Yadgir District Reported Crimes Updated on 13-03-2018

By blogger on ಮಂಗಳವಾರ, ಮಾರ್ಚ್ 13, 2018


                                          Yadgir District Reported Crimes
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 85/2018 ಕಲಂ 379  ಐ.ಪಿ.ಸಿ  ಮತ್ತು 44[1] ಕೆ.ಎಮ್.ಎಮ್.ಸಿ.ಆರ್;- ದಿನಾಂಕ 12/03/2018 ರಂದು  ಸಾಯಂಕಾಲ 16-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗಾರಜ ಜಿ. ಪಿ.ಐ ಶಹಾಪೂರ ಪೊಲೀಸ್ ಠಾಣೆ  ರವರು ಮರಳು ತುಂಬಿದ ಒಂದು ಟ್ಯಾಕ್ಟರ ವಾಹನದೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿಪಂಚನಾಮೆ, ಹಾಗೂ ಮುದ್ದೆಮಾಲು  ಟ್ಯಾಕ್ಟರ ವಾಹನ ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 12/03/2018 ರಂದು ಮದ್ಯಾಹ್ನ 12-10 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟುವ ಕಾಯರ್ಾಚರಣೆ ಕುರಿತು, ಸಿಬ್ಬಂದಿಯವರೊಂದಿಗೆ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಹೋಗಿ ಮದ್ಯಾಹ್ನ 14-00 ಗಂಟೆಗೆ ಯಾದಗಿರಿ- ದೋರನಳ್ಳಿ ರೋಡಿನ ಮೇಲೆ ದೋರನಳ್ಳಿ ಗ್ರಾಮದ ಟೋಕಾಪೂರ ಕ್ರಾಸ್ ಹತ್ತಿರ ನಿಂತಿದ್ದಾಗ ಅಕ್ರಮವಾಗಿ ಮರಳು ಲೋಡ ಮಾಡಿಕೊಂಡು ಬರುತಿದ್ದ ಟ್ಯಾಕ್ಟರ ನಂ ಕೆಎ-33-ಟಿಎ-3429 ಅಂ.ಕಿ 1 ಲಕ್ಷ ರೂಪಾಯಿ ಮತ್ತು ಟ್ಯಾಕ್ಟರ ಇಂಜಿನಿಗೆ  ಹೊಂದಿಕೊಂಡಿರುವ  ಟ್ರಾಲಿ ಚೆಸ್ಸಿ ನಂ 42/2014 ಅಂ.ಕಿ 50,000 ನೆದ್ದು, ಸದರಿ ಟ್ರಾಲಿಯಲ್ಲಿ ಅಂದಾಜು 1 ಬ್ರಾಸ್ ಮರಳು ಅಂ.ಕಿ 1500- ರೂ ಕಿಮ್ಮತ್ತಿನದು ಇದ್ದು ಚಾಲಕನಿಗೆ ಮರಳು ಸಾಗಾಣಿಕೆ ಮಾಡುತಿದ್ದ ಬಗ್ಗೆ ಪರವಾನಿಗೆ ಪತ್ರ ಹಾಜರ ಪಡಿಸಲು ಹೇಳಿದ್ದು ಸಮರ್ಪಕವಾದ ಮಾಹಿತಿ ನೀಡಿರುವುದಿಲ್ಲ.  ಸದರಿ ಚಾಲಕ ಮತ್ತು ವಾಹನ ಮಾಲಿಕ ಇಬ್ಬರೂ ಸೇರಿ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಸಾಗಿಸುತಿದ್ದ ಬಗ್ಗೆ ದೃಡಪಟ್ಟಿದ್ದರಿಂದ ಸದರಿ ವಾಹನವನ್ನು ಮುಂಜಾನೆ 07-15 ಗಂಟೆಯಿಂದ 08-15 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡಿದ್ದು,  ಸದರಿಯವರ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 85/2018 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 86/2018.ಕಲಂ 279.338 ಐ.ಪಿ.ಸಿ.;- ದಿನಾಂಕ 12/03/2018 ರಂದು ರಾತ್ರಿ 20-00 ಪಿ.ಎಂ.ಕ್ಕೆ ಜಿ,ಜಿ,ಹೆಚ್, ಶಹಾಪೂರ ದಿಂದ ಎಂಎಲ್ ಸಿ ಇದೆ ಅಂತ ಬಾತ್ಮೀ ಬಂದ ಮೇರೆಗೆ ನಾನು ಮತ್ತು ಜೋತೆಯಲ್ಲಿ ಶರಣಪ್ಪ ಹೆಚ್,ಸಿ,164 ರವರನ್ನು ಕರೆದು ಕೊಂಡು ಆಸ್ಪತ್ರೆ ಬೇಟಿನಿಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಬಾಲಕ ಲಕ್ಮಣ್ಣನ ದೋಡ್ಡಪ್ಪನಾದ ಶ್ರೀ ದೇವಪ್ಪ ತಂದೆ ನಾಗಪ್ಪ ಚನ್ನಪಟ್ಟಣದೋರ ವ|| 30 ಜಾ|| ಬೇಡರ ಉ|| ಟಂಟಂ ಚಾಲಕ ಸಾ|| ಕೊಂಗಂಡಿ ತಾ|| ಶಹಾಪೂರ ಇವರಿಗೆ ವಿಚಾರಿಸಿ ಹೇಳಿಕೆಯನ್ನು ಪಡೆದು ಕೊಂಡು ಮರಳಿ ಠಾಣೆಗೆ 9-30 ಬಂದು ಸದರಿ ಹೇಳಿಕೆಯ ಸಾರಾಂಶವೆನೆಂದರೆ ಇಂದು ನನ್ನ ಗೇಳೆಯನಾದ ಕೃಷ್ಣಪ್ಪ ತಂದೆ ನಿಂಗಪ್ಪ ಸಾ|| ತಿಮ್ಮಪೂರ ಈತನ ಎಂಗೆಜ್ಮೆಂಟ್ ಕಾರ್ಯಕ್ರಮ ರಸ್ತಾಪೂರದಲ್ಲಿ ಇರುವದರಿಂದ ನಾನು ಮತ್ತು ನನ್ನ ಅಣ್ಣತಮಕಿಯ ಬಾಲಪ್ಪ ತಂದೆ ಭೀಮಶಪ್ಪ ಮತ್ತು ನನ್ನ ತಮ್ಮನ ಮಗನಾದ ಲಕ್ಮ್ಮಣ್ಣ ತಂದೆ ಭೀಮರಾಯನನ್ನು ಕರೆದು ಕೊಂಡು ಎಲ್ಲರು ಕೂಡಿಕೊಂಡು ದಿನಾಂಕ 12/03/2018 ರಂದು ಮದ್ಯಾಹ್ನ 13-00 ಗಂಟೆಯ ಸುಮಾರಿಗೆ ನಮ್ಮೂರಾದ ಕೊಂಗಂಡಿ ಗ್ರಾಮದಿಂದ ನನ್ನ ಟಂಟಂದಲ್ಲಿ ಕೂಳಿತು ಕೊಂಡು ರಸ್ತಾಪೂರ ಗ್ರಾಮಕ್ಕೆ ಕೃಷ್ಣನ ಎಂಗೆಜ್ಮೆಂಟ್ ಕಾರ್ಯಕ್ರಮಕ್ಕೆ ಬಂದು ಎಂಗೆಜ್ಮೆಂಟ್ನಲ್ಲಿ ಊಟಮಾಡಿ ನಾನು ಮತ್ತು ಬಾಲಪ್ಪ ನನ್ನ ತಮ್ಮನ ಮಗನಾದ ಲಕ್ಷ್ಮಣ್ಣ ಎಲ್ಲರು ಕುಡಿ ರಸ್ತಾಪೂರ ಕ್ರಾಸ್- ಸಗರ (ಬಿ) ಮುಕ್ಯರಸ್ತೆಯ ರಸ್ತಾಪೂರದ ಶಾರದಳ್ಳಿ ಕ್ರಾಸ ಹತ್ತಿರ 5-00 ಗಂಟೆಗೆ ಬಂದು ಸೈಡಿಗೆ ನಾನು ಮತ್ತು ಬಾಲಪ್ಪ ಮಾತನಾಡುತ್ತು ನಿಂತಾಗ ನಮ್ಮ ತಮ್ಮನ ಮಗನಾದ ಲಕ್ಮಣ್ಣನು ನಮ್ಮ ಮುಂದೆ ನಿಂತಿದ್ದನು ಆಗ ರಸ್ತಾಪೂರ ಕ್ರಾಸ್ ಕಡೆಯಿಂದ ಒಂದು ಮೋಟರ್ ಸೈಕಲ್ನ್ನು ಅತಿ ವೇಗ ಮತ್ತು ಅಲಕ್ಷತನ ದಿಂದ ಚಲಾಯಿಸಿ ಕೊಂಡು ಬಂದು ನನ್ನ ತಮ್ಮನ ಮಗನಾದ ಲಕ್ಮಣ್ಣನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ಲಕ್ಮಣ್ಣನು ರಸ್ತೆಯ ಮೇಲೆ ಬಿದ್ದನು ಸದರಿ ಅಪಘಾತದಲ್ಲಿ ಲಕ್ಮಮಣ್ಣನಿಗೆ ಎಡಗಡೆ ಹಣೆಗೆ ಮತ್ತು ತಲೆಗೆ ತಿವ್ರ ರಕ್ತಗಾಯ, ಎಡಗಡೆ ಜುಬ್ಬಕ್ಕೆ ರಕ್ತಗಾಯ, ಟೊಂಕಕ್ಕೆ ಗುಪ್ತಗಾಯ ವಾಗಿರುತ್ತದೆ, ಸದರಿ ಅಪಘಾತ ಮಾಡಿದ ಮೋಟರ್ ಸೈಕಲ್ ನೋಡಲಾಗಿ ಕೆಎ-33ವಿ-2239 ಇದ್ದು ಸದರಿ ಚಾಲಕನು ಅಲ್ಲೆ ತನ್ನ ಗಾಡಿಯ ಮುಂದೆ ನೀಂತಿದ್ದು ಅವನಿಗೆ ಹೆಸರು ವಿಚಾರಿಸಲಾಗಿ ತನ್ನ ಹೆಸರು ಬಸವರಾಜ ತಂದೆ ಅಂಬಣ್ಣ ಸಾ|| ಸಗರ (ಬಿ) ಅಂತ ತಿಳಿಸಿದನು. ಸದರಿ ಅಪಘಾತವು ಸಾಯಂಕಾಲ 5-00 ಗಂಟೆಗೆ ಜರುಗಿರುತ್ತದೆ. ನಂತರ ಲಕ್ಮಣ್ಣನಿಗೆ ಉಪಚಾರಕ್ಕಾಗಿ ನಾನು ಮತ್ತು ಬಾಲಪ್ಪ ಇಬ್ಬರು ಕೂಡಿಕೊಂಡು ನನ್ನ ಟಂಟಂದಲ್ಲಿ ಹಾಕಿಕೊಂಡು ಸರಕಾರಿ ಆಸಪತ್ರೆ ಶಹಾಪೂರದಲ್ಲಿ ಸೇರಿಕೆ ಮಾಡಿದ್ದು ನಾನು ನಮ್ಮ ತಮ್ಮನಾದ ಭೀಮರಾಯ ತಂದೆ ನಾಗಪ್ಪನಿಗೆ ಪೋನಮಾಡಿ ತಿಳಿಸಿದ್ದರಿಂದ ಅವರು ಆಸ್ಪತ್ರೆಗೆ ಬಂದು ನೋಡಿ ವಿಚಾರಿಸಿದ್ದು ಇರುತ್ತದೆ. ಅಂತ ಹೇಳಿ ಲ್ಯಾಪಟಾಪದಲ್ಲಿ ಟೈಪಮಾಡಿಸಿದ್ ಹೇಳಿಕೆ ನಿಜವಿದೆ. ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 86/2018 ಕಲಂ 279. 338. ಐ.ಪಿ.ಸಿ. ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 61/2018 ಕಲಂ:504, 506, ಐ.ಪಿ.ಸಿ ಮತ್ತು 3(1)(ಡಿ) () ಎಸ್.ಸಿ ಎಸ್.ಟಿ ಪಿಎ ಯಾಕ್ಟ 1989;- ದಿನಾಂಕ 12/03/2018 ರಂದು 13.00 ಗಂಟೆಗೆ ಠಾಣೆಗೆ ಶ್ರೀ ನಿಂಗಪ್ಪ ತಂದೆ ಶಿವಲಿಂಗಪ್ಪ ಹೊಸಮನಿ ವ|| 40 ಜಾ|| ಹಿಂದು ಹೊಲೆಯ ಉ|| ಒಕ್ಕಲುತನ ಸಾ|| ಯಕ್ತಾಪೂರ ತಾ|| ಸುರಪೂರ ಇವರು ಕೊಟ್ಟ ಫಿಯರ್ಾದಿ ಅಜರ್ಿ ಸಾರಂಶವೇನಂದರೆೆ  ಫಿಯರ್ಾದಿದಾರರು ದಿನಾಂಕ 10/03/2018 ರಂದು ರಾತ್ರಿ 9 ಗಂಟೆಯ ಸುಮಾರಿಗೆ ತಮ್ಮೂರ ಗುತ್ತಿಬಸವೇಶ್ವರ ಆಶ್ರಯ ಕಾಲೋನಿಯ ತಮ್ಮ ಮನೆಯ ಮುಂದೆ ನಿಂತಾಗ ನಮ್ಮೂರ ಕಬ್ಬಲಿಗ ಜನಾಂಗದ ಬಸವರಾಜ ತಂದೆ ಮಲ್ಲಪ್ಪ ಆಲಗೂರ ಈತನು  ತಮ್ಮ ಮನೆಯ ಮುಂದೆ ಬಂದು ಯಾರಿಗೋ ಅವಾಚ್ಯಾವಾಗಿ ಬೈಯುತ್ತಾ ನಿಂತಿದ್ದು ಆಗ ನಾನು ಯಾಕೇ ಸುಮ್ಮನೆ ನಮ್ಮ ಮನೆಯ ಮುಂದೆ ನಿಂತು ಬೈಯುತ್ತಿ ಹೋಗು ಅಂತ ಅಂದಾಗ ಸದರ ಬಸವರಾಜ ಆಲಗೂರ ಈತನು ಊರಲ್ಲಿ ಈ ಸೂಳೆ ಮಗನದು ಬಹಾಳ ಆಗಿದೆ ಅಂತ ನನಗೆ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನೇನು ಮಾಡಿದ್ದೇನೆ ಬಸವರಾಜ ನನಗೇಕೆ ಅವಾಚ್ಯವಾಗಿ ಬೈಯುತ್ತಿ ಅಂತ ನಾನು ಕೇಳಿದಾಗ ಸದರಿಯವನು ಏನಲೇ ಹೊಲೆ ಜಾತಿ ಸೂಳೆ ಮಗನೆ ನಿಂಗ್ಯಾ ಊರಲ್ಲಿ ನಿನ್ನ ಸೊಕ್ಕು ಬಹಾಳ ಆಗಿದೆ ಮಗನೇ 10 ಎಕರೆ ಹೊಲ ಹೋದರು ಸರಿ ನಿನಗೆ ಬಿಡುವದಿಲ್ಲ ಮಗನೆ ಅಂತ ಅನ್ನುತ್ತಾ ನನ್ನ ಮೈಮೇಲೆ ಬರುತ್ತಿದ್ದಾಗ ಅಲ್ಲಿಯೇ ಇದ್ದ ನಮ್ಮೂರ ಮಂಜುನಾಥ ತಂದೆ ಬೀಯಪ್ಪ ಹೊಸಮನಿ ಹಾಗು ಅರುಣಕುಮಾರ ತಂದೆ ಬಸಪ್ಪ ಮೇಲಿನಮನಿ ಇವರಿಬ್ಬರು ಬಂದು ಸದರಿಯವನಿಗೆ ಹೇಳಿ ಕಳುಹಿಸಿದರು. ಆಗ ಸದರ ಬಸವರಾಜ ಈತನು ಮಗನೇ ನಿಂಗ್ಯಾ ಇವತ್ತು ಇಷ್ಟಕ್ಕೆ ಬಿಟ್ಟಿದ್ದೇನೆ ಮುಂದೆ ನೋಡಿಕೊಳ್ಳುತ್ತೇನೆ ಅಂತ ಜೀವದ ಬೆದರಿಕೆ ಹಾಕಿ ಹೋದನು. ಈ ವಿಷಯವಾಗಿ ನಾನು ನಮ್ಮ ಸಮಾಜದವರಲ್ಲಿ ವಿಚಾರಿಸಿ ತಡವಾಗಿ ಬಂದು ಠಾಣೆಗೆ ಅಜರ್ಿ ನೀಡಿದ್ದು ಇರುತ್ತದೆ. ಅಂತ ಅಜರ್ಿ ಸಾರಾಂಶದ ಮೇಲಿಂದ ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ 61/2018 ಕಲಂ: 504, 506, ಐ.ಪಿ.ಸಿ  ಮತ್ತು 3(1)(ಆರ್) [ಎಸ್) ಎಸ್.ಸಿ ಎಸ್.ಟಿ ಪಿಎ ಯಾಕ್ಟ 1989 ನೇದ್ದರ ಪ್ರಕಾರ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 37/2018 ಕಲಂ, 32, 34 ಕೆ.ಇ ಆ್ಯಕ್ಟ್ ;- ದಿನಾಂಕ: 12/03/2018 ರಂದು 09:40 ಎಎಮ್ ಕ್ಕೆ ಶ್ರೀ ಕೃಷ್ಣ ಸುಬೇದಾರ ಪಿಎಸ್.ಐ ಗೋಗಿ ಪೊಲೀಸ ಠಾಣೆ ರವರು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶವೆನೆಂದರೆ, ನಡಿಹಾಳ ತಾಂಡಾದ ಬಸ್ ನಿಲ್ದಾಣ ಹತ್ತಿರ ರೋಡಿನ ಮೇಲೆ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ 07:30 ಎಎಂ ಕ್ಕೆ ಜೀಪಿನಿಂದ ಇಳಿದು ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿಯು ನಡಿಹಾಳ ತಾಂಡದ ಬಸ್ ನಿಲ್ದಾಣದ ಹತ್ತಿರ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು  ಕೊಂಡು  07-35 ಎಎಮ್ ಕ್ಕೆ ದಾಳಿ ಮಾಡಿ ಅನಧಿಕೃತವಾಗಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ನಾಮದೇವ ತಂದೆ ನಂದು ಚವ್ಹಾಣ ವಯಾ;28 ವರ್ಷ ಉ|| ಗೌಂಡಿ ಜಾ|| ಲಂಬಾಣಿ ಸಾ: ನಡಿಹಾಳ ತಾಂಡಾ ತಾ: ಶಹಾಪೂರ ಅಂತಾ ತಿಳಿಸಿದನು. ಸದರಿಯವನನ್ನು ಪಂಚರ ಸಮಕ್ಷಮ ಪರಿಶಿಲಿಸಲಾಗಿ ಅವನ ಹತ್ತಿರ ಅಂದಾಜು 05 ಲೀಟರ್ ಹಿಡಿಯುವ 1 ಪ್ಲಾಸ್ಟಿಕ್ ಕ್ಯಾನ ಸಿಕಿದ್ದು ಅದರಲ್ಲಿ ಅಂದಾಜು 4.5 ಲೀಟರನಷ್ಟು ಕಳ್ಳಬಟ್ಟಿ ಸರಾಯಿ ಇದ್ದು ಒಂದು ಲೀಟರಿಗೆ 40 ರೂ.ಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು. ಸದರಿ ಕಳ್ಳಬಟ್ಟಿ ಸರಾಯಿಯ ಅ.ಕಿ.180=00 ರೂ. ಆಗುತ್ತದೆ. ಮತ್ತು ಸದರಿಯವನ ಹತ್ತಿರ 100/- ರೂ ನಗದು ಹಣ ದೋರತಿರುತ್ತದೆ. ಜಪ್ತಿಪಡಿಸಿಕೊಂಡ ಆರೋಪಿ ಮತ್ತು ಮುದ್ದೆಮಾಲು ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ: 37/2018 ಕಲಂ, 32 34 ಕೆ.ಇ ಆ್ಯಕ್ಟ್  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 53/2018 ಕಲಂ 279,338,304(ಎ) ಐಪಿಸಿ ಸಂ.187 ಐ.ಎಂ.ವಿ ಕಾಯ್ದೆ ;- ದಿನಾಂಕ:11-03-2018 ರಂದು 5 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀಮತಿ ತಾರಾ ಗಂಡ ಸಾಯಬಣ್ಣ ಮಕಾಸಿ ಸಾ:ಸತ್ಯಂಪೇಠ ಸುರಪೂರ ಇವರು ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ:09-03-2018 ರಂದು ಸಾಯಂಕಾಲ ಸುಮಾರಿಗೆ ನಾನು ಮನೆಯಲ್ಲಿರುವಾಗ ಗಂಡನಾದ ಸಾಯಬಣ್ಣ ಈತನು ಖಾಸಗಿ ಕೆಲಸ ಕುರಿತು ಲಕ್ಷ್ಮಿಪೂರಕ್ಕೆ ಹೋಗಿ ಬರುತ್ತೆನೆ ಮನೆಯಿಂದ ಹೊಗಿದ್ದನು. ಅಂದಾಜು ರಾತ್ರಿ 11-15 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ದಿವಳಗುಡ್ಡದ ಮರೆಪ್ಪ ತಂದೆ ಪರಮಪ್ಪ ಸ್ವಾಮಿನವರ ಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಇಂದು ರಾತ್ರಿ 11 ಗಂಟೆ ಸುಮಾರಿಗೆ ನಾನು ಸತ್ಯಂಪೇಠ ಗೋಪಾಲ ತಂದೆ ಸಣ್ಣ ಯಂಕಣ್ಣ ಶುಕ್ಲಾ ಇಬ್ಬರು ಹಸನಾಪೂರ ಕ್ಯಾಂಪದ ಪೆಟ್ರೊಲ ಪಂಪ ಹತ್ತಿರ ಮಾತನಾಡುತ್ತಾ ನಿಂತಿರುವಾಗ ಅದೇ ಸಮಯಕ್ಕೆ ಲಕ್ಷ್ಮಿಂಪೂರ ಕಡೆಯಿಂದ ಸತ್ಯಂಪೇಠ ಕಡೆಗೆ ರೋಡಿನ ಪಕ್ಕದಲ್ಲಿ ನಡೆದುಕೊಂಡು ಹೊಗುತ್ತಿದ್ದ ನಿನ್ನ ಗಂಡನಾದ ಸಾಯಬಣ್ಣ ಈತನಿಗೆ ಒಂದು ಟ್ಯಾಕ್ಟರ ಇಂಜಿನ ನೇದ್ದರ ಚಾಲಕನು ಸುರಪೂರ ಕಡೆಯಿಂದ ತನ್ನ ಟ್ಯಾಕ್ಟರನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬಂದವನೆ ನಿಮ್ಮ ಗಂಡನಾದ ಸಾಯಬಣ್ಣ ಈತನಿಗೆ ಮುಂದಿನಿಂದ ಡಿಕ್ಕಿ ಪಡಿಸಿದಾಗ ಸಾಯಬಣ್ಣ ಈತನು ಕೆಳಗೆ ಬಿದ್ದಿದ್ದು ಟ್ಯಾಕ್ಟರದ ದೊಡ್ಡಗಾಲಿ ಅವನ ಹೊಟ್ಟೆಯ ಮೆಲೆ ಹಾಯ್ದಾಗ ಸಾಯಬಣ್ಣ ಈತನ ಹೊಟ್ಟೆಯ ಎಡಬಾಗದ ಪಕ್ಕೆಯ ಹತ್ತಿರ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರನ್ನು ನಿಲ್ಲಿಸಿ ಕೆಳಗೆ ಇಳಿದು ನಮ್ಮನ್ನು ನೋಡಿ ಮತ್ತೆ ಟ್ಯಾಕ್ಟರ ಚಾಲು ಮಾಡಿಕೊಂಡು ಹೊರಟು ಹೋಗಿದ್ದು ಟ್ಯಾಕ್ಟರ ಇಂಜಿನ ನಂಬರ ಕೆಎ-33, ಟಿಎ 8169 ನೇದ್ದು ಇರುತ್ತದೆ. ಬೇಗ ಬನ್ನಿರಿ ಅಂತಾ ಘಟನೆಯನ್ನು ಕಣ್ಣಾರೆ ಕಂಡು ನನಗೆ ವಿಷಯ ತಿಳಿಸಿದಾಗ ನಾನು ಗಾಭರಿಗೊಂಡು ನನ್ನ ತಾಯಿಯಾದ ಮರೆಮ್ಮ ತಮ್ಮನಾದ ಗೋಪಾಲ ಇವರಿಗೂ ವಿಷಯ ತಿಳಿಸಿ ಮೂವರು ಕೂಡಿ ಒಂದು ಅಟೋದಲ್ಲಿ ಘಟನಾ ಸ್ಥಳವಾದ ಹಸನಾಪೂರ ಕ್ಯಾಂಪ ಪೆಟ್ರೊಲ ಪಂಪ ಹತ್ತಿರ ಹೋಗಿ ನೋಡಲು ಗಂಡನಾದ ಸಾಯಬಣ್ಣ ಈತನು ರೋಡಿನ ಪಕ್ಕದಲ್ಲಿ ಬಿದ್ದಿದ್ದು ಹೊಟ್ಟೆಯ ಎಡಬಾಗದ ಪಕ್ಕೇಯ ಹತ್ತಿರ ಭಾರಿ ರಕ್ತಗಾಯವಾಗಿ ಹೊರಳಾಡುತ್ತಿದ್ದನ್ನು ನೋಡಿ ಕೂಡಲೆ ಅವನನ್ನು ಅಟೋದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪೂರದಲ್ಲಿ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಬಸವೇಶ್ವ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಅಲ್ಲಿಂದ ಅಂದೆ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ.  ನನ್ನ ಗಂಡ ಕೋಮಾ ಸ್ಥಿತಿಯಲ್ಲಿ ಇದ್ದು ನಿನ್ನೆ ದಿನಾಂಕ:10-03-2018 ರಂದು ಅವನಿಗೆ ಆಪರೇಶನ ಇರುವದರಿಂದ ನಾನು ಕಲಬುರಗಿಯಲ್ಲಿಯೆ ಇದ್ದು ನನ್ನ ಗಂಡನಿಗೆ ನಿನ್ನೆ ಆಪರೇಶನ ಮಾಡಿದ ನಂತರ ಇಂದು ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ. ಅಪಘಾತ ಮಾಡಿದ ಟ್ಯಾಕ್ಟರ ಚಾಲಕನ ಹೆಸರು ವಿಳಾಸ ಗೊತ್ತಿರುವದಿಲ್ಲ ಅವನನ್ನು ನೋಡಿದರೆ ಗುರುತಿಸುವದಾಗಿ ಮರೆಪ್ಪ, ಗೋಪಾಲ ಇವರು ತಿಳಿಸಿದ್ದು ಇರುತ್ತದೆ. ಟ್ಯಾಕ್ಟರ ನಂಬರ ಕೆಎ-33 ಟಿಎ 8169 ನೇದ್ದರ ಚಾಲಕ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂಬರ 53/2018 ಕಲಂ. 279,338 ಐಪಿಸಿ ಸಂ.187 ಐ.ಎಂ.ವಿ ಕಾಯ್ದೆ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ನಂತರ ಪ್ರಕರಣದಲ್ಲಿಯ ಗಾಯಾಳುದಾರನಾದ ಸಾಯಬಣ್ಣ  ತಂದೆ ಮರೆಪ್ಪ ಮಕಾಸಿ ವಯಾ; 36 ವರ್ಷ ಸಾ: ಸತ್ಯಂಪೇಠ ಈತನು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಾ ಇಂದು ದಿನಾಂಕ:13-03-2018 ರಂದು 6-46 ಎ.ಎಂ.ಕ್ಕೆ ಮೃತ ಪಟ್ಟಿರುತ್ತಾನೆ ಅಂತಾ ಸರಕಾರಿ ಆಸ್ಪತ್ರೆ ಕಲಬುರಗಿಯಿಂದ ಡೆತ್ತ ಎಮ್ ಎಲ್ ಸಿ ವಸೂಲಾಗಿದ್ದರ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ. 304 (ಎ) ಐಪಿಸಿ ನೇದ್ದನ್ನು ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!