ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/06/2020

By blogger on ಶನಿವಾರ, ಜೂನ್ 13, 2020







                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/06/2020 
                                                                                                               
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 94/2020 ಕಲಂ:  448.323.354.504 ಸಂಗಡ 34 ಐಪಿಸಿ ಮತ್ತು  ಕಲಂ: 3(1)(ಡಿ)() (ತಿ) ಎಸ್ಸಿ.ಎಸ್ಟಿ ಪಿಎ ಆಕ್ಟ 1989 : ಇಂದು ದಿನಾಂಕ 13.06.2020 ರಂದು  09.15  ಪಿ.ಎಮ್ ಕ್ಕೆ ಪಿರ್ಯಾದಿ ಅಜರ್ಿದಾರರು ಶ್ರೀಮತಿ ಅಂಜಲಿ ಗಂಡ ಸಿದ್ದಪ್ಪ ದೊಡ್ಮನಿ ವ|| 22 ಜಾ|| ಮಾದರ ಉ|| ಮನೆಗೆಲಸ ಸಾ|| ಅಗತೀರ್ಥ ತಾ: ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೆನೆಂದರೆ ನಾನು ಇಂದು ದಿನಾಂಕ 13.06.2020 ರಂದು ಮದ್ಯಾಹ್ನ 12 ಗಂಟೆಗೆ ತಾನು ಒಬ್ಬಳೆ ಮನೆಯಲ್ಲಿದ್ದಾಗ ಅಗತೀರ್ಥ ಗ್ರಾಮದ ಕುರಬ ಜನಾಂಗದ ಮಹೇಶ ತಂದೆ ಶಂಕರಗೌಡ ಹೊಸಮನಿ ಈತನು ಮನೆಯಲ್ಲಿ ಬಂದು ಲೇ ನಿನ್ನ ಗಂಡ ಎಲ್ಲಿ ನಿಮ್ಮ ಅತ್ತೆ ಎಲ್ಲಿ ಎಂದು ಕೇಳುತ್ತಿದ್ದಾಗ ಪಿರ್ಯಾದಿ ಯಾಕ್ರಿ ಯಾರು ನೀವು ಏನಾಯಿತು ಎಂದು ಕೇಳಿದಾಗ ಲೇ ಸೂಳೆಮಗಳೆ ನಿನಗುಡ ಏನು ಮಾತು ನಿನ್ನ ಗಂಡ ಆ ಸೂಳೆಮಗ ಎಲ್ಲಿದ್ದಾನೆ ಮಾದಿಗ ಸೂಳೆ ಮಕ್ಕಳದು ಬಾಳ ಆಗಿದೆ ಎಂದು ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿದಾಗ ಪಿರ್ಯಾದಿ ಏಕೆ ಈ ರೀತಿ ಮಾಡುತ್ತಿದ್ದೀರಿ ಅಂತ ಕೇಳುತ್ತಿದ್ದಾಗ ಪಿರ್ಯಾದಿ ತುಂಬು ಗಭರ್ಿಣಿ ಎಂದು ವಿಚಾರಿಸದೇ ಜೋರಾಗಿ ತಳ್ಳಿದಾಗ ಪಿರ್ಯಾದಿ ಅಲ್ಲಿಯೇ ಪಕ್ಕದಲ್ಲಿದ್ದ ಕಂಬಕ್ಕೆ ಹಾಯ್ದು ಕೆಳಗೆ ಬಿದ್ದಾಗ ಹೊರಗಡೆ ಇದ್ದ ಬಾಪುಗೌಡ ತಂದೆ ರುದ್ರಗೌಡ ಹೊಸಮನಿ ಈತನು ಹೊಡಿ ಆ ಮಕ್ಕಳಿಗೆ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು. ಆಗ ಪಿರ್ಯಾದಿ ಹೊಟ್ಟೆ ನೋವು ಹೆಚ್ಚಾಗಿ ನೋವು ತಾಳಲಾರದೆ ಜೋರಾಗಿ ಅಳುವದು ಕಿರುಚಾಡುತ್ತಿದ್ದಾಗ ಅಲ್ಲಿಯೇ ಸ್ವಲ್ಪ ದೂರದಲ್ಲಿದ್ದ ಪರಮವ್ವ ಗಂಡ ನಿಂಗಪ್ಪ ಹಾಗೂ ಹುಲಗಮ್ಮ ಗಂಡ ಹಣಮಂತ್ರಾಯ ಇವರು ಬರುವದನ್ನು ನೋಡಿ ಆರೋಪಿತರು ಓಡಿಹೋದರು. ನಂತರ ಪಿರ್ಯಾದಿ ಸದರ ವಿಷಯ ತನ್ನ ಗಂಡನಿಗೆ ಫೋನ್ ಮೂಲಕ ತಿಳಿಸಿ ನಂತರ ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿದ್ದು ಅಂತ ಅರ್ಜಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 94/2020 ಕಲಂ: 448, 323, 354, 504 ಸಂಗಡ 34 ಐಪಿಸಿ 3(1)(ಡಿ)() (ತಿ) ಎಸ್ಸಿ.ಎಸ್ಟಿ ಪಿಎ ಆಕ್ಟ 1989 ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 77/2019 ಕಲಂ 143,323, 498(ಎ),504,506 ಸಂ. 149 ಐಪಿಸಿ ಮತ್ತು 3 & 4 ಡಿಪಿ ಯಾಕ್ಟ : ದಿನಾಂಕ:15/02/2015 ರಂದು ಫಿಯರ್ಾದಿಗೆ ಮಲ್ಲಿಕಾಜರ್ುನ ತಂದೆ ಗುಂಡಪ್ಪ ತಳವಾರ ಎಂಬಾತನೊಂದಿ ಲಗ್ನವಾಗಿರುತ್ತದೆ. ಮದುವೆಗಿಂತ ಮುಂಚೆ  ಮದುವೆ ಮಾತುಕತೆ ಕಾಲಕ್ಕೆ ಗಂಡ ಮಲ್ಲಿಕಾಜರ್ುನ ಮತ್ತು ಗಂಡನ ಮನೆಯವರು ವರದಕ್ಷಣೆ ರೂಪದಲ್ಲಿ 3.5 ತೊಲಿ ಬಂಗಾರ ಹಾಗು 25000/- ರೂ ಕೊಡುವಂತೆ ಬೇಡಿಕೆ ಇಟ್ಟಿದ್ದರಿಂದ ಲಗ್ನಕ್ಕಿಂತ 2 ದಿನ ಮುಂಚೆ ಬಂಗಾರ ಮತ್ತು ಹಣವನ್ನು ತಿಳಗೂಳ ಗ್ರಾಮಕ್ಕೆ ಹೋಗಿ ಕೊಟ್ಟು ಬಂದಿದ್ದು ಇರುತ್ತದೆ.
ಮದುವೆಯಾದ ನಂತರ 9 ತಿಂಗಳವರೆಗೆ ಗಂಡನ ಮನೆಯಲ್ಲಿದ್ದು ನಂತರ ಫಿಯರ್ಾದಿ & ಆಕೆಯ ಗಂಡ ಮಲ್ಲಿಕಾಜರ್ುನ ಇಬ್ಬರು ಕೂಡಿ ಶಿರವಾಳ ಗ್ರಾಮಕ್ಕೆ ಬಂದು ಇಲ್ಲಿಯೇ ಸಂಸಾರ ಮಾಡಿಕೊಂಡಿದ್ದು, ಈಗ ಸುಮಾರು 8 ತಿಂಗಳ ಹಿಂದೆ ಮತ್ತೆ ಗಂಡನ ಮನೆಯಾದ ತಿಳಗೂಳಕ್ಕೆ ಹೋಗಿ ಅಲ್ಲಿಯೇ ಸಂಸಾರ ಮಾಡಿಕೊಂಡು ಇರುತ್ತವೆ.  ಸ್ವಲ್ಪ ದಿನಗಳ ನಂತರ ನನ್ನ ಗಂಡ, ಅತ್ತೆ ಶಿವಕಾಂತಮ್ಮ ಮಾವ ಗುಂಡಪ್ಪ, ಮೈದುನರಾದ ನಿಂಗಣ್ಣ, ದಶರಥ ಹಾಗು ನಾದಿನಿ ಈಶಮ್ಮ ಗಂಡ ಶರಣಪ್ಪ ಇವರೆಲ್ಲರೂ ಕೂಡಿ ಫಿಯರ್ಾದಿಗೆೆ ನೀನು ಕಪ್ಪಗಿದ್ದೀಯಾ, ಬೆಳಿಗ್ಗೆ ಬೇಗ ಏಳಲ್ಲ, ನಿನಗೆ ಮನೆ ಕೆಲಸ ಮಾಡಲು ಬರುವದಿಲ್ಲ. ಇಲ್ಲಿಯವರೆಗೆ ಮಕ್ಕಳಾಗಿಲ್ಲ ದರಿದ್ರದವಳೇ ಅಂತಾ ಬೈದು ನೀನು ನಮ್ಮ ಮನೆಯಲ್ಲಿ  ಇರಬೇಕಾದರೆ ಇನ್ನೂ 100000/-(ಒಂದು ಲಕ್ಷ) ರೂಪಾಯಿ ವರದಕ್ಷಣೆ ನಿನ್ನ ತವರು ಮನೆಯಿಂದ ತರಬೇಕು, ಇಲ್ಲದಿದ್ದರೆ ನಮ್ಮ ಮನೆಬಿಟ್ಟು ಹೋಗು ಅಂತ ಬೈದು ಕೈಯಿಂದ ಹೊಡೆ ಬಡೆ ಮಾಡಿ ಮಾನಸಿಕ ದೈಹಿಕ ಕಿರುಕುಳ ನೀಡುತ್ತ ಬಂದಿದ್ದು ದಿನಾಂಕ 02/03/2020 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ಫಿಯರ್ಾದಿಯ ಅಣ್ಣ, ತಾಯಿ ಮತ್ತು ಸಮಾಜದ ಪ್ರಮುಖರು ಎಲ್ಲರೂ ಕೂಡಿ ತಿಳುಗೂಳ ಗ್ರಾಮಕ್ಕೆ ಬಂದು ನನ್ನ ಗಂಡ ಹಾಗು ಆತನ ಮನೆಯವರಿಗೆ ವಿಚಾರಿಸುತ್ತಿರುವಾಗ, ಅವರು ಯಾರ ಮಾತು ಸಹ ಕೇಳದೆ ಒಂದು ಲಕ್ಷ ರೂಪಾಯಿ ವರದಕ್ಷಣೆ ತಂದರೇ ಮಾತ್ರ ಸಂಗೀತಾ ಇವಳಿಗೆ ನಮ್ಮ ಮನೆಯಲ್ಲಿ ಇಟ್ಟುಕೊಳ್ಳುತೇವೆ, ಇಲ್ಲದಿದ್ದರೆ ಆಕೆಗೆ ಕರೆದುಕೊಂಡು ನಿಮ್ಮ ಊರಿಗೆ ಹೋಗಿರಿ, ಆಕೆಗೆ ಇಲ್ಲಿಯೇ ಬಿಟ್ಟರೆ ಜೀವ ಸಹಿತ ಬಿಡುವುದಿಲ್ಲ ಜೀವದ ಬೆದರಿಕೆ ಹಾಕಿ ನನಗೆ ಮನೆಯಿಂದ ಹೊರಗೆ ಹಾಕಿದ್ದು ಅಂತ ವಗೈರೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತ ಮಾನ್ಯರವರಲ್ಲಿ ಶೀಘ್ರ ವರದಿ ಸಲ್ಲಿಸಲಾಗಿದೆ.



ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 75/2020 ಕಲಂ 323, 324, 354, 355, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ: 13/06/2020 ರಂದು 6.00 ಪಿಎಮ್ ಕ್ಕೆ ಫಿಯರ್ಾಧಿದಾರರು ಠಾಣೆಗೆ ಹಾಜರಾಗಿ ದೂರು ಅಜರ್ಿ ನೀಡಿದ್ದರ ಸಾರಾಂಶವೇನೆಂದರೆ, ದಿನಾಂಕ:13/06/2020 ರಂದು ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಅರಳಳ್ಳಿ ಗ್ರಾಮದ ತಮ್ಮ ಗೇಣಿ ಜಮೀನು ಸವರ್ೆ ನಂ.16 ರ ಕ್ಷೇತ್ರ 15-03 ಗುಂಟೆ ಜಮೀನಿನಲ್ಲಿ ಬಿತ್ತನೆಗಾಗಿ ಕಳೆ ಆರಿಸುತ್ತಿರುವಾಗ ಆರೋಪಿತರಾದ ಸಾಹೇಬಗೌಡ ತಂದೆ ಹಣಮಂತ್ರಾಯ ಪೊಲೀಸ್ ಭಿರಾದರ ಸಂಗಡ 3 ಜನರು ಸಾ:ಹುಲಕಲ್(ಕೆ) ಇವರು ಬಂದು ಅವಾಚ್ಯಾ ಶಬ್ದಗಳಿಂದ ಬೈದು ಕೊರಳಿನಲ್ಲಿರುವ ತಾಳಿಯನ್ನು ಹರಿದುಹಾಕಿ, ಸೆರಗು ಹಿಡಿದು ಎಳೆದಾಡಿದ್ದು, ಅಲ್ಲದೆ ಮೂಚರ್ೆ ಹೋಗುವಂತೆ ಕೈಯಿಂದ, ಬಡಿಗೆಯಿಂದ ಹಾಗೂ ಚಪ್ಪಲಿಯಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ್ದು ಇರುತ್ತದೆ. ಸದರಿ ಜಮೀನಿನ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.75/2020 ಕಲಂ.323, 324, 354, 355, 504, 506ಸಂ.34 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ಸೈದಾಪೂರ  ಪೊಲೀಸ ಠಾಣೆ ಗುನ್ನೆ ನಂ:- 83/2020 ಕಲಂ 498(ಎ), 306  ಐಪಿಸಿ : ಇಂದು ದಿನಾಂಕ 13-06-2020 ರಂದು 12-30 ಪಿಎಂ ಕ್ಕೆ ಫಿಯರ್ಾದಿ ರೇಣುಕಾ ಗಂಡ ನರಸಪ್ಪ ಮುಕಡೆಪ್ಪನೋರ ವಯಾ|| 19 ವರ್ಷ ಜಾ|| ಕುರಬರ ಉ|| ಹೊಲಮನೆಕೆಲಸ ಸಾ|| ಕರಣಿಗಿ ತಾ|| ಗುರಮಿಠಕಲ್ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ  ಹೇಳಿಕೆ ಪಿಯರ್ಾಧಿ ನಈಡಿದ ಸಾರಂಶವೇನೆಂದರೆ  ನನ್ನ ಅಜ್ಜಿ ಚಂದಮ್ಮಳಿಗೆ ಗಂಡು ಮಕ್ಕಳು ಇಲ್ಲದ ಕಾರಣ ನಮ್ಮ ತಂದೆ ನರಸಪ್ಪ ಗೌಡಗೇರಾ ಈತನನ್ನು ನಮ್ಮ ಅಜ್ಜಿ ದತ್ತು ತೆಗೆದುಕೊಂಡಿರುತ್ತಾಳೆ. ನಮ್ಮ ತಂದೆ ತಾಯಿಗೆ ನಾವು 3 ಜನ ಮಕ್ಕಳಿರುತ್ತೇವೆ ನನ್ನ ಅಣ್ಣ ಅಶೋಕ ಇತನು ಬೆಂಗಳೂರಿನಲ್ಲಿ ಕೂಲಿಕೆಲಸ ಮಾಡಿಕೊಂಡಿರುತ್ತಾನೆ. ನಮ್ಮ ತಂದೆ ಸುಮಾರು ದಿನಗಳಿಂದ ನಮ್ಮ ತಾಯಿಯ ಜೊತೆ ಜಗಳ ಮಾಡಿ ಬೆಂಗಳೂರಿಗೆ ಹೋಗಿದ್ದು ಆಗಾಗ ಊರಿಗೆ ಬಂದು ನಮ್ಮ ತಾಯಿ ಜೊತೆ ಜಗಳ ಮಾಡಿ ಮತ್ತೆ ಹೋಗುತಿದ್ದನು ಈಗ ನಮ್ಮ ತಂದೆ ನರಸಪ್ಪ ಈತನು ಸುಮಾರು 20 ದಿನಗಳಿಂದೆ ನಮ್ಮೂರಾದ ಕರಣಿಗಿ ಗ್ರಾಮಕ್ಕೆ ಬಂದು ಮನೆಯಲ್ಲಿ ಇದ್ದನು. ದಿನಾಂಕ: 12-06-2020 ರಂದು ಮದ್ಯಾಹ್ನ 03-00 ಗಂಟೆ ಸುಮಾರಿಗೆ ನಾನು ನಮ್ಮ ಅಜ್ಜಿ ಚಂದಮ್ಮ ನಮ್ಮ ತಾಯಿ ಭೀಮಮ್ಮ ಮನೆಯಲ್ಲಿರುವಾಗ ನಮ್ಮ ತಂದೆ ನಮ್ಮ ತಾಯಿ ಜೊತೆಗೆ ಜಗಳ ತೆಗೆದು ನಿನು ನಿಮ್ಮ ತಾಯಿಯ ಹೆಸರಿನಲ್ಲಿ ಇರುವ ಹೊಲ ನನ್ನ ಹೆಸರಿಗೆ ಮಾಡು ನಿನ್ನ ಹೆಸರಿಗೆ ಯಾಕೆ ಮಾಡಿಸಿಕೊಂಡಿದ್ದಿ ಅಂತಾ ಜಗಳ ಮಾಡುತಿದ್ದು ಆಗ ನನ್ನ ತಾಯಿ ನಮ್ಮ ತಂದೆಗೆ ನಿನು ಊರಲ್ಲಿ ಇರುವದಿಲ್ಲ ಬೆಂಗಳೂರಲ್ಲಿ ಇರುತಿ ಅದಕ್ಕೆ ನಾನು ನಮ್ಮ ತಾಯಿಯ ಹೆಸರಿನಲ್ಲಿರುವ ಜಮಿನನ್ನು ನನ್ನ ಹೆಸರಿಗೆ ಮಾಡಿಸಿಕೊಂಡಿರುತ್ತೇನೆ ಅಂತಾ ಹೇಳಿದಳು ಆಗ ನಮ್ಮ ತಂದೆ ನಮ್ಮ ತಾಯಿಗೆ ಹೊಲ ನನ್ನ ಹೆಸರಿಗೆ ಮಾಡಲೆ ಅಂತಾ ಜಗಳ ಮಾಡಿ ನಿನು ಮನೆಯಲ್ಲಿ ಇರಬೇಡ ಮನೆಬಿಟ್ಟು ಹೋಗು ಇಲ್ಲಂದರೆ ಎಣ್ಣೆ ಕುಡಿದು ಸಾಯಿ ಮಗಳೆ ಅಂತಾ ಅಂದು ಮಾನಸಿಕ ದೈಹಿಕ ಕಿರಕುಳ ನೀಡಿದ್ದರಿಂದ ನನ್ನ ತಾಯಿ ಆತನ ನೀಡುವ ಕೀರುಕುಳ ತಾಳಲಾರದೆ ನನ್ನ ತಾಯಿ ಭೀಮಮ್ಮ ಗಂಡ ನರಸಪ್ಪ ಮುಕಡೆಪ್ಪನೋರ ವ|| 40 ವರ್ಷ ಜಾ|| ಕುರಬರ ಉ|| ಹೊಲಮನೆಕೆಲಸ ಸಾ|| ಕರಣಿಗಿ ಈಕೆಯು ದಿನಾಂಕ: 12-06-2020 ರಂದು ಮದ್ಯಾಹ್ನ 03-30 ಗಂಟೆಯ ಸುಮಾರಿಗೆ ಮನೆಯಲ್ಲಿ ಇದ್ದ ಯಾವುದೊ ಕ್ರಿಮಿನಾಶಕ ಔಷದಿ ಕುಡಿದು ಅಶ್ವಸ್ಥಳಾದಾಗ ನಾನು ನೋಡಿ ನಮ್ಮ ತಾಯಿಗೆ ವೈದ್ಯಕೀಯ ಉಪಚಾರ ಕುರಿತು ನಾನು ನಮ್ಮ ಅಜ್ಜಿ ಚಂದಮ್ಮ ಕೂಡಿ ಒಂದು ಆಟೋದಲ್ಲಿ ನಾರಯಣಪೇಟ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಮೈಬೂಬನಗರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೆ ನಮ್ಮ ತಾಯಿ ರಾತ್ರಿ 09-00 ಗಂಟೆಗೆ ಆಸ್ಪತ್ರೆಯಲ್ಲಿ ಮೃಪಟ್ಟಿರುತ್ತಾಳೆ. ನನ್ನ ತಂದೆ ನನ್ನ ತಾಯಿಗೆ ಮಾನಸಿಕ ದೈಹಿಕ ಕಿರುಕುಳ ನೀಡಿ ನನ್ನ ತಾಯಿಯ ಸಾವಿಗೆ ಕಾರಣನಾದ ನರಸಪ್ಪ ತಂದೆ ಮಹಾದೇವಪ್ಪ ವ|| 45 ವರ್ಷ ಸಾ|| ಕರಣಿಗಿ ಈತನ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು. ಹೇಳಿಕೆ ಫಿಯರ್ಾದಿ ಅಂತಾ ಹೇಳಿಕೆ ಫಿಯರ್ಾದಿ ಸಾರಾಂಶದ ಮೇಲಿಂದ ಸೈದಾಪೂರ ಠಾಣಾ ಗುನ್ನೆ ನಂ:83/2020  ಕಲಂ 498(ಎ), 306 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.



ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 162/2020. ಕಲಂ  323, 354, 504, 506 ಒರತಿ 34  ಐ.ಪಿ.ಸಸಿ : ಇಂದು ದಿನಾಂಕ:13-06-2020 ರಂದು 5:45 ಪಿ.ಎಮ್.ಕ್ಕೆ ಫಿಯರ್ಾದಿ ಶ್ರೀಮತಿ ಸೈಯದ ಶಾಯಿನಾ ಗಂಡ ಸೈಯದ ಶಮಿಯುಲ್ಲಾ ಖಾದ್ರಿ ವಯ:35 ವರ್ಷ ಜಾ: ಮುಸ್ಲೀಂ ಉ: ಮನೆಗೆಲಸ ಸಾ: ಸಗರ ಬಿ. ಗ್ರಾಮ ತಾ: ಶಹಾಪುರ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿಸಿದ ದೂರು ಹಾಜರುಪಡಿಸಿದ್ದು ಏನಂದರೆ ನಮ್ಮ ತಂದೆಯವರ ಕಾಲದಿಂದಲೂ ನಾವು ನಮ್ಮೂರ ಸೋಫಿಸಾಬ ದಗರ್ಾದ ಸಾಹೇಬ(ಗುರುಗಳು) ಇದ್ದೇವೆ ನಾನು ದಗರ್ಾಕ್ಕೆ ಆಗಾಗ ಹೋಗುತ್ತೇನೆ ಅಲ್ಲಿ ಭಕ್ತರು ಬರುತ್ತಾರೆ. ಅದರಂತೆ ನಾನು ದಿನಾಂಕ: 08-06-2020 ರಂದು ದಗರ್ಾಕ್ಕೆ ಹೋಗಿ ದಗರ್ಾದಲ್ಲಿ ಕುಳಿತಿದ್ದೆನು. ಸಮಯ 1:00 ಗಂಟೆ ಸುಮಾರಿಗೆ ಅಲ್ಲಿ ಸದರಿ ದಗರ್ಾದ ಮುಜಾವರ ಕೆಲಸ ಮಾಡುವ ತಾಜುದ್ದೀನ ತಂದೆ ಮುನ್ವರಪಾಶಾ ಮತ್ತು ಆತನ ಹೆಂಡತಿ ರಜಿಯಾ ಬೇಗಂ  ಮತ್ತು ಆತನ ಮಗನಾದ ಅಬ್ದುಲ ರಹೀಂ ಮೂರು ಜನರೂ ಕೂಡಿ  ನನಗೆ ನೀಯಾಕೆ ದಗರ್ಾಕ್ಕೆ ಬಂದಿದ್ದೀಯಾ ಈ ದಗರ್ಾ ನಿಮಗೆ ಇಲ್ಲಾ ಕಲಬುರಗಿಯವರಿಗೆ ಆಗಿದೆ ಇಲ್ಲಿ ನಿಮಗೆ ಯಾವುದೇ ಹಕ್ಕಿಲ್ಲ ನೀವು  ಇಲ್ಲಿ ಬರಬೇಡಿ ಎಂದು ಹೇಳಿದನು. ಆಗ ನಾನು ಯಾಕೆ ದಗರ್ಾದಲ್ಲಿ ಬರಬಾರದು ನಮ್ಮ  ತಂದೆಯವರ ಕಾಲದಿಂದಲೂ ಈ ದಗರ್ಾದಲ್ಲಿ ನಾವು ಗುರುಗಳು ಅಂತಾ ಇದ್ದೇವೆ ಎಂದು ಹೇಳಿದೆನು. ಅದಕ್ಕೆ ಮೂರು ಜನರು ಕೂಡಿ ಏ ಸೂಳಿ ನಿಂದು ಬಹಳ ಆಗಿದೆ  ಈ ದಗರ್ಾ ಏನು ನಿಮ್ಮೌವನ ಜಾಗಿರ ಇದೆಯಾ ಇಲ್ಲಿ ಯಾಕೆ ಬರುತ್ತಿ ಅಂತಾ ಹೇಳಿ  ಅವರಲ್ಲಿ ತಾಜುದ್ದೀನ ಈತನು ನನ್ನ ತಲೆಗೂದಲು ಹಿಡಿದು ಎಳೆದಾಡಿ ಹೊಡೆದನು. ಆಗ ಆತನ ಹೆಂಡತಿ ರಜಿಯಾ ಬೇಗಂ ಇವಳು ನನಗೆ ಕೈಯಿಂದ ಕಪಾಳಕ್ಕೆ ಹೊಡೆದು ಈ ಸೂಳಿದು ಬಾಳ ಆಗ್ಯಾದ ಎಳೆದು ಹೊರಗೆ ಹಾಕು ಎಂದು ಬೈದಳು. ಮತ್ತು ಅಬ್ದುಲ ರಹೀಮ ಈತನು ನನಗೆ ಕಾಲಿನಿಂದ ಒದ್ದು ಬೋಸಡಿ ಇನ್ನೊಮ್ಮೆ ಈ ದಗರ್ಾದಲ್ಲಿ ಕಾಲಿಟ್ಟರೆ ನಿಮ್ಮ ಜೀವ ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಆಗ ಅಲ್ಲೇ ದಗರ್ಾಕ್ಕೆ ಬಂದ ನಮ್ಮೂರ ಭೀಮಣ್ಣ ತಂದೆ ಹಣಮಂತ ಕೈನೂರ ಮತ್ತು ನಾಗಪ್ಪ ತಂದೆ ಭೀಮಣ್ಣ ಕನರ್ಾಳ ಎಂಬುವವರು ಇಬ್ಬರೂ ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡಿರುತ್ತಾರೆ. ಆಗ ತಾಜುದ್ದೀನನು ನನಗೆ ಸೂಳಿ ಇನ್ನೊಮ್ಮೆ ಈ ದಗರ್ಾದ ಕಡೆ ಬಂದರೆ ನಿಮ್ಮ ಜೀವ ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ನಾನು ಅಲ್ಲಿಂದ ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ತಿಳಿಸಿ ಮನೆಯಲ್ಲಿ ವಿಚಾರ ಮಾಡಿ ಇಂದು ದಿನಾಂಕ:13-06-2020 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಇರುತ್ತದೆ.   ಆದ್ದರಿಂದ ನನಗೆ ದಗರ್ಾಕ್ಕೆ  ಹೋದಾಗ ಬರಬೇಡಾ ಅಂತಾ ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆದು ಕೂದಲು ಹಿಡಿದು ಎಳೆದಾಡಿ ಹೊಡೆದು ಜೀವದ ಬೆದರಿಕೆ ಹಾಕಿದವರ ಮೇಲೆ ಕಾ8ನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 162/2020 ಕಲಂ. 323, 354, 504, 506 ಸಂಗಡ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.



ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 101/2020 ಕಲಂ: 279, 337, 338 ಐಪಿಸಿ : ದಿನಾಂಕ 12.06.2020 ರಂದು ರಾತ್ರಿ 9.00 ಗಂಟೆ ಸುಮಾರಿಗೆ ಪಿರ್ಯಾಧಿ ಅಣ್ಣ ಪವನ ಈತನು ಮೋಟರ ಸೈಕಲ ಕೆಎ-33-ವಾಯ್-1342 ನೆದ್ದರ ಮೇಲೆ ಗಾಜರಕೋಟದಿಂದ ಅರಕೇರ.ಕೆ ಗ್ರಾಮಕ್ಕೆ ಬರುತ್ತಿದ್ದಾಗ ತಾತಳಗೇರಾ-ಯಂಪಾಡ ರೋಡಿನ ಮೇಲೆ ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೊಗಿ ಮೋಟರ ಸೈಕಲ ನಿಯಂತ್ರಿಸದೆ ಅಪಘಾತಪಡಿಸಿದ್ದರಿಂದ ಸದರಿ ಅಪಘಾತದಲ್ಲಿ ಪವನ ಈತನ ಬಲಕಿಗೆ ಮತ್ತು ಕುಂಡಿಯ ದಡದ ಮೇಲೆ ರಕ್ತಗಾಯ ಗುಪ್ತಪೆಟ್ಟುಗಳಾಗಿದ್ದ ಬಗ್ಗೆ ಅಪರಾಧ.



ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 76/2020 ಕಲಂ 143,147,323,354,504, 506 ಸಂಗಡ 149 ಐಪಿಸಿ : ಫಿಯರ್ಾದಿಯ ಹೆಸರಿನಿಂದ ಅರಳಹಳ್ಳಿ ಗ್ರಾಮದ ಸೀಮಾಂತರದ ಸವರ್ೆ ನಂ.16 ರ ಕ್ಷೇತ್ರ 15-03 ಗುಂಟೆ ಜಮೀನು ಇರುತ್ತದೆ. ಈ ಜಮೀನಿನಲ್ಲಿ ಫಿಯರ್ಾದಿ ಹಾಗು ಆಕೆಯ ಮಕ್ಕಳು 3-4 ದಿನಗಳಿಂದ ಆ ಮುಳ್ಳು ಹಾಗು ಜಾಲಿ ಕಂಠಿ ಕಡಿದು ಜಮೀನನ್ನು 3 ದಿನಗಳಿಂದ ನೇಗಿಲು ಹೊಡೆದು ಉಳುಮೆ ಮಾಡುತ್ತ ಬಂದಿರುತ್ತೇವೆ. ಇಂದು ದಿನಾಂಕ 13/06/2020 ರಂದು 12.30 ಗಂಟೆಗೆ ಕಸ ಆರಿಸುತ್ತಿದ್ದಾಗ ಆರೋಪಿತರಾದ  ಸೋಪಣ್ಣ ತಂದೆ ಭೀಮಣ್ಣ ಬೆನಕನಳ್ಳಿ ಸಂಗಡ 06 ಜನರು ಸಾ: ಎಲ್ಲರೂ ಅರಳಹಳ್ಳಿ ಬಂದು ನಮ್ಮ ಉಳುಮೆಗೆ ತಡೆಗಟ್ಟಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆ ಬಡೆ ಮಾಡುತ್ತ ನನ್ನ ಕೈ ಹಿಡುದು ಎಳೆದಾಡಿದ್ದಲ್ಲದೆ ನನ್ನ ಮಕ್ಕಳಿಗಿಬ್ಬರಿಗೂ ಕೈಯಿಂದ ಹೊಡೆದು ಒಳಪೆಟ್ಟಾಗುವಂತೆ ಗಾಯಗೊಳಿಸಿದ್ದು ಅಲ್ಲದೆ. ಈ ಜಮೀನಿನಲ್ಲಿ ಮತ್ತೆ ಉಳುಮೆಗೆ ಬಂದರೆ ನಿಮ್ಮನ್ನು ಈ ಜಮೀನಿನಲ್ಲಿ ಕೊಂದು ಹಾಕುತ್ತೇವೆ ಅಂತ ಜೀವದ ಬೆದರಿಕೆ ಹಾಕಿದ ಬಗ್ಗೆ.




ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 161/2020.ಕಲಂಃ 78(3) ಕೆ.ಪಿ.ಆ್ಯಕ್ಟ : ಇಂದು ದಿನಾಂಕ 13/06/2020 ರಂದು 17-00 ಗಂಟೆಗೆ ಸ|| ತ|| ಪಿಯರ್ಾದಿ ಸಿದ್ದೇಶ್ವರ ಪಿ.ಎಸ್.ಐ.(ಕಾ.ಸೂ) ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 13/06/2020 ರಂದು ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಶಹಾಪುರ ನಗರದ ಸರಕಾರಿ ಆಸ್ಪತ್ರೆಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆಗಳು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪುರ ರವರಿಗೆ ಪತ್ರ ವ್ಯವಹಾರ ಮಾಡಿ 14-20 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶರಣಪ್ಪ ಹೆಚ್.ಸಿ.164. ಗೋಕುಲ್ ಹುಸೇನ್ ಪಿ.ಸಿ. 172. ಬಾಗಣ್ಣ ಪಿ.ಸಿ.194. ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಗೋಕುಲ್ ಹುಸೇನ್ ಪಿ.ಸಿ 172. ರವರಿಗೆ 14-25 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು 14-30 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು.
       ಮೇಲಾಧಿಕಾರಿಯವರ  ಮಾರ್ಗದರ್ಶನದಲ್ಲಿ. ನಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು, ಹಾಗೂ ಪಂಚರು ಒಂದು ಖಾಸಗಿ ಜೀಪನಲ್ಲಿ ಕುಳಿತುಕೊಂಡು ದಾಳಿ ಕುರಿತು ಠಾಣೆಯಿಂದ 14-40 ಗಂಟೆಗೆ ಹೊರಟೇವು. ನೇರವಾಗಿ ಹೋಸ ಬಸ್ಸ ನಿಲ್ದಾಣದ ಹತ್ತಿರ 14-50 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಜೀಪಿನಿಂದ ನಾವು ಎಲ್ಲರು ಇಳಿದು ಅಲ್ಲಿಂದ ಸರಕಾರಿ ಆಸ್ಪತ್ರೆಯ ಹತ್ತಿರ ನಡೆದುಕೊಂಡು ಹೋಗಿ ಸುಮಾರು 15 ಮೀಟರ ದೂರದಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಸರಕಾರಿ ಆಸ್ಪತ್ರೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾವಾದ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ ಸದರಿಯವನು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಳ್ಳುತಿದ್ದ ಬಗ್ಗೆ ಪಂಚರ ಸಮಕ್ಷಮದಲ್ಲಿ ಖಚಿತ ಪಡಿಸಿಕೊಂಡು, ನಾನು ಮತ್ತು ಸಿಬ್ಬಂದಿಯವರು 15-00 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು, ಮಟಕಾ ಅಂಕಿ ಬರೆದುಕೊಳ್ಳುತಿದ್ದ ವ್ಯಕ್ತಿ ಸಿಕ್ಕಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲು ಹಣಮಂತ್ರಾಯ ತಂದೆ ಲಕ್ಷ್ಮಣ ಕೂಡ್ಲೀಗಿ ವ|| 29 ಜಾ|| ಉಪ್ಪಾರ ಉ|| ಮಟಕಾಬರೆದುಕೊಳ್ಳೂವದು ಸಾ|| ಕೊಳ್ಕರ ಓಣಿ ಶಹಾಪುರ  ಅಂತ ಹೇಳಿದನು. ಈತನ ಹತ್ತಿರ ನಗದು ಹಣ 520-00 ರೂಪಾಯಿ ಮತ್ತು 1 ಬಾಲ್ ಪೆನ್ ಸಿಕ್ಕಿದ್ದು ಮತ್ತು 2 ಮಟಕಾ ಚೀಟಿಗಳು, ಸದರಿಯವನಿಗೆ ಸಿಕ್ಕ ಮುದ್ದೆಮಾಲಿನ ಬಗ್ಗೆ ವಿಚಾರಣೆ ಮಾಡಲಾಗಿ ಸಾರ್ವಜನಿಕರಿಂದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ಅಂಕಿಗಳನ್ನು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ನಂಬರಗಳು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಅಂತ ಹೇಳಿದನು. ನಗದು ಹಣ 520-00 ರೂಪಾಯಿ ಮತ್ತು 2 ಮಟಕಾ ಚೀಟಿಗಳು ಹಾಗೂ ಒಂದು ಬಾಲ್ ಪೆನ್ ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಜಂಟಿಯಾಗಿ ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 15-00 ಗಂಟೆಯಿಂದ 16-00 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 16-20 ಗಂಟೆಗೆ ಬಂದಿದ್ದು, ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯ್ಯಾರಿಸಿ, ಆರೋಪಿ ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರು ಪಡಿಸಿ, ಸರಕಾರದ ಪರವಾಗಿ ದಿನಾಂಕ 13/06/2020 ರಂದು 17-00 ಗಂಟೆಗೆ ವರದಿ  ಸಲ್ಲಿಸಿದ್ದರ ಸಾರಾಂಶದ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 161/2020 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 163/2020 ಕಲಂ 78[3] ಕೆ.ಪಿ ಆಕ್ಟ : ಇಂದು ದಿನಾಂಕ 13/06/2020  ರಂದು ರಾತ್ರಿ 21-00 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ಕಾಸು-02 ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 13/06/2020  ರಂದು ಸಾಯಂಕಾಲ 18-00 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರನಗರದ ದಿಗ್ಗಿ ಬೇಸ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ  ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 47/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ನೊಂದಣಿಮಾಡಿಕೊಂಡು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಸಾಯಂಕಾಲ 19-00 ಗಂಟೆಗೆ ಅನುಮತಿ ಪಡೆದುಕೊಂಡು, ನಂತರ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಸಾಯಂಕಾಲ 19-25 ಗಂಟೆಗೆ ಲೈಟಿನ  ಬೆಳಕಿನಲ್ಲಿ ದಾಳಿ ಮಾಡಿ  ಆರೋಪಿ ಮಾನಪ್ಪ ತಂದೆ ಕರೆಪ್ಪ ಮುದ್ದಪ್ಪನೋರ ವಯ 38 ವರ್ಷ ಜಾತಿ ಕುರುಬ ಉಃ ಮಟಕಾ ಅಂಕಿ ಬರೆದುಕೊಳ್ಳುವದು ಸಾಃ ರಸ್ತಾಪೂರ. ತಾಃ ಶಹಾಪೂರ ಜಿಃ ಯಾದಗಿರಿ  ಈತನಿಂದ ನಗದು ಹಣ 1730=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು 19-30 ಗಂಟೆಯಿಂದ 20-30 ಗಂಟೆಯ ಅವಧಿಯಲ್ಲ್ಲಿ ಬಿದಿಯ ಲೈಟಿನ  ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡಿರುತ್ತದೆ ಅಂತ ಆರೋಪಿತನ ವಿರುದ್ದ  ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 163/2020 ಕಲಂ 78 (3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!