Yadgir District Reported Crimes Updated on 02-06-2017

By blogger on ಶುಕ್ರವಾರ, ಜೂನ್ 2, 2017


                                             Yadgir District Reported Crimes
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 76/2017 ಕಲಂ: 341,323,504,506 ಐಪಿಸಿ;- ದಿನಾಂಕ: 01/06/2017 ರಂದು ಬೆಳಗ್ಗೆ 9-30 ಗಂಟೆಗೆ ಶ್ರೀಮತಿ ಮಲ್ಲಮ್ಮ ಗಂಡ ಅಯ್ಯಪ್ಪ ಗುರುಸಣಗಿ ಸಾ:ಹೊರಟೂರು ಇವರ ಸಂಭಂಧಿಕರು ಪೊಲೀಸ್ ಠಾಣೆಗೆ ಫೋನ ಮಾಡಿ ಮಲ್ಲಮ್ಮಳು ರೀಮ್ಸ್ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದು, ತನಗೆ ಹೊಡೆದ ಬಗ್ಗೆ ಪ್ರಕರಣ ದಾಖಲ ಮಾಡಲು ದೂರು ಕೊಡುವುದಾಗಿ ತಿಳಿಸಿದ ಮೇರೆಗೆ ರೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಆಸ್ಪತ್ರೆಯಲ್ಲಿ ಮಲ್ಲಮ್ಮ ಇವರು ಕೊಟ್ಟ ಹೇಳಿಕೆ ಫಿರ್ಯಾಧಿಯೇನಂದರೆ ದಿನಾಂಕ: 21/05/2017 ರಂದು ರಾತ್ರಿ 8 ಗಂಟೆ ಸುಮಾರಿಗೆ ನಾನು ನಮ್ಮೂರು ನಿಂಗಮ್ಮ ಹರಿಜನ ಇವರ ಹೊಟೆಲ್ ಹತ್ತಿರ ಕುಳಿತುಕೊಂಡಿರುವಾಗ ನಮ್ಮ ಅಣ್ಣತಮ್ಮಕಿಯವನಾದ ಬಸಪ್ಪ ತಂದೆ ಹುಲೆಪ್ಪ ಗುರುಸಣಗಿ ಸಾ:ಹೊರಟೂರ ಈತನು ಬಂದು ನನಗೆ ಎಲೇ ಮಲ್ಲಿ ಭೊಸಡಿ ಸೂಳಿ ನಿನಗೆ ಬಹಳ ಸೊಕ್ಕು ಬಂದಿದೆ ಹಣ ಕೊಡುತ್ತೇನೆ ನಿನ್ನ ಹೊಲ ಲೀಜಿಗೆ ಕೊಡು ಎಂದರೆ ಕೊಡುತ್ತಿಲ್ಲ ಎಂದು ಜಗಳಕ್ಕೆ ಬಂದಾಗ ನಾನು ಈಗಾಗಲೇ ಬೇರೆಯವರಿಗೆ ಲೀಜಿಗೆ ಕೊಟ್ಟಿರುತ್ತೇನೆ ಎಂದು ಹೇಳಿ ಅಲ್ಲಿಂದ ಎದ್ದು ಬರುವಾಗ ಸದರಿ ಬಸಪ್ಪನು ನನಗೆ ತಡೆದು ನಿಲ್ಲಿಸಿ, ಎಲ್ಲಿಗೆ ಹೋಗುತ್ತಿ ಭೊಸುಡಿ ಎಂದು ಕೈಯಿಂದ ಹೊಡೆದು ಕಾಲಿನಿಂದ ಎಡಗಾಲಿನ ತೊಡೆಗೆ ಒದ್ದು ಕೈಯಿಂದ ನನ್ನ ಎಡಗಾಲನ್ನು ತಿರುವಿ ಗುಪ್ತಗಾಯಗೊಳಿಸಿದನು. ನಾನು ಚಿರಾಡುವಾಗ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾನೆ. ಆಗ ನಮ್ಮೂರ ನಿಂಗಮ್ಮ ಗಂಡ ಭೀಮಣ್ಣ ಹೊಟೆಲ್ ಮತ್ತು ಜೈನಮ್ಮ ಗಂಡ ಗುರಮಸಾಬ ಇವರು ಬಂದು ಜಗಳ ಬಿಡಿಸಿರುತ್ತಾರೆ. ದಿನಾಂಕ: 22/05/2017 ರಂದು ಸರಕಾರಿ ಆಸ್ಪತ್ರೆ ಯಾದಗಿರಕ್ಕೆ ಬಂದು ಉಪಚಾರಕ್ಕಾಗಿ ಸೇರಿಕೆಯಾಗಿದ್ದು, ಆಗ ನಾನು ನಮ್ಮ ಹಿರಿಯರಿಗೆ ವಿಚಾರಿಸಿ ನಂತರ ದೂರು ಕೊಡುವುದಾಗಿ ತಿಳಿಸಿದ್ದೆ. ಆ ನಂತರ ನಾನು ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ರಿಮ್ಸ್ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ. ಕಾರಣ ನನಗೆ ಅವಾಚ್ಯ ಬೈದು ತಡೆದು ನಿಲ್ಲಿಸಿ, ಕೈಯಿಂದ ಹೊಡೆದು, ಕಾಲಿನಿಂದ ಒದ್ದು ಗುಪ್ತಗಾಯ ಮಾಡಿದ ಬಸ್ಸಪ್ಪನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆ ಪಡೆದುಕೊಂಡು 6-15 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 76/2017 ಕಲಂ: 504,341,323,506 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 127/2017 ಕಲಂ: 504, 354(ಎ) 506, 114 ಸಂ.34 ಐಪಿಸಿ;- ದಿನಾಂಕ: 01.06.2017 ರಂದು ಮದ್ಯಾಹ್ನ 2.30 ಗಂಟೆಗೆ ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು ಅದರ ಸಾರಂಶವೇನೆಂಧರೆ ಪಿರ್ಯಾಧಿಗೆ 3 ಜನ ಗಂಡು ಮಕ್ಕಳು ಇದ್ದು ಗಂಡ ಏಸುರಾಜ ಈತನು ಈಗ 7 ತಿಂಗಳ ಹಿಂದೆ ಆರಾಮವಿಲ್ಲದ ಕಾರಣ ತೀರಿಕೊಂಡಿರುತ್ತಾನೆ. ಹೀಗಿದ್ದು ಈಗ ಒಂದು ವರ್ಷದ ಹಿಂದೆ ನಾನು ನನ್ನ ಗಂಡ ಹಾಗೂ ಮಕ್ಕಳೊಂದಿಗೆ ಕೂಲಿಕೆಲಸ ಮಾಡಲು ಬೆಂಗಳೂರಿಗೆ ಹೋದಾಗ ಅಲ್ಲಿ ನಮ್ಮ ಜಾತಿಯ ನಂದೀಪ ತಂದೆ ಶ್ಯಾಮಸುಂದರ ವಯ: 30 ವರ್ಷ, ಜಾ: ಕ್ರಿಶ್ಚಿಯನ್ ಸಾ: ಕೋಟಗೇರಾ ಈತನ ಪರಿಚಯವಾಗಿದ್ದು ಇರುತ್ತದೆ. ನನ್ನ ಗಂಡ ಇಲ್ಲ ಅನ್ನುವ ಕಾರಣದಿಂದ ಅದನ್ನೇ ನೆಪ ಮಾಡಿಕೊಂಡು ನನಗೆ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದನು. ಅವನ ಜೊತೆಗಿದ್ದ ದಾವೀದ್ ತಂದೆ ಏಸಪ್ಪ ಮಾವುರಿ ಈತನು ಸದರಿ ನಂದೀಪನಿಗೆ ನನಗೆ ಲೈಂಗಿಕ ಕಿರುಕುಳ ನೀಡುವ ಸಂಬಂಧವಾಗಿ ದುಷ್ಪ್ರೇರಣೆ ಮಾಡಿರುತ್ತಾನೆ. ನಾನು ಅವರಿಂದ  ಬೇಸತ್ತು ದಿನಾಂಕ. 08-04-2017 ರಂದು  ಕೋಟಗೇರಾ ಗ್ರಾಮಕ್ಕೆ ಮರಳಿ ಬಂದಿರುತ್ತೇನೆ. ಹೀಗಿರುವಾಗ ದಿನಾಂಕ. 12-04-2017 ರಂದು ನಂದೀಪ ಈತನು ಬೆಂಗಳೂರಿನಿಂದ ಕೋಟಗೇರಾ ಗ್ರಾಮಕ್ಕೆ ಬಂದಿದ್ದನು. ರಾತ್ರಿ 9-30 ಗಂಟೆಗೆ ನಾನು ಮಕ್ಕಳೊಂದಿಗೆ ಊಟ ಮಾಡಿ ಮನೆಯಲ್ಲಿ ಮಲಗಿದ್ದಾಗ 11-30 ಗಂಟೆ ಸುಮಾರಿಗೆ ಬಾಗಿಲು ಬಡಿದ ಸಪ್ಪಳ ಕೇಳಿ ಬಂದಾಗ ನಾನು ಬಾಗಿಲು ತೆರದು ಹೊರಗಡೆ ಬಂದು ನೋಡಲಾಗಿ ನಂದೀಪ ಈತನು ನಿನ್ನ ಗಂಡ ತೀರಿ ಹೋಗಿದ್ದಾನೆ ನೀನು ಒಬ್ಬಳೇ ಇದ್ದೀ ನನ್ನ ಜೊತೆಗೆ ಬಾರಲೇ ಬೊಸಡಿ ರಂಡೆ ಅಂತ ಮೈ ಮುಟ್ಟಿ ಕೈ ಹಿಡಿದು ಜಗ್ಗಾಡಿ ಲೈಂಗಿಕ ಕಿರುಕುಳ ನೀಡಿ ನೀನು ನನ್ನ ಸಂಗಡ ಬರಲಿಲ್ಲ ಅಂದರೆ ನಿನಗೆ ಜೀವ ಸಮೇತ ಬಿಡಲ್ಲ. ಅಂತ ಜೀವದ ಬೆದರಿಕೆ ಹಾಕಿ ನನ್ನ ಮಾನ ಕಳೆಯಲು ಯತ್ನಿಸಿದನು. ಆಗ ನಾನು ಚೀರಾಡುವಾಗ ನಮ್ಮ ಓಣಿಯವರಾದ ಚಂದ್ರಶೇಖರ ತಂದೆ ಭೋಜಪ್ಪ ಬೋಜಪ್ಪನೊರ, ಸಂಮೃದ್ದೀ ತಂದೆ ರಾಜಪ್ಪ ಬೋಜಪ್ಪನೊರ , ಅನಿಲ ತಂದೆ ದೇವಸುಂದರಪ್ಪ , ಇವರು ಬಂದು ನೋಡಿ ಬಿಡಿಸಿರುತ್ತಾರೆ. ಕಾರಣ ನನಗೆ  ಲೈಂಗಿಕ ಕಿರುಕುಳ ನೀಡಿ ಅವ್ಯಾಚವಾಗಿ ಬೈದು ಜೀವದ ಬೆದರಿಕೆ ಹಾಕಿದ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಕೊಟ್ಟ ಸದರಿ ಹೇಳಿಕೆಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 127/2017 ಕಲಂ: 504. 354(ಎ), 506, 114 ಸಂ/ 34 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 179/2017  ಕಲಂ 498(ಎ) 323.324.504.506.ಐಪಿಸಿ;- ದಿನಾಂಕ: 01/06/2017 ರಂದು 10.00 ಎ.ಎಂ ಕ್ಕೆ ನ್ಯಾಯಾಲಯದ ಕರ್ತವ್ಯದ ಪೇದೆ ಶ್ರೀ ಸುರೇಶ ಕದಮ್ ಪಿಸಿ-256 ರಂದು ಮಾನ್ಯ ನ್ಯಾಯಾಲಯದಿಂದ ಒಂದು ಖಾಸಗಿ ಫಿಯರ್ಾದಿ ಸಂ. 15/2017 ನೇದ್ದನ್ನು ತಂದು ಹಾಜರಪಡಿಸಿದ್ದು, ಸದರಿ ಖಾಸಗಿ ಫಿಯರ್ಾದಿಯ ಸಾರಾಂಶವೇನೆಂದರೆ, ಫಿಯರ್ಾದಿ ಶ್ರೀಮತಿ ಸೌಭಾಗ್ಯ ಗಂ/ ಅರಳಪ್ಪ ಇವಳು ದಿನಾಂಕ: 22/04/2017 ರಂದು ತನ್ನ ತವರು ಮನೆಯಾದ ಕನ್ಯಾಕೊಳ್ಳೂರದಲ್ಲಿ ಊಟ ಮಾಡಿ ಮಲಗಿದ್ದಾಗ ಆರೋಪಿ ಅರಳಪ್ಪ ತಂ/ ರಾಮಲಿಂಗಪ್ಪ ಹರಿಜನ ಈತನು ವಿನಹಃ ಕಾರಣ  ಜಗಳ ತೆಗೆದು ನೀಲ್ಲೆ ಇರಬೇಕು ಬೋಸಡಿ, 5-6 ವರ್ಷಗಳಿಂದ ವ್ಯವಹಾರ ಮಾಡಕ್ಕೆ ದುಡ್ಡು ಇಸ್ಕೊಂಡು ಬಾ ಅಂತಾ ಹೇಳಿದರೂ ಕೇಳ್ತಾಇಲ್ಲಾ ನಿನಗೆ ಬುದ್ದಿ ಕಲಿಸ್ತೀನಿ ಅಂತಾ ತನ್ನ ಕಾಲಿನಿಂದ ಫಿಯರ್ಾದಿಯ ಬೆನ್ನಿಗೆ ಒದ್ದಿದ್ದು, ಅಲ್ಲೆ ಪಕ್ಕದಲ್ಲಿ ಇದ್ದ ಕೊಡಲಿ ಕಾವಿನಿಂದ ಬಲ ರಟ್ಟೆಗೆ ಮತ್ತು ಎದೆಗೆ ಜೋರಾಗಿ ಹೊಡೆದಿದ್ದು, ಆಗ ಫಿಯರ್ಾದಿಯ ತಮ್ಮ ಮತ್ತು ದೊಡ್ಡಮ್ಮ ಇವರು ಬಂದು ಜಗಳ ಬಿಡಿಸಿದ್ದು, ನಂತರ ಅವಾಚ್ಯವಾಗಿ ಬೈಯುತ್ತಾ, ನೀನು ಹೇಗೆ ಊರಿಗೆ ಬರುತ್ತಿ ಬಾ ನಿನಗೆ ಕಲಾಸ ಮಾಡುತ್ತೇನೆ ಅಂತಾ ಬೆದರಿಕೆ ಹಾಕಿ ಹೋಗಿದ ಬಗ್ಗೆ ಖಾಸಗಿ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 179/2017 ಕಲಂ 498(ಎ), 323, 324, 504, 506 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
 
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 93/2017 ಕಲಂ: 323, 324, 504, 506 ಐಪಿಸಿ;- ದಿನಾಂಕ 01/06/2017 ರಂದು ಬೆಳಿಗ್ಗೆ 8-00 ಗಂಟೆಗೆ ಫಿರ್ಯಾಧಿದಾರನು ಶೆಟ್ಟಿಕೇರಾ ಗ್ರಾಮದ ಶಾಂತಮ್ಮ ಇವರ ಹೊಟೆಲ ಹತ್ತಿರ ಫಿರ್ಯಾಧಿದಾರನು ಹೋಗಿ ಆರೋಪಿತನಿಗೆ ನನಗೆ ಸಾಲಯಿದೆ ನನ್ನ ಹೊಲ ಮಾರಾಟ ಮಾಡುತ್ತಿದ್ದೆನೆ ಬೇರೆಯವರಿಗೆ ಹೊಲ ತೆಗೆದುಕೊಳ್ಳಬೇಡ ಅಂತಾ ಯಾಕೆ ಹೇಳುತ್ತಿದ್ದಿ ಅಂತಾ ಕೇಳಿದಕ್ಕೆ ಏ ಬೋಸಡಿ ಮಗನೇ ಮನೆ ಕಟ್ಟುತ್ತಿದ್ದೆನೆ, ನನಗೆ ಕಟ್ಟಿಗೆಗಳು ಬೇಕಾಗಿವೆ ನಿಮ್ಮ ಹೊಲದಲ್ಲಿಯ ಗಿಡಗಳು ಕಡಿದುಕೊಳ್ಳುತ್ತೆನೆ ಅವಾಗ ಮಾರಾಟ ಮಾಡು ಅಂತಾ ಆರೋಪಿತನು ಆವಾಚ್ಯವಾಗಿ ಬೈದು ಜಗಳ ತೆಗೆದು ಕಟ್ಟಿಗೆಯಿಂದ, ಕೈಯಿಂದ ಹೊಡೆದ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 94/2017 ಕಲಂ: 302, 201 ಐಪಿಸಿ;- ಮೃತಳಾದ ಅನೀತಾ ಗಂ. ವಿಜಯ@ವಿನಾಯಕ ರಾಠೋಡ ಇವಳ ಗಂಡನಾದ ವಿಜಯ @ ವಿನಾಯಕ ಇತನು ಚಾಂಗಿಬಾಯಿ ಸಾ: ಯರಗೋಳ ತಾಂಡ ಎಂಬಾಕೆಯ ಜೋತೆಗೆ ಸುಮಾರು 3 ವರ್ಷಗಳಿಂದ ಅನೈತಿಕ ಸಂಬಂದ ಹೊಂದಿದ್ದು, ಅನೀತಾ ಇವಳು ತನ್ನ ಗಂಡನಿಗೆ ಚಾಂಗಿಬಾಯಿ ಇವಳಲ್ಲಿ ಹೋಗಬೇಡ, ಅವಳ ಸಂಪರ್ಕ ಬಿಡು ಅಂತಾ ಸುಮಾರು ದಿವಸಗಳಿಂದ ಗಂಡನೊಂದಿಗೆ ತಂಟೆ ತಕರಾರು ಮಾಡುತ್ತಾ ಬಂದಿದ್ದು, ಇದೇ ವಿಚಾರವಾಗಿ ಆರೋಪಿತನು ನಿನ್ನೆ ದಿನಾಂಕ 01-06-2017 ರಂದು 10 ಪಿ.ಎಮ ದಿಂದ ದಿನಾಂಕ 02-06-6017 ರ ರಾತ್ರಿ 2 -00 ಎ.ಎಮದ ಮದ್ಯದ ಅವದಿಯಲ್ಲಿ ಅನೀತಾ ಇವಳಿಗೆ ಮನೆಯಲ್ಲಿ ಕೊಲೆ ಮಾಡಿ, ಕೊಲೆ ಮರೆಮಾಚುವ ಸಲುವಾಗಿ ತನ್ನ ಟಂಟಂದಲ್ಲಿ ಹಾಕಿಕೊಂಡು ಹೋಗಿರುತ್ತಾನೆ. ಕಾರಣ ಸದರಿ ವಿಜಯ @ ವಿನಾಯಕ ಈತನ ಮೇಲೆ ಕಾನೂನು ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.94/2017 ಕಲಂ. 302, 201 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!