ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/03/2020

By blogger on ಸೋಮವಾರ, ಮಾರ್ಚ್ 9, 2020

                      
                                                                         
                                  ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/03/2020
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 26/2020 ಕಲಂ: 160 ಐಪಿಸಿ:- ಇಂದು ದಿನಾಂಕ;07/03/2020 ರಂದು 3-00 ಗಂಟೆಗೆ ಶ್ರೀ ಅಯ್ಯಣ್ಣ ಹೆಚ್.ಸಿ-102 ರವರು ಠಾಣೆಗೆ ಹಾಜರಾಗಿ ಒಂದು ವರದಿ ನೀಡಿದ್ದೆನೆಂದರೆ, ನಾನು ದಿನಾಂಕ; 07/03/2020 ರಂದು ಬೆಳೆಗ್ಗೆ 8-00 ಗಂಟೆಯಿಂದ ಜಿಲ್ಲಾ ಸರಕಾರಿ ಆಸ್ಪತ್ರೆಯ ಓಪಿ ಕರ್ತವ್ಯದಲ್ಲಿರುವಾಗ 12-00 ಪಿಎಮ್ ಸುಮಾರಿಗೆ ಇಬ್ಬರು ವ್ಯಕ್ತಿಗಳಾದ ಮೊದಲನೇ ಪಾಟರ್ಿಯ ಜನರಾದ 1)ಶಂಕ್ರಪ್ಪ ತಂದೆ ರಂಗಪ್ಪ ವ;19 ವರ್ಷ ಉ; ವಿಧ್ಯಾಥರ್ಿ ಜಾ; ವಡ್ಡರ, 2)ಯಲ್ಲಾಲಿಂಗ ತಂದೆ ರಂಗಪ್ಪ ವ;21 ಜಾ; ವಡ್ಡರ ಉ; ವ್ಯಾಪಾರ  ಸಾ; ಇಬ್ಬರು  ಪಗಲಾಪೂರ ರವರು ಉಪಚಾರ ಕುರಿತು ಆಸ್ಪತ್ರಗೆ ಬಂದಿದ್ದು ಅದೇ ಸಮಯಕ್ಕೆ ಎರಡನೇ ಪಾಟರ್ಿ ಜನರಾದ ಅಜಯರೆಡ್ಡಿ ತಂದೆ ಅಶೋಕರೆಡ್ಡಿ ಶಿವರಾಮ ಈತನ ಕಡೆಯವರಾದ 1) ಪ್ರವೀಣ @ಮೋದಿ 2) ಸಂಪತರೆಡ್ಡಿ 3) ಮಹಾದೇವ ಸಾ; ಎಲ್ಲರೂ ಯಾದಗಿರಿ ರವರು ಮತ್ತು ಈತರರು ಆಸ್ಪತ್ರೆಗೆ ಬಂದಿದ್ದು ಎರಡು ಪಾಟರ್ಿಯ ಜನರು ಜಗಳ ಮಾಡಿಕೊಂಡ ವಿಷಯವಾಗಿ ತಂಟೆ ತಕರಾರು ಮಾಡಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿದ್ದಾಗ ನಾನು ಜಗಳ ಬಿಡಿಸಲು ಹೋಗಿದ್ದು ನನಗೆ ಮತ್ತು ಆಸ್ಪತ್ರೆಯ ಕರ್ತವ್ಯ ನಿರತ ವೈಧ್ಯಾಧಿಕಾರಿಗಳಿಗೂ ಮತ್ತು ಸಿಬ್ಬಂದಿ ಜನರಿಗೆ ನೂಕು-ನೂಗ್ಗಲು ಮಾಡಿ ಜಗಳವಾಡಿಕೊಂಡು ಸಾರ್ವಜನಿಕ ಶಾಂತತೆಗೆ ಭಂಗವನ್ನುಂಟು ಮಾಡಿದ್ದು ಇರುತ್ತದೆ. ಕಾರಣ ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ವರದಿ ನೀಡಿದ್ದು ಇರುತ್ತದೆ ಅಂತಾ ಕೊಟ್ಟ ವರದಿಯ ಮೇಲಿಂದ ಠಾಣೆಯ ಗುನ್ನೆ ನಂ.26/2020 ಕಲಂ.160 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 09/2020 ಕಲಂ 174 ಸಿ.ಆರ್.ಪಿ.ಸಿ:- ಇಂದು ದಿನಾಂಕ 07/03/2020 ರಂದು  15-50 ಪಿ.,ಎಂಕ್ಕೆ ಪಿಯರ್ಾದಿ ಶ್ರೀ ಮತಿ ದೇವಿಂದ್ರಮ್ಮ ಗಂಡ ಶೀವಪ್ಪ ಲೊಡ್ಡನುರ ವ|| 45 ವರ್ಷ ಜಾ|| ಮಾದಿಗ ಉ|| ಹೋಲಮನಿ ಕೆಲಸ ಸಾ|| ಗುತ್ತಿಪೇಠ ಶಹಾಪೂರ ಕೊಡುವ ದೂರು ಅಜರ್ಿ ಸಾರಂಶವೆನಂದರೆ ಏನಂದರೆ. ನನ್ನ 7 ನೇಯ ಮಗಳಾದ ತಾಯಮ್ಮ ಇವಳಿಗೆ ಹೊಟ್ಟೆ ನೋವಿದ್ದು ನಾವೂ ಖಾಸಗಿ ಆಸ್ಪತ್ರೆಗೆ ತೋರಿಸಿದ್ದು ಇರುತ್ತದೆ ಸದರ ಶೀವಮ್ಮ ಇವಳು ಸ್ವಲ್ಪ ದುಡಿಕಿನ ಸ್ವಬಾವದವಳಾಗಿದ್ದು   
              ಹೀಗಿದ್ದು ದಿನಾಂಕ 07/03/2020 ರಂದು ನನ್ನ ಗಂಡ ಮತ್ತು ಮಕ್ಕಳು ಕೂಲಿ ಕೆಲಸ ಕುರಿತು ಹೋರಗಡೆ ಹೋಗಿದ್ದರು ನಾನು ಮತ್ತು ನನ್ನ ಮಗಳು ತಾಯಮ್ಮ ಇವಳು ಮನೆಯಲ್ಲಿ ಇದ್ದೇವೆ, ಅಂದಾಜು 1:00 ಗಂಟೆ ಸುಮಾರಿಗೆ ನಾನು ಕೆಳಗೆ ಮನೆಯಲ್ಲಿ ಇದ್ದಾಗ, ನನ್ನ ಮಗಳು ತಾಯಮ್ಮ ಇವಳು ನನಗೆ ಏಕೋ ಹೋಟ್ಟೆ ನೋವು ಆಗುತ್ತಾ ಇದೆ ನಾನು ಸಂಡಾಸಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋದಳು ಸ್ವಲ್ಪ ಸಮಯದ ನಂತರ ಬಂದು ನಾನು ಮೇಲೆ ಕೊಣೆಯಲ್ಲಿ ಹೋಗಿ ಮಲಗುತ್ತೆನೆ ಅಂತಾ ಹೇಳಿ ಮೇಲೆ ಹೋಗಿದ್ದು ನಾನು ಕೇಳಗಿನ ಮನೆಯಲ್ಲಿ ಮಲ್ಲಿಗಿದ್ದು ಇರುತ್ತದೆ, ಸ್ವಲ್ಪ ಸಮಯದ ನಂತರ ನನ್ನ ಮಗ ಅಂಬ್ರೇಶ ಇತನು ಮದ್ಯಾಹ್ನ ಊಟ ಮಾಡುವ ಕುರಿತು ಮನೆಗೆ ಬಂದನು, ಅಂಬ್ರೇಶ ಇತನು  ನಾನು ಮೇಲೆ ಹೋಗಿ ಮೋಬೈಲ ಚಾರ್ಜಗೆ ಇಟ್ಟು ಬರುತ್ತೆನೆ ಅಂತಾ ಹೇಳಿ ಮೇಲೆ ಹೋಗಿ ಆಗ ಸಮಯ 2:50 ಪಿ.ಎಂ ಆಗಿದ್ದು ನನ್ನ ಮಗ ಒಮ್ಮಲೇ ಆಳುವದು, ಚಿರಾಡಿ ನನಗೆ ಕರೆದುನು, ನಾನು ಗಾಬರಿಯಿಂದ ಮೇಲೆ ಹೋಗಿ ನೋಡಲಾಗಿ, ನನ್ನ ಮಗಳು ತಾಯಮ್ಮ ಇವಳು ನಮ್ಮ ಮನೆಯ ತೋಟ್ಟಲ ಕೊಂಡಿಗೆ ಸಿರೇಯಿಂದ ನೆಣುಹಾಕಿಕೊಂಡಿದ್ದಳು ನಾನು ಮತ್ತು ಅಷ್ಠರಲ್ಲಿ ಅಲ್ಲಿಗೆ ಬಂದ ನನ್ನ ಕಿರಿಯ ಮಗ ಸೋಮಶೇಖರ, ಮತ್ತು ನಮ್ಮ ಪಕ್ಕದ ಮನೆಯ ಮಲ್ಲಮ್ಮ ಇವರು ಬಂದು ಜೀವ ಇರಬಹುದೆಂದ ಸೀರೆ ಕತ್ತಿರಿಸಿ ಕೆಳಗೆ ಇಳಿಸಿ, ಉಪಚಾರ ಕುರಿತು ಒಂದು ಅಟೋದಲ್ಲಿ ಹಾಕಿಕೊಂಡು ಶಹಾಪೂರ ಸರಕಾರಿ ಆಸ್ಪತೆ ಕರೆದುಕೊಂಡು ಬಂದು ಸೆರಿಕೆ ಮಾಡಿದ್ದು, ವೈದ್ಯಾದೀಕಾರಿಗಳು ಮೃತಪಟ್ಟಿದ್ದಾಗ ತಿಳಿಸಿದ್ದು ಇರುತ್ತೆದೆ
            ಕಾರಣ ನನ್ನ ಮಗಳಾದ ತಾಯಮ್ಮ ತಂದೆ ಶೀವಪ್ಪ ಲೋಡ್ಡನುರ ವ|| 16 ಜಾ|| ಮಾದಿಗ ಉ|| ಮನೆ ಕೆಲಸ ಸಾ|| ಗುತ್ತಿಪೇಠ ಶಹಾಪೂರ ಇವಳು ತನ್ನಗಿದ್ದ ಹೋಟ್ಟೆನೋವಿನಿಂದು ಮನೆನೊಂದು 1:30 ಪಿ.ಎಂ ದಿಂದ 2:50 ಪಿ.ಎಂ ಮದ್ಯದೊಳಗೆ ನೇಣುಹಾಕಿಕೊಂಡು ಮೃತ ಪಟ್ಟಿದ್ದು ಯಾರ ಮೇಲೆ ಯಾವೂದೆ ರೀತಿಯಾ ಸಂಶಾಯ ಇರುವದಿಲ್ಲಾ ಮುಂದಿನ ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ,  ಅಂತಾ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಯು,ಡಿ,ಆರ್, ನಂ-09/2020 ಕಲಂ 174 ಸಿ.ಆರ್.ಪಿ.ಸಿ. ನೇದ್ದರ ಪ್ರಕಾರ ಯು.ಡಿ,ಆರ್. ಧಾಖಲಿಸಿಕೊಂಡು ತನಿಕೆ ಕೈಕೊಂಡೆನು. 

ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 26/2020 87  ಕೆ.ಪಿ ಯಾಕ್ಟ:- ದಿನಾಂಕ:06/03/2020 ರಂದು 14.45 ಪಿ.ಎಮ್ ಕ್ಕೆ, ಶ್ರೀ.ಎನ್.ಎಸ್.ಜನಗೌಡ ಪಿ.ಎಸ್.ಐ ಹುಣಸಗಿ ಪೊಲೀಸ ಠಾಣೆ  ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ  ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಟ್ಟಿ ಗ್ರಾಮದ ಬಸ್ ನಿಲ್ದಾಣದ ಸಮೀಪ್ ಮುಂದೆ ಇರುವ ಒಂದು ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಜೂಜಾಟವನ್ನು ಆಡುವವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:26/2020 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದ. ನಂತರ ಮಾನ್ಯ ಪಿ.ಎಸ್.ಐ ಸಾಹೇಬರು 17.30 ಗಂಟೆಗೆ ಮರಳಿ ಠಾಣೆಗೆ ಬಂದು 6 ಜನ ಆರೋಪಿತರು & ನಗದು ಹಣ 3090/- ರೂ.ಗಳು ಹಾಗೂ 52 ಇಸ್ಪೀಟ್ ಎಲೆಗಳು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಲ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. ಆರೋಪಿತರ ಹೆಸರು ಈ ರೀತಿ ಇದೆ,  1) ಮೌನೇಶ ತಂದೆ ಬಸಣ್ಣ ಬಿರಾದಾರ ವಯ:23 ವರ್ಷ ಜಾ:ಬೇಡರ ಉ:ಒಕ್ಕಲತನ ಸಾ:ಬನ್ನಟ್ಟಿ 2) ಪ್ರಭು ತಂದೆ ಸಿದ್ದಣ್ಣ ಬಡಿಗೇರ ವಯ:30 ವರ್ಷ ಜಾ:ಬೇಡರ ಉ:ಕೂಲಿಕೆಲಸ ಸಾ:ಬನ್ನಟ್ಟಿ 3) ಸಂಗಪ್ಪ ತಂದೆ ಹಣಮಂತ್ರಾಯ ವಡಗೇರಿ ವಯ:26 ವರ್ಷ ಜಾ:ಬೇಡರ ಉ:ಕೂಲಿಕೆಲಸ ಸಾ:ಬನ್ನಟ್ಟಿ 4) ಮೌನೇಶ ತಂದೆ ಬಸಣ್ಣ ಬಿರಾದಾರ ವಯ:22 ವರ್ಷ ಜಾ:ಬೇಡರ ಉ:ಕೂಲಿಕೆಲಸ ಸಾ:ಬನ್ನಟ್ಟಿ ಅಂತಾ 5) ನಿಂಗಣ್ಣ ತಂದೆ ಈರಣ್ಣ ಹುಲಕಲ್ ವಯ:20 ವರ್ಷ ಜಾ:ಬೇಡರ ಉ:ಕೂಲಿಕೆಲಸ ಸಾ:ಬನ್ನಟ್ಟಿ 6) ಭೀಮಣ್ಣ ತಂದೆ ಮಲ್ಲಯ್ಯ ಅಳ್ಳಳ್ಳಿ ವಯ:45 ವರ್ಷ ಜಾ:ಬೇಡರ ಉ:ಕೂಲಿಕೆಲಸ ಸಾ:ಬನ್ನಟ್ಟಿ  ಅಂತಾ ಇರುತ್ತದೆ.


ಮಹಿಳಾ ಪೊಲೀಸ ಠಾಣೆ ಗುನ್ನೆ ನಂ:- 04/2020 ಕಲಂ: 323, 324 504, 506, 354 ಸಹ ಕಲಂ: 149 ಐ.ಪಿ.ಸಿ;- ಇಂದು ದಿನಾಂಕ: 05.02.2020 ರಂದು ಸಂಜೆ 5.30 ಗಂಟೆ ಸುಮಾರಿಗೆ ಶ್ರೀಮತಿ ಲಕ್ಷ್ಮಿ ಗಂಡ ಜಗನ್ನಾಥ ಗುಂಗುರಿ ,ವಯಾ-28 ಸಾ- ಮೈಲಾಪೂರ ಅಗಸಿ ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ಹಾಜರಪಡಿಸಿದ್ದು ಅದರ ಸಾರಂಶವೇನೆಂಧರೆ ನಮ್ಮ ಮನೆಯ ಸ್ವಲ್ಪ ದೂರದಲ್ಲಿ ಸಲೀಂ ತಂದೆ ಅಬ್ದುಲ್ ಗಪೂರ್ ಇವರ ಮನೆ  ಇದ್ದು ಪವಿತ್ರಾ ಗಂಡ ಸಲಿಂ ಈಕೆಯ ತಮ್ಮ ಆಗಾಗೆ ನಮ್ಮ ಮನೆಗೆ ಬಂದು ಬಾಗಿಲು ಬಡೆಯುವುದು , ಕಲ್ಲಿನಿಂದ ಹೊಡೆಯುವುದು ಮಾಡುತ್ತಿದ್ದನು ನಾವು ಚಿಕ್ಕ ಹುಡುಗ ಇದ್ದಾನೆ ಅಂತಾ ತಿಳಿದು ಸುಮ್ಮನಾಗಿದ್ದೇವು . ಈ ವಿಷಯವನ್ನು ಪವಿತ್ರಾ ಈಕೆಗೆ ನಿಮ್ಮ ತಮ್ಮ ಈ ರೀತಿ ನಮ್ಮ ಮನೆಯ ಮುಂದೆ ಬಂದು ವಿನಾಕಾರಣ ಬಾಗಿಲಿಗೆ ಹೊಡೆಯುವುದು ಕಲ್ಲು ಬಿಸುವುದು ಮಾಡುತ್ತಿದ್ದು ಅವನಿಗೆ ಸ್ವಲ್ಪ ಬುದ್ದಿ ಹೇಳಿ ಅಂದಿದ್ದಕ್ಕೆ ನನಗೆ ಪವಿತ್ರಾ , ಆಕೆಯ ಅತ್ತೆ ಅಂಜುಬಾಯಿ , ಅವಳ ತಾಯಿ ಶಾಂತಿಬಾಯಿ , ಇವರೆಲ್ಲರು ಕೂಡಿ ನನ್ನ ಜೊತೆ ಜಗಳ ಮಾಢಿ ಮನ ಬಂದಂತೆ ರಂಡಿ ಸೂಳಿ ಅಂತಾ ಅವಾಚ್ಯವಾಗಿ ಬೈದು ಇಲ್ಲಿ ಜೀವನ ಮಾಡಬೇಕಾದರೆ ಇದೆಲ್ಲಾ ಸಹಿಸಿಕೊಂಡು ಹೋಗಬೇಕು ಅಂತಾ ದಬ್ಬಾಳಿಕೆ ಮಾಡಿರುತ್ತಾರೆ.
          ಹೀಗಿದ್ದು ದಿನಾಂಕ 26/12/2019 ರಂದು ನಾನು ಮನೆಯಲ್ಲಿದ್ದಾಗ ಸಾಯಂಕಾಲ 4-30 ಗಂಟೆಗೆ ಪವಿತ್ರಾ ಈಕೆಯ ತಮ್ಮ ಮತ್ತೆ ಪುನ: ನಮ್ಮ ಮನೆಯ ಹತ್ತಿರ ಬಂದು ಕಲ್ಲಿನಿಂದ ಕಿಟಕಿಗೆ ಭಾಗಿಲಿಗೆ ಹೊಡೆಯುತ್ತಿದ್ದನು ಹಿಂಗ್ಯಾಕೆ ಮಾಡುತ್ತಿ ಅಂತಾ ಅವನಿಗೆ ನಾನು ಬೆದರಿಸಿ ಕಳಿಸಿದಾಗ ಅವನು ಅಳುತ್ತಾ ಮನೆಗೆ ಹೋಗಿ ಅವನ ತಾಯಿ ಶಾಂತಿಬಾಯಿ , ಅಕ್ಕ ಪವಿತ್ರಾ ,ಚಂದ್ರಕಲಾ , ಅವರ ಮಾವ ಸಲಿಂ ಹಾಗು ಅತ್ತೆಯಾದ ಅಂಜುಬಾಯಿ ಇವರೆಲ್ಲರು ಕೂಡಿಕೊಂಡು ಏಕಾಎಕಿ ನಮ್ಮ ಮನೆಯ ಹತ್ತಿರ ಬಂದು ಏನಲ್ಲೇ ಸೂಳಿ ನಿಮ್ಮದು ಬಹಳ ಆಗ್ಯಾದ ಸುಮ್ಮ ಸುಮ್ಮನೆ ನಮ್ಮ ಮಗನಿಗೆ ಬದಲಾಮ ಮಾಡುತ್ತಿದ್ದಿ ಅಂತಾ ಜಗಳ ಮಾಢಿ ನಾವೋಂದು ತಾವೂಂದು ಅಂತಾ ಬಾಯಿ ಮಾತಿನ ಜಗಳ ಮಾಡುತ್ತಿದ್ದಾಗ ಪವಿತ್ರಾ ಗಂಡ ಸಲಿಂ ಈಕೆಯು ನನ್ನ ಕೈ ಒತ್ತಿಯಾಗಿ ಹಿಡಿದುಕೊಂಡಿದ್ದು ಆಕೆಯ ತಂಗಿ ಚಂದ್ರಕಲಾ ಈಕೆಯು ಕೈಮುಷ್ಠಿ ಮಾಡಿ ಬೆನ್ನಿಗೆ ಮತ್ತು ಹೊಟ್ಟಿಗೆ ಗುದ್ದಿರುತ್ತಾಳೆ . ಅಂಜುಬಾಯಿ ಮತ್ತು ಶಾಂತಿಬಾಯಿ ಇವರು ನನ್ನತಲೆ ಮೇಲೆ ಕೂದಲು ಹಿಡಿದು ಜಗ್ಗಾಡಿ ಕೆಳಗಡೆ ನೂಕಿಕೊಟ್ಟು ಕಾಲಿನಿಂದ ಒದ್ದಿರುತ್ತಾರೆ. ಮತ್ತು ಪವಿತ್ರಾ ಈಕೆಯು ನಳದ ಪೈಪಿನಿಂದ ನನ್ನ ಎರಡು ತೋಡೆ ಮೇಲೆ ಹೊಡೆದಿರುತ್ತಾಳೆ ಆಗ ಸಲಿಂ ತಂದೆ ಗಫೂರ ಈತನು ನನ್ನ ಹತ್ತಿರ ಬಂದು ಕೈಹಿಡಿದು ಜಗ್ಗಾಡಿ ಅಪಮಾನ ಮಾಡಿ ನೀವ ಇಲ್ಲಿ ಜೀವನ ಮಾಡಬೇಕಾದರೆ ನಾವು ಹೇಳಿದಂತೆ ಕೇಳಬೇಕು ಇಲ್ಲಾ ಅಂದರೆ ನಿಮಗೆ ಜೀವ ಸಮೇತ ಬಿಡಲ್ಲಾ ಇಲ್ಲಿಂದ ಓಡಿಸಿ ಕಳುಸುತ್ತೇವೆ.ಎಂದು ಜೀವದ ಬೆದರಿಕೆ ಹಾಕಿರುತ್ತಾನೆ. ನನಗೆ ಹೊಡೆಯುತ್ತಿದ್ದಾಗ ಅದೆ ಸಮಯಕ್ಕೆ ನನ್ನ ಗಂಡ ಜಗನ್ನಾಥ ಇವರು ಬಂದು ನೋಡಿ ಯಾಕೆ ಈ ರೀತಿ ಮಾಡುತ್ತಿದ್ದಿರಿ ಅಂತಾ ಕೇಳಿದಕ್ಕೆ ಎಲ್ಲರೂ ಕೂಡಿ ನನ್ನ ಗಂಡನಿಗೂ ಕೂಡಾ ಕೈಯಿಂದ ಹೊಡೆ ಬಡೆ ಮಾಡಿ ಸಲಿಂ ಈತನು ನಳದ ಪ್ಲಾಸ್ಟಿಕ ಪೈಪನಿಂದ ಎಡಕೈಗೆ ಮತ್ತು ಬೆನ್ನಿಗೆ ಹೊಡೆದಿರುತ್ತಾನೆ



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!