ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/05/2020

By blogger on ಭಾನುವಾರ, ಮೇ 3, 2020





                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/05/2020 
                                                                                                               
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 75/2020 ಕಲಂ: 498(ಎ), 323, 504, 506 ಐಪಿಸಿ:-ಸುಮಾರು 16-17 ವರ್ಷಗಳ ಹಿಂದೆ ಫಿರ್ಯಾದಿದಾರಳಿಗೆ ಆರೋಪಿ ಹಣಮಂತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಮದುವೆಯಾದ 2-3 ವರ್ಷಗಳ ವರೆಗೆ ಗಂಡ ಹೆಂಡತಿ ಚನ್ನಾಗಿದ್ದು ಇದ್ದು ನಂತರ ಗಂಡನು ಫೀರ್ಯಾದಿದಾರಳಿಗೆ ನೀನು ಚನ್ನಾಗಿಲ್ಲ ರಂಡಿ, ಬೋಸಡಿ, ಚಿನಾಲಿ ನಿನಗೆ ಕೂಳು ನೀರು ಇಲ್ಲದಂಗೆ ಕೂಲಿ ಕೆಲಸ ಮಾಡಸಬೇಕು ಅಂತಾ ಹೇಳಿ ಹೊಡೆ-ಬಡೆ ಮಾಡುತ್ತ ಮಾನಸೀಕ ಮತ್ತು ದೈಹಿಕ ಹಿಂಸೆ ನೀಡಿದ್ದು ಇರುತ್ತದೆ. ಹೀಗಿದ್ದು ಫಿರ್ಯಾದಿದಾರಳು ದಿನಾಂಕ 30.04.2020 ರಂದು ಬೆಳಿಗ್ಗೆ ಆರೋಪಿತನು ಫಿರ್ಯಾದಿದಾರಳಿಗೆ ಹೊಲಕ್ಕೆ ನಡಿ ಅಂತಾ ಅವಾಚ್ಯವಾಗಿ ಬೈದಿದ್ದು ಆಗ ಫೀರ್ಯಾದಿದಾರಳು ಮೈಯಲ್ಲಿ ಹುಶಾರಿಲ್ಲ ಬಟ್ಟೆ ಹೊಲೆ ಹಣ ಸಂಪಾದಿಸಿ ಕೊಡುತ್ತೇನೆ ಅಂತಾ ಹೇಳಿದರು ಕೇಳದೆ ಕೈಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒದ್ದು  ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿದಾರಳು ತಡವಾಗಿ ಠಾಣೆಗೆ ಬಂದು ಗಣಕೀಕೃತ ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ : 75/2020 ಕಲಂ: 498(ಎ), 323, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಾಗಿದ್ದು ಅದೆ.



ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 55/2020 ಕಲಂ: 279,337,338 ಐಪಿಸಿ:- ಇಂದು ದಿನಾಂಕ: 03/05/2020 ರಂದು ಆರ್.ಟಿ.ಎ ಎಮ್.ಎಲ್.ಸಿ ವಿಚಾರಣೆ ಕುರಿತು ಹೋಗಿದ್ದ ನಮ್ಮ ಠಾಣೆಯ ಶಿವಪತ್ರ ಹೆಚ್.ಸಿ 82 ರವರು 4-45 ಪಿಎಮ್ ಕ್ಕೆ ಮರಳಿ ಬಂದು ಎಮ್.ಎಲ್.ಸಿ ಮತ್ತು ಶ್ರೀ ಗುರುಸಿದ್ದಪ್ಪ ತಂದೆ ಹಣಮಂತ್ರಾಯ ಪೂಜಾರಿ, ವ:43, ಜಾ:ಕುರುಬರ, ಉ:ಒಕ್ಕಲುತನ ಸಾ:ಕಾಡಂಗೇರಾ (ಬಿ) ಈತನ ಹೇಳಿಕೆ ಫಿರ್ಯಾಧಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಮ್ಮ ಅಣ್ಣತಮ್ಮಕೀಯ ಬಸಪ್ಪ ತಂದೆ ಬಸವಂತ್ರಾಯ ಈತನ ಮಗಳಾದ ಶಿಲ್ಪ ಇವಳಿಗೆ ಗುರುಮಠಕಲ್ ತಾಲೂಕಿನ ಯಲ್ಹೇರಿ ಗ್ರಾಮದ ಮಲ್ಲೇಶ ಈತನಿಗೆ ಕನ್ಯ ನೋಡುವ ಸಲುವಾಗಿ ಅವನ ಕಡೆಯವರು ಬಂದು ಶಿಲ್ಪ ಇವಳಿಗೆ ನೋಡಿಕೊಂಡು ಹೋಗಿದ್ದು, ನಮಗೆ ಹುಡುಗಿ ಪಾಸ ಆಗಿದೆ ನೀವು ಹೋಳಿಗೆ ಉಣ್ಣಲು ನಮ್ಮ ಮನೆಗೆ ಬನ್ನಿ ಎಂದು ಯಲ್ಹೇರಿ ಗ್ರಾಮದ ಬೀಗರು ಹೇಳಿದ್ದರಿಂದ ಇಂದು ದಿನಾಂಕ: 03/05/2020 ರಂದು ಬೆಳಗ್ಗೆ ಸದರಿ ಶಿಲ್ಪ ಇವಳ ತಂದೆಯಾದ ಬಸಪ್ಪ ತಂದೆ ಬಸವಂತ್ರಾಯ ಈತನು ತನ್ನ ಅಣ್ಣತಮ್ಮಂದಿರಿಗೆ, ಬಂಧು ಬಳಗದವರಿಗೆ ಹೋಳಿಗೆ ಉಣ್ಣಲು ಹೋಗೊಣ ಎಂದು ಹೇಳಿದ್ದರಿಂದ ಯೆಲ್ಹೇರಿ ಗ್ರಾಮಕ್ಕೆ ಹೋಳಿಗೆ ಉಣ್ಣಲು ಹೋಗಲು ಟಾಟಾ ಗೂಡ್ಸ ವಾಹನ ನಂ. ಕೆಎ 01 ಎಜಿ 4311 ನೇದ್ದರಲ್ಲಿ ನಾವೆಲ್ಲರೂ ಅಣ್ಣತಮ್ಮಂದಿರು, ಬೀಗರ ನೆಂಟರು ಸುಮಾರು 20 ರಿಂದ 25 ಜನರು ಅದರಲ್ಲಿ ಕುಳಿತುಕೊಂಡು ಹೊರಟೇವು. ಸದರಿ ಟಾಟಾ ಗೂಡ್ಸ ವಾಹನವನ್ನು ಜಗ್ಗಪ್ಪ ತಂದೆ ಬಸಪ್ಪ ಆನೂರು ಸಾ:ಕಾಡಂಗೇರಾ (ಬಿ) ಈತನು ಚಲಾಯಿಸಿಕೊಂಡು ಹೊರಟನು. ಯಾದಗಿರಿ-ಶಹಾಪೂರ ಮೇನ ರೋಡ ನಾಯ್ಕಲ್ ಗ್ರಾಮ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದಾಗ ಗೂಡ್ಸ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟಾಗ ನಾವು ನಿಧಾನವಾಗಿ ಹೋಗು ಅಂತಾ ಹೇಳಿದರು ಕೂಡಾ ಅವನು ಕೇಳದೆ ಅದೇ ವೇಗದಲ್ಲಿ ಮುಂದುವರೆಯುತ್ತಿದ್ದಾಗ ಬೆಳಗ್ಗೆ 10-30 ಗಂಟೆ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ಗುರುಸಣಗಿ ಕ್ರಾಸನಲ್ಲಿ ಯಾವುದೋ ಒಂದು ಬಿಡಾಡಿ ದನ ಅಡ್ಡ ಬಂದಿದ್ದು, ಸದರಿ ದನಕ್ಕೆ ವಾಹನ ಗುದ್ದುತ್ತೇನೆ ಎಂದು ಡ್ರೈವರನು ವಾಹನ ನಿರ್ಲಕ್ಷತನದಿಂದ ಒಮ್ಮಲೇ ಬಲಕ್ಕೆ ಕಟ್ ಹೊಡೆದಾಗ ವಾಹನ ಅವನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದುಬಿಟ್ಟಿತು. ಈ ಅಪಘಾತದಲ್ಲಿ ನನ್ನ ಬಲ ಕೈಗೆ ತರಚಿದ ಮತ್ತು ಬಲ ಭುಜಕ್ಕೆ ಒಳಪೆಟ್ಟಾಗಿತ್ತು. ನನ್ನಂತೆಯೇ ವಾಹನದ ಒಳಗಡೆ ಕುಳಿತ 2) ಗಂಗಮ್ಮ ಗಂಡ ಬಸಪ್ಪ ಪೂಜಾರಿ, 3) ಬಸವಂತ್ರಾಯ ತಂದೆ ದೇವಪ್ಪ, 4) ಅಯ್ಯಮ್ಮ ಗಂಡ ಮಸ್ತಪ್ಪ, 5) ಹುಚಪ್ಪ ತಂದೆ ಬಸಣ್ಣ ಆನಂಪಲ್ಲಿ ಇವರುಗಳಿಗೆ ಕೈ ಕಾಲು ಮತ್ತು ತೆಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಇನ್ನುಳಿದವರಾದ 6) ದೇವಿಂದ್ರಪ್ಪ ತಂದೆ ಸಾಯಬಣ್ಣ, 7) ಬಸಪ್ಪ ತಂದೆ ಬಸವಂತ್ರಾಯ, 8) ಹೊನ್ನಮ್ಮ ಗಂಡ ಶಂಕ್ರೆಪ್ಪ, 9) ಹಣಮಂತ ತಂದೆ ಮಲ್ಲಣ್ಣ, 10) ಬೀರಪ್ಪ ತಂದೆ ಶರಣಪ್ಪ ಪೂಜಾರಿ, 11) ನಿಂಗಪ್ಪ ತಂದೆ ಸಾಬಣ್ಣ, 12) ಮಾಳಮ್ಮ ಗಂಡ ಯಲ್ಲಾಲಿಂಗ, 13) ದೇವಿಂದ್ರಮ್ಮ ಗಂಡ ಭೀಮರಾಯ, 14) ಪಡೆಯಪ್ಪ ತಂದೆ ಬೀರಣ್ಣ, 15) ಶರಣಪ್ಪ ತಂದೆ ಭೀಮರಾಯ, 16) ಸಿದ್ದಪ್ಪ ತಂದೆ ಭಿಮಪ್ಪ, 17) ಮಹಾದೇವಮ್ಮ ಗಂಡ ನಾಗರೆಡ್ಡಿ ಮತ್ತು ಇತರರುಗಳಿಗೆ ಕೂಡಾ ಅಪಘಾತದಲ್ಲಿ ಕೈಕಾಲು, ತೆಲೆ, ಟೊಂಕ್ಕಕ್ಕೆ ಮತ್ತು ಅಲ್ಲಲ್ಲಿ ರಕ್ತ ಮತ್ತು ಗುಪ್ತಗಾಯಗಳಾಗಿದ್ದವು. ಯಾರೋ ದಾರಿ ಮೇಲೆ ಹೋಗುವವರು ನಮಗೆ ಅಪಘಾತವಾಗಿದ್ದನ್ನು ನೋಡಿ 108 ಅಂಬ್ಯುಲೇನ್ಸಗೆ ಫೋನ ಮಾಡಿ ಹೇಳಿದ್ದರಿಂದ 108 ಅಂಬ್ಯುಲೇನ್ಸ ಬಂದಿದ್ದು, ಅದರಲ್ಲಿ ನಾವು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ಬಂದು ಸೇರಿಕೆಯಾಗಿರುತ್ತೇವೆ. ಕಾರಣ ಟಾಟಾ ಗೂಡ್ಸ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ, ಒಮ್ಮಲೆ ಬಲಕ್ಕೆ ಕಟ್ ಮಾಡಿದ್ದರಿಂದ ವಾಹನ ಅವನ ನಿಯಂತ್ರಣ ತಪ್ಪಿ ಬಲ ಮಗ್ಗುಲಾಗಿ ಪಲ್ಟಿಯಾಗಿ ಬಿದ್ದು, ನಮಗೆಲ್ಲ ಈ ಮೇಲಿನಂತೆ ಗಾಯಗಳಾಗಿದ್ದು, ಸದರಿ ವಾಹನ ಚಾಲಕ ಜಗ್ಗಪ್ಪ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 55/2020 ಕಲಂ: 279,337,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.



ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 60/2020 87 ಕೆ.ಪಿ.ಆ್ಯಕ್ಟ್ ಮತ್ತು ಕಲಂ: 188 ಐಪಿಸಿ:-ಇಂದು ದಿನಾಂಕ: 03/05/2020 ರಂದು 07.30 ಪಿಎಮ್ ಕ್ಕೆ ಸರಕಾರಿ ತಪರ್ೆ ಪಿರ್ಯಾದಿದಾರರಾದ ಶ್ರೀ ಸೋಮಲಿಂಗ ಒಡೆಯರ ಪಿಎಸ್ಐ ಗೋಗಿ ಪೊಲೀಸ್ ಠಾಣೆ ರವರು ಖಾಸ್ ಬಾತ್ಮಿ ಮೇರೆಗೆ ಮಾನ್ಯ ಡಿ.ಸ್.ಪಿ ಸಾಹೇಬರು ಸುರಪೂರ ಮತ್ತು ಮಾನ್ಯ ಸಿಪಿಐ ಸಾಹೇಬರು ಶಹಾಪೂರ ರವರ ಮಾರ್ಗ ದರ್ಶನದಲ್ಲಿ ಇಬ್ಬರೂ ಪಂಚರು, ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ್ ನಂ: ಕೆಎ-33 ಜಿ-160  ಮತ್ತು ಒಂದು ಖಾಸಗಿ ವಾಹನದಲ್ಲಿ ವನದುಗರ್ಾ ಗ್ರಾಮದ ಹತ್ತಿರ ಇರುವ ಚನ್ನೂರ ಸೀಮಾಂತರದ ಎಲಿಗಾರ ಬೀಳ ದಲ್ಲಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಜಾಗದ ಬೀಳದಲ್ಲಿ ಕೋಳಿ ಪಂದ್ಯದ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ, ದಾಳಿ ಮಾಡಿ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪುರ ರವರ ಅನುಮತಿ ಪಡೆದುಕೊಂಡು ದಾಳಿ ಮಾಡಿದ್ದು, ಮೇಲಿನ 07 ಜನ ಆರೋಪಿತರು ಮತ್ತು ಇತರರು ಕೂಡಿಕೊಂಡು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರ ರವರ ಕರೋನಾ ವೈರಸ್ಸ್ ವಿರುದ್ದ ಜರನು ಒಂದು ಕಡೆ ಸೇರದಂತೆ ಲಾಕಡೌನ ಆದೇಶ ಹೋರಡಿಸಿದ್ದು ಸದರಿ ಆರೋಪಿತರು ಆದೇಶ ಉಲ್ಲಘಂಗನೆ ಮಾಡಿ ದುಂಡಾಗಿ ನಿಂತು ಕುಳಿತು ಮದ್ಯದಲ್ಲಿ ಹುಂಜಗಳೀಗೆ ಪಂಜೆ ಹಚ್ಚಿ ನಿನ್ನ ಹುಂಜ ಗೆದ್ದರೆ 200 ರೂಪಾಯಿಗೆ ನನ್ನ ಹುಂಜ ಗೆದ್ದರೆ 400 ರೂಪಾಯಿ ಕೊಡಬೇಕು ಅಂತಾ ಅವರವರಲ್ಲಿಯೇ ಮಾತನಾಡುತ್ತಾ ಹುಂಜದ ಪಂಜೆದ ಮುಖಾಂತರ ಜೂಜಾಟ ಆಡುತ್ತಿರುವಾಗ ಹೋಗಿ ಸಿಬ್ಬಂದಿಯವರೊಂದಿಗೆ ಇಬ್ಬರೂ ಪಂಚರ ಸಮಕ್ಷಮ ದಾಳಿ ಮಾಡಿ ಜಪ್ತಿ ಪಂಚನಾಮೆಯನ್ನು 05.05 ಪಿಎಮ್ ದಿಂದ 06.45 ಪಿಎಮ್ ದವರೆಗೆ ಕೈಕೊಂಡು ಮುದ್ದೇಮಾಲು ವಶಪಡಿಸಿಕೊಂಡು ಆರೋಪಿತರೊಂದಿಗೆ ಮುಂದಿನ ಕ್ರಮ ಕುರಿತು 07.30 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ನೀಡಿ ಸೂಕ್ತ ಕ್ರಮ ಕೈಕೊಳ್ಳುವಂತೆ ಆದೇಶಿಸಿದ ಮೇರೆಗೆ ಠಾಣೆ ಗುನ್ನೆ ನಂ: 60/2020 ಕಲಂ, 87 ಕೆ.ಪಿ.ಆ್ಯಕ್ಟ್ ಮತ್ತು ಕಲಂ: 188 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 33/2020 ಕಲಂ: 87 ಕೆ.ಪಿ ಯಾಕ್ಟ್:- ದಿನಾಂಕ: 03/05/2020 ರಂದು 4:00 ಪಿ.ಎಂ ಕ್ಕೆ ಶ್ರೀ ಅಜರ್ುನಪ್ಪ ಅರಕೇರಾ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಫನ ಪತ್ರ ನೀಡಿದ್ದು ಇದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗುಂಡಬಾವಿ ಸೀಮಾಂತರದ ಹುಲಗಪ್ಪ ತಂದೆ ಸಿದ್ದಪ್ಪ ಗಡ್ಡಿ ರವರ ಹೊಲದ ಹತ್ತಿರ ಇರುವ ಸರಕಾರಿ ಗುಡ್ಡದಲ್ಲಿ ಇಸ್ಪೆಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಜೂಜಾಟ ಆಡುವವರ ಮೇಲೆ ಎಪ್.ಐ ಆರ್ ದಾಖಲಿಸಲು ದಾಳಿಮಾಡುವ ಕುರಿತು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು ಕಾರಣ ನೀವು ಎಪ್ ಐ ಆರ್ ದಾಖಲಿಸಲು ಸೂಚಿಸಿಲಾಗಿದೆ ಅಂತಾ ನೀಡದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 33/2020 ಕಲಂ 87, ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. 
        ನಂತರ ಮಾನ್ಯ ಪಿ.ಎಸ್.ಐ ಸಾಹೇಬರು 6:40 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು 5 ಜನ ಆರೋಪಿತರು ನಗದು ಹಣ 3800/- ರೂ, 52 ಇಸ್ಪೆಟ ಎಲೆಗಳನ್ನು ಜಪ್ತುಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಫನ ಪತ್ರ ನೀಡಿದ್ದು ಇರುತ್ತದೆ. 
ಆರೋಪಿತರ ಹೆಸರು ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
1) ಬಸವರಾಜ ತಂದೆ ಚಿನ್ನಪ್ಪ ಕುಂಬಾರ ವ:23 ವರ್ಷ ಉ:ಒಕ್ಕಲುತನ ಜಾ:ಕುಂಬಾರ ಸಾ: ಜೊಗಂಡಬಾವಿ 
2) ದ್ಯಾಮಣ್ಣ ತಂದೆ ಸಂಜೀವಪ್ಪ ವಗ್ಗರ ವ:35 ವರ್ಷ ಉ:ಒಕ್ಕಲುತನ ಜಾ:ಹಿಂದು ಕುರಬರ ಸಾ:ಜೊಗಂಡಬಾವಿ
3) ಹಣಮಂತ ತಂದೆ ದ್ಯಾಮಣ್ಣ ಗಡ್ಡಿ ವ:45 ವರ್ಷ ಉ:ಕೂಲಿಕೆಲಸ ಜಾ:ಕುರಬರ ಸಾ:ಜೊಗಂಡಬಾವಿ 
4) ಮಂಜುನಾಥ ತಂದೆ ಮುದಕಪ್ಪ ಕುಂಬಾರ ವ:32 ವರ್ಷ ಉ:ಒಕ್ಕಲುತನ ಜಾ:ಹಿಂದು ಕುಂಬಾರ ಸಾ:ಜೊಗಂಡಬಾವಿ 
5) ಬಸವರಾಜ ತಂದೆ ಜಡೆಪ್ಪ ಭಜಂತ್ರಿ ವ:35 ವರ್ಷ ಉ:ಕೂಲಿ ಕೆಲಸ ಜಾ:ಹಿಂದು ಕೊರವೇರ ಸಾ: ಜೊಗಂಡಬಾವಿ 
5 ಜನ ಆರೋಪಿತರು ಓಡಿಹೋಗಿರುತ್ತಾರೆ ಅವರ ಹೆಸರು ಈ ಕೇಳಗಿನಂತೆ ಇರುತ್ತದೆ 
1) ಸಂಗಪ್ಪ ತಂದೆ ಹುಲಗಪ್ಪ ಹಳ್ಳಿ ಸಾ:ಜೊಗಂಡಬಾವಿ 
2)ಹುಲಗಪ್ಪ ತಂದೆ ಸಿದ್ದಪ್ಪ ಗಡ್ಡಿ ಸಾ:ಜೊಗಂಡಬಾವಿ 
3) ರಾಯಪ್ಪ ತಂದೆ ಯಲ್ಲಪ್ಪ ಗಡ್ಡಿ ಸಾ:ಜೊಗಂಡಬಾವಿ 
4) ಬಸವರಾಜ ತಂದೆ ಸಾಯಬಣ್ಣ ತತಬೇರಿ ಸಾ:ಜೊಗಂಡಬಾವಿ 
5) ಗೌಡಪ್ಪಗೌಡ ತಂದೆ ಅಬಲೆಪ್ಪಗೌಡ ಗೌಡರ ಸಾ:ಜೊಗಂಡಬಾವಿ 



ಶೋರಾಪೂರ  ಪೊಲೀಸ್ ಠಾಣೆ ಗುನ್ನೆ ನಂ:-  120/2020 ಕಲಂ: 143, 147, 148, 323, 324, 354(ಎ) 326, 109, 504, 506 ಸಂ. 149 ಐಪಿಸಿ:- ಇಂದು ದಿನಾಂಕ:03/05/2020 ರಂದು 3 ಪಿ.ಎಂ.ಕ್ಕೆ ಠಾಣೆಯ ಎಸ್ ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀಮತಿ ದೇವಮ್ಮ ಗಂಡ ನಿಂಗಪ್ಪ ಮಾಕನ್ನವರ ಸಾಕೀನ: ಟಿ.ಬೊಮ್ಮನಳ್ಳಿ. ಇವಳು ಠಾಣೆಗೆ ಬಂದು ಒಂದು ಗಣಕೀಕೃತ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ನಿನ್ನೆ ದಿನಾಂಕ:02-05-2020 ರಂದು ಊರ ಹತ್ತಿರದ ಗುಡಿ ಹೊಲದಲ್ಲಿ ನನ್ನ ಎರಡು ಟಗರು ಮರಿಗಳನ್ನು ಮೇಯಿಸುತ್ತಾ ನಿಂತಾಗ, ಸಾಯಂಕಾಲ ಸುಮಾರು 5-00 ಗಂಟೆಗೆ ಅಲ್ಲಿಗೆ ನಮ್ಮ ಗ್ರಾಮದ 1) ದೇವಿಂದ್ರಸ್ವಾಮಿ ತಂದೆ ಕಾಮಣ್ಣ ಮಾಲಿ ಪಾಟೀಲ, ಇತನು ನನ್ನಲ್ಲಿಗೆ ಬಂದು ಎಲೇ ದೇವಿ ನನ್ನ ಜೋತೆ ಮಲಗಲು ಬಾ, ನಾನು ನಿನಗೆ ಒಂದು ಸಾವಿರ ರೂಪಾಯಿ ಕೋಡುತ್ತೆನೆ. ಅಂತಾ ಅನ್ನುತ್ತಾ ನನ್ನ ಎರಡೂ ಎದೆಗಳನ್ನು ಗಟ್ಟಿಯಾಗಿ ಹಿಡಿದುಕೊಂಡನು. ಆಗ ನಾನು ಗಂಡುಳ್ಳ ಹೆಣ್ಣು ಮಗಳು ಆದ ನನಗೆ ಈ ರೀತಿ ಮಾಡುವದು ಸರಿ ಇಲ್ಲ ಅಂದಾಗ, ನಿನ್ನ ಗಂಡನು ಏನು ಶಂಟಾ ಕಿತ್ತಿಕೊಳ್ಳುತ್ತಾನೆ ಅಂತಾ ಅನ್ನುತ್ತಾ ನನ್ನ ಸೀರೆ ಎಳೆದಾಡುತ್ತಿರುವಾಗ, ನಾನು ಚಿರಾಡುವಾಗ, ದೂರದಲ್ಲಿ ಯಾರೋ ಬರುವುದನ್ನು ನೋಡಿ ಓಡಿ ಹೋದನು. ಆಗ ನಾನು ಸಾವರಿಸಿಕೊಂಡು ಮನೆಗೆ ಬಂದು ನಡೆದ ವಿಷಯವನ್ನು ನನ್ನ ಮನೆಯವರಿಗೆ ತಿಳಿಸಿದೇನು. ಆಗ ನಾನು ನನ್ನ ಮಾವ ಸಿದ್ದಪ್ಪ ತಂದೆ ನಿಂಗಪ್ಪ ಮಾಕನ್ನವರ, ಕಾಕನಾದ ಹಣಮಂತ್ರಾಯ ತಂದೆ ಭೀಮರಾಯ ಹಾವಿನಾಳ, ನನ್ನ ಗಂಡನಾದ ನಿಂಗಪ್ಪ ತಂದೆ ರಾಯಪ್ಪ ಮಾಕನ್ನವರ, ನನ್ನ ಗಂಡನ ಅಣ್ಣನಾದ ಲಂಕೇಪ್ಪ ತಂದೆ ರಾಯಪ್ಪ ಮಾಕನ್ನವರ, ಮೈದುನರಾದ ಅಮಯ್ಯಾ ತಂದೆ ರಾಯಪ್ಪ, ಈರಪ್ಪ ತಂದೆ ರಾಯಪ್ಪ, ಚಂದಪ್ಪ ತಂದೆ ದೊಡ್ಡಬೀಮಶಪ್ಪ ನನ್ನ ತಮ್ಮನಾದ ರೇವಣಸಿದ್ದಪ್ಪ ತಂದೆ ಭೀರಪ್ಪ  ಎಲ್ಲರೂ ಕೂಡಿಕೊಂಡು ವಿಚಾರಿಸುವ ಸಲುವಾಗಿ  2) ಕಾಮಣ್ಣ ತಂದ ನಾಗಪ್ಪ ಮಾಲಿ ಪಾಟೀಲ ಇವರ ಮನೆಗೆ ಹೋದಾಗ ನನ್ನ ಮಾವನಾದ ಸಿದ್ದಪ್ಪ ಈತನು ನನ್ನ ಸೋಸೆಗೆ ನಿನ್ನ ಮಗ ಈ ರೀತಿಯಾಗಿ ಮಾಡುವದು ಸರಿ ಏನು ಅಂತಾ ಕೇಳುವಷ್ಟರಲ್ಲಿ ಒಮ್ಮೇಲೆ ಸಿಟ್ಟಿಗೆದ್ದ ಆತನು ಎಲೇ ಬೋಸಡಿ ಮಕ್ಕಳೆ ನಿಮ್ಮ ಮಗ ಆಕೆಯನ್ನು ಕೆಡಿಸಿದರೆ ಏನು ಶಂಟಾ ಕಿತ್ತಿಕೊಳ್ಳುತ್ತಿರಿ ಅಂತಾ ಅವಾಚ್ಯ ಶಬ್ದಗಳಿಂದ ಎಲ್ಲರಿಗೂ ಬೈದನು. ಆಗ ಅಲ್ಲಿಯೇ ಇದ್ದ 3) ಮಾನಪ್ಪ ತಂದೆ ದ್ಯಾವಪ್ಪ ಮಾಲಿ ಪಾಟೀಲ, 4) ಹಣಮಂತ್ರಾಯ ತಂದೆ ಕಾಮಣ್ಣ ಮಾಲೀ ಪಾಟೀಲ ಇವರು ಕಲ್ಲಿನಿಂದ ನನ್ನ ಕಾಕನಾದ ಹಣಮಂತ್ರಾಯ ತಂದೆ ಬೀಮರಾಯ ಹಾವಿನಾಳ ಈತನಿಗೆ  ಹೊಡೆದು ತಿವ್ರತರವಾದ ಗಾಯ ಮಾಡಿದರು 5) ನಿಂಗಪ್ಪ ತಂದೆ ದ್ಯಾವಪ್ಪ ಹೆಮನೂರ ಈತನು ಲಂಕೆಪ್ಪ ಮತ್ತು ಆಮಯ್ಯಾ ಇವರಿಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದನು. 6) ದೇವಿಂದ್ರಪ್ಪ ತಂದೆ ಬಸವರಾಜಗೌಡ ಮಾಲೀ ಪಾಟೀಲ, 7) ಹಣಮಂತ್ರಾಯಗೌಡ ತಂದೆ ನಿಂಗಪ್ಪ ಮಾಲೀ ಪಾಟೀಲ ಮತ್ತು 8) ಮಲ್ಲಪ್ಪ ತಂದೆ ದ್ಯಾವಪ್ಪ ಮಾಲೀ ಪಾಟೀಲ ಇವರು ಬಿಡಬೇಡಿ ಈ ಸೂಳೆ ಮಕ್ಕಳಿಗೆ ಅಂತಾ ಪ್ರಚೋದಿಸುತ್ತಿದ್ದರು. 9) ಮಲ್ಲನಗೌಡ ತಂದೆ ದೇವಿಂದ್ರಪ್ಪಗೌಡ ಮಾಲಿ ಪಾಟೀಲ ಇತನು ಈರಪ್ಪ ಮತ್ತು ರೇವಣಸಿದ್ದಪ್ಪ ಇವರಿಗೆ ಬಡಿಗೆಯಿಂದ ಹೊಡೆದು ಒಳಪೇಟ್ಟು ಮಾಡಿದನು. ಲಂಕೆಪ್ಪ ಇತನಿಗೆ ದೇವಿಂದ್ರಸ್ವಾಮಿ ಕಾಲಿನಿಂದ ಒದ್ದನು. ಮತ್ತು ನನ್ನ ತಲೆ ತುರುಬ ಹಿಡಿದು ಜಗ್ಯಾಡಿ ನಡು ರಸ್ತೆಯಲ್ಲಿ ಅವಮಾನಗೊಳಿಸಿದನು. ಆಗ ನಾವುಗಳು ಚಿರಾಡುವಾಗ 1) ನಾಗಪ್ಪ ತಂದೆ ಪರಮಣ್ಣ 2) ಸೂಗಪ್ಪ ತಂದೆ ಚಂದ್ರಪ್ಪ ಹರಿಜನ ಇವರುಗಳು ಬಂದು ಜಗಳ ಬಿಡಿಸಿಕೊಂಡರು. ಅದೇ ಸಮಯಕ್ಕೆ ಬಂದ ಸಣ್ಣ ಬಿರಪ್ಪ  ತಂದೆ ಜಟ್ಟೆಪ್ಪ ಮತ್ತು ದೊಡ್ಡ ಬೀರಪ್ಪ ತಂದೆ ನಿಂಗಯ್ಯಾ ಹಾಗೂ ಸಂಜೀವಪ್ಪ ತಂದೆ ಹಣಮಂತ್ರಾಯ ಇವರು ಸಹ ಅವರಿಗೆ ಬುದ್ದಿ ಮಾತು ಹೇಳಿ ಬಿಡಿಸಿಕೊಂಡರು, ಇಲ್ಲದಿದ್ದರೆ ಅಂದು ನಮ್ಮ ಜೀವ ಹೊಗುತ್ತಿತ್ತು. ಸದರಿ ಘಟನೆ ನಿನ್ನೆ ಸಾಯಂಕಾಲ 7 ಗಂಟೆಗೆ ಜರುಗಿದ್ದು ಇರುತ್ತದೆ. ಆರೋಪಿತರು ಜಗಳ ಬಿಟ್ಟು ಹೋಗುವಾಗ ನಮ್ಮ ಕಡೆ ನೋಡುತ್ತಾ ಎಲೇ ಬೋಸಡಿ ಮಕ್ಕಳೆ ನಮ್ಮ ವಿರುದ್ದ ಪೊಲೀಸ್ ಕೇಸು ಮಾಡಿದರೆ ನಿಮ್ಮನ್ನು ಜೀವಂತ ಬಿಡುವದಿಲ್ಲ ಊರು ಬಿಟ್ಟು ಓಡಿಸುತ್ತೆವೆ. ಜೀವ ಸಹಿತ ಬಿಡುವದಿಲ್ಲ ಅಂತಾ ಜೀವ ಭಯ ಹಾಕಿ ಹೊರಟು ಹೋದರು ನಿನ್ನೆ ರಾತ್ರಿಯಾದ ಕಾರಣ ಇಂದು ಠಾಣೆಗೆ ಬಂದು ಈ ಪಿಯರ್ಾದಿ ಸಲ್ಲಿಸುತ್ತಿದ್ದೆನೆ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.




ಕೊಡೇಕಲ್  ಪೊಲೀಸ್ ಠಾಣೆ ಗುನ್ನೆ ನಂ:- 36/2020 ಕಲಂ:323 324 504 506 498(ಎ) ಸಂ 34 ಐಪಿಸಿ:-ಇಂದು ದಿನಾಂಕ:03.05.2020 ರಂದು ಸಾಯಂಕಾಲ 5:00 ಪಿಎಮ್ ಕ್ಕೆ  ಪಿರ್ಯಾಧಿ  ಶ್ರೀಮತಿ. ರೇಶ್ಮಾ ಗಂಡ ಉಮೇಶ ಚವ್ಹಾಣ ವ:22 ವರ್ಷ ಉ: ಕೂಲಿಕೆಲಸ ಜಾ: ಲಂಬಾಣಿ ಸಾ: ಜುಮಾಲಪೂರ ದೊಡ್ಡ ತಾಂಡಾ ತಾ: ಹುಣಸಗಿ  ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ  ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿರ್ಯಾಧಿ  ಅಜರ್ಿಯನ್ನು ಹಾಜರ ಪಡಿಸಿದ್ದು. ಸದರ ಪಿರ್ಯಾಧಿಯ ಅಜರ್ಿಯ ಸಾರಾಂಶವೆನೆಂದರೆ ನನ್ನ ತವರೂರು ಹುಣಸಗಿ ತಾಲೂಕಿನ ಕನಗಂಡನ ಹಳ್ಳಿ ತಾಂಡಾ ಇದ್ದು. ನನ್ನ ತಂದೆ-ತಾಯಿಯವರು ಈಗ 2 ವರ್ಷಗಳ ಹಿಂದೆ ನನಗೆ ಜುಮಾಲಪೂರು ದೊಡ್ಡ ತಾಂಡಾದ ಉಮೇಶ ತಂದೆ  ಹರಿಸಿಂಗ ಚವ್ಹಾಣ ಇತನಿಗೆ ಕೊಟ್ಟು ಮದುವೆ ಮಾಡಿದ್ದು. ನಮ್ಮ ಮದುವೆಯು ನನ್ನ ಗಂಡನ ಮನೆಯ ಮುಂದೆ ಆಗಿದ್ದು. ಮದುವೆಯ ಕಾಲಕ್ಕೆ ನಮ್ಮ ತಾಂಡಾದ ಗಣಪತಿ ನಾಯಕ ತಂದೆ ಲಕ್ಕಾನಾಯಕ ಚವ್ಹಾಣ ಹಾಗೂ ನಮ್ಮ ತಾಂಡಾದ ಹಿರಿಯರು ಮತ್ತು ಜುಮಾಲಪೂರ ದೊಡ್ಡ ತಾಂಡಾದ ನನ್ನ ಗಂಡನ ಕಾಕಂದಿರಾದ ದೀರಾನಾಯಕ ತಂದೆ ಲಾಲನಾಯಕ ಚವ್ಹಾಣ, ಪೂಲಾನಾಯಕ ತಂದೆ ಲಾಲನಾಯಕ ಚವ್ಹಾಣ ಹಾಗು ಜುಮಾಲಪೂರ ದೊಡ್ಡ ತಾಂಡಾದ ನಮ್ಮ ಸಮಾಜದ ಮುಖಂಡರು ಹಾಜರಿದ್ದು. ಮದುವೆಯಾದ ಮೇಲೆ ನನಗೆ ಗಂಡನ ಮನೆಗೆ ನನ್ನ ಗಂಡನು ಕರೆದುಕೊಂಡು ಹೋಗಿದ್ದು. ನನ್ನ ಗಂಡನ ಮನೆಯಲ್ಲಿ ನನ್ನ ಗಂಡ ಅತ್ತೆ ರಾಮವ್ವ ಮಾವ ಹರಿಸಿಂಗ ಮತ್ತು ನನ್ನ ಮಾವನ ತಂದೆ ಲಾಲಪ್ಪ ಹಾಗೂ ಪರಮ್ಯಾ, ಹಾಗೂ ಅವನ ಹೆಂಡತಿ ಗಂಗಾ ಎಲ್ಲರೂ ಕೂಡಿಯೇ ಇದ್ದು. ಮದುವೆಯಾದ ಮೇಲೆ 4-5 ತಿಂಗಳು ನನ್ನ ಗಂಡ ಅತ್ತೆ, ಮಾವ ಎಲ್ಲರೂ ನನ್ನೊಂದಿಗೆ ಒಳ್ಳೆಯ ರೀತಿಯಿಂದ ಇದ್ದು.  ನಮ್ಮ ದಾಂಪತ್ಯದಿಂದ ನನಗೆ ಅಮೀತ ಅಂತ ಒಂದು ಗಂಡು ಮಗು ಜನಿಸಿದ್ದು ಅವನು ಈಗ ಒಂದು ವರ್ಷದವನಿದ್ದು. ನಂತರ ನನ್ನ ಗಂಡ ಉಮೇಶ ತಂದೆ ಹರಿಸಿಂಗ ಚವ್ಹಾಣ, ಮಾವ ಹರಿಸಿಂಗ ತಂದೆ ಲಾಲಪ್ಪ, ಅತ್ತೆ ರಾಮವ್ವ ಗಂಡ ಹರಿಸಿಂಗ ಇವರೆಲ್ಲರೂ ನನಗೆ ಸೂಳಿ ನೀನು ಕರ್ರೆಗೆ ಹಂದಿ ಇದ್ದಾ ಆಗೆ ಅದಿ ನಿನಗೆ ಅಡುಗೆ ಮಾಡಲು ಬರುವದಿಲ್ಲಾ. ನಾವು ಏನಾದರೂ ಹೇಳಿದರೇ ನಮಗೆ ಏದರು ವಾದಿಸುತ್ತಿ ನಮಗೆ, ಕರಿಮಾರಿಯವಳೆ ಎಷ್ಟು ದಿವಸದಿಂದ ನಮ್ಮ ಪಾಲಿಗೆ ಮೂಲಾಗಿದ್ದಿ ಅಂತಾ ಪದೇ-ಪದೇ ಬೈಯುವದು ಹಿಯಾಳಿಸುವದು ಹೊಡೆ-ಬಡೆ ಮಾಡುವದು ಹಾಗೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ಕೊಡುವದನ್ನು ಮಾಡುತ್ತಿದ್ದು. ನಾನು ಈ ವಿಷಯವನ್ನ ನನ್ನ ತವರು ಮನೆಗೆ ಹೋದಾಗ ನನ್ನ ತಂದೆ-ತಾಯಿಗೆ ಹಾಗೂ ಮದುವೆ ಕಾಲಕ್ಕೆ ಹಾಜರಿದ್ದ ನಮ್ಮ ತಾಂಡಾದ ಗಣಪತಿ ನಾಯಕ ತಂದೆ ಲಕ್ಕನಾಯಕ ರವರಿಗೆ ನಾನು ವಿಷಯವನ್ನು ತಿಳಿಸಿದ್ದು. ಅವರು ಆಯಿತು ತಾಳಿಕೋ ನಾವು ನಿನ್ನ ಗಂಡ ಮತ್ತು ಅತ್ತೆ ಮಾವನಿಗೆ ಬಂದು ತಿಳುವಳಿಕೆ ಹೇಳುತ್ತೇವೆ ನೀನು ತಾಳಿಕೊಂಡು ಹೋಗು ಅಂತ ನನಗೆ ಬುದ್ದಿ ಮಾತು ಹೇಳಿದ್ದು. ನಾನು ಗಂಡನ ಮನೆಯಲ್ಲಿ ಇದ್ದಾಗ ಒಂದೆರಡು ಬಾರಿ ನನ್ನ ತಂದೆ-ತಾಯಿ ಮತ್ತು ನಮ್ಮ ತಾಂಡಾದ ಗಣಪತಿ ನಾಯಕ ತಂದೆ ಲಕ್ಕನಾಯಕ ರವರು ನನ್ನ ಗಂಡನ ಮನೆಗೆ ಬಂದು ನನ್ನ ಗಂಡ ಮತ್ತು ಅತ್ತೆ ಮಾವಂದಿರಿಗೆ ನನ್ನೊಂದಿಗೆ ತಕರಾರು ಮಾಡದಂತೆ ಹಾಗೂ ಒಳ್ಳಯ ರೀತಿಯಿಂದ ನಡೆಸಿಕೊಳ್ಳುವಂತೆ ತಿಳಿಸಿದ್ದು. ನನ್ನ ತಂದೆ-ತಾಯಿಯವರು ತಿಳುವಳಿಕೆ ಹೇಳಿ ಹೋದ ನಂತರ ಕೆಲ ದಿವಸ ನನ್ನ ಗಂಡ ಅತ್ತೆ ಮಾವಂದಿರು ನನ್ನೋಂದಿಗೆ ಒಳ್ಳೆಯ ರೀತಿಯಿಂದ ಇದ್ದು ನಂತರ ಈಗ ಕೆಲದಿನಗಳಿಂದ ಮತ್ತೆ  ನನ್ನ ಗಂಡನು ಕುಡಿದು ಬಂದು ನನಗೆ ಹೊಡೆಬಡೆ ಮಾಡುವದು ಮಾಡುತ್ತಿದ್ದು ಅಲ್ಲದೇ ನನ್ನ ಅತ್ತೆ ಮತ್ತು ಮಾವನ ಮಾತನ್ನು ಕೇಳಿ ನನ್ನ ಗಂಡನು ನನಗೆ ಮಾಸಿಕವಾಗಿ ದೈಹಿಕವಾಗಿ ಕಿರುಕುಳ  ಕೊಡುವದನ್ನು ಮಾಡುತ್ತಿದ್ದನು. 
      ಹೀಗಿರುವಾಗ ನಿನ್ನೆ ದಿನಾಂಕ:02.05.2020 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ನಾನು ನಮ್ಮ ಹೊಲದಲ್ಲಿಯ ಮನೆಯಲ್ಲಿದಾಗ ನನ್ನ ಗಂಡ ಉಮೇಶ, ಮಾವ ಹರಿಸಿಂಗ, ಅತ್ತೆ ರಾಮವ್ವ ಎಲ್ಲರೂ ನನಗೆ ಸೂಳಿ ನಾವು ನಿನಗೆ ಎಷ್ಟು ಬೈಯುವದು ಹೊಡೆಯುವದು ಮಾಡಿದರೂ ಕೂಡಾ ನಾಯಿ ಬಿದ್ದ ಆಗೆ ನಮ್ಮ ಮನೆಯಲ್ಲಿ ಇದ್ದಿದಿ ಸೂಳಿ ಇವತ್ತು ನಿನಗೆ ಒಂದು ಗತಿ ಕಾಣಿಸುತ್ತೇವೆ ಅಂತ ಅಂದವರೇ ನನಗೆ ನನ್ನ ಗಂಡನು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಎರಡು ಕಾಲುಗಳ ಮೊಳಕಾಳುಗಳ ಮೇಲೆ ತೊಡೆಗಳ ಮೇಲೆ ಮತ್ತು ಕುಂಡಿ ದಡದ ಮೇಲೆ ಬೆನ್ನಿನ ಮೇಲೆ ಹೊಡೆದು ಕಂದು ಗಟ್ಟಿದ ಗಾಯ ಪಡಿಸಿದ್ದು. ನನ್ನ ಅತ್ತೆ ರಾಮವ್ವಳು ಬಡಿಗೆಯಿಂದ  ನನ್ನ ಎಡಗಣ್ಣಿನ ಉಬ್ಬಿದ ಮೇಲೆ  ಮತ್ತು ಎದೆಯ ಮೇಲೆ ಹೊಡೆದು ಒಳ ಪೆಟ್ಟು ಮಾಡಿದ್ದು, ನಮ್ಮ ಮಾವ ಹರಿಸಿಂಗನು ಈ ಸೂಳಿದು ಬಹಳ ಆಗಿದೇ ಬಿಡಬ್ಯಾಡರಿ ಇನ್ನೂ ಹೊಡೆಯಿರಿ ಅಂತ ಅನ್ನುತ್ತಿದ್ದು. ಆಗ ನಾನು ನನ್ನನ್ನು ಉಳಿಸಿರಪ್ಪೋ ಅಂತ ಚಿರಾಡಲು ಅಲ್ಲಿಂದಲೇ ಹೋಗುತ್ತಿದ್ದ ನಮ್ಮ ತಾಂಡಾದ ದೇವಪ್ಪ ತಂದೆ ಸಕ್ರೆಪ್ಪ ರಾಠೋಡ, ಲಾಲಪ್ಪ ತಂದೆ ರಾಮಚಂದ್ರಪ್ಪ ಚಿನ್ನಾರಾಠೋಡ  ರವರು ಬಂದು ನನಗೆ ಹೊಡೆಯುದನ್ನು ನೋಡಿ ಬಿಡಿಸಿದ್ದು. ಇವರು ಬಂದು ಬಿಡಿಸದಿದ್ದರೆ ನನಗೆ ನನ್ನ ಗಂಡ ಮತ್ತು ಅತ್ತೆ, ಮಾವ ಇನ್ನೂ ಹೊಡೆ ಬಡೆ ಮಾಡುತ್ತಿದ್ದರು ಇವರೆಲ್ಲರೂ ಹೋಗುವಾಗ ನನಗೆ ಸೂಳೆ ಇವತ್ತು ನಮ್ಮ ಕೈಯಲ್ಲಿ ಉಳಿದಿದಿ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವಂತ ಬಿಡುವದಿಲ್ಲಾ ಅಂತ ಜೀವದ ಬೆದರಿಕೆ ಹಾಕಿ ನಮ್ಮ ತಾಂಡಾದ ಮನೆಯ ಕಡೆಗೆ ಹೋಗಿದ್ದು. ನಂತರ ನಾನು ನನಗೆ ನನ್ನ ಗಂಡ, ಅತ್ತೆ, ಮಾವ ಹೊಡೆ ಬಡೆ ಮಾಡಿದ ವಿಷಯವನ್ನು ನನ್ನ ತಂದೆ ಶಂಕರನಾಯಕ ತಂದೆ ಗಣಪತಿ ರಾಠೋಡ ರವರಿಗೆ ಪೋನ್ ಮಾಡಿ ತಿಳಿಸಿದ್ದು.  ಸ್ವಲ್ಪ ಹೊತ್ತಿನಲ್ಲಿಯೇ ನನ್ನ ತಂದೆ ಮತ್ತು ತಾಯಿ ದಾನಬಾಯಿರವರು ನನ್ನ ಗಂಡನ ಮನೆಗೆ ಬಂದಿದ್ದು ನಾನು ಅವರಿಗೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದು. ನನ್ನ ತಂದೆ ಮತ್ತು ತಾಯಿಯವರು ನನಗೆ ನಿನ್ನೆಯ ದಿನ ಸಾಯಂಕಾಲ ಹುಣಸಗಿ ಸಕರ್ಾರಿ ಆಸ್ಪತ್ರೆಗೆ ಉಪಚಾರಕ್ಕಾಗಿ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು. ನಾನು ಹುಣಸಗಿ ಸಕರ್ಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದಿ ಈದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ-ಬಡೆ ಮಾಡಿ ಜೀವದ ಬೇದರಿಕೆ ಹಾಕಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ಕೊಟ್ಟ ಮೇಲೆ ನಮೂದಿಸಿ ಮೂರು ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು   ಪಿರ್ಯಾಧಿಯ ಹೇಳಿಕೆಯ  ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:36/2020 ಕಲಂ: 323 324 504 506 498(ಂ)  ಖ/ತಿ 34   ಕಅ  ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು



ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 138/2020.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್.:- ಇಂದು ದಿನಾಂಕ 03/05/2020 ರಂದು 7.30 ಪಿಎಂ ಕ್ಕೆ  ಠಾಣೆಗೆ ಬಂದು ಸ.ತ. ಶ್ರೀ ಸಿದ್ದೇಶ್ವರ ಪಿಎಸ್ಐ(ಕಾ.ಸು) ಶಹಾಪೂರ ಠಾಣೆರವರು ಒಂದು ಮರಳು ತುಂಬಿದ ಟ್ರ್ಯಾಕ್ಟರ್, ಜಪ್ತಿ ಪಂಚನಾಮೆ, ಹಾಜರಪಡಿಸಿ ವರದಿ ಕೊಟ್ಟ ಸಾರಾಂಶವೆನೆಂದರೆ ಇಂದು ದಿನಾಂಕ 03/05/2020 ರಂದು 5.00 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ ಶಾರದಳ್ಳಿ ಹಳ್ಳದ ಕಡೆಯಿಂದ ರಸ್ತಾಪೂರ ಗ್ರಾಮದ ಕಡೆಗೆ ಒಂದು ಟ್ರ್ಯಾಕ್ಟರದಲ್ಲಿ ಮರಳು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಸಂಗನಬಸವ ಹೆಚ್ಸಿ 02 ರವರಿಗೆ ಇಬ್ಬರು ಪಂಚರನ್ನು ಠಾಣೆಗೆ ಕರೆದುಕೊಂಡು ಬರಲು ತಿಳಿಸಿದೆನು. ಆಗ ಸಂಗನಬಸವ ಹೆಚ್ಸಿ 02 ರವರು ಇಬ್ಬರು ಪಂಚರಾದ 1) ಶ್ರೀ ಸಂದೀಪ ತಂದೆ ಸಂಜೀವ ಕೊರಚ ವ|| 22ವರ್ಷ ಜಾ|| ಕೊರಚ ಉ|| ವ್ಯಾಪಾರ ಸಾ|| ಬಸವೇಶ್ವರ ನಗರ ಶಹಾಪೂರ 2) ಶ್ರೀ ಅಂಬ್ಲಪ್ಪ ತಂದೆ ಭಿಮಪ್ಪ ಐಕೂರ ವ|| 45ವರ್ಷ ಜಾ|| ಎಸ್.ಸಿ. ಉ|| ಕೂಲಿ ಸಾ|| ದೇವಿ ನಗರ ಶಹಾಪೂರ ಇವರಿಗೆ 5.10 ಪಿಎಂ ಕ್ಕೆ ಕರೆದುಕೊಂಡು ಬಂದು ನಮ್ಮ ಮುಂದೆ ಹಾಜರುಪಡಿಸಿದ್ದು ನಾನು ಸದರಿ ವ್ಯಕ್ತಿಗಳಿಗೆ ಸದರಿ ವಿಷಯ ತಿಳಿಸಿ ನಮ್ಮೊಂದಿಗೆ ಪಂಚರಾಗಿ ಬಂದು ದಾಳಿಗೆ ಸಹಕರಿಸಬೇಕು ಅಂತಾ ಕೇಳಿಕೊಂಡ ಮೇರೆಗೆ ಅವರು ಒಪ್ಪಿಕೊಂಡರು. ಹಾಗೂ ಠಾಣೆಯ ಸಿಬ್ಬಂದಿ ಜನರಾದ ಸಂಗನಬಸವ ಹೆಚ್ಸಿ 02 ಮತ್ತು ರುದ್ರಗೌಡ ಎಪಿಸಿ 34 ರವರಿಗೆ ವಿಷಯ ತಿಳಿಸಿ ಠಾಣೆಗೆ ಒದಗಿಸಿದ ಇಆರ್ಎಸ್ಎಸ್ ಜೀಪ ನಂ ಕೆಎ 02 ಜಿ 302 ನೇದ್ದರಲ್ಲಿ ಸದರಿ ಇಬ್ಬರು ಪಂಚರು ಮತ್ತು ನಾನು ಹಾಗೂ ನಮ್ಮ ಸಿಬ್ಬಂದಿಯವರಾದ ಸಂಗನಬಸವ ಹೆಚ್ಸಿ 02 ಮತ್ತು ರುದ್ರಗೌಡ ಎಪಿಸಿ 34 ರವರು ಕುಳಿತುಕೊಂಡು ಠಾಣೆಯಿಂದ 5.15 ಪಿಎಂ ಕ್ಕೆ ಹೊರಟು ರಸ್ತಾಪೂರ-ಶಾರದಳ್ಳಿ ರಸ್ತೆಯ ಮೇಲೆ ಶಾರದಳ್ಳಿ ಗ್ರಾಮವು ಇನ್ನೂ 1 ಕಿಮೀ ಅಂತರದಲ್ಲಿ ಇರುವ ಶಾರದಳ್ಳಿ ಹಳ್ಳದ ಬ್ರಿಜ್ ಹತ್ತಿರ ಜೀಪ ನಿಲ್ಲಿಸಿ ಮರೆಯಲ್ಲಿ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ 5.35 ಪಿಎಂ ಕ್ಕೆ ನಿಂತೆವು. ನಿಂತಾಗ ಶಾರದಳ್ಳಿ ಹಳ್ಳದಿಂದ ಶಾರದಳ್ಳಿ ರಸ್ತಾಪೂರ ಮಾರ್ಗವಾಗಿ 5.40 ಪಿಎಂ ಕ್ಕೆ ಒಂದು ಮರಳು ತುಂಬಿದ ಟ್ರ್ಯಾಕ್ಟರ ಬಂತು ನಾವು ಅದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರೊದಿಗೆ ಕೈಮಾಡಿ ನಿಲ್ಲಿಸಿ ಟ್ರ್ಯಾಕ್ಟರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಅಮಲಪ್ಪ ತಂದೆ ಸಾಯಬಣ್ಣ ಹಲಗಿ ವ|| 27ವರ್ಷ ಜಾ|| ಮಾದರ ಉ|| ಚಾಲಕ ಸಾ|| ಸಗರ(ಬಿ) ತಾ|| ಶಹಾಪೂರ ಅಂತಾ ತಿಳಿಸಿದ್ದು, ನಂತರ ಸದರಿ ಟ್ರ್ಯಾಕ್ಟರ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಗಿ ಪತ್ರ(ರಾಜಧನ) ತೆಗೆದುಕೊಂಡು ಬರಲು ಹೇಳಿದಾಗ ಟ್ರ್ಯಾಕ್ಟರ ಚಾಲಕನು ಯಾವುದೇ ಕಾಗದ ಪತ್ರ ಇರುವದಿಲ್ಲಾ ನಮ್ಮ ಟ್ರ್ಯಾಕ್ಟರನ ಮಾಲೀಕರಾದ ಶಬ್ಬೀರ ತಂದೆ ಸೋಪಿಲಾಲ ಸಾ|| ಸಗರ(ಬಿ) ತಾ|| ಶಹಾಪೂರ ರವರು ಸಕರ್ಾರಕ್ಕೆ ಯಾವುದೇ ರಾಜಧನ ಭರಿಸದೇ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಶಾರದಳ್ಳಿ ಗ್ರಾಮದ ಹತ್ತಿರ ಇರುವ ಹಳ್ಳದಿಂದ ತುಂಬಿ ಕಳುಹಿಸಿದ್ದು ನಾನು ತೆಗೆದುಕೊಂಡು ಹೋಗುತ್ತಿದ್ದೇನೆ ಅಂತ ಹೇಳಿ ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ಚಾಲಕನಿಗೆ ಬೆನ್ನು ಹತ್ತಿ ಹಿಡಿಯಲು ಪ್ರಯತ್ನಿಸಿದರು ಕೈಗೆ ಸಿಗದೇ ಹಳ್ಳದ ಪಕ್ಕದಲ್ಲಿನ ಮುಳ್ಳಿನ ಪೊದೆಯಲ್ಲಿ ಓಡಿ ಹೋಗಿದ್ದು ಇರುತ್ತದೆ. ನಂತರ ಸದರಿ ಟ್ರ್ಯಾಕ್ಟರ ನಂಬರ ನೋಡಲಾಗಿ ಅದು ಮೆಸ್ಸೆ ಫಗರ್ುಸನ್ 241 ಡಿಐ ಕಂಪನಿಯ ಟ್ರ್ಯಾಕ್ಟರ ನಂ ಕೆಎ 33 ಟಿಎ 2883 ನೇದ್ದು ಟ್ರಾಲಿ ಸಮೇತ ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ ಅದರಲ್ಲಿ ಅಂದಾಜು 1 ಬ್ರಾಸ್ ಮರಳು ತುಂಬಿದ್ದು ಅದರ ಅ|| ಕಿ|| 1500=00 ರೂ ಆಗಬಹುದು ಮತ್ತು ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ ನಂ ಕೆಎ 33 ಟಿಎ 2883 ನೇದ್ದರ ಇಂಜಿನ್ನ ಅ|| ಕಿ|| 2.50,000/- ರೂ ಹಾಗೂ ಟ್ರಾಲಿಯ ಅಂ|| ಕಿ|| 50,000/- ರೂ ಇರಬಹುದು. ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲೀಕ ಇಬ್ಬರೂ ಕೂಡಿ ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ 5.45 ಪಿಎಮ್ ದಿಂದ 6.45 ಪಿಎಮ್ದ ವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಟ್ರ್ಯಾಕ್ಟರನ್ನು ಬೇರೆ ಒಬ್ಬ ಚಾಲಕನ ಮೂಲಕ ಸಿಬ್ಬಂದಿಯವರ ಸಹಾಯದಿಂದ ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ಠಾಣೆಗೆ ತಂದು ನಿಲ್ಲಿಸಿ ವರದಿಯನ್ನು ತಯ್ಯಾರಿಸಿ ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ ಮುಂದಿನ ಕ್ರಮ ಕೈಕೊಳ್ಳಲು 7.30 ಪಿಎಂ.ಕ್ಕೆ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 138/2020 ಕಲಂ 379 ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.




ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 140/2020.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್.:-       ಇಂದು ದಿನಾಂಕ 03/05/2020 ರಂದು 7.30 ಪಿಎಂ ಕ್ಕೆ  ಠಾಣೆಗೆ ಬಂದು ಸ.ತ. ಶ್ರೀ ಸಿದ್ದೇಶ್ವರ ಪಿಎಸ್ಐ(ಕಾ.ಸು) ಶಹಾಪೂರ ಠಾಣೆರವರು ಒಂದು ಮರಳು ತುಂಬಿದ ಟ್ರ್ಯಾಕ್ಟರ್, ಜಪ್ತಿ ಪಂಚನಾಮೆ, ಹಾಜರಪಡಿಸಿ ವರದಿ ಕೊಟ್ಟ ಸಾರಾಂಶವೆನೆಂದರೆ ಇಂದು ದಿನಾಂಕ 03/05/2020 ರಂದು 5.00 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ ಶಾರದಳ್ಳಿ ಹಳ್ಳದ ಕಡೆಯಿಂದ ರಸ್ತಾಪೂರ ಗ್ರಾಮದ ಕಡೆಗೆ ಒಂದು ಟ್ರ್ಯಾಕ್ಟರದಲ್ಲಿ ಮರಳು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಸಂಗನಬಸವ ಹೆಚ್ಸಿ 02 ರವರಿಗೆ ಇಬ್ಬರು ಪಂಚರನ್ನು ಠಾಣೆಗೆ ಕರೆದುಕೊಂಡು ಬರಲು ತಿಳಿಸಿದೆನು. ಆಗ ಸಂಗನಬಸವ ಹೆಚ್ಸಿ 02 ರವರು ಇಬ್ಬರು ಪಂಚರಾದ 1) ಶ್ರೀ ಸಂದೀಪ ತಂದೆ ಸಂಜೀವ ಕೊರಚ ವ|| 22ವರ್ಷ ಜಾ|| ಕೊರಚ ಉ|| ವ್ಯಾಪಾರ ಸಾ|| ಬಸವೇಶ್ವರ ನಗರ ಶಹಾಪೂರ 2) ಶ್ರೀ ಅಂಬ್ಲಪ್ಪ ತಂದೆ ಭಿಮಪ್ಪ ಐಕೂರ ವ|| 45ವರ್ಷ ಜಾ|| ಎಸ್.ಸಿ. ಉ|| ಕೂಲಿ ಸಾ|| ದೇವಿ ನಗರ ಶಹಾಪೂರ ಇವರಿಗೆ 5.10 ಪಿಎಂ ಕ್ಕೆ ಕರೆದುಕೊಂಡು ಬಂದು ನಮ್ಮ ಮುಂದೆ ಹಾಜರುಪಡಿಸಿದ್ದು ನಾನು ಸದರಿ ವ್ಯಕ್ತಿಗಳಿಗೆ ಸದರಿ ವಿಷಯ ತಿಳಿಸಿ ನಮ್ಮೊಂದಿಗೆ ಪಂಚರಾಗಿ ಬಂದು ದಾಳಿಗೆ ಸಹಕರಿಸಬೇಕು ಅಂತಾ ಕೇಳಿಕೊಂಡ ಮೇರೆಗೆ ಅವರು ಒಪ್ಪಿಕೊಂಡರು. ಹಾಗೂ ಠಾಣೆಯ ಸಿಬ್ಬಂದಿ ಜನರಾದ ಸಂಗನಬಸವ ಹೆಚ್ಸಿ 02 ಮತ್ತು ನಾಗರೆಡ್ಡಿ ಎಪಿಸಿ 161 ರವರಿಗೆ ವಿಷಯ ತಿಳಿಸಿ ಠಾಣೆಯ ಜೀಪ ನಂ ಕೆಎ 33 ಜಿ 0138 ನೇದ್ದರಲ್ಲಿ ಸದರಿ ಇಬ್ಬರು ಪಂಚರು ಮತ್ತು ನಾನು ಹಾಗೂ ನಮ್ಮ ಸಿಬ್ಬಂದಿಯವರಾದ ಸಂಗನಬಸವ ಹೆಚ್ಸಿ 02 ಮತ್ತು ನಾಗರೆಡ್ಡಿ ಎಪಿಸಿ 161 ರವರು ಕುಳಿತುಕೊಂಡು ಠಾಣೆಯಿಂದ 5.15 ಪಿಎಂ ಕ್ಕೆ ಹೊರಟು ರಸ್ತಾಪೂರ-ಶಾರದಳ್ಳಿ ರಸ್ತೆಯ ಮೇಲೆ ಶಾರದಳ್ಳಿ ಗ್ರಾಮವು ಇನ್ನೂ 1 ಕಿಮೀ ಅಂತರದಲ್ಲಿ ಇರುವ ಶಾರದಳ್ಳಿ ಹಳ್ಳದ ಬ್ರಿಜ್ ಹತ್ತಿರ ಜೀಪ ನಿಲ್ಲಿಸಿ ಮರೆಯಲ್ಲಿ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ 5.35 ಪಿಎಂ ಕ್ಕೆ ನಿಂತೆವು. ನಿಂತಾಗ ಶಾರದಳ್ಳಿ ಹಳ್ಳದಿಂದ ಶಾರದಳ್ಳಿ ರಸ್ತಾಪೂರ ಮಾರ್ಗವಾಗಿ 5.40 ಪಿಎಂ ಕ್ಕೆ ಒಂದು ಮರಳು ತುಂಬಿದ ಟ್ರ್ಯಾಕ್ಟರ ಬಂತು ನಾವು ಅದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರೊದಿಗೆ ಕೈಮಾಡಿ ನಿಲ್ಲಿಸಿ ಟ್ರ್ಯಾಕ್ಟರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಅಮಲಪ್ಪ ತಂದೆ ಸಾಯಬಣ್ಣ ಹಲಗಿ ವ|| 27ವರ್ಷ ಜಾ|| ಮಾದರ ಉ|| ಚಾಲಕ ಸಾ|| ಸಗರ(ಬಿ) ತಾ|| ಶಹಾಪೂರ ಅಂತಾ ತಿಳಿಸಿದ್ದು, ನಂತರ ಸದರಿ ಟ್ರ್ಯಾಕ್ಟರ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಗಿ ಪತ್ರ(ರಾಜಧನ) ತೆಗೆದುಕೊಂಡು ಬರಲು ಹೇಳಿದಾಗ ಟ್ರ್ಯಾಕ್ಟರ ಚಾಲಕನು ಯಾವುದೇ ಕಾಗದ ಪತ್ರ ಇರುವದಿಲ್ಲಾ ನಮ್ಮ ಟ್ರ್ಯಾಕ್ಟರನ ಮಾಲೀಕರಾದ ಶಬ್ಬೀರ ತಂದೆ ಸೋಪಿಲಾಲ ಸಾ|| ಸಗರ(ಬಿ) ತಾ|| ಶಹಾಪೂರ ರವರು ಸಕರ್ಾರಕ್ಕೆ ಯಾವುದೇ ರಾಜಧನ ಭರಿಸದೇ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಶಾರದಳ್ಳಿ ಗ್ರಾಮದ ಹತ್ತಿರ ಇರುವ ಹಳ್ಳದಿಂದ ತುಂಬಿ ಕಳುಹಿಸಿದ್ದು ನಾನು ತೆಗೆದುಕೊಂಡು ಹೋಗುತ್ತಿದ್ದೇನೆ ಅಂತ ಹೇಳಿ ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ಚಾಲಕನಿಗೆ ಬೆನ್ನು ಹತ್ತಿ ಹಿಡಿಯಲು ಪ್ರಯತ್ನಿಸಿದರು ಕೈಗೆ ಸಿಗದೇ ಹಳ್ಳದ ಪಕ್ಕದಲ್ಲಿನ ಮುಳ್ಳಿನ ಪೊದೆಯಲ್ಲಿ ಓಡಿ ಹೋಗಿದ್ದು ಇರುತ್ತದೆ. ನಂತರ ಸದರಿ ಟ್ರ್ಯಾಕ್ಟರ ನಂಬರ ನೋಡಲಾಗಿ ಅದು ಮೆಸ್ಸೆ ಫಗರ್ುಸನ್ 241 ಡಿಐ ಕಂಪನಿಯ ಟ್ರ್ಯಾಕ್ಟರ ನಂ ಕೆಎ 33 ಟಿಎ 2883 ನೇದ್ದು ಟ್ರಾಲಿ ಸಮೇತ ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ ಅದರಲ್ಲಿ ಅಂದಾಜು 1 ಬ್ರಾಸ್ ಮರಳು ತುಂಬಿದ್ದು ಅದರ ಅ|| ಕಿ|| 1500=00 ರೂ ಆಗಬಹುದು ಮತ್ತು ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ ನಂ ಕೆಎ 33 ಟಿಎ 2883 ನೇದ್ದರ ಇಂಜಿನ್ನ ಅ|| ಕಿ|| 2.50,000/- ರೂ ಹಾಗೂ ಟ್ರಾಲಿಯ ಅಂ|| ಕಿ|| 50,000/- ರೂ ಇರಬಹುದು. ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲೀಕ ಇಬ್ಬರೂ ಕೂಡಿ ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ 5.45 ಪಿಎಮ್ ದಿಂದ 6.45 ಪಿಎಮ್ದ ವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಟ್ರ್ಯಾಕ್ಟರನ್ನು ಬೇರೆ ಒಬ್ಬ ಚಾಲಕನ ಮೂಲಕ ಸಿಬ್ಬಂದಿಯವರ ಸಹಾಯದಿಂದ ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ಠಾಣೆಗೆ ತಂದು ನಿಲ್ಲಿಸಿ ವರದಿಯನ್ನು ತಯ್ಯಾರಿಸಿ ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ ಮುಂದಿನ ಕ್ರಮ ಕೈಕೊಳ್ಳಲು 7.30 ಪಿಎಂ.ಕ್ಕೆ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 140/2020 ಕಲಂ 379 ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!