Yadgir District Reported Crimes Updated on 26-05-2018

By blogger on ಶನಿವಾರ, ಮೇ 26, 2018

                                     

                                          Yadgir District Reported Crimes

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 138/2018 ಕಲಂ 323, 324, 326 504, 506 ಸಂ 34 ಐಪಿಸಿ;- ದಿನಾಂಕ 25-05-2018 ರಂದು ಬೆಳಿಗ್ಗೆ 8-00 ಗಂಟೆಗೆ ಫಿರ್ಯಾಧಿದಾರನು ಮತ್ತು ಇತರರು ಕೂಡಿಕೊಂಡು ಹೊಲದಲ್ಲಿ ಮಣ್ಣಿನ ಒಡ್ಡ ಹಾಕಿದ್ದರ ಸಂಬಂಧ ನ್ಯಾಯ ಮಾಡಲು ಫಿರ್ಯಾಧಿ ಹೊಲಕ್ಕೆ ಹೋಗಿ ನೋಡುತ್ತಿರುವಾಗ ಆರೋಪಿತರಿಬ್ಬರೂ  ಕೂಡಿಕೊಂಡು ತಮ್ಮ ಕೈಯಲ್ಲಿ ಕೊಡಲಿ ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಬಂದು ಏ ಸೂಳೇ ಮಗನೇ ನಮ್ಮ ಹೊಲದಲ್ಲಿ ಹೆಚ್ಚಿಗೆ ಮಣ್ಣಿನ ಒಡ್ಡು ಹಾಕಿ ನಮ್ಮ ಹೊಲ ತೆಗೆದುಕೊಂಡು ಮತ್ತು ಈ ಹಿಂದೆ ನಿಮ್ಮ ಹೊಲದಲ್ಲಿಯ ಮಳೆ ನೀರು ನಮ್ಮ ಹೊಲದಲ್ಲಿ ಬಿಟ್ಟು ನಮ್ಮ ಹೊಲ ಹಾಳು ಮಾಡಿದ್ದಲ್ಲದೇ ಇವತ್ತು ಊರಿನ ಪ್ರಮುಖರನ್ನು ಕರೆದುಕೊಂಡು ಬಂದು ನನ್ನ ಮರ್ಯಾದೆ ಹಾಳು ಮಾಡುತ್ತಿದ್ದಿ ಇವತ್ತು ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಫಿರ್ಯಾಧಿಗೆ ಅವಾಚ್ಯವಾಗಿ ಬೈದು, ಜೀವದ ಭಯ ಹಾಕಿ ತನ್ನ ಕೈಯಲ್ಲಿ ಕೊಡಲಿಯಿಂದ ಫಿರ್ಯಾಧಿ ಎಡಗೈಗೆ ಹೊಡೆದು ಭಾರಿ ರಕ್ತಗಾಯ ಮಾಡಿ, ತುಂಬ್ರಾಣಿಯಿಂದ ಬೆನ್ನಿಗೆ, ಹೊಟ್ಟೆಗೆ ಹೊಡೆದು ಗುಪ್ತಗಾಯ ಮಾಡಿದ್ದು, ಮತ್ತು ಬಡಿಗೆಯಿಂದ ಬೆನ್ನಿಗೆ ಮತ್ತು ಎರಡು ಕಾಲುಗಳಿಗೆ ಹೊಡೆದು ಗುಪ್ತಗಾಯ ಮಾಡಿದ ಬಗ್ಗೆ.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 213/2018 ಕಲಂ 379 ಐಪಿಸಿ;-ದಿನಾಂಕ 25.05.2018 ರಂದು ಸಮಯ ಬೆಳಿಗಿನ ಜಾವ 5-10  ಗಂಟೆಗೆ ಆರೋಪಿ ಎ-1 ಬಂಗಾರಪ್ಪ ಈತನು ಇತನ ಎ-2 ರಘುಪತಿ ಈತನು ಹೇಳಿದಂತೆ ಟಿಪ್ಪರ ನಂಬರ್ ಕೆಎ-01-ಎಜಿ-7187 ನೇದ್ದರಲ್ಲಿ ಗೌಡಗೇರಾ ಸಿಮಾಂತರದಲ್ಲಿ ಅಕ್ರಮವಾಗಿ ಕಳ್ಳತನಿಂದ ಮರಳನ್ನು ತುಂಬಿಕೊಂಡು ಗುರುಮಠಕಲ್ ಪಟ್ಟಣದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ ಬಂಗಾರಪ್ಪ ಈತನ ವಶದಲ್ಲಿದ್ದ ಒಂದು ಮರಳು ತುಂಬಿದ ಟಿಪ್ಪರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 213/2018 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 214/2018 ಕಲಂ 498(ಎ), 323, 324, 504, 506 ಐಪಿಸಿ;- ಆರೋಪಿತನು ಕಳೆದ 2-3 ವರ್ಷಗಳಿಂದ ಕುಡಿದು ಬಂದು ಫಿರ್ಯಾದಿದಾರಳಿಗೆ ಹೊಡೆ-ಬಡೆ ಮಾಡುವುದು ಬೈಯುತ್ತ ಮಾನಸಿಕವಾಗಿ ಮತ್ತು ದೈಹಿಕವಾಗಿ ನೀಡುತ್ತ ಬಂದಿದ್ದು ಇಂದು ದಿನಾಂಕ 25.05.2018 ರಂದು ಬೆಳಿಗ್ಗೆ 8-30 ಗಂಟೆಗೆ ಆರೋಪಿ ಕುಡಿದು ಬಂದು ಹಣ ಕೊಡು ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿದ್ದು ಅಲ್ಲದೇ ಕಟ್ಟಿಗೆಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 214/2018 ಕಲಂ: 498(ಎ), 323, 324, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 139/2018 ಕಲಂ. 323,354, 504,506,ಸಂಗಡ 34 ಐಪಿಸಿ;- ದಿನಾಂಕ: 24-05-2018 ರಂದು ಮದ್ಯಾಹ್ನ 03-30 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ನಮ್ಮ ಮನೆಯ ಹಿಂದೆ ಕಲ್ಲು ಒಡೆಯುವ ಸಪ್ಪಳ ಕೆಳಿತು ಆಗ ನಾನು ಯಾರು ಏನು ಮಾಡುತಿದ್ದಾರೆ ನೋಡೊಣ ಅಂತಾ ನಮ್ಮ ಮನೆಯ ಹಿಂದೆ ಬಂದು ನೋಡಲಾಗಿ ನಮ್ಮೂರಿನ ವಡ್ಡರ ಜನಾಂಗದ  1) ಚಂದಪ್ಪ ತಂದೆ ಹಣಮಂತ 2) ಚಂದಪ್ಪ ತಂದೆ ಸಾಯಿಬಣ್ಣ 3) ಚನ್ನಪ್ಪ ತಂದೆ ಹಣಮಂತ 4) ಯಲ್ಲಪ್ಪ ತಂದೆ ಹಣಮಂತ ಇವರೆಲ್ಲರು ಸೇರಿ ನಮ್ಮ ಮನೆಯ ಹಿಂದೆ ಕಲ್ಲನ್ನು ಒಡೆಯುತಿದ್ದರು ಆಗ ನಾನು ಅವರಲ್ಲಿಗೆ ಹೋಗಿ ಚಂದಪ್ಪ ತಂದೆ ಹಣಮಂತನಿಗೆ ಏ ಹಣಮಂತ ಇಲ್ಲಿ ಯಾಕೆ ಕಲ್ಲು ಒಡೆಯುತ್ತಿರಿ ಊರಿನ ಜನ ಕಲ್ಲು ಒಡೆಯಬೇಡ ಅಂತಾ ಹೇಳಿ ಬಂದ ಮಾಡಿಸಿದ್ದರಲ್ಲಾ ಮತ್ತೆ ಯಾಕೆ ಇಲ್ಲಿ ಕಲ್ಲು ಒಡೆಯುತಿದ್ದರಿ ಅಂತಾ ಕೆಳಿದೆನು ಅದಕ್ಕೆ ಆತನು ನಿಂದು ಏನು ಸುದ್ದಿಲೇ ಸುಳೆ ಮಗನೆ ಅಂದು ಕೈಯಿಂದ ಬೆನ್ನಿಗೆ ಕಪಾಳಕ್ಕೆ ಹೊಡೆದು ಇದು ನಿಮ್ಮ ಅಪ್ಪನದೆನಲೆ ಬಂಡೆ ಅಂತಾ ಏರು ಧ್ವನಿಯಲ್ಲಿ ಮಾತನಾಡಿದನು ಅದಕ್ಕೆ ನಾನು ನಮ್ಮದು ಅಲ್ಲಾ ನಿಮ್ಮದು ಅಲ್ಲಾ ಊರಿನವರ ಜಾಗ ಇದೆ ಇಲ್ಲಿ ಕಲ್ಲು ಒಡೆಯಬೇಡಿರಿ ಅಂತಾ ಹೇಳಿದೆನು ಅದಕ್ಕೆ ಅವರು ಏನಲೆ ಲಂಗಾ ಸೂಳೆ ಮಗನೆ ನಮ್ಮಲಿಗೆ ಬಂದು ಕಲ್ಲು ಒಡೆಯುವದನ್ನು ನಿಲ್ಲಿಸುತ್ತೆನಲೆ ಲಂಗಾ ಸೂಳೆ ಮಗನೆ ಅಂತಾ ಬೈದನು ಆಗ ನನಗೆ ಬೈಯುವದನ್ನು ಕೇಳಿ ನಮ್ಮ ಮನೆಯಿಂದ ನಮ್ಮ ತಂದೆ ತಾಯಿ ನನ್ನ ತಮ್ಮ ಮನೋಹರ  ಮತ್ತು ಆತನ ಹೆಂಡತಿ ಲಕ್ಷ್ಮಿ ಮತ್ತು ನನ್ನ ಹೆಂಡತಿ ಅನ್ನಪೂರ್ಣ ಎಲ್ಲರು ಬಂದು ಯಾಕ್ರಪ್ಪಾ ಇಲ್ಲಿ ಕಲ್ಲು ಒಡೆಯುವದು ಬಂದ ಮಾಡಿದರು ಕೂಡ ಯಾಕೆ ಕಲ್ಲು ಒಡೆಯುತಿದ್ದರಿ, ಇಲ್ಲಿ ಕಲ್ಲು ಒಡೆದರೆ ಸಣ್ಣ್ಣ ಮಕ್ಕಳು ತಿರುಗಾಡುತ್ತಾರೆ ಅವರಿಗೆ ಕಲ್ಲು ಬಡಿದು ಏನಾದರು ಅನಾಹುತ ಆಗಬಹುದು ಅದಕ್ಕೆ ಇಲ್ಲಿ ಕಲ್ಲು ಹೊಡೆಬೆಡಿರಿ ಅಂತಾ ಅಂದಾಗ ಚನ್ನಪ್ಪ ತಂದೆ ಹಣಮಂತ ಈತನು ಈ ಬಂಡೆ ನಿಮ್ಮ ಅಪ್ಪನದೆನಲೇ ಲಂಗಾ ಸೂಳೆರೆ ನಮಗೆ ನಿವು ಏನು ಕೇಳುತ್ತಿರಲೇ ಅಂತಾ ಅಂದು ಒಮ್ಮಲೆ ನನ್ನ ತಾಯಿ ಸೌಭಾಗ್ಯಮ್ಮಳಿಗೆ ಕೂದಲು ಹಿಡಿದು ಜಗ್ಗಿ ಕೇಳಗೆ ಬಿಳಿಸಿದನು ಆಗ ನನ್ನ ಹೆಂಡತಿ ಅನ್ನಪೂರ್ಣ ಅಡ್ಡ ಹೋದಾಗ ಯಲ್ಲಪ್ಪ ತಂದೆ ಹಣಮಂತ ಇತನು ನನ್ನ ಹೆಂಡತಿ ಸೀರೆ ಹಿಡಿದು ಏಳೆದು ಅವಮಾನ ಮಾಡಿದನು, ಆಗ ನನ್ನ ಹೆಂಡತಿಗೆ ಸೀರೆ ಹಿಡಿದು ಜಗ್ಗಾಡುವಾಗ ನನ್ನ ತಮ್ಮನ ಹೆಂಡತಿ ಲಕ್ಷ್ಮಿ ಈಕೆಯು ಯಾಕೆ ಸಿರೆ ಹಿಡಿದಿ ಬುಡು ಅಂತಾ ಅಂದಾಗ ಚಂದಪ್ಪ ತಂದೆ ಸಾಯಿಬಣ್ಣ ಇತನು ಆಕೆಗೆ ಕೈಯಿಂದ ಬೆನ್ನಿಗೆ ಹೊಡೆದನು ಆಗ ನಮ್ಮ ತಮ್ಮ ಅಡ್ಡ ಬಂದಾಗ ಆತನಿಗೆ ಕಾಲಿನಿಂದ ಒದ್ದನು ನಮ್ಮ ತಂದೆಗೆ ನಿನ್ನ ಮಕ್ಕಳಿಗೆ ಜಗಳಕ್ಕೆ ಬಿಟ್ಟೆನಲೇ ಸೂಳೆ ಮಗನೆ ಇನ್ನೊಂದು ಸಲ ನಮ್ಮ ಬಂಡೆಯ ಹತ್ತಿರ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕುತಿದ್ದರು ಆಗ  ಜಗಳವನ್ನು ನೋಡಿ 1) ಶಿವಪ್ಪ ತಂದೆ ಹಣಮಂತ 2) ಹಣಮಂತ ತಂದೆ ರಾಜಪ್ಪ  ಸೇರಿ ಜಗಳ ಬಿಡಿಸಿದರು ಇಲ್ಲದಿದ್ದರೆ ನಮಗೆ ಇನ್ನು ಹೊಡೆ ಬಡೆ ಮಾಡುತಿದ್ದರು ಜಗಳ ಆದ ಬಗ್ಗೆ ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ ನಮಗೆ ಜಗಳದಲ್ಲಿ ಯಾವುದೆ ಗಾಯಗಳು ಆಗಿರದ ಕಾರಣ ಆಸ್ಪತ್ರೆಗೆ ಹೋಗುವದಿಲ್ಲ ನಮಗೆ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ  

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 140/2018 ಕಲಂ:143.147.148.323.324.504.506.ಸಂ149 ಐ. ಪಿ. ಸಿ.;- ದಿನಾಂಕ 25-05-2018 ರಂದು 2-15 ಪಿ ಎಂ ಕ್ಕೆ ಪಿಯರ್ಾದಿ ಶ್ರೀ ಚಂದಪ್ಪ ತಂದೆ ಹಣಮಂತ ವಡ್ಡರ ವಯಾ|| 22 ವರ್ಷ ಜಾ|| ವಡ್ಡರ ಉ|| ಕೂಲಿ (ಜಾತಿ ದಂದೆ) ಸಾ|| ನಾಗರಬಂಡಿ ತಾ|| ಜಿಲ್ಲಾ|| ಯಾದಗಿರಿ ಇವರು ಒಂದು ಗಣಕೀಕೃತ ಪಿಯರ್ಾದಿ ಅಜರ್ಿಯನ್ನು ತಂದು ಹಾಜರ ಮಾಡಿದ್ದು ಅದರ ಸಾರಾಂಶವೇನಂದರೆ. ನಮ್ಮೂರ ಸೀಮಾಂತರದಲ್ಲಿ ಮೊಹ್ಮದ ಅಲಿ ಇವರ ಹೊಲದ ಹತ್ತಿರ ಇರುವ ಸರಕಾರಿ ಜಾಗೆಯಲ್ಲಿ ಒಂದು ಕಲ್ಲು ಬಂಡೆ ಇದ್ದು ಅದರಲ್ಲಿ ನಾವು ಕಲ್ಲುಗಳನ್ನು ಹೊಡೆದುಕೊಂಡು ಜೀವನವನ್ನು ಸಾಗಿಸುತ್ತೇವೆ.ಅದರಂತೆ ನಾನು ನಿನ್ನೆ ದಿನಾಂಕ 24-05-2018 ರಂದು ಬೆಳೆಗ್ಗೆ ಹೋಗಿ ಕಲ್ಲುಗಳನ್ನು ಹೊಡೆಯುತ್ತಿದ್ದೆ. ನಿನ್ನೆ ಮದ್ಯಾನ 3 ಗಂಟೆಯ ಸುಮಾರಿಗೆ ನಾನು ಕಲ್ಲು ಹೊಡೆಯುವ ಕಾಲಕ್ಕೆ ನಮ್ಮೂರ ಬೇಢರ ಜನಾಂಗದವರಾದ 1) ಮನೋಹರ ತಂದೆ ಭೀಮರಾಯ ಬೇಡರ 2) ಅಂಬ್ರೇಶ ತಂದೆ ಭೀಮರಾಯ ಬೇಡರ 3) ರಾಜಪ್ಪ ತಂದೆ ಬೀಮರಾಯ ಬೇಡರ 4) ಭೀಮರಾಯ ತಂದೆ ತಿಮ್ಮಯ್ಯಾ ಬೇಡರ 5) ಲಕ್ಷ್ಮಿ ಗಂಡ ಮನೊಹರ ಬೇಡರ 6) ಸೌಬಾಗ್ಯ ಗಂಡ ಭೀಮರಾಯ ಬೇಢರ 7) ರಂಗಮ್ಮ ಗಂಡ ರಾಜಪ್ಪ ಬೇಡರ 8) ಬೀಮರಾಯ ತಂದೆ ಬಸವರಾಜ ಬೇಡರ ಸಾ|| ನಾಗರಬಂಡಿ ಇವರು ಎಲ್ಲಾರು ಕೂಡಿಕೊಂಡು ಕೈಯಲ್ಲಿ ಕೊಡಲು ಬಡಿಗೆಗಳನ್ನು ಕಲ್ಲುಗಳನ್ನು ಹಿಡಿದುಕೊಂಡು ಬಂದವರೆ. ನನ್ನನ್ನು ಉದ್ದೇಶಿಸಿ ಏ ಬೋಸಡಿ ಮಗನೆ ನೀನು ನಮ್ಮ ಗಾಡಿಗೆ ಕಲ್ಲು ಯಾಕ ಕೊಡದಿಲ್ಲಾ ವಡ್ಡರ ಸೂಳಿ ಮಗನ್ಯ ನಿನ್ನ ಸೊಕ್ಕು ಜಾಸ್ತಿಯಾಗಿದೆ.ರಂಡಿ ಮಗನೆ ನಿನಗೆ ಇವತ್ತ ಉಳಿಸುವದಿಲ್ಲಾ. ಮಗನೆ ಅಂದವರೆ ಅವರಲ್ಲಿ ಮನೊಹರ ಇವರು ತನ್ನ ಕೈಯಲ್ಲಿ ಇದ್ದ ಕೊಡಲಿಯಿಂದ ಎಡಗೈ ಮಣಿಕಟ್ಟಿನ ಕೆಳಗೆ ಹೊಡೆದು ರಕ್ತಗಾಯ ಮಾಡಿದನು.ಅಂಬ್ರೇಶ ಇವನು ತನ್ನ ಕೈಯಲ್ಲಿ ಇದ್ದ ಕಲ್ಲಿನಿಂದ ಎಡಗಾಲಿನ ಹೆಬ್ಬೆರಳ ಹಿಂದೆ ಹೊಡೆಎದು ರಕ್ತಗಾಯ ಮಾಡಿದನು.ರಾಜಪ್ಪ ಇವನು ತನ್ನ ಕೈಯಲ್ಲಿ ಇದ್ದ ಕಲ್ಲಿನಿಂದ ಎಡಗೈ ಮೊಣಕೈ ಹತ್ತಿರ ಹೊಡೆದು ರಕ್ತಗಾಯ ಮಾಡಿದನು. ಭೀಮರಾಯ ಇವನು ತನ್ನ ಕೈಯಲ್ಲಿ ಇದ್ದ ಬಡಿಗೆಯಿಂದ ಎಡಗಡೆ ಪಕ್ಕೆಗೆ ಹೊಡೆದು ಗುಪ್ತಗಾಯ ಮಾಡಿದನು. ಮತ್ತು ಲಕ್ಷ್ಮಿ.ಸೌಬಾಗ್ಯ.ರಂಗಮ್ಮ.ಭೀಮರಾಯ ತಂದೆ ಬಸವರಾಜ ಇವರು ತಮ್ಮ ಕೈಯಿಂದ ಬೆನ್ನಿಗೆ ಕಪಾಳಕ್ಕೆ ಹೊಡೆದು ಗುಪ್ತಗಾಯಗಳು ಮಾಡಿದರು. ಆಗ ನಾನು ಚಿರಾಡುವ ಕಾಲಕ್ಕೆ ನಮ್ಮೂರ 1) ಚಂದಪ್ಪ ತಂದೆ ಸಾಬಣ್ಣ. 2) ಹಣಮಂತ ತಂದೆ ರಾಜಪ್ಪ. 3) ನಾಗಪ್ಪ ತಂದೆ ಸಾಬಣ್ಣ 4) ಮೋನಪ್ಪ ತಂದೆ ಶಿವಪ್ಪ ಇವರು ಬಂದು ಜಗಳ ನೋಡಿ ಬಿಡಿಸಿಕೊಂಡರು. ಮತ್ತು ಮೊನಹರನು ಎರಡು ಎಕ್ಕರೆ ಹೊಲ ಹೋಗಲಿ ನೋಡಿಬಿಡುತ್ತೇನೆ. ನಾನು ನಂತರ ಮನೆಗೆ ಹೋಗಿ ಮನೆಯಲ್ಲಿ ಈ ವಿಷಯವನ್ನು ತಿಳಿಸಿದೆನು.ಮತ್ತೆ ನಮಗೆ ಮನಗೆ ಬಂದು ರಾತ್ರಿ ಹೆದರಿಸಿದರು ಕಾರಣ ತಡವಾಗಿ ಬಂದಿದ್ದು. ಕಾರಣ ನನಗೆ ಹೊಡೆ ಬಡೆ ಮಾಡಿದವರ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 140/2018 ಕಲಂ 143.147.148.323.324.504.506.ಸಂ149 ಐ. ಪಿ. ಸಿ.ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.            
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 149/2018 ಕಲಂ.143 147 341 323 354 504 506 ಸಂ.149 ಐಪಿಸಿ;- ದಿನಾಂಕ:24/05/2018 ರಂದು ಸಾಯಂಕಾಲ 6.30 ಗಂಟೆಯ ಸುಮಾರಿಗೆ ಪಿಯರ್ಾದಿ ಮನೆಯ ಮುಂದೆ ಕಟ್ಟಿದ ಆಡಿನ ತಪ್ಪಲವನ್ನು ಬಸಪ್ಪ ತಳಗೇರಿ ಇವರ ಆಡು ತಿನ್ನುವಾಗ ಪಿಯರ್ಾದಿ ಹೆಂಡತಿ ಹೋಗಿ ಹೊಡೆದಿದ್ದಕ್ಕೆ, ಬಸಪ್ಪ ತಳಗೇರಿ ಪಿಯರ್ಾದಿ ಹೆಂಡತಿಯೊಂದಿಗೆ ತಕರಾರು ಮಾಡುವಾಗ, ಪಿಯರ್ಾದಿ ಯಾಕೆ ಅಂತಾ ಕೇಳಲು ಹೋದರೇ ಆರೋಪಿತರು ರೋಡಿನ ಮೇಲೆ ಹೋಗುವರೊಂದಿಗೆ ಯಾಕೆ ಜಗಳ ಮಾಡುತ್ತಿ ಎಂದು ಅಕ್ರಮ ಕೂಟ ಕಟ್ಟಿಕೊಂಡು ಬಂದು ಪಿಯರ್ಾದಿಗೆ ತಡೆದು ನಿಲ್ಲಿಸಿ ಕೈಯಿಂದಾ ಹೊಡೆಬಡೆ ಮಾಡುವಾಗ ಪಿಯರ್ಾದಿ ನಡುವೆ ಬಿಡಿಸಲು ಬಂದರೇ ಪಿಯರ್ಾದಿಗೆ ತೆಲೆಯಲ್ಲಿ ಕೂದಲು ಹಿಡಿದು ಎಳದಾಡಿ ಕೈಯಿಂದಾ ಹೊಡೆಬಡೆ ಮಾಡಿ ಕಾಲಿನಂದಾ ಒದ್ದು ಅವಾಚ್ಯ ಶಬ್ದಗಳಿಂದಾ ಬೈದು ಜೀವದ ಬೆದರಿಕೆಯನ್ನು ಹಾಕಿರುತ್ತಾರೆ  ಅಂತಾ ಇತ್ಯಾದಿ ಹೇಳಿಕೆ ದೂರಿನ ಮೇಲಿಂದಾ  ಕ್ರಮ ಜರುಗಿಸಲಾಗಿದೆ.   

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 302/2018 ಕಲಂ 457, 380 ಐಪಿಸಿ;- ದಿನಾಂಕ: 25/05/2018 ರಂದು ಬೆಳಿಗ್ಗೆ 7.00 ಎ.ಎಂ.ಕ್ಕೆ ಶ್ರೀ ನಿಂಗಪ್ಪ ತಂ/ ನಾಗೇಂದ್ರಪ್ಪ ವಗ್ಗನವರ ಸಾ|| ತಿಪ್ಪನಳ್ಳಿ ತಾ|| ಶಹಾಪುರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಕೊಟ್ಟಿದರ ಸಾರಾಂಶವೇನೆಂದರೆ, ಫಿಯರ್ಾದಿಗೆ 30 ಲಕ್ಷ ರೂಪಾಯಿ ಸಾಲ ಇದ್ದುದರಿಂದ ಸಾಲ ತೀರಿಸಲು ಊರಲ್ಲಿರುವ ಒಂದು ಮನೆ ಮತ್ತು 6 ಫ್ಲಾಟ್ಗಳನ್ನು ತನ್ನ ಅಣ್ಣನ ಮಗನಿಗೆ  26,50,000=00 ರೂಪಾಯಿಗೆ ಮಾರಾಟ ಮಾಡಿ ತಾನು ತಿಪ್ಪನಳ್ಳಿ-ಕನ್ಯಾಕೊಳ್ಳೂರ ರೋಡಿನ ಪಕ್ಕದಲ್ಲಿರುವ ತಮ್ಮ ಹೊಲದಲ್ಲಿನ ಟೀನ್ ಶೆಡ್ಡಿನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದನು ಮನೆ ಮತ್ತು ಫ್ಲಾಟ ಮಾರಾಟ ಮಾಡಿದ 26,50,000=00 ರೂ ಮತ್ತು ಪ್ರಸಕ್ತ ಸಾಲಿನಲ್ಲಿ ಬೆಳೆದ ಮೆಣಸಿನಕಾಯಿ ಮತ್ತು ತೊಗರಿ ಮಾರಾಟದಿಂದ ಬಂದ ಒಟ್ಟು 3,40,000=00 ರೂಪಾಯಿ ಹೀಗೆ ಒಟ್ಟು 29,90,000=00 ರೂಪಾಯಿ ನೇದ್ದವುಗಳನ್ನು ಜಮಾಯಿಸಿ ಇಂದು ಸಾಲ ಕಟ್ಟಿದರಾಯಿತು ಅಂತಾ ಎರಡು ಟ್ರಂಕನಲ್ಲಿ ತಲಾ 10 ಲಕ್ಷ ರೂಪಾಯಿ ಮತ್ತು ಒಂದು ಸೂಟಕೇಸನಲ್ಲಿ 9,90,000=00 ರೂಪಾಯಿ ಹಾಗೂ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ತಲಾ 6 ಗ್ರಾಮನ 4 ಬಂಗಾರದ ಬೋರಮಳ ಸರಗಳನ್ನು ಹಾಕಿ ಸೂಟ್ಕೇಸನಲ್ಲಿ ಇಟ್ಟು ದೇವರ ಕೋಣೆಯಲ್ಲಿಟ್ಟಿದ್ದಾಗ ದಿನಾಂಕ: 24/05/2018 ರಂದು ರಾತ್ರಿ 11.00 ಪಿ.ಎಂ.ಕ್ಕೆ ಫಿಯರ್ಾದಿ ಮತ್ತು ಸಂಬಂಧಿಗಳು ಮಲಗಿದ್ದು, ದಿನಾಂಕ: 25/05/2018 ರಂದು 3.30 ಎ.ಎಂ.ಕ್ಕೆ ಫಿಯರ್ಾದಿ ಮೂತ್ರ ವಿಸರ್ಜನೆಗಾಗಿ ಮನೆಯ ಹಿಂದೆ ಹೋಗಿದ್ದಾಗ ಟೀನ್ ಕಟ್ ಮಾಡಿದ್ದನ್ನು ನೋಡಿ ಮನೆಯೊಳಗೆ ಹೋಗಿ ನೋಡಿದಾಗ ಹಣ ಮತ್ತು ಬಂಗಾರ ಇಟ್ಟ ಟ್ರಂಕ್ಗಳು ಮತ್ತು ಸೂಟ್ಕೇಸ ಅಲ್ಲಿ ಇರಲಿಲ್ಲ. 
        ಕಾರಣ ದಿ:24/05/2018 ರಂದು ರಾತ್ರಿ 11.00 ಪಿ.ಎಂ. ದಿಂದ ದಿನಾಂಕ: 25/05/2018 ರಂದು ಬೆಳಗಿನ ಜಾವ 3.30 ಎ.ಎಂ. ಅವಧಿಯಲ್ಲಿ ಯಾರೋ ಕಳ್ಳರು ನಗದು ಹಣ ಮತ್ತು ಬಂಗಾರದ ಆಭರಣ ಒಟ್ಟು 30,40,000=00 ರೂ ನೇದ್ದವುಗಳು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 302/2018 ಕಲಂ 457, 380 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 303/2018 ಕಲಂ 143, 147, 323, 324, 354, 504, 506 ಸಂ 149 ಐ.ಪಿ.ಸಿ ;- ದಿನಾಂಕ 25/05/2018 ರಂದು ಸಾಯಂಕಾಲ 19-00 ಗಂಟೆಗೆ ಫಿರ್ಯಾಧಿ ಶ್ರೀ ಬಸವರಾಜ ತಂದೆ ನೀಲಕಂಠರಾಯಗೌಡ ಅರಕೇರಿ ವಯ 45 ವರ್ಷ ಜಾತಿ ಲಿಂಗಾಯತ ಉಃ ಒಕ್ಕಲುತನ ಸಾಃ ರಸ್ತಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ,  ಇಂದು ದಿನಾಂಕ 25/05/2018 ರಂದು ಮುಂಜಾನೆ 11-00 ಗಂಟೆಗೆ ಫಿರ್ಯಾಧಿ ಮತ್ತು ಫಿರ್ಯಾದಿಯ ಹೆಂಡತಿ ವಿಜಯಲಕ್ಷ್ಮೀ ಇಬ್ಬರೂ ಕೂಡಿ ಮನೆಯ ಹಂಚಿಕೆಯ ಸಂಬಂಧ ತನ್ನ ಅಣ್ಣ-ತಮ್ಮಂದಿರರಾದ 1] ಶರಬಣ್ಣ   2] ತಿಪ್ಪರೆಡ್ಡಿ  3] ಶರಣಗೌಡ  ಇವರಿಗೆ ಮನೆಗೆ ಕರೆಯಿಸಿದ್ದು, ಇವರ ಜೊತೆಯಲಿ ತನ್ನ ಅಣ್ಣ ರಾಯರೆಡ್ಡಿ ಮಗನಾದ 4] ಸುಭಾಷ  ಮತ್ತು  ತಿಪ್ಪರೆಡ್ಡಿಯ ಹೆಂಡತಿ 5] ಮಹಾದೇವಮ್ಮ ಇವರು ಬಂದಿದ್ದರು. ಮತ್ತು  ಗ್ರಾಮದ ಶಂಬಣ್ಣಗೌಡ ತಂದೆ ಚನ್ನಬಸಪ್ಪಗೌಡ ಮಾಲಿ ಪಾಟೀಲ, ತನ್ನ ಚಿಕ್ಕಪ್ಪನಾದ ಭಗವಂತ್ರಾಯಗೌಡ ತಂದೆ ಬಸಪ್ಪಗೌಡ ಇವರ ಸಮ್ಮುಖದಲ್ಲಿ ನ್ಯಾಯ ಪಂಚಾಯತಿ ನಡೆದಿದ್ದು, ಆಗ ಮೇಲೆ ಹೇಳಿದ ಫಿರ್ಯಾಧಿಯ ಅಣ್ಣ-ತಮ್ಮಂದಿರರು, ಹೊಲ ಹಂಚಿಕೆ ಮಾಡುವ ಸಮಯದಲ್ಲಿ ನೀನು ಕೇಳಿದ ಹೊಲವನ್ನು ಕೊಟ್ಟಿರುತೆವೆ ಸದ್ಯ ನಿನಗೆ ಮನೆಯಲ್ಲಿ ಪಾಲು ಕೊಡುವದಿಲ್ಲ ಅಂತ ಅಂದಾಗ ಫಿರ್ಯಾದಿಗೂ ಮತ್ತು ತನ್ನ ಅಣ್ಣ ತಮ್ಮಂದಿರ ಮದ್ಯ ಬಾಯಿ ಮಾತಿನ ತಕರಾರು ನಡೆದಾಗ ಫಿರ್ಯಾದಿಗೆ ಶರಬಣ್ಣ ಈತನು ಏ  ಬೋಸ್ಡಿ ಮಗನೇ ಪಾಲ ಕೊಡುವುದಿಲ್ಲ ನೋಡು ಎನ್ ಬೇಕಾದ್ದು ಮಾಡ್ಕೋ ಅಂತ ಅವಾಚ್ಯವಾಗಿ ಬೈದು ಕೈಯಿಂದ ಬೆನ್ನಿಗೆ, ಕಪಾಳಕ್ಕೆ, ಹೊಡೆಯುತಿದ್ದಾಗ ತಿಪ್ಪರೆಡ್ಡಿ ಈತನು ಅಂಗಳದಲ್ಲಿದ್ದ ಒಂದು  ಹಿಡಿಗಾತ್ರದ ಕಲ್ಲಿನಿಂದ ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ. ಫಿರ್ಯಾದಿಯ  ಹೆಂಡತಿ ಜಗಳ ಬಿಡಿಸಲು ಹೋದಾಗ  ಶರಣಗೌಡ ಮತ್ತು ಅಣ್ಣನ ಮಗ  ಸುಭಾಷ ಇಬ್ಬರೂ ಕೂಡಿ ಏ ರಂಡಿ ನಿನ್ನದೆ ಬಹಳ ಆಗಿದೆ ಅಂತ  ಬೈದು ಶರಣಗೌಡ  ಈತನು ತಲೆಯ ಕೂದಲು ಹಿಡಿದು ಜಗ್ಗಾಡಿ ಕೈಯಿಂದ ಹೊಡೆದಿರುತ್ತಾನೆ.  ಸುಭಾಷ ಈತನು  ಬಡಿಗೆಯಿಂದ ಹೊಡೆದಿರತ್ತಾನೆ ಮತ್ತು ಮಹಾದೇವಮ್ಮ ಇವಳು ಕೈಯಿಂದ ಹೊಡೆದಿದ್ದು ಇನ್ನೊಂದು ಸಲ ಆಸ್ತಿಯ ಸಂಬಂಧ ತಂಟೆಗೆ ಬಂದರೆ ಖಲಾಸ ಮಾಡುತ್ತೆವೆ ಅಂತ ಜೀವ ಬೆದರಿಕೆ ಹಾಕಿರುತ್ತಾರೆ ಸದರಿಯವರ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 303/2018 ಕಲಂ 143 147 323 324 354 504 506 ಸಂ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.   

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 304/2018 ಕಲಂ 323.342354.504.506 ಸಂ 34 ಐಪಿ,ಸಿ;- ದಿನಾಂಕ:25/05/2018 ರಂದು ರಾತ್ರಿ 21-00 ಪಿ,ಎಂ ಕ್ಕೆ ಪಿಯರ್ಾದಿ ಶ್ರೀ ಮತಿ ಸುರೇಖಾ ಗಂಡ ನಂದಕುಮಾರ ಯಲಗೋಡ ವ|| 42 ಜಾ|| ಕಬ್ಬಲಿಗ ಉ|| ಮನೇಕೆಲಸ ಸಾ|| ದಿಗ್ಗಿಬೇಸ್ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕ ಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 25/05/2018 ರಂದು ಮದ್ಯಾಹ್ನ 4-00 ಗಂಟೆಗೆ ನಾನು ಮತ್ತು ನನ್ನ ತಾಯಿ ಕಮಲಾ ಇಬ್ಬರು ಮನೆಯಲ್ಲಿ ಇದ್ದಾಗ ನನ್ನ ತಮ್ಮ ನಾಗರಾಜ ಮತ್ತು ಆತನ ಗೇಳೆಯನಾದ ಆರಿಫ್ ಸಾ|| ಕಲಬುರಗಿ ಇಬ್ಬರು ಕೂಡಿ ನಮ್ಮ ಮನೆಯ ಮುಂದೆ ಬಂದವರೆ ಅವರಲ್ಲಿ ನನ್ನ ತಮ್ಮ ನಾಗರಾಜನು ಎಲೆ ರಾಮ್ಯಾ ಸೂಳಿಮಗನೆ ಹೋಲದಲ್ಲಿ ಮತ್ತು ಮನೆಯಲ್ಲಿ ಪಾಲು ಕೋಡು ನನಗೆ ಕಚರ್ಿಗೆ ಹಣ ಕೋಡು ಅಂತ ಅನ್ನುತ್ತಿದ್ದಾಗ ಸಪ್ಪಳ ಕೇಳಿ ಮನೆಯಲ್ಲಿ ಇದ್ದ ನಾನು ಮತ್ತು ನನ್ನ ತಾಯಿ ಕಮಲಾ ಇಬ್ಬರು ಹೊರಗಡೆ ಬಂದು ನೋಡಿ ಆಗ ನನ್ನ ತಾಯಿ ನಿಮ್ಮ ತಂದೆ ಹೋರಗಡೆ ಹೋಗಿದ್ದಾರೆ ಬಂದ ನಂತರ ಮಾತನಾಡಿದರಾಯಿತು ಅಂತ ಅಂದಾಗ ನನ್ನ ತಮ್ಮ ನಾಗರಾಜನು ನಿವು ಎಲ್ಲರು ಸೇರಿ ನನಗೆ ಆಸ್ತಿಯಲ್ಲಿ ಪಾಲು ಕೋಡುತ್ತಿಲ್ಲಾ ಅಂತ ಅಂದವನೆ ತನ್ನ ಕೈಯಿಂದ ನನ್ನ ತಾಯಿಗೆ ಎದೆಗೆ, ಬೆನ್ನಿಗೆ ಹೋಡೆದು ಗುಪ್ತಗಾಯ ಮಾಡಿದನು, ಆರೀಪ್ನು ಇವರೆಲ್ಲ ಸೂಳಿಮಕ್ಕಳದು ಬಹಳವಾಗಿದೆ ಅಂತ ಅಂದವನೆ ನನ್ನ ತಾಯಿ ಕಮಲಾಗೆ ಹೊಟ್ಟೆಗೆ ಬೆನ್ನಿಗೆ ಹೋಡೆದು ಗುಪ್ತಗಾಯ ಮಾಡಿದನು. ಆಗ ನಾನು ನನ್ನ ತಾಯಿಗೆ ಹೋಡೆಯುವದನ್ನು ನೋಡಿ ಬಿಡಿಸಿಕೊಳ್ಳಲು ಹೋದಾಗ ನನ್ನ ತಮ್ಮ ನಾಗರಾಜನು ತನ್ನ ಕೈಯಿಂದ ನನಗೆ ಎದೆಗೆ ಹೋಡೆದು ಗುಪ್ತಗಾಯ ಮಾಡಿದನು. ಆರಿಫ್ನು ನನಗೆ ಬೆನ್ನಿಗೆ, ಹೋಟ್ಟೆಗೆ, ಹೋಡೆದು ಗುಪ್ತಗಾಯ ಮಾಡಿದನು. ನಾಗರಾಜ ಮತ್ತು ಆರೀಫ್ ಇಬ್ಬರು ಇವರದು ಬಹಳವಾಗಿದೆ ಆಸ್ತಿಯಲ್ಲಿ ಪಾಲುಕೋಡಲಿಲ್ಲಾ ಅಂದರೆ ನಿಮಗೆ ಜೀವಸಹಿತ ಬಿಡುವದಿಲ್ಲಾ ಅಂತ ಜೀವದ ಭಯ ಹಾಕಿದರು, ನಾಗರಾಜ ಮತ್ತು ಆರೀಫ್ ಇಬ್ಬರು ಕೂಡಿ ನನಗೆ ಮತ್ತು ನನ್ನ ತಾಯಿ ಕಮಲಾಗೆ ನಮ್ಮ ಮನೆಯಲ್ಲಿ ಕೂಡಿಹಾಕಿದರು, ಹೋರಗಡೆ ಹೋಗಿದ್ದ ನನ್ನ ತಂದೆಯಾದ ರಾಮಣ್ಣ ಮತ್ತು ಆತನ ಜೋತೆಯಲ್ಲಿ ನನ್ನ ಚಿಕ್ಕಪ್ಪನ ಮಗನಾದ ಸಾಬಣ್ಣ ತಂದೆ ವೇಂಕಟೇಶ ಸಾ|| ದೋರನಳ್ಳಿ ಇವರು ಬಂದು ನೋಡಿ. ಆಗ ನನ್ನ ತಂದೆಯಾದ ರಾಮಣ್ಣನು ಯಾಕೊ ನಾಗರಾಜ ಈ ರೀತಿ ಜಗಳ ಮಾಡುವದು ಸರಿ ಇಲ್ಲಾ ನಿನಗೆ ಆಸ್ತಿಯಲ್ಲಿ ಪಾಲುಬೆಕಾದರೆ ತೆಗೆದುಕೊ ಜಗಳಮಾಡುವದು ಸರಿ ಇಲ್ಲಾ ಅಂತ ಹೇಳಿದ್ದರಿಂದ ನನ್ನ ತಮ್ಮ ನಾಗರಾಜನು ನಾಳೆ ಬರುತ್ತೆನೆ ಅಂತ ಹೇಳಿ ಇಬ್ಬರು ಹೋದರು. ಆಗ ನನ್ನ ತಂದೆ ರಾಮಣ್ಣ ಮತ್ತು ನನ್ನ ಚಿಕ್ಕಪ್ಪನ ಮಗ ಸಾಬಣ್ಣ ಇಬ್ಬರು ಮನೆಯ ಬಾಗಿಲು ಕೊಂಡಿ ತೆಗೆದು ನಾವು ಹೊರಗಡೆ ಬಂದ ನಂತರ ಸದರಿ ಘಟನೆಯ ವಿಷಯ ತಿಳಿಸಿದೆವು. ನಮಗೆ ಗುಪ್ತ ಪೆಟ್ಟು ಆಗಿದ್ದರಿಂದ ಆಸ್ಪತ್ರೆಗೆ ಕಳಿಸಲು ಹಾಗು ನಮಗೆ ಹೋಡೆಬಡೆ ಮಾಡಿ ನಮ್ಮ ಮನೆಯಲ್ಲಿ ನಮಗೆ ಕೂಡಿಹಾಕಿ ಜೀವ ಬೆದರಿಕೆ ಹಾಕಿದ ನನ್ನ ತಮ್ಮ ನಾಗರಾಜ ಮತ್ತು ಆತನ ಗೇಳೆಯನಾದ ಆರೀಫ್ನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಅಜರ್ಿ ಸಲ್ಲಿಸಿದ್ದು ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 304/2018 ಕಲಂ: 323.342.354.504.506 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!