Yadgir District Reported Crimes Updated on 08-09-2017

By blogger on ಶುಕ್ರವಾರ, ಸೆಪ್ಟೆಂಬರ್ 8, 2017


                                            Yadgir District Reported Crimes

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. ಕಲಂ:366(ಎ), 109, 376 ಸಂಗಡ 34 ಐಪಿಸಿ ಮತ್ತು ಕಲಂ: 6, 8 ಪೋಕ್ಸೋ ಕಾಯ್ದೆ 2012 ನೇದ್ದರ.;- ದಿನಾಂಕ: 02/09/2017 ರಂದು 06.00 ಪಿಎಮ್ ಕ್ಕೆ ಪಿರ್ಯಾದಿದಾರರು ಒಂದು ಲಿಖಿತ ಅಜರ್ಿ ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ, ನನಗೆ 3 ಜನ ಮಕ್ಕಳಿದ್ದು ನನ್ನ ಹಿರಿಯ ಮಗಳಾದ ಕುಮಾರಿ. ಪ್ರತಿಭಾ ವಯಾ: 17 ವರ್ಷ ಇವಳು ದಿನಾಂಕ: 31/08/2017 ರಂದು ರಾತ್ರಿ ವೇಳೆಯಲ್ಲಿ ಕಾಲಮಡಿಯಲು ಮನೆಯಿಂದ ಹೊರಗೆ ಹೊದಾಗ ಅಂದರೆ, ದಿನಾಂಕ: 01/09/2017 ರಂದು 12.45 ಎಎಂ ಸುಮಾರಿಗೆ ನಮ್ಮೂರಿನ ರಾಜು ತಂದೆ ಬಸವರಾಜ ಗುತ್ತೇದಾರ ವಯಾ: 24 ವರ್ಷ ಈತನು ಜೋರಾವರಿಯಿಂದ ಕೈಹಿಡಿದು ಎಳೆದು ತನ್ನ ಮೋಟಾರ ಸೈಕಲ್ ಮೇಲೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ನಮಗೆ ನಮ್ಮ ಮಗಳು ಅಪ್ಪ ಅಮ್ಮ ಅಂತಾ ಜೀರುವದು ಕೇಳೆ ಹೋಗಿ ನೋಡಲಾಗಿ ನಮ್ಮ ಮನೆಯ ಬಾಗಿಲನ್ನು ಹೊರಗಿನಿಂದ ಕೊಂಡಿ ಹಾಕಿದ್ದು ನಾನು ಬಾಗಿಲು ಜಗ್ಗಿ ತಗೆದು ಹೋಗುವಷ್ಟರಲ್ಲಿ ರಾಜು ಈತನು ನಮ್ಮ 17 ವರ್ಷದ ಮಗಳನ್ನು ಅಪಹರಿಸಿಕೊಂಡು ಹೋಗಿದ್ದನು. ಇದಕ್ಕೆ ಅವರ ತಾಯಿ ಬಸ್ಸಮ್ಮ ಮತ್ತು ಅವರ ತಮ್ಮ ಶಿವರಾಜ ಇವರ ಕುಮ್ಮಕ್ಕು ಇರುತ್ತದೆ. ಅವರ ಮನೆಗೆ ಹೋಗಿ ನೋಡಲಾಗಿ ಅವರು ಕೀಲೀ ಹಾಕಿ ಹೋಗಿದ್ದರು. ಆಗ ನಾನು ನಮ್ಮ ಪರಿಚಯದ ಅಂಬ್ಲಪ್ಪ ಇಬ್ಬರು ಮೋಟಾರ ಸೈಕಲ್ ಮೇಲೆ ರಾಜು ಅಪಹರಿಸಿಕೊಂಡು ಹೋದ ಸಿಂದಗಿ ರೋಡಿನ ಕಡೆಗೆ ಬೆನ್ನತ್ತಿ ಹೋಗಿ ಹುಡುಕಾಡಲಾಗಿ ಇಲ್ಲಿಯ ವರೆಗೆ ಸಿಕ್ಕಿರುವದಿಲ್ಲ. ಅದಕ್ಕೆ ತಡವಾಗಿ ಇಂದು ದಿನಾಂಕ: 02/09/2017 ರಂದು ತಡವಾಗಿ ಠಾಣೆಗೆ ಬಂದು ಅಜರ್ಿಕೊಟ್ಟಿದ್ದು, ನಮ್ಮ ಮಗಳನ್ನು ಮೋಟಾರ ಸೈಕಲ ಮೇಲೆ ಅಪಹರಣ ಮಾಡಿದ ರಾಜು ಮತ್ತು ಅದಕ್ಕೆ ಕುಮ್ಮಕ್ಕು ನೀಡಿದ ಬಸ್ಸಮ್ಮ ಮತ್ತು ಶಿವರಾಜ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು, ಇಂದು ದಿನಾಂಕ: 08/09/2017 ರಂದು ಪ್ರಕರಣದಲ್ಲಿ ಅಪೃತಳಾದ ಕು. ಪ್ರತಿಭಾ ತಂದೆ ಮಹಾದೇವಪ್ಪ ಇವಳು ಹಾಜರಾಗಿ ರಾಜು ತಂದೆ ಬಸ್ಸಯ್ಯ ಕಲಾಲ ಈತನು ಅಪಹರಣ ಮಾಡಿ ಬಲತ್ಕಾರವಾಗಿ ಸಂಬೋಗ ಮಾಡಿದ್ದಾನೆ ಅಂತಾ ಇತ್ಯದಿ ಹೇಳಿಕೆ ಕೊಟ್ಟಿದ್ದರಿಂದ ಪ್ರಕರಣದಲ್ಲಿ ಕಲಂ: 376, 109, ಸಂಗಡ 34 ಐಪಿಸಿ ಮತ್ತು ಕಲಂ: 6 ಪೋಕ್ಸೋ ಕಾಯ್ದೆ 2012 ನೇದ್ದನ್ನು ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 141/2017 ಕಲಂ: 232, 324, 504, 506 ಸಂಗಡ 34 ಐಪಿಸಿ ;- ದಿನಾಂಕ: 07-09-2017 ರಂದು 11-00 ಎಎಮ್ ಕ್ಕೆ ಕಲಬುರಗಿಯ ಜಯದೇವ ಆಸ್ಪತ್ರೆಯಿಂದ ಪೋನ್ ಮುಖಾಂತರ ಎಮ್.ಎಲ್.ಸಿ ವಸೂಲಾದ ಮೇರೆಗೆ ಠಾಣೆಯ ಶ್ರೀ ಶರಣಪ್ಪ ಹೆಚ್.ಸಿ-15 ರವರಿಗೆ ನೇಮಿಸಿ ಕಳುಹಿಸಿದ್ದು ಸದರಿ ಹೆಚ್.ಸಿ ರವರು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಶ್ರೀ ಭೀಮಶಂಕರ ತಂದೆ ನಾಗಪ್ಪ ಗುಳಗಿ ಸಾ|| ವನದುಗರ್ಾ ಈತನ ಅಜರ್ಿ ಪಡೆದುಕೊಂಡು ಮರಳಿ ದಿನಾಂಕ: 07-09-2017 ರಂದು 10-30 ಪಿಎಮ್ ಕ್ಕೆ ಠಾಣೆಗೆ ತಂದು ಹಾಜರ್ ಪಡಿಸಿದ್ದರ ಸಾರಾಂಶವೆನೆಂದರೆ,  ದಿನಾಂಕ: 05/09/2017 ರಂದು ಸಾಯಂಕಾಲ 7-30 ಪಿಎಮ್ ನಾನು ಮತ್ತು ರೇವಣಸಿದ್ದ ತಂದೆ ಶೇಶಣ್ಣ ಇಬ್ಬರೂ ಕೂಡಿಕೊಂಡು ಶೆಟ್ಟಿಕೇರಾ ಸೀಮಾಂತರದಲ್ಲಿ ಇದ್ದ ಸವರ್ೆ ನಂಬರ 114 ಹೊಲಕ್ಕೆ ಹೋದಾಗ ನಮ್ಮ ಹೊಲದ ಹೊಡ್ಡು ಹೊಡೆದಿ ನೀರು ತೆಗೆದುಕೊಂಡ ನಮ್ಮ ಅಣ್ಣನಾದ ಪ್ರಕಾಶ ತಂದೆ ರಾಚಪ್ಪ ಗುಳಗಿ ಹೋಗಿ ಶಟ್ಟೆಕೇರಾ ಮನೆಗೆ ಹೋಗಿ ನಮ್ಮ ಹೊಲದ ಹೊಡ್ಡು ಏಎ ಹೊಡೆದಿದಿ ಅಂತಾ ಕೇಳಿದಾಗ ಎಲೇ ಬೋಸಡಿ ಮಗ ನಿಮ್ಮದು ಬಾಳ ಸೊಕ್ಕಲು ಆಗಿದೆ ಅಂತಾ ಬೈಯುತ್ತಾ ಒಮ್ಮಲೇ  ಕೈಯಿಂದ ಕೈಯಲ್ಲಿ ಇದ್ದ ಚಾಕು ತೆಗೆದುಕೊಂಡು ನನ್ನ ಎಡಗಿವಿ ತಿವಿದು ರಕ್ತ ಭಾರಿಗಾಯವಾಗಿರುತ್ತದೆ. ಮತ್ತ ತಲೆಯ ಹಿಂಬಾಗ ಭಾರಿ ಒಳಪೆಟ್ಟು ಆಗಿದ್ದು ಮತ್ತು ಎಡಬುಜದ ಮೇಲೆ ತರಚಿದ ಗಾಯವಾಗಿರುತ್ತದೆ ಆಗ ನಮ್ಮ ದೊಡ್ಡಪ್ಪ ಬಂದು ಎಲೇ ಬೊಸಡಿ ಮಗ ಅಂತಾ ಬೈದ ಅವಾಚ್ಯ ಶಬ್ದಗಳಿಂದ ಬೈದು ಅವರ ತಮ್ಮನಾದ ಮಲ್ಲಿಕಾಜರ್ುನ ತಂದೆ ರಾಚಪ್ಪ ಕುಳಗಿ ಅವನು ಕೂಡ ಎಲೇ ಬೋಸಡಿ ಮಗನ ನಮ್ಮ ಹೋಲದ ನೀರು ತೆಗೆದುಕೊಂಡು ನಮಗೆ ಬೈದು ಅವನು ನನ್ನ ಅವನ ನನಗೆ ಬಡಿಗೆಯಿಂದ ಹೊಡೆದಿರುತ್ತಾನೆ  ಈಗ ಹೊಡೆ ಬಡೆ ಮಾಡಿದ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಬರೆದುಕೊಟ್ಟಿದ್ದ ನಿಜವಿರುತ್ತದೆ.  ನಾನು ನಾಲ್ಕು ಜನ ಇದ್ದೇವೆ ನಿನಗೆ ಕೆಲಸ ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 141/2017 ಕಲಂ, 323, 324, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 238/2017 ಕಲಂ: 143, 147, 323, 354, 504, 506 ಸಂಗಡ 149 ಐಪಿಸಿ ;- ದಿನಾಂಕ 06.09.2017 ರಂದು ಸಂಜೆ 4-30 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಆಕೆಯ ಮನೆಯವರು ಅವರ ಮನೆಯ ಮುಂದೆ ನಿಂತಿದ್ದಾಗ ಆರೋಪಿತರು ಅಂದೆ ಸಂಜೆ 04-00 ಗಂಟೆ ಸುಮಾರಿಗೆ ನೀರು ತುಂಬುದ ವಿಷಯಕ್ಕೆ ಸಂಬಂಧಿಸಿದಂತೆ ಆದ ಜಗಳಕ್ಕೆ ಸಂಬಂದಿಸಿದಂತೆ ಆರೋಪಿತರೆಲ್ಲರು ಏಕೋದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ಬಂದು  ಫಿರ್ಯಾದಿಗೆ ಮತ್ತು ಅವರ ಮನೆಯವರಿಗೆ ಅವಾಚ್ಯವಾಗಿ ಬೈದು ಮೋನಪ್ಪ ಎಂದ ಆರೋಪಿ ಫಿರ್ಯಾದಿಗೆ ಮಾನಭಂಗ ಮಾಡಲು ಯತ್ನಿಸಿಸಿದ್ದು ಆರೋಪಿತರೆಲ್ಲಾರು ಕೈಯಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 238/2017 ಕಲಂ: 143, 147, 323, 354, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 262/2017 ಕಲಂ: 447,323,354,504,506 ಸಂ.34 ಐಪಿಸಿ ;- ದಿನಾಂಕ:07/09/2017 ರಂದು 5-30 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರಳಾದ ಶ್ರೀಮತಿ ಹಣಮಂತಿ ಗಂ||ತಿರುಪತಿ ಕಮತಗಿ ಸಾ||ದೇವರಗೋನಾಲ ಇವಳು ಠಾಣೆಗೆ ಬಂದು ಒಂದು ಲಿಖಿತ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನಾನು ದಿನಾಂಕ|| 07/09/2017 ರಂದು ಮದ್ಯಾಹ್ನ 11.50 ಗಂಟೆಗೆ ಸುಮಾರಿಗೆ ದೇವರ ಗೋನಾಲ ಗ್ರಾಮದ ಸೀಮಾಂತರದಲ್ಲಿರುವ ಸನಂ-266/2 ರಲ್ಲಿ ನನಗೆ ಸರಕಾರದಿಂದ ಆಶ್ರಯಯೋಜನೆ ಮನೆ ಮಂಜೂರಾಗಿ ಸದರಿ ಸವರ್ೆ ನಂಬರನಲ್ಲಿ 1 ಕೊಣೆ ಕಟ್ಟಿಕೊಂಡು ನನ್ನ ತಂಗಿ ರತ್ನಮ್ಮಳ ಜೊತೆ ವಾಸವಾಗಿರುತ್ತೆನೆ ಮತ್ತು ಮೇಲೆ ಹೇಳಿದ ಸಮಯದಲ್ಲಿ ನಾನು ಮತ್ತು ನಮ್ಮೂರಿನ ಮಾನಪ್ಪ ತಂ||ಮುದುಕಪ್ಪ ಬಂಟನೂರ ಅವರ ಗಳೆಯನ್ನು ಬಾಡಿಗೆಗೆ ತಗೆದುಕೊಂಡು ಸಾಗುವಳಿ ಮಾಡುತ್ತಿದ್ದ ಸಂದರ್ಭದಲ್ಲಿ ನನ್ನ ತಂದೆಯ ಅಣ್ಣನಾದ ಬಸಲಿಂಗಪ್ಪ ತಂ||ದಂಡಪ್ಪ ಮತ್ತು ಆತನ ಮಕ್ಕಳು ಶಿವಪ್ಪ ತಂ|| ಬಸಲಿಂಗಪ್ಪ, ದಂಡಪ್ಪ ತಂ||ಬಸಲಿಂಗಪ್ಪ ಏಕಾ ಏಕಿ ಹೊಲದಲ್ಲಿ ನುಗ್ಗಿದವರೆ ಮಾನಪ್ಪನಿಗೆ ಹೇ ಬೋಸಡಿ ಸುಳೆ ಮಗನೆ ಉಳಿಮೆ ಮಾಡಲು ನಿವ್ಯಾರು ? ಈ ಬೊಸಡಿ ಹಣಮಂತಿ ಮಾತು ಕೇಳಿ ಸಾಗುವಳಿ ಮಾಡುವೆಯಾ ಎಂದು ಉಳಿಮೆ ಮಾಡುವ ಎತ್ತುಗಳ ಮುಂದೆ ನಿಂತು ಎತ್ತುಗಳು ಕೊಳ್ಳ ಹರಿದು ಮತ್ತು ಬೊಸಡಿದ ಬಹಳ ಆಗಿದೆ ಎಂದು ಅದರಲ್ಲಿ ಶಿವಪ್ಪ ಈತನು ನನ್ನ ಸೀರೆಯ ಸೇರಗನ್ನು ಹಿಡಿದು ನನ್ನ ಮಾನಭಂಗ ಪಡಿಸುವ ಉದ್ದೇಶದಿಂದ ಜಗ್ಯಾಡಿದನು ಮತ್ತು ದಂಡಪ್ಪ ಈತನು ನನ್ನ ಎಡಗೈ ಜಗ್ಯಾಡಿ ನನ್ನ ಮಾನಕ್ಕೆ ದಕ್ಕೆ ಉಂಟು ಮಾಡಿದನು. ಆಗ ಬಸಲಿಂಗಪ್ಪ ಈತನು ನನ್ನ ತಲೆ ಕೂದಲು ಹಿಡಿದು ಜಗ್ಗಾಡಿ ನನ್ನನ್ನು ನನ್ನನ್ನು ಬಾಗಿಸಿ ಮುಷ್ಠಿ ಮಾಡಿ ಬೆನ್ನಿಗೆ ಗುದ್ದಿದನು. ಆಗ ನಾನು ಸತ್ತೆನೆಪ್ಪೊ ಎಂದು ಚೀರಾಡಲು ಮಾನಪ್ಪ ಬಂಟನೂರ ಮತ್ತು ದೇವಿಂದ್ರಪ್ಪ ತಂ||ಮಾನಪ್ಪ ನಾಯ್ಕೋಡಿ, ನಾಗಪ್ಪ ತಂ|| ಶಿವಣ್ಣ ಚಿಕ್ಕನಳ್ಳಿ, ಇವರು ಬಂದು ಅವರಿಂದ ಬಿಡಿಸಿಕೊಂಡರು ಆಗ ಅವರೆಲ್ಲರೂ ಇವತ್ತು ಇವರು ಬಂದಾರಂತ ಉಳಿದಿಕೊಂಡಿ ಇಲ್ಲದಿದಿದ್ರೆ ನಿನ್ನನ್ನು ಸಾಯಿಸಿ ಬಿಡುತ್ತಿದ್ದೆವು. ಉಳಿದಿದಿ ಹೋಗು  ಮುಂದೆಯು ಇದೆ ನಿನ್ನ ಜೀವ ನಮ್ಮ ಕೈಯಲ್ಲಿ  ಎಂದು ಹೊದರು. ಅವರು ನನಗೆ ಹೊಡೆದಿದ್ದರಿಂದ ನನಗೆ ಬೆನ್ನಿಗೆ ಒಳಪೆಟ್ಟಾಗಿದ್ದು ನನ್ನ ಎಡಕೈಗೆ ಚೂರಿದ ಗಾಯಗಳಾಗಿವೆ ಈ ಜಗಳಕ್ಕೆ ಕಾರಣವೆನೆಂದರೆ ನಮ್ಮ ಪೂವರ್ಿಕರ ಆಸ್ತಿಯಲ್ಲಿ ನನ್ನ ತಂದೆಗೆ ಬರುವ ಪಾಲು ಕೇಳಿ ಕೊಟರ್ಿನಲ್ಲಿ ನಾನು ಮತ್ತು ನನ್ನ ತಂಗಿ ಧಾವೆ ಸಲ್ಲಿಸಿದ್ದು ಸದರಿ ಧಾವೆಯನ್ನು ಹಿಂಪಡೆಯುವಂತೆ ಮತ್ತು ಸದರಿ ಸವರ್ೇ ನಂಬರಿನಲ್ಲಿದ್ದ ಕಬ್ಜದಿಂದ ಹೊರ ಹಾಕುವ ಉದ್ದೇಶದಿಂದ ಜಗಳ ಮಾಡಿರುವರು ಕಾರಣ ನನ್ನನ್ನು ಉಪಚಾರ ಮಾಡಿಸಿ ಸದರಿಯವರ ಮೇಲೆ ಕಾನೂನು ಕ್ರಮ ತಗೆದುಕೊಳ್ಳಬೇಕಾಗಿ ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!