೀರು ಸರಬುರಾಜು ಮಾಡಲು ನಿನ್ನೆ ದಿನ  ಕೆಲಸ ಪ್ರಾರಂಭಿಸಿದ್ದು ಇದಕ್ಕೆ ಪರಶುರಾಮ ತಂದೆ ಬೀಮಣ್ಣ ಮಾದರ ಹಾಗೂ ಅವರ ಮನೆಯವರು ತಕರಾರು ಮಾಡಿ ಕೆಲಸ  ಬಂದ್ ಮಾಡಿಸಿದ್ದು ಆಗ ನಾವು ಅವರಿಗೆ ಈಗಾಗಲೇ ಇರುವ ಸೌಲಬ್ಯದಿಂದ ನಮಗೆ ನೀರು ಬಿಡುತ್ತಿಲ್ಲಾ. ಅಲ್ಲದೇ ನಾವು ಪುರಸಭೆ ರವರಿಂದ ಮಾಡಿಸಿಕೊಳ್ಳುವ ಕೆಲಸವನ್ನು ಬಂದ್ ಮಾಡಿಸಿದ್ದು. ಈಗೆ ಮಾಡಿದರೆ ಹೇಗೆ ಅಂತ ಕೇಳಿದ್ದಕ್ಕೆ ನಮ್ಮ ಮೇಲೆ ಪರಶುರಾಮ ಮತ್ತು ಅವರ ಮನೆಯವರು ಸಿಟ್ಟಾಗಿದ್ದು ಇರುತ್ತದೆ. ಅಲ್ಲದೇ ನಿನ್ನೆ ದಿನ ನನ್ನ ಅಜ್ಜಿಯಾದ ಶಿವಮ್ಮ ಗಂಡ ಶಂಬಪ್ಪ ಹೈಯಾಳದವರ ಇವರೊಂದಿಗೆ ಪರಶುರಾಮ ಹಾಗೂ ಅವರ ಮನೆಯವರು ತಕರಾರು ಮಾಡಿದ ವಿಷಯದಲ್ಲಿ ನಮ್ಮೂರ ಹಿರಿಯರು ಅವರಿಗೂ ನಮಗೂ ನಮ್ಮೂರ ಹಣಮಂತ ದೇವರ ಗುಡಿಯಲ್ಲಿ ಪಂಚಾಯತಿ ಕರೆದಿದ್ದರಿಂದ ನಾನು ಮತ್ತು ನಮ್ಮ ಸಂಬಂಧಿಕರು ಮತ್ತು ಪರಶರಾಮ  ಹಾಗೂ ಅವರ ಸಂಬಂಧಿಕರು ಹಣಮಂತ ದೇವರ ಗುಡಿಗೆ ಹೋಗಿದ್ದು ಇರುತ್ತದೆ.
     ಹೀಗಿರುವಾಗ ಹಣಮಂತ ದೇವರ ಗುಡಿಯಲ್ಲಿ ಹಿರಿಯರು ಅವರಿಗೂ ನಮಗೂ ತಿಳುವಳಿಕೆ ಹೇಳಿದ ನಂತರ  ನಾನು ಮತ್ತು ನನ್ನ ಅಣ್ಣ ನಂದಪ್ಪ ತಾಯಿ ಪರಮವ್ವ, ಅಜ್ಜಿ ಶಿವಮ್ಮ ಗಂಡ ಶಂಬಪ್ಪ ಹೈಯಾಳದವರ್, ನನ್ನ ತಮ್ಮ ಹುಲಗಪ್ಪ ತಾಯಿ ಪರಮವ್ವ, ನನ್ನ ತಮ್ಮನ ಮಗ ಶರಣಪ್ಪ ತಂದೆ ಹುಲಗಪ್ಪ ಹೊಸಮನಿ ಹಾಗೂ ನಮ್ಮ ಸಂಬಂಧಿಕರಾದ ದ್ಯಾಮವ್ವ ಗಂಡ ಯಲ್ಲಪ್ಪ ಹೊಸಮನಿ, ಹುಲಗಮ್ಮ ಗಂಡ ಪರಮಣ್ಣ ಹೊಸಮನಿ, ಪರಮವ್ವ ಗಂಡ ರಾಮಪ್ಪ ಬೆಣಸಿಗಡ್ಡಿ ಎಲ್ಲರೂ ಕೂಡಿ ನಮ್ಮ ಮನೆಗೆ ಹೋಗಲು ಇಂದು ದಿನಾಂಕ:26.06.2020 ರಂದು ಸಾಯಂಕಾಲ 5:15 ಗಂಟೆಯ ಸುಮಾರಿಗೆ ಹಣಮಂತ ದೇವರ ಗುಡಿಯ ಹತ್ತಿರ ಹೋಗುತ್ತಿರುವಾಗ ಅಲ್ಲಿಯೇ ಇದ್ದ ನಮ್ಮೂರ 1) ಪರಶುರಾಮ ತಂದೆ ಭೀಮಣ್ಣ ಮಾದರ 2) ನಿಂಗಪ್ಪ ತಂದೆ ಪರಮಣ್ಣ ಮಾದರ 3) ನಿಂಗಪ್ಪ ತಂದೆ ಶಾಂತಪ್ಪ ಮಾದರ 4) ಹುಲಗಪ್ಪ ತಂದೆ ಪರಮಣ್ಣ ಮಾದರ 5) ಬಸಪ್ಪ ತಂದೆ ಶಾಂತಪ್ಪ ಮಾದರ 6) ಸೋಮಣ್ಣ ತಂದೆ ಬೀಮಣ್ಣ ಮಾದರ 7) ಬೂಮಣ್ಣ ತಂದೆ ರಾಮಣ್ಣ ಮಾದರ 8) ನೀಲವ್ವ ಗಂಡ ನಿಂಗಪ್ಪ ಮಾದರ 9) ಗಂಗವ್ವ ಗಂಡ ಪರಶುರಾಮ ಮಾದರ ಇವರೆಲ್ಲರೂ ಅಲ್ಲಿಯೇ ಪಕ್ಕದಲ್ಲಿನ ಇದ್ದ ಕಲ್ಲು ಬಡಿಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಗುಂಪಾಗಿ ನಮ್ಮ ಹತ್ತಿರ ಬಂದವರೇ ನಮ್ಮಲ್ಲೆರಿಗೂ  ತಡೆದು ನಿಲ್ಲಿಸಿ ಬೋಸಡಿ ಮಕ್ಕಳೇ ನಿಮ್ಮದು ಊರಲ್ಲಿ ಬಹಳ ಆಗಿದೆ ಇವತ್ತು ನಿಮಗೆ ಬಿಡುವದಿಲ್ಲಾ ಅಂತ ಬೈಯ ಹತ್ತಿದ್ದು ಆಗ ನಾನು ಮತ್ತ ನನ್ನ ಜೋತೆ ಇದ್ದ ಎಲ್ಲರೂ ಅವರಿಗೆ ಯಾಕೆ ಬೈಯಿತ್ತಿರಿ  ಅಂತ ಅನ್ನುತ್ತಿರುವಾಗಲೇ ಅವರಲ್ಲಿಯ ಪರಶುರಾಮ ತಂದೆ ಭೀಮಣ್ಣ ಇತನು ನನಗೆ  ತನ್ನ ಕೈಯಲ್ಲಿಯ ಕಲ್ಲಿನಿಂದ ನನ್ನ ಎಡಗಾಲ ಮೊಳಕಾಲ ಕೆಳಗೆ ಹೊಡೆದು ರಕ್ತಗಾಯ ಪಡಿಸಿದ್ದು. ಮತ್ತು ಸೋಮಣ್ಣ ತಂದೆ ಭೀಮಣ್ಣ  ಇತನು ಕಲ್ಲಿನಿಂದ ನನ್ನ ಅಣ್ಣ ನಂದಪ್ಪ ತಾಯಿ ಪರಮವ್ವ ಹೊಸಮನಿ ಇತನ ಬಲಗೈ ಮೊಳಕೈ ಕೆಳಗೆ ಹೊಡೆದು ರಕ್ತಗಾಯ ಪಡಿಸಿದ್ದು. ನನ್ನ ಅಜ್ಜಿ ಶಿವಮ್ಮ ಗಂಡ ಶಂಬಪ್ಪ ಇವರಿಗೆ ನೀಲವ್ವ ಗಂಡ ನಿಂಗಪ್ಪ ಇವರು ಕಲ್ಲಿನಿಂದ ಎಡಗಡೆ ಮೇಲಕಿನ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಮತ್ತು ನೆಲಕ್ಕೆ ಕೆಡವಿ ಕಾಲಿನಿಂದ ಬಲಗಡೆ ಪಕ್ಕಡಿಯ ಮೇಲೆ ಎಡಗಡೆ ಮುಂಗೈ ಮೇಲೆ ಒದ್ದು ಒಳಪೆಟ್ಟು ಮಾಡಿದ್ದು.   ನನ್ನ ತಮ್ಮ ಹುಲಗಪ್ಪ ತಾಯಿ ಪರಮವ್ವ ಹೊಸಮನಿ ಇತನಿಗೆ ನಿಂಗಪ್ಪ ತಂದೆ ಪರಮಣ್ಣ ಇತನು ತನ್ನ ಕೈಯಲ್ಲಿಯ ಕಲ್ಲಿನಿಂದ ತೆಲೆಯ ಮೇಲ್ಬಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿದ್ದು. ಮತ್ತು ನಿಂಗಪ್ಪ ತಂದೆ ಶಾಂತಪ್ಪ ಇತನು ತನ್ನ ಕೈಯಲ್ಲಿಯ  ಬಡಿಗೆಯಿಂದ ನನ್ನ ತಮ್ಮ ಹುಲಗಪ್ಪನ ಬೆನ್ನಿನ ಮೇಲೆ ಹೊಡೆದು ಒಳಪೆಟ್ಟು ಮಾಡಿದ್ದು. ಮತ್ತು ನನ್ನ ತಮ್ಮ ಹುಲಗಪ್ಪನ ಮಗನಾದ ಶರಣಪ್ಪ ಹೊಸಮನಿ ಇತನಿಗೆ ಹುಲಗಪ್ಪ ತಂದೆ ಪರಮಣ್ಣ ಇತನು ತನ್ನ ಕೈಯಲ್ಲಿಯ ಕಲ್ಲಿನಿಂದ ತೆಲೆಯ ಹಿಂಬಾಜುವಿಗೆ  ಹೊಡೆದು ರಕ್ತಗಾಯ ಪಡಿಸಿದು.್ದ ಬಸಪ್ಪ ತಂದೆ ಸೋಮಣ್ಣ ಇತನು ನೆಲಕ್ಕೆ  ಕೆಡವಿ ಕಾಲಿನಿಂದ  ಬಲಪಕ್ಕಡಿಯ ಮೇಲೆ ಒದ್ದು ಒಳಪೆಟ್ಟು ಮಾಡಿದ್ದು. ಬೂಮಣ್ಣ ತಂದೆ ರಾಮಣ್ಣ ಇತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿದ್ದು. ದ್ಯಾಮವ್ವ ಗಂಡ ಯಲ್ಲಪ್ಪ ಹೊಸಮನಿ ಮತ್ತು ಹುಲಗಮ್ಮ ಗಂಡ ಪರಮಣ್ಣ ಹೊಸಮನಿ ಇವರಿಗೆ ನೀಲವ್ವ ಗಂಡ ನಿಂಗಪ್ಪ ಈಕೆಯು ಕಲ್ಲಿನಿಂದ ಎಡಗಾಲು ಕಿರುಬೆರಳ ಮೇಲೆ ಎಡಗೈ ಮುಂಗೈ ಮೆಲೆ ಹೊಡೆದು ರಕ್ತಗಾಯ ಪಡಿಸಿದ್ದು. ಪರಮವ್ವ ಗಂಡ ರಾಮಪ್ಪ ಬೆಣಸಿಗಡ್ಡಿ ಇವರಿಗೆ ಗಂಗವ್ವ ಗಂಡ ಪರಶುರಾಮ ಇವಳು ತನ್ನ ಕೈಯಲ್ಲಿಯ ಬಡಿಗೆಯಿಂದ ಬಲಗೈ ಮೋಳಕೈ ಕೆಳಗೆ ಮತ್ತು ಸೊಂಟದ ಮೇಲೆ ಹೊಡೆದು ಒಳಪೆಟ್ಟು ಮಾಡಿದ್ದು ಆಗ ನಾವೆಲ್ಲರೂ ಚಿರಾಡಲು ಅಲ್ಲಿಯೇ ಇದ್ದ ನಮ್ಮೂರ ಭೀಮಣ್ಣ ತಂದೆ ಯಮನಪ್ಪ ಹೈಯಾಳದವರ ಶರಣಪ್ಪ ತಂದೆ ಯಮನಪ್ಪ ಹೈಯಾಳದವರ, ಹೈಯಾಳಪ್ಪ ತಾಯಿ ಭೀಮವ್ವ ಹೈಯಾಳದವರ, ಮಾನಪ್ಪ ತಂದೆ ನಿಂಗಪ್ಪ ಗಂಗನಕಲ್ಲ ಇವರೆಲ್ಲರೂ ಬಂದು ನೋಡಿ ಬಿಡಿಸದ್ದು. ಹೋಗುವಾಗ ಅವರೆಲ್ಲರೂ ನಮಗೆ ಸೂಳೆ ಮಕ್ಕಳೆ ಇವತ್ತು ನಮ್ಮ ಕೈಯಲ್ಲಿ ಉಳಿದಿದ್ದರಿ ಇನ್ನೊಂದು ಸಲ ಸಿಕ್ಕರೆ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವದ ಬೇದರಿಕೆ ಹಾಕಿ ಹೋಗಿದ್ದು ನಂತರ ನಾವೆಲ್ಲರೂ ಉಪಚಾರಕ್ಕಾಗಿ ಕಕ್ಕೇರಾ ಸಕರ್ಾರಿ ಆಸ್ಪತ್ರೆಗೆ ಹೋಗಿದ್ದು ಕಕ್ಕೇರಾ ವೈದ್ಯರು ನನಗೆ ಅಲ್ಲಿಯೇ ಉಪಚರಿಸಿದ್ದು ಉಳಿದವರಿಗೆ ಪ್ರಥಮೋಪಚಾರ ಮಾಡಿ ಹೆಚ್ದನ ಉಪಚಾರಕ್ಕಾಗಿ ಲಿಂಗಸೂರು ಸಕರ್ಾರಿ ಆಸ್ಪತ್ರೆಗೆ ಕಳುಹಿಸಿದ್ದು. ನಮಗೆ ವಿನಾಃ ಕಾರಣ ಹೊಡೆ-ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 9 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಮೇಲಿಂದ ಠಾಣೆಯ ಗುನ್ನೆ ನಂ:51/2020 ಕಲಂ: 143, 147, 148, 341, 323,  324, 504, 506, ಖ/ಘ 149 ಕಅ  ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.      



ಕೋಡೆಕಲ್ ಪೊಲೀಸ ಠಾಣೆ ಗುನ್ನೆ ನಂ:- 52/2020 ಕಲಂ: 143, 147, 148,  323,  324, 355, 504, 506, ಸಂಗಡ 149 ಐಪಿಸಿ : ಇಂದು ದಿನಾಂಕ:26.06.2020 ರಂದು ಸಾಯಂಕಾಲ 10:00 ಗಂಟೆಗೆ  ಪಿರ್ಯಾಧಿ ಶ್ರೀಮತಿ ತಾಯಮ್ಮ ಗಂಡ ಪರಮಣ್ಣ ಮಾದರ ವ;35 ವರ್ಷ ಉ: ಕೂಲಿಕೆಲಸ ಜಾ: ಮಾದಿಗ  ಸಾ:ಮಂಜಲಾಪೂರ ಕಕ್ಕೇರಾ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಹೇಳಿಕೆಯನ್ನು ಹೇಳಿ ಟೈಪ್ ಮಾಡಿಸಿದ್ದು ಅದರ ಸಾರಾಂಶವೆನೆಂದರೆ, ನನ್ನ ಗಂಡನಿಗೆ ಪರಶುರಾಮ, ಸೋಮಣ್ಣ ಅಂತ ಇಬ್ಬರೂ ತಮ್ಮಂದಿರಿದ್ದು ಎಲ್ಲರದ್ದು ಮದುವೆಯಾಗಿದ್ದು. ಎಲ್ಲರೂ ಕೂಡಿಯೇ ಇರುತ್ತೇವೆ. ನಮ್ಮ ಹರಿಜನಕೇರಿ ಪಕ್ಕದ ನೀರಿನ ಟಾಕಿಯಿಂದ ಈ ಮೊದಲು ಗ್ರಾಮ ಪಂಚಾಯತಿ ವತಿಯಿಂದ ನಮ್ಮ ಓಣಿಗೆ ನಾವು ನೀರಿನ ಸರಭರಾಜು ಮಾಡಿಸಿದ್ದು.. ನಮ್ಮೂರ ದೇವಪ್ಪ ತಾಯಿ ಪರಮವ್ವ ಮಾದರ ಹಾಗೂ ಅವರ ಮನೆಯವರು ಮತ್ತು ಕೆಲವು ಜನರು ಮೊದಲು ತಮ್ಮ ಮನೆಗಳಿಗೆ ನೀರು ತೆಗೆದುಕೊಳ್ಳುತ್ತಿದ್ದು. ಈಗ ಕೆಲವು ದಿನಗಳಿಂದ ನೀರು ತೆಗೆದುಕೊಳ್ಳಲಾರದೆ ಪೈಪುಗಳನ್ನು ಮನೆಯ ಮುಂದೆ ರಾಡಿಯಾಗುತ್ತದೆ ಅಂತ ಕಿತ್ತು ಹಾಕಿದ್ದು. ನಾವು ಅವರು ಕಿತ್ತು ಹಾಕಿದ ಪೈಪುಗಳನ್ನು ಪುನಃ ರಿಪೇರಿ ಮಾಡಿಕೊಂಡು ನಮ್ಮ ಮನೆಗಳಿಗೆ ನೀರು ತೆಗೆದುಕೊಳ್ಳುತ್ತಿದ್ದು. ನಿನ್ನೆಯ ದಿನ ಪುರಸಭೆಯವರು ಅದೇ ಟಾಕಿಯಿಂದ  ನಮ್ಮ ಕೇರಿಗೆ ಪೈಪ್ ಹಾಕಲು ಬಂದಿದ್ದು. ನಾವು ಅವರಿಗೆ 2 ಇಂಚಿನ ಪೈಪ್ ಹಾಕಿ ಕೇರಿ ತುಂಬ 3-4 ನಲ್ಲಿಗಳನ್ನು ಬಿಡುವಂತೆ ತಿಳಸಿದ್ದು. ಅದಕ್ಕೆ ದೇವಪ್ಪ ತಾಯಿ ಪರಮವ್ವ ಹೊಸಮನಿ ಇತನು ಪುರಸಭೆಯಿಂದ ನಾನು ಹೇಳಿ ನೀರಿನ ಸರಬುರಾಜು ಮಾಡಿಸುತ್ತಿದ್ದು. ಸುಳೆ ಮಕ್ಕಳೆ ನನ್ನ ಮನಸ್ಸಿಗೆ ಬಂದ ಹಾಗೆ ಮಾಡಿಸುತ್ತೇನೆ ನನಗೆ ಬೇಕಾದಲ್ಲಿ ನಲ್ಲಿ ಬಿಡಿಸಿಕೊಳ್ಳುತ್ತೇನೆ ಕೇಳಲಿಕ್ಕೆ ನೀವ್ಯಾರ ಎಲೇ ಸೂಳೆ ಮಕ್ಕಳೆ ಅಂತ ನನ್ನ ಗಂಡ ಮತ್ತು ಮೈದುನರಿಗೆ ಬೈದಿದ್ದು ಅದಕ್ಕೆ ನನ್ನ ಗಂಡ ಮೈದುನರು ಅವರಿಗೆ ಏನು ಎದರುವಾದಿಸದೇ  ಸುಮ್ಮನೇ ಇದ್ದು ಆದರೂ ಕೂಡಾ ದೇವಪ್ಪ ಹೊಸಮನಿ ಹಾಗೂ ಇತರರು ನನ್ನ ಗಂಡ ಮತ್ತು ಮೈದುನರ ಮೇಲೆ ಸಿಟ್ಟಾಗಿದ್ದು ಇರುತ್ತದೆ. ಹೀಗಿರುವಾಗ ದಿನಾಂಕ;24.06.2020 ರಂದು ನಮ್ಮ ಅಣ್ಣತಮ್ಮಕೀಯ ಅಂಬ್ರೇಶ ತಂದೆ ಶಾಂತಪ್ಪ ಹಾಗೂ ಚಂದಪ್ಪ ತಂದೆ ನಿಂಗಪ್ಪ ಇವರ ಮದುವೆಯು ಆಗಿದ್ದು. ನಾನು ಇಂದು ದಿನಾಂಕ:26.06.2020 ರಂದು ಅವರ ಮನೆಗೆ ಹೋಗಿ ಮದುವೆಗೆ ಬಂದ ನಮ್ಮ ಸಂಬಂಧಿಕರಿಗೆ ನಮ್ಮ ಮನೆಗೆ ಕರೆದುಕೊಂಡು ಬಂದು ಸಾಯಂಕಾಲ 4:30 ಗಂಟೆಯ ಸುಮಾರಿಗೆ ಅವರೊಂದಿಗೆ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ನಾನು ಮತ್ತು ನನ್ನ ಮಗ ನಂದೀಶ  ನನ್ನ ಗಂಡ ಪರಮಣ್ಣ ಮೈದುನ ಪರಶುರಾಮ ಹಾಗೂ ನಮ್ಮ ಅಣ್ಣತಮ್ಮಕೀಯ ಅಂಬ್ರೇಶ ತಂದೆ ಶಾಂತಪ್ಪ, ಚಂದಪ್ಪ ತಂದೆ ನಿಂಗಪ್ಪ ಇವರೊಂದಿಗೆ ಮಾತನಾಡುತ್ತಾ ಕುಳಿತ್ತಿರುವಾಗ ನಮ್ಮೂರ 1) ನಂದಪ್ಪ ತಾಯಿ ಪರಮವ್ವ ಹೊಸಮನಿ 2) ದೇವಪ್ಪ ತಾಯಿ ಪರಮವ್ವ ಹೊಸಮನಿ 3) ಹುಲಗಪ್ಪ ತಾಯಿ ಪರಮವ್ವ ಹೊಸಮನಿ 4) ಪರಮಣ್ಣ ತಾಯಿ ಪರಮಣ್ಣ ಹೊಸಮನಿ 5) ಹಣಮಂತ ತಂದೆ ಭೀಮಣ್ಣ ಹೈಯಾಳದವರ 6) ಹೈಯಾಳಪ್ಪ ತಂದೆ ಹಣಮಂತ ಹೈಯಾಳದವರ 7) ಪರಶುರಾಮ ತಂದೆ ಹಣಮಂತ ಹೈಯಾಳದವರ 8) ಶಿವಮ್ಮ ಗಂಡ ಶಂಬಪ್ಪ ಹೈಯಾಳದವರ 9) ನಿಂಗರಾಜ ತಂದೆ ಶಂಬಪ್ಪ ಹೈಯಾಳದವರ್ 10) ಪರಶುರಾಮ ತಂದೆ ಸಂಗಪ್ಪ ಹೊಸಮನಿ ಮತ್ತು ಹಳ್ಳಿ ಮಂಜಲಾಪೂರದ 11) ಬಸಪ್ಪ ತಂದೆ ತಿಮ್ಮಪ್ಪ 12) ರುದ್ರಪ್ಪ ತಂದೆ ತಿಮ್ಮಪ್ಪ ಇವರೆಲ್ಲರೂ ಗುಂಪಾಗಿ ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಬಂದವರೇ ನಮಗೆ  ಸೂಳೆ ಮಕ್ಕಳೆ ಊರಲ್ಲಿ ಇರಬೇಕೇಂದಿರೋ ಅಥವಾ ಇಲ್ಲವೋ ನೀವು ಊರಲ್ಲಿ ಇರಬೇಕಾದರೇ ನಾವು ಹೇಳಿದ ಹಾಗೆ ಕೇಳಬೇಕು ಸೂಳೆ ಮಕ್ಕಳೆ ನಾವು ನೀರಿನ ಟಾಕಿಯಿಂದ ಓಣಿಗೆ ನೀರಿನ ಸರಬುರಾಜು ಮಾಡಿಸ ಹತ್ತಿದರೇ ಅದನ್ನು ಬಂದ್ ಮಾಡಿಸಿದ್ದೀರಿ ಇವತ್ತು ನಿಮಗೆ ಬಿಡುವದಿಲ್ಲಾ ಅಂತ ಅಂದವರೇ ಅವರಲ್ಲಿಯ ನಂದಪ್ಪ ತಾಯಿ ಪರಮವ್ವ ಇತನು ಅಲ್ಲಿಯೇ ಇದ್ದ ನನ್ನ ಮಗ ನಂದೀಶನಿಗೆ ತೆಲೆಯ ಮೇಲೆ ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿದ್ದು. ಮತ್ತು ನನ್ನ ಗಂಡ ಪರಮಣ್ಣನಿಗೆ ದೇವಪ್ಪ  ತಾಯಿ ಪರಮವ್ವ ಇತನು ಬಲಗಾಲು ಮೊಳಕಾಲ ಮೇಲೆ ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿದ್ದು. ಹುಲಗಪ್ಪನು ನನ್ನ ಗಂಡನ ಎಡಗಾಲ ಮೊಳಕಾಲ ಕೆಳಗಿನ ಬಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿದ್ದು. ಅಂಬ್ರೇಶನಿಗೆ ಪರಮಣ್ಣ ತಾಯಿ ಪರಮವ್ವ ಇತನು ಕಲ್ಲಿನಿಂದ ಗದ್ದದ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಮತ್ತು ಹಣಮಂತ ತಂದೆ ಭೀಮಣ್ಣ ಹೈಯಾಳದರ ಇತನು ಅಂಬ್ರೇಶನ ತೆಕ್ಕೆಗೆ ಬಿದ್ದು ನೆಲಕ್ಕೆ ಕೆಡವಿ ಎದೆಯ ಮೇಲೆ ಒದ್ದು ಗುಪ್ತಗಾಯ ಪಡಿಸಿದ್ದು. ಚಂದಪ್ಪ ತಂದೆ ನಿಂಗಪ್ಪ ಇತನಿಗೆ ಹೈಯಾಳಪ್ಪ ತಂದೆ ಹಣಮಂತ ಇತನು ತನ್ನ ಕಾಲಲ್ಲಿಯ ಚಪ್ಪಲಿಯಿಂದ ತೆಲೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು. ಪರಶುರಾಮ ತಂದೆ ಹಣಮಂತ ಇತನು ಚಂದಪ್ಪನ ಬಲಗಾಲು ಪಾದದ ಮೇಲೆ ಹೊಡೆದು ರಕ್ತಗಾಯ ಮಾಡಿದ್ದು. ನಿಂಗಪ್ಪ ತಂದೆ ಪರಮಣ್ಣ ಇತನಿಗೆ ಬಸಪ್ಪ ತಂದೆ ತಿಮ್ಮಪ್ಪ ಇತನು ತೆಕ್ಕೆಗೆ ಬಿದ್ದು ನೆಲಕ್ಕೆ ಕೆಡವಿದ್ದು ಆಗ ರುದ್ರಪ್ಪ ಇತನು ನಿಂಗಪ್ಪನ ಎಡಗೈ ಹೆಬ್ಬೆರಳಿಗೆ ಕೈಯಿಂದ ತಿರುವಿ ಒಳಪೆಟ್ಟು ಮಾಡಿದ್ದು.  ಪರಶುರಾಮ ತಂದೆ ಭೀಮಣ್ಣ ಇತನಿಗೆ ನಿಂಗರಾಜ ತಂದೆ ಶಂಬಪ್ಪ ಇತನು ಕಲ್ಲಿನಿಂದ ಎಡಗಾಲು ಪಾದದ ಮೇಲ್ಬಾಗದಲ್ಲಿ ಹೊಡೆದು ಒಳಪೆಟ್ಟು ಮಾಡಿದ್ದು ಮತ್ತು ಪರಾಶುರಾಮ ತಂದೆ ಸಂಗಪ್ಪ ಇತನು ಪರಶುರಾಮನಿಗೆ ನೆಲಕ್ಕೆ ಕೆಡವಿ ಕಾಲಿನಿಂದ ಎದೆಯ ಮೇಲೆ ಒದ್ದಿದ್ದು ಆಗ ಬಿಡಿಸಲು ಹೋದ ನನಗೆ ಶಿವಮ್ಮಗಂಡ ಶಂಬಪ್ಪ ಈಕೆಯು ನನ್ನ ತೆಲೆಯ ಮೇಲಿನ ಕೂದಲನ್ನು ಹಿಡಿದು ಜಗ್ಗಾಡಿ ಎಡಕಿನ ಮೇಲೆ ಕೈಯಿಂದ ಹೊಡೆದು ಒಳಪೆಟ್ಟು ಮಾಡಿದ್ದು ಆಗ ನಾವೆಲ್ಲರೂ ಚಿರಾಡಲು ಅಲ್ಲಿಯೇ ಇದ್ದ ನಮ್ಮ ಬೀಗರಾದ ಭೀಮರಾಯ ತಂದೆ ಭೀಮಪ್ಪ ವಡ್ಡವಡಗಿ, ಪರಶುರಾಮ ತಂದೆ ಮಲ್ಲಿಗೆಪ್ಪ ವಡ್ಡವಡಗಿ, ಪರಶುರಾಮ ತಂದೆ ಕಾಳಪ್ಪ ನಾವದಗಿ ಹಾಗೂ ನಮ್ಮುರ ಮದನಿಂಗಪ್ಪ ತಂದೆ ಹೈಯಾಳಪ್ಪ ಅಬ್ಲಿ, ಹೈಯಾಳಪ್ಪ ತಂದೆ ಹೊನ್ನಪ್ಪ ಆಲೂರು ಇವರುಗಳು ಬಂದು ನೋಡಿ ಬಿಡಿಸಿದ್ದು. ಇವರು ಬಂದು ಬಿಡಿಸದ್ದಿದ್ದರೆ ನಮಗೆ ಇನ್ನು ಹೊಡೆಯುತ್ತಿದ್ದರು ಹೋಗುವಾಗ ಅವರೆಲ್ಲರೂ ನಮಗೆ ಸೂಳೆ ಮಕ್ಕಳೆ ಇವತ್ತು ನಮ್ಮ ಕೈಯಲ್ಲಿ ಉಳಿದಿದ್ದರಿ ಇನ್ನೊಂದು ಸಲ ಸಿಕ್ಕರೆ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವದ ಬೇದರಿಕೆ ಹಾಕಿ ಹೋಗಿದ್ದು ನಂತರ ನಾವೆಲ್ಲರೂ ಉಪಚಾರಕ್ಕಾಗಿ ಕಕ್ಕೇರಾ ಸಕರ್ಾರಿ ಆಸ್ಪತ್ರೆಗೆ ಹೋಗಿದ್ದು. ಕಕ್ಕೇರಾ ವೈದ್ಯರು ನಮ್ಮೆಲ್ಲರಿಗೆ ಅಲ್ಲಿಯೇ ಉಪಚರಿಸಿದ್ದು ನನ್ನ ಗಂಡ ಪರಮಣ್ಣನಿಗೆ ಪ್ರಥಮೋಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಬಾಗಲಕೋಟಿ ಗುಳೇದ ಆಸ್ಪತ್ರೆಗೆ ಕಳುಹಿಸಿದ್ದು. ನಮಗೆ ವಿನಾಃ ಕಾರಣ ಹೊಡೆ-ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 12 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಮೇಲಿಂದ ಠಾಣೆಯ ಗುನ್ನೆ ನಂ:52/2020 ಕಲಂ: 143, 147, 148, 323,  324, 355, 504, 506, ಖ/ಘ 149 ಕಅ  ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!