Yadgir District Reported Crimes Updated on 05-06-2017

By blogger on ಸೋಮವಾರ, ಜೂನ್ 5, 2017


                                                  Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 93/2017 ಕಲಂ 379 ಐಪಿಸಿ;- ದಿನಾಂಕ 04/06/2017 ರಂದು 01-00 ಪಿಎಂಕ್ಕೆ ಶ್ರೀಮತಿ ಮಂಜುಳಾ ಮಪಿಎಸ್ಐ (ಅ.ವಿ) ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು ಸಮೇತ ವರದಿಯನ್ನು ಕೊಟ್ಟಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:04/06/2017 ರಂದು ನಾನು ಮತ್ತು ಸಂಗಡ ಸಿಬ್ಭಂದಿಯವರಾದ ಜಗದೀಶ ಪಿಸಿ.388 ಜೀಪ ಚಾಲಕ ಹಾಗೂ ರವಿ ರಾಠೋಡ ಪಿಸಿ-269 ರವರನ್ನು ಕರೆದುಕೊಂಡು ಯಾದಗಿರಿ ನಗರದಲ್ಲಿ ಪೆಟ್ರೊಲಿಂಗ ಕರ್ತವ್ಯ ಕುರಿತು ಪೊಲೀಸ್ ಠಾಣೆಯಿಂದ ಬೆಳಿಗ್ಗೆ 11-30 ಎ.ಎಂಕ್ಕೆ ಸಕರ್ಾರಿ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಹೊರಟು ಹತ್ತಿಕುಣಿ ಕ್ರಾಸ್ ಮೂಲಕ ಗಂಗಾನಗರ ಹತ್ತಿರ ಹೋಗುತ್ತಿರುವಾಗ ಗಂಗಾನಗರ-ವಾಡಿ ಬೈಪಾಸ ರೋಡಿನ ಕ್ರಾಸಿನಲ್ಲಿ 12-00 ಪಿ.ಎಂಕ್ಕೆ ಸುಮಾರಿಗೆ ಒಬ್ಬನು ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದು ಟ್ರ್ಯಾಕ್ಟರ ಚಾಲಕನು ನಮ್ಮ ಜೀಪ ನೋಡಿ ಟ್ರ್ಯಾಕ್ಟರನ್ನು ಬಿಟ್ಟು  ಓಡಿ ಹೋದನು. ನಾವು ಟ್ರ್ಯಾಕ್ಟರ ಹತ್ತಿರ ಹೋಗಿ ನೋಡಲಾಗಿ ಟ್ರ್ಯಾಕ್ಟರದ ಟ್ರಾಲಿಯಲ್ಲಿ ಉಸುಕು ತುಂಬಿದ್ದು ಟ್ರ್ಯಾಕ್ಟರ ಇಂಜಿನ್ ನಂ.ಕೆಎ-33-ಟಿಎ-1829 ಟ್ರಾಲಿ ನಂ.ಕೆಎ-33-ಟಿಎ-1830 ಅಂತಾ ಇದ್ದು, ಚಾಲಕನ ಹೆಸರು ಓಡಿ ಹೋಗಿದ್ದರಿಂದ ಹೆಸರು ಗೊತ್ತಾಗಿರುವದಿಲ್ಲಾ. ಟ್ರ್ಯಾಕ್ಟರ ಚಾಲಕನು ಓಡಿ ಹೋಗಿದ್ದರಿಂದ ಚಾಲಕ ಮತ್ತು ಮಾಲಿಕರು ಯಾವುದೇ ಸಕರ್ಾರದ ಪರವಾನಿಗೆ ಇಲ್ಲದೆ ಅಕ್ರಮವಾಗಿ ಟ್ರ್ಯಾಕ್ಟರದಲ್ಲಿ ಮರಳನ್ನು ಕದ್ದು ಕಳ್ಳತನದಿಂದ ಸಾಗಿಸುತ್ತಿದ್ದ ಬಗ್ಗೆ  ಖಚಿತವಾಯಿತು. ನಂತರ ಸಿಬ್ಬಂದಿಯ ಸಹಾಯದಿಂದ ಸದರಿ ಟ್ರ್ಯಾಕ್ಟರನ್ನು ಯಾದಗಿರಿ ನಗರ ಠಾಣೆಗೆ 12-30 ಪಿಎಂಕ್ಕೆ ತಂದು ನಿಲ್ಲಿಸಿ, ಯಾದಗಿರಿ ನಗರ ಠಾಣೆಯ ಠಾಣಾಧಿಕಾರಿಗಳಿಗೆ ಆಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರ ಒಪ್ಪಿಸಿ, ನಾನು ನಾಗರಾಜ ಎಚ್.ಸಿ. 190 ರವರಿಂದ ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಟೈಪ್ ಮಾಡಿಸಿ, ಕಛೇರಿಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 1-00 ಪಿ.ಎಂಕ್ಕೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆ ರವರಿಗೆ ಈ ವರದಿ ನೀಡಿರುತ್ತೇನೆ. ಎಂದು ಕೊಟ್ಟ ಲಿಖಿತ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.93/2017 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ: 143,147,323,324,354,504,506 ಸಂಗಡ 149 ಐ.ಪಿ.ಸಿ;- ದಿನಾಂಕ 04/06/2017 ರಂದು 8-15 ಪಿ.ಎಂಕ್ಕೆ ಫಿಯರ್ಾದಿದಾರರಾದ  ಸಿದ್ದಣ್ಣ ತಂದೆ ಲಕ್ಷ್ಮಣ ಗೋನಾಲ ವಯಾ|| 25 ಜಾ|| ಉಪ್ಪಾರ ಉ|| ಕೂಲಿ ಸಾ|| ತೆಗ್ಗೆಳ್ಳಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ಇಂದು ದಿನಾಂಕ: 04/06/2017 ರಂದು ಬೆಳಿಗ್ಗೆ 7.00 ಗಂಟೆ ಸುಮಾರಿಗೆ ಪಿರ್ಯಾದಿ ಹಾಗೂ ಆತನ ತಾಯಿ ನಿಂಗಮ್ಮ ಅಣ್ಣ ಮಲ್ಲಣ್ಣ 3 ಜನರು ತಮ್ಮ ಮನೆಯ ಮುಂದೆ ಇದ್ದಾಗ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಬಂದು ವಿನಾಕಾರಣ ಪಿರ್ಯಾದಿಯೊಂದಿಗೆ ಜಗಳ ತೆಗೆದು ಕೈಯಿಂದ, ಇಟ್ಟಿಗೆಯಿಂದ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಪಡೆಸಿ ಜಗಳ ಬಿಡಿಸಲು ಬಂದು ಪಿರ್ಯಾದಿ ತಾಯಿಗೂ ಕೂದಲು ಹಿಡಿದು ಎಳೆದಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 98/2017 ಕಲಂ: 143,147,323,324,354,504,506 ಸಂಗಡ 149 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು. 
 
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 77/2017 ಕಲಂ: 279,337,338,304(ಎ) ಐಪಿಸಿ ಸಂ 187 ಐಎಮ್ವಿ ಎಕ್ಟ್ ;- ದಿನಾಂಕ: 04/06/2017 ರಂದು 8-30 ಪಿಎಮ್ ಕ್ಕೆ ಯಾದಗಿರಿ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಫೋನ ಮೂಲಕ ತಿಳಿಸಿದ ಮೇರೆಗೆ ನಾನು ಜಿಜಿಹೆಚ್ ಯಾದಗಿರಿಕ್ಕೆ 9 ಪಿಎಮ್ ಕ್ಕೆ ಭೇಟಿ ನೀಡಿ ಎಮ್.ಎಲ್.ಸಿ ಸ್ವಿಕೃತ ಮಾಡಿಕೊಂಡು ಮೃತಳಾದ ಈರಮ್ಮ ಇವಳ ಗಂಡನಾದ ಸದಾಶಿವರೆಡ್ಡಿ ತಂದೆ ಸಿದ್ದಪ್ಪಗೌಡ ಪೊಲೀಸ್ ಪಾಟಿಲ್, ಸಾ:ಕಂದಳ್ಳಿ ತಾ:ಶಹಾಪೂರ ಇವರ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ಇಂದು ದಿನಾಂಕ: 04/06/2017 ರಂದು ಬೆಳಗ್ಗೆ ನನ್ನ ಹೆಂಡತಿ ಈರಮ್ಮ ಮತ್ತು ಮಗ ಸಚಿನ ಇಬ್ಬರೂ ಸಂತೆ ಮಾಡಿಕೊಂಡು ಬರಲು ಯಾದಗಿರಿಗೆ ಹೊದರು. ರಾತ್ರಿ 8 ಗಂಟೆ ಸುಮಾರಿಗೆ ನಾನು ಊರಲ್ಲಿದ್ದಾಗ ನಮ್ಮ ಸಂಬಂಧಿಕ ಶಿವಕುಮಾರ ಬಿಳ್ಹಾರ ಇವರು ನನಗೆ ಫೋನ ಮಾಡಿ ಬಿರನಾಳ-ಬಬಲಾದ ರೋಡ ಮೇಲೆ ರಸ್ತೆ ಅಪಘಾತವಾಗಿ ನಿನ್ನ ಹೆಂಡತಿ ಈರಮ್ಮ ಮತ್ತು ಮಗ ಸಚಿನ ಹಾಗೂ ಇತರರಿಗೆ ಅಪಘಾತವಾಗಿರುತ್ತದೆ ನೀನು ಬೇಗ ಬಾ ಎಂದು ಹೇಳಿದಾಗ ನಾನು ಗಾಬರಿಯಾಗಿ ನಮ್ಮೂರಿಂದ ಬಂದು ನೋಡಲಾಗಿ ನನ್ನ ಹೆಂಡತಿ ಅಪಘಾತದಲ್ಲಿ ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಸತ್ತಿದ್ದಳು. ಅಪಘಾತದ ಬಗ್ಗೆ ನಮ್ಮೂರಿನ ಸುಂದರಮ್ಮ ಗಂಡ ಶರಣಪ್ಪ ಬಂಢಾರ ಇವರಿಗೆ ವಿಚಾರಿಸಲಾಗಿ ಅವರು ತಿಳಿಸಿದ್ದೇನಂದರೆ ಶಿವನೂರ ಬಸ್ ನಂ. ಕೆಎ 33 ಎಫ್ 0033 ನೇದ್ದರಲ್ಲಿ ನಾನು ಮತ್ತು ನಿನ್ನ ಹೆಂಡತಿ ಈರಮ್ಮ ಮತ್ತು ನಿನ್ನ ಮಗ ಸಚಿನ ಹಾಗೂ ಇತರ ಪ್ರಯಾಣಿಕರು ಊರಿಗೆ ಹೊರಟಾಗ ದಾರಿಯಲ್ಲಿ ಬಸ್ ಕೆಟ್ಟು ನಿಂತಾಗ ಎಲ್ಲರೂ ಬಸ್ಸಿನಿಂದ ಇಳಿದು ರಸ್ತೆ ಪಕ್ಕದಲ್ಲಿ ಕುಳಿತುಕೊಂಡಿದ್ದೇವು. ಆಗ ಯಾದಗಿರಿ ಕಡೆಯಿಂದ ವೊಲ್ಕಸ್ ವಾಗೆನ್ ಕಾರ ನಂ. ಕೆಎ 36 ಎಮ್ 8086 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬರುತ್ತಿದ್ದನು. ಅವನಂತೆ ಎದುರುಗಡೆ ವಡಗೇರಾ ಕಡೆಯಿಂದ ಒಂದು ಕಾರ ನಂ. ಕೆಎ 28 ಎನ್ 6167 ನೇದ್ದರ ಚಾಲಕ ಆನಂದ ಮಿಲ್ಟ್ರಿ ಈತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬರುವಾಗ ಎರಡು ವಾಹನಗಳು ಜೋರಾಗಿ ಡಿಕ್ಕಿಯಾಗಿ ವೊಲ್ಕಸ್ ವಾಗೆನ್ ಕಾರ ನಂ. ಕೆಎ 36 ಎಮ್ 8086 ನೇದ್ದರ ಚಾಲಕನ ನಿಯಂತ್ರಣ ತಪ್ಪಿ ರೋಡಿನ ಪಕ್ಕದಲ್ಲಿ ಕುಳಿತುಕೊಂಡ ನಮ್ಮೆಲ್ಲರ ಮೇಲೆ ಕಾರ ಹಾಯ್ದು ಹೋಗಿದ್ದರಿಂದ ಅಪಘಾತದಲ್ಲಿ ನನಗೆ ಬಲಗೈ ಮೊಳ ಕೈ ಕೆಳಗೆ ಭಾರಿ ಗುಪ್ತಗಾಯವಾಗಿ ಕೈ ಮುರಿದಿರುತ್ತದೆ ಮತ್ತು ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ನನ್ನಂತೆಯೇ ನಿನ್ನ ಮಗನಾದ ಸಚಿನ ಈತನಿಗೆ ಎಡಗಡೆ ಭುಜದ ಕೆಳಗಡೆ ಭಾರಿ ಗುಪ್ತಗಾಯವಾಗಿ ಎಲುಬು ಮುರಿದಿರುತ್ತದೆ, ಎಡಗಡೆ ಗದ್ದಕ್ಕೆ, ಮೂಗಿಗೆ ರಕ್ತಗಾಯವಾಗಿರುತ್ತದೆ. ಮತ್ತು ಎಡಗಡೆ ತೊಡೆಗೆ ತರಚಿದ ಗಾಯವಾಗಿರುತ್ತದೆ. ಮತ್ತು ಸ್ಯಾಮುವೇಲ ತಂದೆ ನಿಂಗಪ್ಪ ಸಾ:ಕಂದಳ್ಳಿ, ಚಾಂದಬೀ ಗಂಡ ಗೂಡುಸಾಬ ಸಾ:ಬಿಳ್ಹಾರ, ನಿಂಗಮ್ಮ ಗಂಡ ತಿಪ್ಪಣ್ಣ ಸಾ:ಐಕೂರು, ದೇವಮ್ಮ ಗಂಡ ಸಿದ್ದಪ್ಪ ಸಾ: ಗೊಡಿಹಾಳ, ಕಾರ ಚಾಲಕ ಆನಂದ ಮಿಲ್ಟ್ರಿ ಹಾಗೂ ಇನ್ನೊಬ್ಬ ಗಾಯಾಳುವಿನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ ಇವರೆಲ್ಲರಿಗೂ ಕೂಡಾ ಭಾರಿ ರಕ್ತ, ಗುಪ್ತ ಮತ್ತು ತರಚಿದ ಗಾಯಗಳಾಗಿರುತ್ತವೆ. ಅವರೆಲ್ಲರೂ ಖಾಸಗಿ ವಾಹನಗಳಲ್ಲಿ ಮತ್ತು 108 ವಾಹನಗಳಲ್ಲಿ ಸರಕಾರಿ ಆಸ್ಪತ್ರೆಗೆ ಹೋಗಿರುತ್ತಾರೆ. ನಿನ್ನ ಹೆಂಡತಿಯಾದ ಈರಮ್ಮ ಇವಳಿಗೆ ತೆಲೆಯ ಎಡಗಡೆ ಹಿಂಭಾಗಕ್ಕೆ ಭಾರಿ ರಕ್ತಗಾಯ, ಬಲಗಡೆ ಭುಜಕ್ಕೆ ಮತ್ತು ಸೊಂಟಕ್ಕೆ ಭಾರಿ ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಸತ್ತಿರುತ್ತಾಳೆ. ಈ ಅಪಘಾತವು ಇಂದು ದಿನಾಂಕ: 04/06/2017 ರಂದು ಸಾಯಂಕಾಲ 7-45 ಗಂಟೆ ಸುಮಾರಿಗೆ ಬಬಲಾದ-ಬಿರನಾಳ ರೋಡಿನ ಮೇಲೆ ನಡೆದಿರುತ್ತದೆ. ವೊಲ್ಕಸ್ ವಾಗೆನ್ ಕಾರ ನಂ. ಕೆಎ 36 ಎಮ್ 8086 ನೇದ್ದರ ಚಾಲಕನು ಅಪಘಾತಪಡಿಸಿ, ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅವನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ. ನಂತರ ನನ್ನ ಹೆಂಡತಿಯ ಶವವನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಗ ಸಚಿನನಿಗೆ ನೋಡಲಾಗಿ ಅಪಘಾತದಲ್ಲಿ ಈ ಮೇಲಿನಂತೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ 8-30 ಪಿಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ. ನಮ್ಮೂರಿನ ಸ್ಯಾಮುವೇಲ ತಂದೆ ನಿಂಗಪ್ಪ ಈತನಿಗೆ ಅಪಘಾತದಲ್ಲಿ ಎಡಗೈ ಮೊಳ ಕೈ ಕೆಳಗೆ ಭಾರಿ ಗುಪ್ತಗಾಯ ಮತ್ತು ತೆಲೆಗೆ, ಹೊಟ್ಟೆಗೆ, ಎದೆಗೆ ಭಾರಿ ಗುಪ್ತಗಾಯಗಳಾಗಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ರಾತ್ರಿ 8-45 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಕಾರಣ ವೊಲ್ಕಸ್ ವಾಗೆನ್ ಕಾರ ನಂ. ಕೆಎ 36 ಎಮ್ 8086 ನೇದ್ದರ ಚಾಲಕ ಮತ್ತು ಕಾರ ನಂ. ಕೆಎ 28 ಎನ್ 6167 ನೇದ್ದರ ಚಾಲಕ ಆನಂದ ಮಿಲ್ಟ್ರಿ ಇವರಿಬ್ಬರ ನಿರ್ಲಕ್ಷತನದಿಂದ ಈ ಅಪಘಾತ ಜರುಗಿದ್ದು, ಸದರಿಯವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕಾಗಿ ಹೇಳಿ ಗಣಕೀಕರಣ ಮಾಡಿಸಿದ ಹೇಳಿಕೆ ನಿಜವಿದೆ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಪಡೆದುಕೊಂಡು ಮರಳಿ ಠಾಣೆಗೆ 10-30 ಪಿಎಮ್ ಕ್ಕೆ ಹೋಗಿ ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 77/2017 ಕಲಂ: 279,337,338,304(ಎ) ಐಪಿಸಿ ಸಂ 187 ಐಎಮ್ವಿ ಎಕ್ಟ್ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 97/2017 ಕಲಂ: 147, 148, 323, 324, 504, 506 ಸಂ: 149 ಐಪಿಸಿ;-ದಿನಾಂಕ: 04.06.2017 ರಂದು ಬೆಳಿಗ್ಗೆ 9 ಗಂಟೆಗೆ ಪ್ರತಿ ದಿನದಂತೆ ನಾನು ಮತ್ತು ನನ್ನ ಹೆಂಡತಿ ಹಾಗೂ ಮಗನನ್ನು ಕರೆದುಕೊಂಡು ನಮ್ಮ ಹೊಲಕ್ಕೆ ಹೋಗಿ ನನ್ನ ಹೊಲದ ಪಕ್ಕದಲ್ಲಿ ಬೆಳೆದಿರುವ ಸಕರ್ಾರಿ ಜಾಲಿ ಗಿಡಗಳನ್ನು ಕಡಿಯುತ್ತಿದ್ದಾಗ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನಮ್ಮ ಅಣ್ಣನವರಾದ 1. ಲಿಯಾಖತಅಲಿ ಮತ್ತು 2. ಇಮಾಮಸಾಬ ಇವರು ಬಂದು ಏ ಭೋಸಡಿ ಮಗನೇ ಇಲ್ಲಿ ಎನ್ ಸೆಂಟಾ ಮಾಡ್ತಿದ್ದೀ ಭೋಸಡೀ ಮಗನೇ ನಮ್ಮ ಹೊಲ ಪಾಲು ಮಾಡುವಾಗ ಸರಿಯಾಗಿ ಪಾಲು ಮಾಡಿರುವದಿಲ್ಲ ಮಗನೇ ಈ ಭೂಮಿಯನ್ನು ನೀನು ಹೇಗೆ ಸಾಗುವಳಿ ಮಾಡುತ್ತೀ ಇಲ್ಲಿ ನೀನು ಸಾಗುವಳಿ ಮಾಡಿದರೆ ನಿನಗೆ ಖಲಾಸ ಮಾಡುತ್ತೇವೆಂದು ಮತ್ತು ಈ ಜಮೀನು ಬೀಳು ಹಾಕಬೇಕೆಂದು ಅನ್ನುತ್ತಾ ಅಣ್ಣನಾದ ಇಮಾಮಸಾಬ ಇವನು ಅಲ್ಲಿಯೇ ಬಿದ್ದ ಬಡಿಗೆಯಿಂದ ನನಗೆ ತಲೆಗೆ ಹೊಡೆಯುತ್ತಿದ್ದಾಗ ಇಮಾಮಸಾಬ ಇವನು ಕೂಡ ಅಲ್ಲಿಯೇ ಬಿದ್ದ ಬಡಿಗೆಯಿಂದ ಎರಡು ಬುಜಗಳ ಮೇಲೆ ಮತ್ತು ಬೆನ್ನಿಗೆ ಹೊಡೆದು ಗುಪ್ತ ಗಾಯಗೊಳಿಸಿರುತ್ತಾನೆ. ಅಲ್ಲಿಯೇ ಇದ್ದ ನನ್ನ ಹೆಂಡತಿಯಾದ ಪವರ್ಿನಬೇಗಂ ಇವಳು ಬಿಡಿಸಲು ಬಂದಾಗ ಅವಳಿಗೆ ನಮ್ಮ ಇಬ್ಬರು ಅಣ್ಣಂದಿರು ಮತ್ತು ನಮ್ಮ ಅಣ್ಣನ ಮಕ್ಕಳಾದ 3. ಅಬ್ದುಲ ಹಫೀಜ, 4. ಆಸೀಫ್, ಹಾಗೂ ಅತ್ತಿಗೆಯರಾದ 5. ಅಖ್ತರ್ಬೇಗಂ, 6. ಖತಾಲಬೀ, 7. ಮುನ್ನಿಬೇಗಂ ಇವರೆಲ್ಲರೂ ಒದರಾಡುತ್ತಾ ಬಂದು ಎಲ್ಲರೂ ಸೇರಿ ನನಗೆ ಮತ್ತು ಮತ್ತು ನನ್ನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು ಅವರಲ್ಲಿ ಅಬ್ದುಲ ಹಫೀಜ ಇವನು ಅಲ್ಲಿಯೇ ಬಿದ್ದ ಗಳೆಗೆ ಕಟ್ಟುವ ಕಟ್ಟಿಗೆಯಿಂದ ನನ್ನ ಹೆಂಡತಿಯ ತಲೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದನು. ಅತ್ತಿಗೆಯರಾದ ಅಖ್ತರ್ಬೇಗಂ, ಖತಾಲಬೀ, ಮುನ್ನಿಬೇಗಂ ಇವರು ನನ್ನ ಹೆಂಡತಿಗೆ ಕೈಯಿಂದ ಕಾಲಿನಿಂದ ಒದ್ದು ಹೊಡೆಬಡೆ ಮಾಡುತ್ತಿದ್ದಾಗ ನಾನು ಬಿಡಿಸಲು ಹೋದರೆ ನನಗೂ ಸಹ ಆಸೀಫ್ ಇವನು ಬಡಿಗೆಯಿಂದ ಬೆನ್ನಿಗೆ, ಕಾಲಿಗೆ, ಹೊಡೆದು ಗುಪ್ತ ಗಾಯಗೊಳಿಸಿರುತ್ತಾನೆ. ಮತ್ತು ನನ್ನ ಹೆಂಡತಿ ತಲೆಗೆ ಹೊಡೆದು ಭಾರಿ ರಕ್ತ ಗಾಯಪಡಿಸಿದ್ದು ಇರುತ್ತದೆ. ಅಷ್ಟಕ್ಕೆ ನಾವು ಅವರಿಗೆ ಅಂಜಿ ಮನೆಗೆ ಓಡಿ ಬರುತ್ತಿರುವಾಗ ಅವರೆಲ್ಲರೂ ಮಗನೇ ನೀವು ಇವತ್ತು ಉಳಕೊಂಡೀರಿ ಇನ್ನೊಂದು ಸಲ ಸಿಕ್ಕಾಗ ಖಲಾಸ ಮಾಡುತ್ತೇವೆಂದು ಜೀವದ ಭಯ ಹಾಕಿದ್ದು ಇರುತ್ತದೆ. ಸದರಿ ವಿಷಯವನ್ನು ನಮ್ಮ ಮಾವನಾದ ಮಹ್ಮದ ಹುಸೇನ ಇವರಿಗೆ ತಿಳಿಸಿದಾಗ ಅವರು ನನಗೆ ಮತ್ತು ನನ್ನ ಹೆಂಡತಿಗೆ ಉಪಚಾರ ಕುರಿತು ಸಕರ್ಾರಿ ಆಸ್ಪತ್ರೆ ಸೈದಾಪೂರಕ್ಕೆ ತಂದು ಸೇರಿಕೆ ಮಾಡಿರುತ್ತಾರೆಂದು ಹೇಳಿಕೆ ಸಾರಾಂಶದ ಮೇಲಿಂದ ಸೈದಾಪೂರ ಠಾಣೆ ಗುನ್ನೆ ನಂ: 97/2017 ಕಲಂ: 147, 148, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!