Yadgir District Reported Crimes Updated on 11-07-2018

By blogger on ಬುಧವಾರ, ಜುಲೈ 11, 2018

 

                                           Yadgir District Reported Crimes
ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ ;- 117/2018 ಕಲಂ: 32, 34 ಕೆ.ಇ ಎಕ್ಟ್  ;- ದಿನಾಂಕ: 10/07/2018 ರಂದು 8-30 ಪಿ.ಎಮ್ ಗಂಟೆಗೆ ಪಿಎಸ್ಐ ಸಾಹೇಬರು ಠಾಣೆಗೆ ಹಾಜರಾಗಿ ತಾವು ಪುರೈಸಿದ ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾ ಪತ್ರ ಮತ್ತು ಮುದ್ದೇಮಾಲನ್ನು ಹಾಪಡಿಸಿದ್ದು, ಪಿಎಸ್ಐ ರವರು ಹಾಜಪಡಿಸಿದ ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾ ಪತ್ರ ಸಾರಾಂಶವೆನೆಂದರೆ, ಇಂದು ದಿನಾಂಕ: 10/07/2018 ರಂದು 6:00 ಪಿ.ಎಮ್ ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಜುಮಾಲಪೂರ ದೊಡ್ಡತಾಂಡಾದ ಬಸ್ ನಿಲ್ದಾಣದ ಹತ್ತಿರ ಜೊಗಂಡಬಾವಿ ಬೊಂಡೊಳ್ಳಿ ರಸ್ತೆಯ ಪಕ್ಕದಲ್ಲಿ ಸಿಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವೆಕ್ತಿಗಳು ಅನಧಿಕೃತವಾಗಿ ಯಾವುದೇ ದಾಖಲಾತಿ ಇಲ್ಲದೇ  ಮತ್ತು ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯ ಮಾರಾಟ ಮಾಡುತ್ತಿರುವದಾಗಿ ಖಚಿತಾ ಬಾತ್ಮಿ ಬಂದಿದ್ದು. ಸದರಿ ದಾಳಿಗೆ ಮಾಡುವ ಕುರಿತು  ಇಬ್ಬರು ಪಂಚರಾದ ವೆಂಕಟೇಶ ತಂದೆ ದ್ಯಾಮಣ್ಣ ಲಕ್ಕುಂಡಿ ಸಾ: ಯರಕಿಹಾಳ ಹಾ:ವ: ಕೊಡೇಕಲ್ಲ, ಸಂಗಯ್ಯ ತಂದೆ ಬಸಯ್ಯ ಹಿರೇಮಠ ಸಾ: ಕೊಡೇಕಲ್ಲ ಮತ್ತು ಸಿಬ್ಬಂದಿಯವರಾದ ಬಸನಗೌಡ ಹೆಚ್ ಸಿ 100, ವಿಶ್ವನಾಥ ಪಿಸಿ-319 ಸೋಮನಗೌಡ ಪಿಸಿ-293  ರವರನ್ನು ಕರೆದುಕೊಂಡು ಠಾಣೆಯ ಜೀಪ್ ನಂ ಕೆಎ-33 ಜಿ-0165 ನೇದರಲ್ಲಿ  ಠಾಣೆಯಿಂದ 6:20 ಪಿಎಮ್ ಕ್ಕೆ  ಬಿಟ್ಟು ಬಾತ್ಮಿ ಬಂದು ಸ್ಥಳಕ್ಕೆ 6:45 ಪಿಎಮ್ ಕ್ಕೆ ತಲುಪಿ ಜುಮಾಲಪೂರ ದೊಡ್ಡತಾಂಡಾದ ಬಸ್ ನಿಲ್ದಾಣದ ಹತ್ತಿರ ಜೀಪನ್ನು ಮರೆಯಾಗಿ ನಿಲ್ಲಿಸಿ ನಾವು ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಇಬ್ಬರು ರಸ್ತೆಯ ಪಕ್ಕದಲ್ಲಿ ಸಿಡಿ ಹತ್ತಿರ ಆಕ್ರಮ ಮದ್ಯ ಮಾರಾಟ ಮಾಡುವದು ಖಾತ್ರಿಯಾದ ಮೇಲೆ 6:50 ಪಿಎಮ್ ಕ್ಕೆ ದಾಳಿ ಮಾಡಲಾಗಿ ನಮ್ಮನ್ನು  ನೋಡಿ ಮದ್ಯ ಮಾರಾಟ ಮಾಡುತ್ತಿರುವವರು ಓಡಿ ಹೋಗಿದ್ದು ಬೆನ್ನು ಹತ್ತಿದರು ಸಿಗಲಿಲ್ಲ ಓಡಿ ಹೋದವರ ಬಗ್ಗೆ ಅಲ್ಲಿಯೆ ಇದ್ದ ಬಾಳಾರಾಮ ನಾಯಕ ಮತ್ತು ತುಕಾರಾಮ ಚವ್ಹಾಣ ರವರಿಗೆ ವಿಚಾರಿಸಿ ಕೇಳಲಾಗಿ ಓಡಿ ಹೋದವನ ಹೆಸರು ಹರಿಸಿಂಗ ತಂದೆ ಶೆಟ್ಟೆಪ್ಪ ರಾಠೊಡ ಮತ್ತು ಮೋತಿಲಾಲ ತಂದೆ ನೇಮಣ್ಣ ಜಾದವ ಸಾ:ಇಬ್ಬರು ಜುಮಾಲಪೂರ ದೊಡ್ಡತಾಂಡಾ ಅಂತಾ ತಿಳಿಸಿದ್ದು ಸದರಿಯವರು ಹೋಗುವಾಗ ಮಾರಟ ಮಾಡುತ್ತಿದ್ದ ಮದ್ಯವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ಮದ್ಯದ ಬಾಟಲಿಗಳನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಿ ನೋಡಲಾಗಿ 90 ಎಂ ಎಲ್ ದ ಔಐಆ ಖಿಂಗಿಇಖಓ ಘಞಥಿ  ಯ 14 ಹಳದಿ ಬಣ್ಣದ ರಟ್ಟಿನ ಡಬ್ಬಿಗಳು ಮತ್ತು 2) 180 ಂ ಎಲ್ ದ ಔಐಆ ಖಿಂಗಿಇಖಓ ಘಞಥಿ  ಯ 11 ಹಳದಿ ಬಣ್ಣದ ರಟ್ಟಿನ ಡಬ್ಬಿಗಳು 3) 90 ಎಂ. ಎಲ್ದ ಒಅ ಆಠತಿಜಟಟ'   ಓಠ-01 ಆಇಐಗಘಿಇ ಘಿಘಿಘಿ ಖಗಒ ನ 17 ಕೆಂಪು ಬಣ್ಣದ ರಟ್ಟಿನ ಡಬ್ಬಿಗಳು ಇದ್ದು, ಒಟ್ಟು ಎಲ್ಲಾ ಕಂಪನಿಯ ಮದ್ಯದ ಬಾಟಲಿಗಳು ಸೇರಿ 4770 ಎಂ ಎಲ್ ಆಗುತ್ತಿದ್ದು, ಇವುಗಳ ಕಿಮ್ಮತು 2151.65/- ರೂಪಾಯಿಗಳು ಆಗುತ್ತದೆ. 3 ನಮೂನೆಯ ಎಲ್ಲಾ  ಬಾಟಲಿಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಬಿಳಿಯ ಬಣ್ಣದ ಮೂರು ಬಿಳೀಯ ಬಣ್ಣದ ಬಟ್ಟೆಯಿಂದ ಹೊಲೆದ ಚೀಲಗಳಲ್ಲಿ ಹಾಕಿ ದಾರದಿಂದ ಕಟ್ಟಿ ಅವುಗಳಿಗೆ ಎಡಿಬಿ ಅಂತಾ ಇಂಗ್ಲೀಷ ಅಕ್ಷರದಿಂದ ಶಿಲ್ ಮಾಡಿ ಅವುಗಳಿಗೆ ಪಂಚರ ಸಹಿ ನಿಶಾನೆ ಪಡೆದು ಅಂಟಿಸಿ ಜಪ್ತುಮಾಡಿದ್ದು ಸದರಿ ಜಪ್ತಿ ಪಂಚನಾಮೆಯನ್ನು 6:50 ಪಿಎಮ್ ದಿಂದ 7:50 ಪಿಎಮ್ ದವರೆಗೆ ಬ್ಯಾಟರಿ ಬೆಳಕಿನಲ್ಲಿ ಸ್ಥಳದಲ್ಲಿಯೇ ಕುಳಿತು ಪೂರೈಸಿದ್ದು. ಮುದ್ದೆ ಮಾಲಿನೊಂದಿಗೆ 8:30 ಪಿಎಮ್ಕ್ಕೆ ಠಾಣೆಗೆ ಬಂದು ಸದರಿ ಆರೋಪಿತರ ಮೇಲೆ ಕ್ರಮ ಜರುಗಿಸಲು ಈ ಜ್ಞಾಪನ ಪತ್ರದೊಂದಿಗೆ ಸೂಚಿಸಿದ್ದು, ಪಿ.ಎಸ್.ಐ ರವರು ಹಾಜರು ಪಡಿಸಿದ ಪಂಚನಾಮೆ ಮತ್ತು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 117/2018 ಕಲಂ: 32, 34 ಕೆ.ಇ ಎಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಿಟಕಲ ಪೊಲೀಸ್ ಠಾಣೆ ಗುನ್ನೆ ನಂ ;- 248/2018 ಕಲಂ: 87 ಕೆ.ಪಿ. ಆಠ್ಟಿ್;- ದಿನಾಂಕ 10.07.2018 ರಂದು ಸಂಜೆ 5-10 ಗಂಟೆಗೆ ಶ್ರೀಅರುಣಕುಮಾರ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ 9 ಜನ ಆರೋಪಿತರನ್ನು ಹಾಜರುಪಡಿಸಿ ಮೂಲ ಜಪ್ತಿ ಪಂಚನಾಮೆ ಹಾಗೂ ವರದಿ ನೀಡಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ಕೇಶ್ವಾರ ಸಿಮಾಂತರದ ಲಕ್ಷ್ಮಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ್ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯವರೊಂದಿಗೆ ಪಂಚರನ್ನು ಕರೆದುಕೊಂಡು ಹೋಗಿ ದಾಳಿ ಮಾಡಿ ಕಾಲಂ-07 ರಲ್ಲಿಯ ಆರೋಪಿತರನ್ನು ಹಿಡಿದು ಅವರ ವಶದಲ್ಲಿದ್ದ 6000=00 ರೂ ಮತ್ತು 52 ಇಸ್ಪೀಟ್ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ನೀಡಿದ್ದು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾತದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆ ಗುನ್ನೆ ನಂ: 248/2018 ಕಲಂ: 87 ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ ;- 111/2018 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ್ 1994;- ದಿನಾಂಕ: 10/07/2018 ರಂದು 11 ಪಿ.ಎಂ ಕ್ಕೆ ಮಾನ್ಯ ಶ್ರೀ ಅಂಬಾರಾಯ ಕಮಾನಮನಿ ಪಿಐ ಡಿಸಿಬಿ ಯಾದಗಿರಿ  ರವರು ಮರಳು ತುಂಬಿದ ಎರಡು ಟಿಪ್ಪರ್ ತಂದು ಒಂದು ವರದಿಯೊಂದಿಗೆ ಜಪ್ತಿಪಂಚನಾಮೆಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ 10/07/2018 ರಂದು 9-30 ಪಿಎಮ್ ಕ್ಕೆ ಶಖಾಪುರ ಕ್ರಾಸ್ ಹತ್ತಿರ ಇದ್ದಾಗ ಅದೇ ಸಮಯಕ್ಕೆ ಶಹಾಪೂರ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ್ ನಂಬರ್ ಕೆಎ-51 -4284 & ಟಿಪ್ಪರ್ ನಂ:ಕೆಎ-36 ಬಿ-5561 ನೇದ್ದರಲ್ಲಿ ತಲಾ ಅಂದಾಜು 10000/- ರೂ ಕಿಮ್ಮತ್ತಿನ 5 ಬ್ರಾಸ್ ಮರಳು ತುಂಬಿಕೊಂಡು ಬಂದಾಗ ಸದರಿ ಮರಳಿನ (ಉಸಿಕಿ) ನ ಬಗ್ಗೆ ಹಾಗು ಟಿಪ್ಪರ್ ಮಾಲೀಕನ ಬಗ್ಗೆ ಮತ್ತು ಸಕರ್ಾರಕ್ಕೆ ರಾಜಧನ(ರಾಯಲ್ಟಿ)ವನ್ನು ಕಟ್ಟಿದ ಬಗ್ಗೆ ಚಾಲಕರಿಗೆ ವಿಚಾರಿಸಲಾಗಿ ಅವರು ಸಕರ್ಾರಕ್ಕೆ ರಾಜಧನ(ರಾಯಲ್ಟಿ)ವನ್ನು ಕಟ್ಟಿರುವುದಿಲ್ಲ, ಸದರಿ ಮರಳನ್ನು ನಾವು ಮತ್ತು ನಮ್ಮ ವಾಹನದ ಮಾಲಿಕರು ಕೂಡಿ ಟಿಪ್ಪರನಲ್ಲಿ ಲೋಡ ಮಾಡಿಕೊಂಡು ಬಂದಿರುತ್ತೇವೆ ಅಂತ ಹೇಳಿದ್ದರಿಂದ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಕೈಕೊಂಡು ನಂತರ ಸದರಿ ಟಿಪ್ಪರಗಳನ್ನು ಭೀ.ಗುಡಿ ಪೊಲೀಸ್ ಠಾಣೆಗೆ ತೆಗೆದುಕೊಂಡು ನಡೆಯಿರಿ ಅಂತ ಚಾಲಕರಿಗೆ ಹೇಳಿದ ಕೂಡಲೇ ಟಿಪ್ಪರ ಚಾಲಕರು ಟಿಪ್ಪರಗಳನ್ನು ಸ್ಥಳದಲ್ಲಿಯೇ ಬಿಟ್ಟು ಕತ್ತಲಲ್ಲಿ ಓಡಿ ಹೋಗಿದ್ದು ಇರುತ್ತದೆ. ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದರಿಂದ ಭೀ.ಗುಡಿ ಠಾಣೆ ಗುನ್ನೆ ನಂ. 111/2018 ಕಲಂ 379 ಐಪಿಸಿ ಮತ್ತು 44(1) ಕೆಎಮ್.ಎಮ್.ಸಿ ರೂಲ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!