Yadgir District Reported Crimes
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ ;- 183/2018 ಕಲಂ 87 ಕೆಪಿ ಯಾಕ್ಟ :- ದಿನಾಂಕ 11/09/2018 ರಂದು 16.40 ಗಂಟೆಯ ಸುಮಾರಿಗೆ ಆರೋಪಿತರು ದೇವಾಪುರ ಜೆ ಸೀಮೆಯ ಕೆನಾಲ ದಂಡೆಗೆ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಶೀಬದ ಇಸ್ಪೀಟ್ ಜೂಜಾಟ ಆಡುವಾಗ ಪಿಯರ್ಾದಿ ಹಾಗೂ ಪಂಚರು ಮತ್ತು ಸಿಬ್ಬಂದಿಯಾದ ಅಂಬಭಯ್ಯ ಎ.ಎಸ್.ಐ ಹೆಚ್.ಸಿ-130, 178 ಪಿಸಿ-248 155 290 ರವರೊಂದಿಗೆ ದಾಳಿ ಮಾಡಲು ಇಬ್ಬರು ಸಿಕ್ಕಿದ್ದು, ಸಿಕ್ಕ ಆರೋಪಿತರಿಂದ ಹಾಗು ಖಣದಿಂದ ಪಂಚರ ಸಮಕ್ಷಮದಲ್ಲಿ 830=00 ರೂ. ನಗದು ಹಣ ಮತ್ತು 52 ಇಸ್ಫೀಟ್ ಎಲೆಗಳು ಜಪ್ತಿ ಮಾಡಿದ್ದು ಸೂಕ್ತ ಕ್ರಮ ಜರುಗಿಸಲು ಜ್ಞಾಪನ ಪತ್ರ ನೀಡದ್ದರ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- ಗುನ್ನೆ ನಂ 244/2018 ಕಲಂ 279,337,338 ಐಪಿಸಿ ಸಂಗಡ 187 ಐಎಮ್ವಿ ಆಕ್ಟ್ :- ದಿನಾಂಕ 11/09/2018 ರಂದು 10-30 ಎಎಮ್ ಕ್ಕೆ ಫಿಯರ್ಾದಿ ಅಜರ್ಿದಾರ ಗಾಯಾಳು ಶ್ರೀ ವಿರೇಂದ್ರ ಪಾಟೀಲ ತಂದೆ ಬಸವಂತ್ರಾಯಗೌಡ ಪೊಲೀಸ್ ಪಾಟೀಲ ವಯಾ|| 48 ವರ್ಷ ಉ|| ಶಿಕ್ಷಕ ಜಾ|| ಗಾಣಿಗ ಸಾ|| ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ದಿನಾಂಕ: 05/06/2018 ರಂದು ಬೆಳಿಗ್ಗೆ 09-45 ಗಂಟೆಯ ಸುಮಾರಿಗೆ ನಾನು ಹಾಗು ನನ್ನ ಮಗನಾದ ಪ್ರಥಮ ತಂದೆ ವಿರೇಂದ್ರ ಪೊಲೀಸ್ ಪಾಟೀಲ ವ|| 14 ಇಬ್ಬರೂ ಕೂಡಿಕೊಂಡು ಕೆಂಭಾವಿ ಸುರಪೂರ ಮುಖ್ಯ ರಸ್ತೆಯ ಕಾಚಾಪೂರ ದವರ ಮನೆಯ ಮುಂದಿನ ರೋಡಿನಲ್ಲಿ ಹಾದು ನಮ್ಮ ಹೊಲಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಕೆಂಭಾವಿ ಕಡೆಯಿಂದ ಅಂದರೆ ಹಿಂದಿನಿಂದ ಒಂದು ಕಾರ ನೇದ್ದರ ಚಾಲಕನು ತನ್ನ ಕಾರನ್ನು ಅತೀ ವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ನನಗು ಹಾಗು ನನ್ನ ಮಗನಿಗೆ ಬಲವಾಗಿ ಡಿಕ್ಕಿ ಪಡಿಸಿದನು ಆಗ ನಾವಿಬ್ಬರು ಕೆಳಗೆ ಬಿದ್ದಿದ್ದು ಸದರಿ ಅಪಘಾತದಲ್ಲಿ ನನಗೆ ಬಲಗಾಲ ತೊಡೆಗೆ, ಹಾಗು ಮೊಳಕಾಲಿಗೆ ಭಾರೀ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ. ಬಲಗೈಮಣಿಕಟ್ಟಿನ ಹತ್ತಿರ ಸಹ ಭಾರೀ ರಕ್ತಗಾಯವಾಗಿ ಕೈ ಮುರಿದಿರುತ್ತದೆ. ಅದರಂತೆ ನನ್ನ ಮಗನಿಗೆ ನೋಡಲಾಗಿ ಬಲಗಾಲ ತೊಡೆಯಲ್ಲಿ ಕಾಲು ಮುರಿದು ಭಾರೀ ರಕ್ತಗಾಯವಾಗಿರುತ್ತದೆ. ನಂತರ ನಮಗೆ ಅಪಘಾತಪಡಿಸಿದ ಕಾರ ನಂಬರ ನೋಡಲಾಗಿ ಕೆಎ-20 ಎಮಬಿ-4273 ಅಂತ ಇದ್ದು ಸದರಿ ಚಾಲಕನು ನಮಗೆ ಅಪಘಾತ ಪಡಿಸಿ ಸ್ವಲ್ಪ ದೂರದಲ್ಲಿ ತನ್ನ ಕಾರ ನಿಲ್ಲಿಸಿ ಓಡಿಹೋಗಿದ್ದು ಆತನ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ ಸದರಿಯವನನ್ನು ನಾನು ನೋಡಿದಲ್ಲಿ ಗುರುತಿಸುತ್ತೇನೆ. ನಂತರ ಕಾಲಿಗೆ ಆದ ಭಾರೀ ಗಾಯಗಳಿಂದ ನಾನು ಮೂಛರ್ೆ ಹೋಗಿದ್ದು ನಂತರ ನನಗೆ 3/4 ದಿನಗಳ ನಂತರ ಪ್ರಜ್ಞೆ ಬಂದಿದ್ದು ಇರುತ್ತದೆ. ಆಗ ನಾನು ಕಾಮರಡ್ಡಿ ಆಸ್ಪತ್ರೆ ಕಲಬುಗರ್ಿಯಲ್ಲಿ ಉಪಚಾರದಲ್ಲಿದ್ದು ನನ್ನ ಮಗನು ಸಹ ಅದೇ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದನು. ನಂತರ ನಾನು 15 ರಿಂದ 20 ದಿವಸಗಳವರೆಗೆ ಸದರ ಆಸ್ಪತ್ರೆಯಲ್ಲಿ ಉಪಚಾರ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೀಮ್ಸ್ ಆಸ್ಪತ್ರೆ ಹೈದ್ರಾಬಾದ ದವಖಾನೆಯಲ್ಲಿ ಉಪಚಾರ ಪಡೆದು ಬಿಡುಗಡೆಯಾಗಿ ಬಂದು ನಂತರ ನಮಗೆ ಅಪಘಾತ ಪಡಿಸಿದ ಕಾರಿನ ಚಾಲಕ ಹೆಸರು ತಿಳಿದುಕೊಂಡಿದ್ದು ಆತನ ಹೆಸರು ಕಿಶೋರಕುಮಾರ ಶೆಟ್ಟಿ ತಂದೆ ಯು ಚಂದ್ರಶೇಖರ ಶೆಟ್ಟಿ ಸಾ|| ಸಿದ್ದಾಪೂರ ತಾ|| ಕುಂದಾಪೂರ ಅಂತ ತಿಳಿದು ಬಂದಿರುತ್ತದೆ. ಕಾರಣ ನಮಗೆ ಅಪಘಾತಪಡಿಸಿದ ಕಾರ ನಂಬರ ಕೆಎ-20 ಎಮ್ಬಿ-4273 ನೆದ್ದರಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 244/2018 ಕಲಂ 279,337,338 ಐಪಿಸಿ ಸಂಗಡ 187 ಐಎಮ್ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using