ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/03/2020

By blogger on ಸೋಮವಾರ, ಮಾರ್ಚ್ 30, 2020



                          ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/03/2020 
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 45/2020 ಕಲಂ 32,34 ಕೆ,ಇ ಯಾಕ್ಟ್:- ಇಂದು ದಿನಾಂಕ: 26-03-2020 ರಂದು ರಾತ್ರಿ 08-30 ಗಂಟೆಗೆ ಎ.ಎಸ್.ಐ ರವರು ಯಲಸತ್ತಿ ಗ್ರಾಮದಲ್ಲಿ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡು ಜ್ಞಾಪನ ಪತ್ರದೊಂದಿಗೆ ಮದ್ಯದ ಬಾಟಲಿಗಳನ್ನು ಜಪ್ತಿಪಂಚನಾಮೆಯನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ. 45/2020 ಕಲಂ. 32, 34 ಕೆ.ಇ ಕಾಯ್ದೆ  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 29/2020 ಕಲಂ:143, 147, 341 323  504 506 ಸಂ 149 ಐಪಿಸಿ ಇಂದು ದಿನಾಂಕ:25.03.2020 ರಂದು 5:30 ಪಿಎಮ್ ಕ್ಕೆ ಪಿರ್ಯಾಧಿ ಶ್ರೀಮತಿ ಸಂಗಮ್ಮ ಗಂಡ ಸಂಜೀವಪ್ಪ ಕೂಡ್ಲಗಿ ವ:30 ವರ್ಷ ಉ: ಕೂಲಿಕೆಲಸ ಜಾ: ಬೇಡರ ಸಾ: ಬೂದಿಹಾಳ ತಾ: ಹುಣಸಗಿ ಇರವರು ಠಾಣೆಗೆ ಹಾಜರಾಗಿ ಹೇಳಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಹೇಳಿಕೆಯ ಸಾರಾಂಶವೆನೆಂದರೆ ನನ್ನ ತಾಯಿಗೆ ಕೊಣ್ಣೂರಿಗೆ ಕೊಟ್ಟಿದ್ದು. ಚಿಗವ್ವ ನೀಲಮ್ಮಳಿಗೆ ಜೈನಾಪೂರಕ್ಕೆ ಹಾಗೂ ಇನ್ನೊಬ್ಬ ಚಿಗವ್ವಳಾದ ಮಾಹಾದೇವಿಗೆ ಬೂದಿಹಾಳಕ್ಕೆ ಕೊಟ್ಟಿದ್ದು. ನನ್ನ ತಾಯಿಯ ತಂದೆ-ತಾಯಿಯವರಿಗೆ ಗಂಡು ಮಕ್ಕಳು ಇಲ್ಲದ್ದರಿಂದ ಅವರ ಹೆಸರಿನ 9 ಎಕರೆ ಜಮೀನನ್ನು ಮೂರು ಜನ ಹೆಣ್ಣು ಮಕ್ಕಳಿಗೆ ಸಮಾನಾಗಿ ಹಂಚಿ ಅವರ ಹೆಸರಿಗೆ ಮಾಡಿದ್ದು. ಮೂರು ಜನ ಹೆಣ್ಣು ಮಕ್ಕಳು ನಮ್ಮ ಅಜ್ಜ ಅಜ್ಜಿಯ ಆಸ್ತಿಯನ್ನು ಸಾಗುವಳಿ ಮಾಡಿಕೊಂಡು ಬೂದಿಹಾಳದಲ್ಲಿಯೇ ಇದ್ದು. ನನ್ನ ಚಿಗವ್ವ ಮಾಹಾದೇವಿ ಇವರಿಗೆ ಬೂದಿಹಾಳದ ಹಣಮಂತ್ರಾಯ ತಂದೆ ಭೀಮಣ್ಣ ಗಡ್ಡಿಗೌಡರ ಇವರಿಗೆ ಕೊಟ್ಟಿದ್ದು. ಇತನು ನನ್ನ ಚಿಗವ್ವಳಿಗೆ ನಿನ್ನ ತಂದೆಯ ಜಮೀನನ್ನು ನನ್ನ ಹೆಸರಿಗೆ ಮಾಡಿಸು ಅಂತ ಅಂದಿದ್ದರಿಂದ ನನ್ನ ಚಿಗವ್ವಳು ಅವನಿಂದ ದೂರವಾಗಿ ಬೇರೆ ಮನೆ ಮಾಡಿಕೊಂಡು ಇದ್ದಳು ನನ್ನ ಚಿಗವ್ವ ಮಹಾದೇವಿಯು ಈಗ 3 ವರ್ಷಗಳ ಹಿಂದೆ ಸತ್ತಿದ್ದು ಸಾಯುವ ಮೊದಲು ತನ್ನ ಪಾಲಿನ 3 ಎಕರೆ ಜಮೀನಿನಲ್ಲಿ 2 ಎಕರೆ ನನ್ನ ಹೆಸರಿಗೆ 1 ಎಕರೆ ನನ್ನ ಅಣ್ಣ ಹಣಮಂತ್ರಾಯನಿಗೆ ಮಾಡಿಸಿದ್ದು ಇರುತ್ತದೆ. ನನ್ನ ಚಿಗವ್ವ ಮಹಾದೇವಿಯು ತನ್ನ ಜಮೀನಿನನ್ನು ನನಗೆ ಮಾಡಿಸಿದ್ದರಿಂದ ನನಗೆ ಕಾಕನಾಗಬೇಕಾದ ಹಣಮಂತ್ರಾಯ ತಂದೆ ಭೀಮಣ್ಣ ಗಡ್ಡಿಗೌಡರ ಹಾಗೂ ಅವರ ಮನೆಯವರು ನನ್ನ ಮೇಲೆ ಮತ್ತು ನನ್ನ ಅಣ್ಣನ ಮೇಲೆ ಸಿಟ್ಟಾಗಿ ವಿನಾಕಾರಣ ಆಗಾಗೆ ನನ್ನೊಂದಿಗೆ ತಕರಾರು ಮಾಡುತ್ತಾ ಬಂದಿದ್ದು ಇರುತ್ತದೆ.
 ಹೀಗಿರುವಾಗ ಮೊನ್ನೆ ಸೋಮುವಾರ ದಿನಾಂಕ:23.03.2020 ರಂದು ಸಾಯಂಕಾಲ 7:00 ಗಂಟೆಯ ಸುಮಾರಿಗೆ ನಾನು ಸಂಡಾಸಕ್ಕೆ ಹೋಗಿ ಮರಳಿ ಮನೆಗೆ ಬರಲು ನಮ್ಮ ಮನೆಯ ಪಕ್ಕದ ರಸ್ತೆಯ ಮೇಲಿಂದ ನಡೆದುಕೊಂಡು ಬರುತ್ತಿರುವಾಗ ಎದುರಿನಿಂದ ನಮ್ಮ ಸಂಬಂಧಿಕರಾದ 1) ಸಿದ್ದಮ್ಮ ಗಂಡ ಹಣಮಂತ್ರಾಯ ಗಡ್ಡಿಗೌಡರ, 2) ಸುಮಿತ್ರಾ ಗಂಡ ಬೀರಲಿಂಗ ಗಡ್ಡಿ ಗೌಡರ 3) ಬಲವಂತ್ರಾಯ ತಂದೆ ಹಣಮಂತ್ರಾಯ ಗಡ್ಡಿಗೌಡರ, 4) ಬೀರಲಿಂಗ ತಂದೆ ಹಣಮಂತ್ರಾಯ ಗಡ್ಡಿ ಗೌಡರ  5) ಹಣಮಂತ್ರಾಯ ತಂದೆ ಭೀಮಣ್ಣ  ಗಡ್ಡಿಗೌಡರ 6) ಗದ್ದೆಪ್ಪ ತಂದೆ ಹಣಮಂತ್ರಾಯ  ಗಡ್ಡಿಗೌಡರ ಇವರೆಲ್ಲರೂ ಗುಂಪಾಗಿ ಬಂದೆವರೆ ನನಗೆ ತಡೆದು ನಿಲ್ಲಿಸಿ ಬೋಸಡಿ ರಂಡಿ ಅಂತ ಬೈದು ನಮಗೆ ಬರಬೇಕಾದ ಜಮೀನನ್ನು ನಿನ್ನ ಚಿಗವ್ವಳಿಂದ ನೀನು ಮಾಡಿಸಿಕೊಂಡಿದಿ ಸೂಳಿ ಇವತ್ತು ನಿನನ್ನು ಬಿಡುವದಿಲ್ಲಾ ಅಂತ ಅಂದವರೇ ಅವರಲ್ಲಿಯ  ಸಿದ್ದಮ್ಮ ಗಂಡ ಹಣಮಂತ್ರಾಯ ಗಡ್ಡಿಗೌಡರ, ಸುಮಿತ್ರಾ ಗಂಡ ಬೀರಲಿಂಗ ಗಡ್ಡಿ ಗೌಡರ ಇವರಿಬ್ಬರೂ ನನ್ನ ತೆಕ್ಕಿಗೆ ಬಿದ್ದು ನೆಲಕ್ಕೆ ಕೆಡವಿದ್ದು. ನಾನು ನೆಲಕ್ಕೆ ಬಿದ್ದಾಗ ಸಿದ್ದಮ್ಮ ಮತ್ತು ಸುಮಿತ್ರಾ ರವರು ನನಗೆ ತಮ್ಮ ಕಾಲಿನಿಂದ ತೆಲೆಯ ಮೇಲೆ ಬೆನ್ನಿನ ಮೇಲೆ ಸೊಂಟದ ಮೇಲೆ ಒದ್ದು ತುಳಿದು ಗುಪ್ತಗಾಯ ಮಾಡಿದ್ದು. ಉಳಿದವರು ಈ ಸೂಳಿದು ಬಹಳ ಆಗಿದೆ ಬಿಡಬ್ಯಾಡರಿ ಇನ್ನೂ ಹೊಡೆಯಿರಿ ಅಂತ ನನಗೆ ಬೈಯ ಹತ್ತಿದ್ದು ಆಗ ನಾನು ನನಗೆ ಉಳಿಸಿರಪ್ಪೋ ಅಂತ ಚಿರಾಡಲು ನಮ್ಮ ಮನೆಯ ಮುಂದೆ ಇದ್ದ ನನ್ನ ಅಣ್ಣ ಪರಶುರಾಮ ತಂದೆ ಜೆಟ್ಟೆಪ್ಪ ಕೊಣ್ಣೂರು ಹಾಗೂ ಅದೇ ವೇಳೆಗೆ ದಾರಿಯ ಮೇಲಿಂದ ಹೊಗುತ್ತಿದ್ದ ಶಿವಣ್ಣ ತಂದೆ ಬಸಪ್ಪ ಚಿನ್ನಾಕರ ಹಾಗೂ ಮೌನೇಶ ತಂದೆ ಹಣಮಗೌಡ ಗಡ್ಡಿಗೌಡರ ರವರು ಬಂದು ನೋಡಿ ಬಿಡಿಸಿದ್ದು ಹೋಗುವಾಗ 6 ಜನರು ನನಗೆ ಸೊಳಿ ಇವತ್ತು ನಮ್ಮ ಕೈಯಲ್ಲಿ ಉಳಿದಿದಿ ಇನ್ನೊಂದು ಸಲ ಸಿಕ್ಕರೆ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು. ನಾನು ವಿಚಾರ ಮಾಡಿ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು ನನಗೆ ಈ ಘಟನೆಯಲ್ಲಿ ಅಷ್ಟೇನು ಪೆಟ್ಟಾಗಿರುವದಿಲ್ಲಾ ಉಪಚಾರಕ್ಕಾಗಿ ದವಾಖಾನಿಗೆ ಹೋಗುವದಿಲ್ಲಾ. ವಿನಾ ಕಾರಣ ನನಗೆ ಅವಾಚ್ಯ ಶಬ್ದಗಳಿಂದ ಬೈದು ತಡೆದು ನಿಲ್ಲಿಸಿ ಹೊಡೆ-ಬಡೆ ಮಾಡಿ ಜೀವ ಬೇದರಿಕೆ ಹಾಕಿದ ಮೇಲೆ ನಮೂದಿಸಿದ 6 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸ ಬೇಕು  ಅಂತಾ ಹೇಳಿಕೆಯ ಪಿರ್ಯಾಧಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:29/2020 ಕಲಂ:143, 147, 341 323  504 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!