Yadgir District Reported Crimes Updated on 25-05-2017

By blogger on ಗುರುವಾರ, ಮೇ 25, 2017

                                                      
                                                  Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 84/2017 ಕಲಂ 379 ಐ.ಪಿ.ಸಿ;- ಫಿಯರ್ಾಧಿ ಸಾರಾಂಶವೇನೆಂದರೆ, ನಾನು ಮೇಲ್ಕಂಡ ಹೆಸರು ವಿಳಾಸದ ನಿವಾಸಿತನಿದ್ದು, ಇಂಟರನೇಟ್ ಸಾಪ್ಟ್ವೇರ್ ಸೇಲ್ಸ್ & ಸವರ್ಿಸಿ ಹಾಗೂ ಸಿ.ಸಿ ಟಿ.ವಿ ಸೆಟಪ್ ಕೆಲಸ ಮಾಡಿಕೊಂಡು ಇರುತ್ತೇನೆ. ನಾನು ಯಾದಗಿರಿ ನಗರದ ಗನೇಶ ನರದಲ್ಲಿ ಇರುವ ವೀರಭದ್ರಪ್ಪ ತಂದೆ ಗುರಲಿಂಗಪ್ಪ ಮೋಟರ್ ಇವರ ಮನೆಯಲ್ಲಿ ಬಾಡಿಗೆಗೆ ಇರುತ್ತೇನೆ. ನಮ್ಮ ಮನೆಯಲ್ಲಿ ನಾನು ನಮ್ಮ ತಾಯಿ ಸರಸ್ವತಿ ಗಂಡ ಬಸಯ್ಯ ಸ್ವಾಮಿ, ಹಾಗೂ ನನ್ನ ಹೆಂಡತಿ ಪೂಜಾ ವಾಸವಾಗಿರುತ್ತೇವೆ. ನನ್ನ ಹೆಂಡತಿಯ ಜನೇವರಿ ತಿಂಗಳಲ್ಲಿ ತನ್ನ ತವರು ಮನೆಯಾದ ಬೆಂಗಳೂರಿಗೆ ಹೋಗಿದ್ದು, ದಿನಾಂಕ 18/05/2017 ರಂದು ನಮ್ಮ ಅಕ್ಕನ ಮಗಳ ಮದುವೆ ಬೆಂಗಳೂರಿನಲ್ಲಿ ಇದ್ದದ್ದರಿಂದ ನಮ್ಮ ತಾಯಿ ಕೂಡ ಬೆಂಗಳೂರಿಗೆ ಹೋಗಿದ್ದಳು. ನಾನು ಕೂಡ ಸದರಿ ಮದುವೆಗೆ ದಿನಾಂಕ 20/05/2017 ರಂದು 05-45 ಪಿ.ಎಂ ಸುಮಾರಿಗೆ ಮನೆ ಬೀಗ ಹಾಕಿಕೊಂಡು ಮದುವೆಗೆ ಬೆಂಗಳೂರಿಗೆ ಹೋಗಿದ್ದೆನು. ಮನೆಯಲ್ಲಿ ಯಾರು ಇರಲಿಲ್ಲ. ಹೀಗಿದ್ದು ದಿನಾಂಕ 23/05/2017 ರಂದು ಬೆಳಿಗ್ಗೆ 08-30 ಗಂಟೆಯ ಸುಮಾರಿಗೆ ನಮ್ಮ ಮನೆಯ ಮಾಲಿಕರಾದ ವೀರಭದ್ರಪ್ಪ ಇವರು ಪೋನ್ ಮಾಡಿ ಮನೆ ಕಳ್ಳತನವಾದ ಬಗ್ಗೆ ವಿಷಯ ತಿಳಿಸಿದಾಗ ಇಂದು ದಿನಾಂಕ 24/05/2017 ರಂದು ಬೆಳಿಗ್ಗೆ 06 ಗಂಟೆಗೆ ನಾನು ಬೆಂಗಳೂರಿನಿಂದ ಬಂದು ನೋಡಿದಾಗ ಮನೆಯ ಬಾಗಿಲು ಕೀಲಿ ತೆರೆದಿತ್ತು. ಒಳಗೆ ಹೋಗಿ ನೋಡಲಾಗಿ ಮನೆಯ ಬೆಡ್ ರೂಮದಲ್ಲಿದ್ದ ಬೀರೋ (ಅಲಮಾರಿ) ಕೀಲಿ ಮುರಿದಿದದ್ದು ಕಂಡು ಬಂತು. ಅದರಲ್ಲಿ ಇಟ್ಟಿದ್ದ 123 ತೊಲಿ ಬೆಳ್ಳಿಯ ಹಾಗೂ 10 ತೊಲೆ ಬಂಗಾರದ ಸಾಮಾನುಗಳನ್ನು ಒಟ್ಟು 3,31,660=00 ಕಿಮ್ಮತ್ತಿನ ಬಂಗಾರ ಬೆಳ್ಳಿ ಸಾಮಾನುಗಳು ಮನೆಯಲ್ಲಿ ಇಲ್ಲದಿದ್ದಾಗ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಫಿಯರ್ಾಧಿ ಸಾರಾಂಶ ಇರುತ್ತದೆ. 

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 86/2017 ಕಲಂ, 279, 338, 429, 304(ಎ) ಐಪಿಸಿ;- ದಿನಾಂಕ: 22/05/2017 ರಂದು 10-45 ಪಿಎಮ್ಕ್ಕೆ ಠಾಣೆಯಲ್ಲಿದ್ದಾಗ ಠಾಣೆಯ ಶ್ರೀ ಶರಣಪ್ಪ ಹೆಚ್.ಸಿ-15 ರವರು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ವಸೂಲು ಮಾಡಿಕೊಂಡು ಗಾಯಾಳುದಾರನ ಹೆಂಡತಿಯಾದ ಶ್ರೀಮತಿ ಬಾನು ಬೇಗಂ ಗಂಡ ಮಹ್ಮದ ರಪೀಕ್ ಅಡಮಾಜಿ ಸಾ|| ಗೋಗಿಪೇಠ ಇವರ ಹೇಳಿಕೆ ಪಿರ್ಯಾದಿ ಪಡೆದುಕೊಂಡು ಬಂದು ಹಾಜರ್ ಪಡಿಸಿದ್ದರ ಸಾರಾಂಶವೆನೆಂದರೆ, ತನ್ನ ಗಂಡ ಮಹ್ಮದ ರಪೀಕ್ ತಂದೆ ಇಕ್ಬಾಲ್ ಅಡಮಾಜಿ ಈತನು ತನ್ನ ಗೆಳೆಯನಾದ ಮಹಿಬೂಬ ತಂದೆ ಜಬ್ಬರಸಾಬ ಸಣ್ಣಖುರೇಷಿ ಇವರೊಂದಿಗೆ ಮೈಬೂಬ ಇವರ ಮೋಟಾರ್ ಸೈಕಲ್ ನಂ: ಕೆಎ-33 ಕ್ಯೂ-4547 ನೇದ್ದರ ಮೇಲೆ ದಿನಾಂಕ: 21/05/2017 ರಂದು ರಾತ್ರಿ 10-00 ಗಂಟೆ ಸುಮಾರಿಗೆ ಶಹಾಪೂರಕ್ಕೆ ಹೋಗುವಾಗ ಗೋಗಿ-ಭೀ.ಗುಡಿ ಮುಖ್ಯ ರಸ್ತೆಯ ಹತ್ತಿ ಕಾಟನ್ ಮಿಲ್ ಹತ್ತಿರ ರೋಡಿನ ಮೈಹಿಬೂಬ ಈತನು ಸೈಕಲ್ ಮೋಟಾರನ್ನು ಅತಿವೇಗ ಹಾಗೂ ಅಲಕ್ಷ್ಯತನದಿಂದ ನಡೆಸಿ ಕುದುರೆಗೆ ಡಿಕ್ಕಿಪಡಿಸಿದ್ದರಿಂದ ನನ್ನ ಗಂಡ ಮಹ್ಮದ ರಫೀಕ್ ಈತನಿಗೆ ತಲೆಗೆ ಬಾರೀ ರಕ್ತಗಾಯವಾಗಿದ್ದು ಕಿವಿಯಿಂದ ರಕ್ತ ಬರುತ್ತಿದ್ದು  ಮತ್ತು ಎದೆಗೆ ಬಾರೀ ಒಳಪೆಟ್ಟಾಗಿದ್ದು ಶಹಾಪೂರ ಆಸ್ಪತ್ರೆಗೆ ಸೇರಿಕೆಯಾಗಿದ್ದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಂತಾ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 86/2017 ಕಲಂ, 279, 338, 427 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  ಇಂದು ದಿನಾಂಕ: 23/05/2017 ರಂದು 11-00 ಎಎಮ್ ಕ್ಕೆ  ಪ್ರಕರಣದಲ್ಲಿಯ ಪಿರ್ಯಾದಿದಾರಳಾದ ಶ್ರೀಮತಿ ಬಾನು ಬೇಗಂ ಇವರು ಠಾಣೆಗೆ ಹಾಜರಾಗಿ ತಮ್ಮ ಪುರವಣಿ ಹೇಳಿಕೆ ನೀಡಿದ್ದೆನೆಂದರೆ, ಕಲಬುರಗಿಯ ಯುನೈಟೆಡ್ ಆಸ್ಪತ್ರ  ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ದಿನಾಂಕ: 23/05/2017 ರಂದು 1-30 ಎಎಮ್ ಸುಮಾರಿಗೆ ಸೊಲ್ಲಾಪೂರಕ್ಕೆ ಹೋಗುವಾಗ ಕಲಬುರಗಿ ನಗರ ದಾಟಿ 2-00 ಎಎಮ್ ಸುಮಾರಿಗೆ ಪಿರ್ಯಾದಿ ಗಂಡ ಮಹ್ಮದ ರಫೀಕ್ ಇತನು  ಮೃತಪಟ್ಟಿರುತ್ತಾನೆ ಮತ್ತು  ಮತ್ತು ಸೈಕಲ್ ಮೋಟಾರ ಸವಾರ ಮೈಹಿಬೂಬ ಈತನು ಕುದುರೆಗೆ ಡಿಕ್ಕಿಪಡಿಸಿದ್ದರಿಂದ ಕುದುರೆಯು ಕೂಡಾ ಮೃತಪಟ್ಟಿದ್ದು ರೋಡಿನ ಬಾಜು ಬಿದ್ದಿರುತ್ತದೆ ಅಂತಾ ತಿಳಿದುಬಂದಿರುತ್ತದೆ ಅಂತಾ  ಪುರವಣಿ ಹೇಳಿಕೆ ನೀಡಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ, 304 (ಎ) ಐಪಿಸಿ ನೇದ್ದನ್ನು ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 122/2017 341,323,504,506 ಸಂ.34 ಐಪಿಸಿ;- ದಿನಾಂಕ 24-05-2017 ರಂದು ಮದ್ಯಾಹ್ನ 1.30 ಪಿ.ಎಂ ಕ್ಕೆ ಪಿರ್ಯಾಧಿ ಶ್ರೀ ಶ್ರೀಶೈಲ್ ತಂದೆ ಬಸವರಾಜ ಪೂಜಾರಿ ವಯ: 22 ವರ್ಷ, ಜಾ: ಕುರುಬರ ಉ: ಒಕ್ಕಲುತನ ಸಾ: ಕೋಟಗೇರಾ ತಾ||ಜಿ||ಯಾದಗಿರಿ ಈತನು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾಧಿ ನೀಡಿದ್ದು ಸಾರಾಂಶವೆನೆಂದರೆ  ಹೀಗಿದ್ದು ನಿನ್ನೆ ದಿನಾಂಕ.23-05-2017 ರಂದು ನಮ್ಮ ಗ್ರಾಮದಲ್ಲಿ ನಮ್ಮ ಸಮಾಜದವರಾದ ಮಹೇಶ ತಂದೆ ಶಿವಶರಣಪ್ಪ ಸೊಲಿಗಿ ಇವರ ಮದುವೆ ಮೆರವಣಿಗೆ ಸಮಾರಂಭದಲ್ಲಿ ಉಪ್ಪಾರ ಸಮಾಜದ 1) ನಿರಂಜನ ತಂದೆ ರಾಮಣ್ಣ ಬಳಿಚಕ್ರ ವಯ:25 ವರ್ಷ, ಜಾ: ಉಪ್ಪಾರ  2)ಯಂಕಟಪ್ಪ ತಂದೆ ಚಂದ್ರಪ್ಪ ವಯ: 26 ವರ್ಷ, ಜಾ: ಉಪ್ಪಾರ 3)ಗುಂಡಪ್ಪ ತಂದೆ ಭೀಮಣ್ಣ ಕುಂಚೆಟ್ಟಿ ವಯ: 26 ವರ್ಷ, ಜಾ: ಉಪ್ಪಾರ ಉ:ಒಕ್ಕಲುತನ 4)ಶೇಖಪ್ಪ ತಂದೆ ಸಂಜೀವಪ್ಪ ಬಂದಳ್ಳಿ ವಯ: 23 ವರ್ಷ, ಜಾ: ಉಪ್ಪಾರ ಉ: ಕೂಲಿ ಎಲ್ಲರೂ ಸಾ: ಕೋಟಗೇರಾ  ಇವರು ಮದುವೆಗೆ ಕರೆಯದೆ ಇದ್ದರೂ ಮದುವೆ ಮೇರವಣಿಗೆಯಲ್ಲಿ  ಸೇರಿ ಡ್ಯಾನ್ಸ್ ಮಾಡುತ್ತಾ  ಕುಡಿದವರಂತೆ ನಟನೆ ಮಾಡುತ್ತಾ ನನಗೆ ಮತ್ತು  ನಮ್ಮ ಸಮಾಜದ ಮಲ್ಲಿಕಾಜರ್ುನ ತಂದೆ ಮೈಲಾರಿ, ರೆಡ್ಡೆಪ್ಪ ತಂದೆ ಭೀರಪ್ಪ ಇವರಿಗೆ ಕಾಲು ತುಳಿದು ಜಗಳ ತೆಗೆದಿದ್ದು  ಅದಕ್ಕೆ ನಾವು ಯಾವು ಯಾಕೆ ಹೀಗೆ ಮಾಡುತ್ತಿದ್ದಿರೀ ಅಂತ ಕೇಳಿದರೆ ನಮಗೆ ನೀವೂ ಬೇರೆ ಕಡೆ ಸಿಗರೀ ನೋಡುತ್ತೇವೆ ಅಂತ ಅಂದು ಹೋದವರು ಇಂದು ಬೆಳಿಗ್ಗೆ 8-00 ಗಂಟೆಗೆ ನಾನು ಕೂಲಿಕೆಲಸ ಮಾಡಲು ಟ್ಯಾಕ್ಟರಗೆ ಹತ್ತಲು ಹೊರಟಾಗ ನಮ್ಮೂರಿನ ದ್ಯಾವಮ್ಮ ದೇವಿ ಗುಡಿ ಹತ್ತಿರ ಅಲ್ಲಿಗೆ ಬಂದ ನಿರಂಜನ, ಯಂಕಟಪ್ಪ, ಗುಂಡಪ್ಪ, ಶೇಕಪ್ಪ ಇವರು ಅಲ್ಲಿಗೆ ಬಂದವರೇ, ನನಗೆ ಕೆಲಸಕ್ಕೆ ಹೋಗುವದನ್ನು ತಡೆದು ನಿಲ್ಲಿಸಿ, ಏ, ಕುರುಬ ಸೂಳೇ ಮಗನೇ ನಿನ್ನೆ ರಾತ್ರಿ ನಮಗೆ   ಬಾಯಿಗೆ ಬಂದಂಗೆ ಮಾತಾಡುತ್ತೀ ಸೂಳೇ ಮಗನೇ ಅಂತ ಅಂದವರೆ ಗುಂಡಪ್ಪ ಈತನು ನನ್ನ ಅಂಗಿ ಹಿಡಿದು ಜಗ್ಗಿ ಕಪಾಳಕ್ಕೆ ಕೈಯಿಂದ ಹೊಡೆದಿದ್ದು, ನಿರಂಜನ ಈತನು ಬೆನ್ನಿಗೆ,ತಲೆಗೆ,ಕಪಾಳಕ್ಕೆ ಹೊಡೆದಿದ್ದು,ಶೇಖಪ್ಪ ಈತನು ಕಾಲಿಗೆ ಒದ್ದು ಕೆಳಗೆ  ಕೆಡವಿದ್ದು ಯಂಕಟಪ್ಪ ಈತನು ನನಗೆ ಕೆಳಗೆ ಬಿದ್ದಾಗ ರಸ್ತೆಗೆ ಹಾಕಿ ಒದ್ದಿದ್ದು, ಎಲ್ಲರೂ ಕೂಡಿ ನನಗೆ ಮನಸ್ಸಿಗೆ ಬಂದಂತೆ ಹೊಡೆಬಡೆ ಮಾಡಿದ್ದು ಬೆನ್ನಿಗೆ, ತುಟಿಗೆ, ಕಣ್ಣಿನ ಕೆಳಗೆ ಗುಪ್ತಗಾಯ ಮಾಡಿದ್ದು ಇರುತ್ತದೆ. ಅಷ್ಟರಲ್ಲಿ ಅಲ್ಲಿಯೇ ಇದ್ದ ನಮ್ಮೂರಿನ ಬಸಪ್ಪ ತಂದೆ ಸಾಬಣ್ಣ ಸೊಲಿಗಿ, ಶರಣಪ್ಪ ತಂದೆ ಬಸಣ್ಣ ಉಶೆಪ್ಪನ್ನೋರ ಇವರು ಬಂದು ನನಗೆ ಹೊಡೆಯುವದನ್ನು ಬಿಡಿಸಿದ್ದು, ಅಗ ಎಲ್ಲರೂ ಸೇರಿ ಮಗನೇ ಇವತ್ತು ಇವರು ಬಂದು ಬಿಡಿಸಿದರು ಅಂತ ಬದುಕಿದೆ ಇನ್ರ್ನೆಮ್ಮ  ಸಿಕ್ಕರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕುತ್ತಾ ಹೋದರು, 
       ಹೀಗೆ ನಮ್ಮ ಸಮಾಜದವರ ಮದುವೆ ಮೆರವಣಿಗೆಯಲ್ಲಿ ಗಲಾಟೆ ಮಾಡಿದ್ದಲ್ಲದೇ ಹಾಗೇ ಮಾಡಬಾರದು ಅಂತ ಹೇಳಿದ್ದಕ್ಕೆ ನನಗೆ ಇಂದು 24-05-2017 ರಂದು ಬೆಳಿಗ್ಗೆ 8-00 ಗಂಟೆಗೆ  ಸದರಿ ವಿಷಯದಲ್ಲಿ ಜಗಳ ತೆಗೆದು ನನಗೆ ಕೆಲಸಕ್ಕೆ ಹೋಗುವದನ್ನು ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು, ಕೈಯಿಂದ ಹೊಡೆದು, ಕಾಲಿನಿಂದ ಒದ್ದು, ಜೀವ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ. ನಾನು ಮನೆಯಲ್ಲಿ ನನ್ನ ತಂದೆಗೆ ಮತ್ತು ನಮ್ಮ ಸಮಾಜದ ಮುಖಂಡರಿಗೆ ವಿಷಯ ತಿಳಿಸಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ 24-05-2017 ರಂದು ಮಧ್ಯಾನ್ಹ 1-30 ಗಂಟೆಗೆ ಠಾಣೆಗೆ ಬಂದು ಬಾಯಿ ಮಾತಿನ ಹೇಳಿಕೆ ನೀಡಿ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 122/17 ಕಲಂ 341, 323, 504, 506 ಸಂ. 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು,.
   
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 172/2017  ಕಲಂ 279 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ;- ದಿನಾಂಕಃ 23/05/2017 ರಂದು ಸಕರ್ಾರಿ ಆಸ್ಪತ್ರೆ ಶಹಾಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳು  ಮುತರ್ುಜಾಸಾಬ ಮುಲ್ಲಾ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಾನು ಶಹಾಪೂರ ನಗರದ ಮಮತಾ ಕಾಲೋನಿಯಲ್ಲಿರುವ ನಮ್ಮ ಸಂಬಂಧಿಕರ ಮನೆಗೆ ಹೋಗಿ ಮಾತನಾಡಿಸಿ ಬರಬೆಕೆಂದು ಶಹಾಪೂರ ಹತ್ತಿಗೂಡೂರ ಮುಖ್ಯರಸ್ತೆಯ ಪಕ್ಕದಲ್ಲಿ ಶಹಾಪೂರ ನಗರದ ಮಮತಾ ಕಾಲೋನಿ ಹತ್ತಿರವಿರುವ ನಾಶನಲ್ ಅಟೋಮೊಬೈಲ್ಸ್ ಅಂಗಡಿ ಮುಂದೆ ರಸ್ತೆ ದಾಟುತ್ತಿದ್ದಾಗ ಶಹಾಪೂರ ಕಡೆಯಿಂದ ಮೊಟರ ಸೈಕಲ್ ನಂಬರ ಕೆ.ಎ 33 ಯು 6041 ನೆದ್ದರ ಸವಾರನು ತನ್ನ ಮೋಟರ ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಜೋರಾಗಿ ಡಿಕ್ಕಿಪಡಿಸಿದ ಪರಿಣಾಮ ನನ್ನ ಎಡಗಾಲು ಮೊಣಕಾಲಿನ ಕೆಳಗಡೆ ಅಂದಾಜು 1 ಫೀಟ ಉದ್ದದಷ್ಟು ಹರಿದ ಭಾರಿ ರಕ್ತಗಾಯವಾಗಿದ್ದು, ಬಲಗೈ ಹಸ್ತಕ್ಕೆ ಹಾಗು ಬಲಹಣೆಯ ಮೇಲ್ಭಾಗ ತಲೆಯಲ್ಲಿ ರಕ್ತಗಾಯವಾಗಿ ಮೈಯಲ್ಲಿ ಒಳಪೆಟ್ಟಾಗಿರುತ್ತದೆ. ಮೋಟರ ಸೈಕಲ ಸವಾರನು ಜನರು ಸೇರಿದ್ದನ್ನು ನೋಡಿ ಮೋ.ಸೈಕಲ್ ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 172/2017 ಕಲಂ. 279 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
  
ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 49/2017  ಕಲಂ:279,337, 338, 304(ಎ) ಐಪಿಸಿ ;- ದಿನಾಂಕ:23.05.2017 ರಂದು 22:45 ಗಂಟೆಗೆ ಫಿಯರ್ಾದಿ ಶ್ರೀ ಹಣಮಂತ ತಂದೆ ಲಕ್ಷ್ಮಣ ಆದರಮಗ್ಗಿ ವಯಃ44, ಉಃಒಕ್ಕಲುತನ, ಜಾಃಹಿಂದೂ ಬೇಡರ ಸಾಃಬಲಶೇಟ್ಟಿಹಾಳ ತಾಃಸುರಪೂರ, ಇವರು ಒಂದು ಕನ್ನಡದಲ್ಲಿ ಬರೆದ ಲಿಖಿತ ಫಿಯರ್ಾದಿ ಅಜರ್ಿಯನ್ನು ಸರಕಾರಿ ಆಸ್ಪತ್ರೆ ರಾಜನಕೊಳುರದಲ್ಲಿ ಸ್ವೀಕರಿಸಿಕೊಂಡು ಸದರ ಫಿಯರ್ಾದಿಯ ಲಿಖಿತ ಫಿಯರ್ಾದಿ ಅಜರ್ಿಯೊಂದಿಗೆ ಮರಳಿ ಠಾಣೆಗೆ 22:55 ಗಂಟೆಗೆ ಬಂದಿದ್ದು, ಸದರ ಫಿಯರ್ಾದಿಯ ಲಿಖಿತ ಫಿಯರ್ಾದದ ಸಾರಾಂಶವೆನೆಂದರೆ, ಇಂದು ದಿನಾಂಕಃ23.05.2017 ರಂದು ರಾಜನಕೊಳುರು ಗ್ರಾಮದಲ್ಲಿ ಗ್ರಾಮದೇವಿ ಜಾತ್ರಿ ಇದ್ದು, ರಾಜನಕೊಳೂರು ಗ್ರಾಮದಲ್ಲಿ ನಮ್ಮ ಬೀಗರು ಇದ್ದು, ಅವರ ನಮಗೆ ಜಾತ್ರೆಗೆ ಬರಲು ತಿಳೀಸಿದ್ದರಿಂದ ನಾನು ಮತ್ತು ನನ್ನ ತಮ್ಮ ಕನಕರಾಯ ಒಂದು ಮೋಟಾರು ಸೈಕಲ್ ಮೇಲೆ, ನನ್ನ ತಾಯಿ ಲಕ್ಷ್ಮಮ್ಮ ಹಾಗು ತಂಗಿ ಮೀನಾಕ್ಷಿ ರವರು ನಮ್ಮೂರ ರವಿ ತಂದೆ ಹಣಮಂತ್ರಾಯ ಹೊಸೂರು ರವರ ಮೋಟಾರು ಸೈಕಲ್ ನಂ ಕೆ.ಎ-33 ಯು-0379 ರ ಮೇಲೆ ರಾಜನಕೊಳೂರುಗೆ ಹೋಗಲು ನಮ್ಮೂರಿನಿಂದ ಸಾಯಂಕಾಲ 7:45 ಗಂಟೆಗೆ ಬಿಟ್ಟಿದ್ದು, ನನ್ನ ಮೋಟಾರು ಸೈಖಲ್ ಮುಂದೆ ಇದ್ದು, ರವಿಯ ಮೋಟಾರು ಸೈಕಲ್ ನನಗಿಂತ ಸ್ವಲ್ಪ ಹಿಂದೆ ಇದ್ದು, ನಾವು ಹುಣಸಗಿ ನಾರಾಯಣಪೂರ ಮುಖ್ಯ ರಸ್ತೆಯ ಮೇಲೆ ರಾಜನಕೊಳೂರು ಸೀಮಾಂತರದ ಹೆಚ್ಸಿ ಪಾಟೀಲ್ ರವರ ಹೊಲದ ಹತ್ತಿರ ರಾತ್ರಿ 8:00 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ನನ್ನ ಹಿಂದೆ ನನ್ನ ತಾಯಿ ಲಕ್ಷ್ಮಮ್ಮ ಮತ್ತು ತಂಗಿ ಮೀನಾಕ್ಷಿ ರವರಿಗೆ ಕೂಡಿಸಿಕೊಂಡು ಬರುತ್ತಿದ್ದ ರವಿಯು ಒಮ್ಮೇಲೆ ಮೋಟಾರು ಸೈಕಲ್ನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ನನ್ನನ್ನು ಹಿಂದೆ ಹಾಕಿ ಮುಂದೆ ಹೋಗುತ್ತಿರುವಾಗ ಎದರುಗಡೆಯಿಂದ ಒಬ್ಬ ಮೋಟಾರು ಸೈಕಲ್ ಸವಾರನು ಹಿಂದೆ ಒಬ್ಬ ಹೆಣ್ಣುಮಗಳನ್ನು ಕೂಡಿಸಿಕೊಂಡು ತನ್ನ ಮೋಟಾರು ಸೈಕಲ್ನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದಿದ್ದು, ನನ್ನನ್ನು ಹಿಂದೆ ಹಾಕಿ ಹೋದ ನನ್ನ ತಾಯಿ ತಂಗಿ ಕುಳಿತ ರವಿಯ ಮೋಟಾರು ಸೈಖಲ್ ಮತ್ತು ಎದುರುಗಡೆಯಿಂದ ಬರುತ್ತಿದ್ದ ಮೋಟಾರು ಸೈಕಲ್ ಮುಖಾಮುಖಿ ಡಿಕ್ಕಿಯಾಗಿ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು ನಾನು ಘಾಬರಿಯಾಗಿ ನಮ್ಮ ಮೋಟಾರು ಸೈಕಲ್ನ್ನು ನಿಲ್ಲಿಸಿ ನಾನು ಮತ್ತು ನನ್ನ ತಮ್ಮ ಕನಕರಾಯ ಇಬ್ಬರು ನೋಡಲಾಗಿ ನನ್ನ ತಂಗಿ ಮೀನಾಕ್ಷಿ ಗಂಡ ರೇಣುಕರಾಜ ಇವರಿಗೆ ಹಣೆಯ ಮೇಲೆ ಎಡಗಡೆ ಕಪಾಳದ ಮೇಲೆ, ಎಡಗಣ್ಣಿನ ಹತ್ತಿರ ತರಚಿದ ಗಾಯ ಹಾಗು ಎಡಗಾಲು ಪಾದ ರಕ್ತಗಾಯ ಮತ್ತು ಎದೆಯ ಮೇಲೆ ಒಳಪೆಟ್ಟಾಗಿದ್ದು, ನನ್ನ ತಾಯಿ ಲಕ್ಷ್ಮಮ್ಮ ರವರಿಗೆ ಮೂಗಿನ ಮೇಲೆ, ಎಡಗೈ ಮುಂಗೈ ಮೇಲೆ ರಕ್ತಗಾಯವಾಗಿದ್ದು, ಹಾಗು ಹಣೆಯ ಮೇಲೆ ತರಚಿದ ನಮೂನೆಯ ಗಾಯ ಆಗಿದ್ದು, ಮತ್ತು ತಲೆಗೆ ಭಾರಿ ಒಳಪೆಟ್ಟಾಗಿದ್ದು, ಎಡಗೈ ಮೊಳಕೈಗೆ, ಎಡಗಾಲು ಮೊಳಕಾಲು ಚಿಪ್ಪಿನ ಮೇಲೆ, ಗದ್ದದ ಮೇಲೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಸತ್ತಿದ್ದು, ಮತ್ತು ಮೋಟಾರು ಸೈಕಲ್ ನಡೆಸುತ್ತಿದ್ದ ರವಿ ತಂದೆ ಹಣಮಂತ್ರಾಯ ಹೊಸೂರು ಈತನಿಗೆ ಬಲಗಾಲ ಮೊಳಕಾಲ ಮೇಲೆ ಮತ್ತು ಬಲಗೈ ಮೊಳಕೈ ಮೇಲೆ ಭಾರಿ ರಕ್ತಗಾಯಗಳಾಗಿ ಮುರಿದಂತೆ ಕಂಡುಬಂದಿದ್ದು, ತಲೆ, ಮೂಗು, ಹಣೆಯ ಮೇಲೆ ತರಚಿದ ಗಾಯ ಹಾಗು ಎದೆಯ ಮೇಲೆ ಒಳಪೆಟ್ಟಾಗಿದ್ದು, ಎದುರಗಡೆಯಿಂದ ಬಂದು ಡಿಕ್ಕಿಪಡಿಸಿದ ಮೋಟಾರು ಸೈಕಲ್ ನಂಬರ ನೋಡಲಾಗಿ ಕೆ.ಎ-33 ಜೆ-1757 ಇದ್ದು, ಇದರ ಸವಾರನ ಹೆಸರು ಕೇಳಲಾಗಿ ಅವನು ತನ್ನ ಹೆಸರು ಗೊಲ್ಲಾಳಪ್ಪ ತಂದೆ ಈರಪ್ಪ ಮಸ್ಕನಾಳ ಸಾಃಮಸಕನಾಳ ತಾಃಬಸವನಬಾಗೇವಾಡಿ ಹಾ:ವಃದ್ಯಾಮನಾಳ ಅಂತಾ ತಿಳಿಸಿದ್ದು ನೋಡಲಾಗಿ ಸದರಿಯವನ ಎಡಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಿದ್ದು, ಪಾದದ ಮೇಲೆ, ತಲೆಯ ಮೇಲೆ ಭಾರಿ ರಕ್ತಗಾಯಗಳಾಗಿದ್ದು, ಸದರಿಯವನ ಮೋಟಾರು ಸೈಕಲ್ ಹಿಂದುಗಡೆ ಕೂಳಿತವಳ ಹೆಸರು ಗೀತಾ ಗಂಡ ಗೊಲ್ಲಾಳಪ್ಪ ಮಸಕನಾಳ ರವರು ಸಾಃದ್ಯಾಮನಾಳ ಅಂತಾ ತಿಳಸಿದ್ದು, ನೋಡಲಾಗಿ ಇವರ ಮೂಗು ಬಾಯಿ ಗದ್ದದ ಮೇಲೆ ತರಚಿದ ಗಾಯಗಳಾಗಿ ರಕ್ತ ಬಂದಿದ್ದು, ಮತ್ತು ಮೈಮೇಲೆಲ್ಲ ಒಳಪೆಟ್ಟಾಗಿದ್ದು, ನಂತರ ನಾನು ಈ ಅಪಘಾತವಾದ ಬಗ್ಗೆ ರವಿ ಅಣ್ಣನಾಗಬೇಕಾದ ನಿಂಗಪ್ಪ ತಂದೆ ಚಂದಪ್ಪ ಹೊಸೂರು ರವರಿಗೆ ಫೋನ್ ಮಾಡಿ ತಿಳಿಸಿದ್ದು, ಸ್ವಲ್ಪ ಹೊತ್ತಿನಲ್ಲಿಯೇ ನಿಂಗಪ್ಪ ರವರು ಬಂದು ನೋಡಿ ರವಿಯ ಉಪಚಾರಕ್ಕಾಗಿ ವಿಜಯಪೂರಕ್ಕೆ ಕರೆದುಕೊಂಡು ಹೋಗಿದ್ದು, ನಾನು ಮತ್ತು ನನ್ನ ತಮ್ಮ ಕನಕರಾಯ ಅಲ್ಲಿಯೇ ಸೇರಿದ ಜನರು ಕೂಡಿ ನನ್ನ ತಂಗಿ ಮೀನಾಕ್ಷಿ ಮತ್ತು ಗೊಲ್ಲಾಳಪ್ಪ ಹಾಗಿ ಗೀತಾರವರಿಗೆ ಮತ್ತು ನನ್ನ ತಾಯಿ ಲಕ್ಷ್ಮಮ್ಮ ರವರ ಶವವನ್ನು ರಾಜನಕೊಳೂರು ಸರಕಾರಿ ಆಸ್ಪತ್ರೆಗೆ ತಂದಿದ್ದು, ರಾಜನಕೊಳುರು ಆಸ್ಪತ್ರೆಯ ವೈದ್ಯರು ನನ್ನ ತಂಗಿ ಮೀನಾಕ್ಷಿಗೆ ಹಾಗು ಗೊಲ್ಲಾಳಪ್ಪ ಗೀತಾ ರವರಿಗೆ ಉಪಚರಿಸಿ ಹೆಚ್ಚಿನ ಉಪಚಾರಕ್ಕಾಗಿ ವಿಜಯಪೂರಕ್ಕೆ ಕಳುಹಿಸಿದ್ದು, ನನ್ನ ತಾಯಿಯ ಶವವು ರಾಜನಕೊಳುರು ಆಸ್ಪತ್ರೆಯಲ್ಲಿ ಇದ್ದು, ಈ ಅಪಘಾತಕ್ಕೆ ಮೋಟಾರು ಸೈಕಲ್ ನಂಬರ ಕೆ.ಎ-33 ಯು-0379 ರ ಸವಾರ ರವಿ ತಂದೆ ಹಣಮಂತ್ರಾಯ ಹೊಸೂರು ಹಾಗು ಮೋಟಾರು ಸೈಕಲ್ ನಂಬರ ಕೆ.ಎ-33 ಜೆ-1757 ನೇದ್ದರ ಸವಾರ ಗೊಲ್ಲಾಳಪ್ಪ ತಂದೆ ಈರಪ್ಪ ಮಸಕನಾಳ ರವರು ನಿಸ್ಕಾಳಜಿತನ ಕಾರಣವಾಗಿದ್ದು, ಇಬ್ಬರೂ ಮೋಟಾರು ಸೈಕಲ್ ಸವಾರರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಇದ್ದ ದೂರಿನ ಮೇಲಿಂದ ಠಾಣೆ ಗುನ್ನೆ ನಂ:49/17 ಕಲಂ:279, 337, 338, 304(ಎ)ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!