Yadgir District Reported Crimes Updated on 16-05-2017

By blogger on ಮಂಗಳವಾರ, ಮೇ 16, 2017

                                

                        Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 155/2017  ಕಲಂ 379  ಐಪಿಸಿ;- ದಿನಾಂಕಃ 14/05/2017 ರಂದು 7-15 ಎ.ಎಮ್ ಕ್ಕೆ ಶ್ರೀ ಅಂಬಾರಾಯ ಎಮ್. ಕಮಾನಮನಿ ಪಿ.ಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆ ರವರು ಒಬ್ಬ ಆರೋಪಿ ಹಾಗು ಮರಳು ತುಂಬಿದ ಟ್ರ್ಯಾಕ್ಟರ ತಂದು ಹಾಜರ ಪಡಿಸಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕಃ 14/05/2017ರಂದು ನಾನು ಮತ್ತು ಶ್ರೀ ಸೋಮಶೇಖರ ತಹಶೀಲ್ದಾರರು ಶಹಾಪೂರರವರು ಕೂಡಿ ನಮ್ಮ ಸರಕಾರಿ ವಾಹನಗಳಲ್ಲಿ ಶಹಾಪೂರ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಯುವ ಕುರಿತು ಬೆಳಿಗ್ಗೆ 6-15 ಗಂಟೆಗೆ ಶಹಾಪೂರದಿಂದ ಪೆಟ್ರೋಲಿಂಗ ಕರ್ತವ್ಯ ನಿರ್ವಹಿಸುತ್ತ ಹತ್ತಿಗೂಡೂರ ಗ್ರಾಮದ ಕಡೆಗೆ ಹೊರಟಿದ್ದಾಗ 6-30 ಗಂಟೆಗೆ ರಸ್ತಾಪೂರ ಕ್ರಾಸ್ ಹತ್ತಿರ ಎದುರಿನಿಂದ ಟ್ರ್ಯಾಕ್ಟರ ನಂಬರ ಕೆ.ಎ 33 ಟಿ.ಎ 8183 ಹಾಗು ಅದರೊಂದಿಗೆ ಇರುವ ನಂಬರ ಇಲ್ಲದ ಟ್ರ್ಯಾಲಿಯಲ್ಲಿ ಆರೋಪಿತನು ಸಕರ್ಾರಕ್ಕೆ ರಾಜಧನ ತುಂಬದೇ ಕಳ್ಳತನದಿಂದ 1500/- ರೂ ಕಿಮ್ಮತ್ತಿನ 1 ಬ್ರಾಸ್ ಮರಳನ್ನು  ಯಕ್ಷಿಂತಿ ಸಿಮಾಂತರದಲ್ಲಿರುವ ಕೃಷ್ಣಾನದಿ ದಂಡೆಯಿಂದ ತುಂಬಿಕೊಂಡು ಸಾಗಿಸುತ್ತಿದ್ದಾಗ ಹಿಡಿದು ಠಾಣೆಗೆ ತಂದು ಒಪ್ಪಿಸಿದ್ದು ಸದರಿ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 155/2017 ಕಲಂ 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 156/2017 ಕಲಂ 379 ಐ.ಪಿ.ಸಿ ಮತ್ತು  ಕಲಂ 41[ಡಿ] 102 ಸಿ.ಆರ್.ಪಿ.ಸಿ;- ದಿನಾಂಕ 15/05/2017 ರಂದು ಮುಂಜಾನೆ 08-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಅಂಬಾರಾಯ ಎಂ ಕಮಾನಮನಿ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ  ಇಬ್ಬರೂ ವ್ಯಕ್ತಿಗಳು ಮತ್ತು ಎರಡು ಮೋಟರ ಸೈಕಲ್, ಹಾಗೂ ಮೂಲ ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ,  ಇಂದು ದಿನಾಂಕ 15/05/2017 ರಂದು ಬೆಳಗಿನ ಜಾವ 04-30 ಗಂಟೆಗೆ ಠಾಣೆಯ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಸಿಬ್ಬಂಧಿಯವರೊಂದಿಗೆ ನಗರದಲ್ಲಿ ಪೆಟ್ರೊಲಿಂಗ್ ಕರ್ತವ್ಯ ಕುರಿತು ಹೋಗಿದ್ದಾಗ ಪೆಟ್ರೊಲಿಂಗ್ ಕರ್ತವ್ಯ ಮಾಡುತ್ತಾ ಬೆಳಗಿನ ಜಾವ 06-30 ಗಂಟೆಗೆ ಶಹಾಪೂರ ನಗರದ ಹಳೆ ಬಸ್ ನಿಲ್ದಾಣದ ಎದರುಗಡೆ ನಿಂತಿದ್ದಾಗ ಸುರಪೂರ ಕಡೆಯಿಂದ ಇಬ್ಬರೂ ಮೋಟರ ಸೈಕಲ ಸವಾರರು ತಮ್ಮ-ತಮ್ಮ ಮೋಟರ ಸೈಕಲ ಚಲಾಯಿಸಿಕೊಂಡು ಬರುತಿದ್ದಾಗ ಸದರಿಯವರು ಪೋಲೀಸರನ್ನು ನೋಡಿ ಭಯಬಿತರಾಗಿ ಗಡಿಬಿಡಿಯಿಂದ ವಾಹನಗಳನ್ನು ರೋಡಿನಲ್ಲಿಯೇ ಬಿಟ್ಟು ಓಡತೋಡಗಿದರು. ಸಂಶಯ ಬಂದಿದ್ದರಿಂದ ಸಿಬ್ಬಂದಿಯವರ ಸಹಾಯದಿಂದ ಇಬ್ಬರನ್ನೂ ತಾಲೂಕಾ ಪಂಚಾಯತ ಕಾಯರ್ಾಲಯದ ಎದರುಗಡೆ ಹಿಡಿದು ಅವರ ಹೆಸರು ವಿಳಾಸ ಮತ್ತು ವಾಹನಗಳ ಕಾಗದ ಪತ್ರಗಳ ಬಗ್ಗೆ ಇತ್ಯಾದಿ ವಿಚಾರಿಸಲಾಗಿ ಅವರು ತಮ್ಮ -ತಮ್ಮ ಹೆಸರು ಬೇರೆ ಬೇರೆ ಹೇಳಿ ಕೊನೆಗೆ ತಮ್ಮ ಹೆಸರು 1] ಸಿದ್ದಪ್ಪ ತಂದೆ  ಮಲ್ಲಪ್ಪ ದೊಡ್ಡಮನಿ ವಯ 22 ವರ್ಷ ಜಾತಿ ಕುರಬರ ಉಃ ಕೂಲಿ ಕೆಲಸ ಸಾಃ ಅಣಬಿ 2] ಪಿಲ್ಲಪ್ಪ ತಂದೆ ನಾಗಪ್ಪ ಮುದೋಳ ವಯ 35 ವರ್ಷ ಜಾತಿ ಪ.ಜಾತಿ[ಹೊಲೆಯ] ಉಃ ಕೂಲಿ ಕೆಲಸ ಸಾಃ ಅಣಬಿ ತಾಃ ಶಹಾಪೂರ ಇದ್ದು, ತಾವು ಮತ್ತು  ಸಿದ್ದಪ್ಪ ಜಂಗಳಿ ಸಾಃ ಕೊಡಚಿ ತಾಃ ಜೇವಗರ್ಿ ಜಿಃ ಕಲಬುರಗಿ ಎಲ್ಲರೂ ಕೂಡಿ ಸುಮಾರು 1 ವರ್ಷದಿಂದ ಚಿತ್ತಾಪೂರ, ಕಲಬುರಗಿ, ಜೇವಗರ್ಿ, ಶಹಾಪೂರ, ಯಾದಗಿರಿಯಲ್ಲಿ ಮೋಟರ ಸೈಕಲಗಳನ್ನು ಕಳ್ಳತನ ಮಾಡಿದ ಬಗ್ಗೆ  ಹೇಳಿದ್ದು, ಇವರಲ್ಲಿದ್ದ  ಒಂದು ಮೋಟರ ಸೈಕಲ್ಗೆ ನಂಬರ ಪ್ಲೇಟ್ ಇರುವದಿಲ್ಲ. ಇನ್ನೊಂದು ಮೋಟರ ಸೈಕಲಗೆ ನಂಬರ ಪ್ಲೇಟ್ ಇದ್ದು,  ಸದರಿಯವರು ಮೋಟರ ಸೈಕಲಗಳನ್ನು ಕಳ್ಳತನ ಮಾಡಿಕೊಂಡು ಬಂದಿರಬಹುದೆಂದು ಸಂಶಯ ಬಂದಿದ್ದರಿಂದ ಇಬ್ಬರೂ ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡೆನು. ಸದರ ಪಂಚರ ಸಮಕ್ಷಮದಲ್ಲಿ ಸಿದ್ದಪ್ಪ ದೊಡ್ಡಮನಿ ಈತನಿಂದ 1]  ಒಂದು  ನಂಬರ  ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಹೊಂಡಾ ಸೈನ್ ಮೋಟರ ಸೈಕಲ್ ಇಂಜಿನ್ ನಂಃ- ಎಅ36ಇ9158035 & ಚೆಸ್ಸಿ ನಂಬರಃ- ಒಇ4ಎಅ366ಃ88084819 ಅಂ.ಕಿ 10,000=00 ರೂಪಾಯಿ ಮತ್ತು ಪಿಲ್ಲಪ್ಪ ಮುಧೋಳ ಇವನಿಂದ 2] ಒಂದು ಕಪ್ಪು ಮತ್ತು ಕೆಂಪು ಬಣ್ಣದ ಹಿರೋ ಹೊಂಡಾ ಗ್ಲ್ಯಾಮರ್ ಮೋಟರ ಸೈಕಲ್ ನಂ ಏಂ-25-ಇಊ-7961     ಇಂಜಿನ್ ನಂ ಎಂ06ಇಈಃಉಏ05154 & ಚೆಸ್ಸಿ ನಂ ಃ ಒಃಐಎಂ06ಇಗಃಉಏ04915 ಅಂ.ಕಿ 15,000=00 ರೂ/- ಕಿಮ್ಮತ್ತಿನ ವಾಹನಗಳನ್ನು 07-00 ಎಮ್.ದಿಂದ 08-00 ಎ.ಎಮ್.ವರೆಗೆ ಸ್ಥಳದಿಂದ ಜಪ್ತಿ ಮಾಡಿಕೊಂಡಿರುತ್ತಾರೆ. ಸದರಿ 3 ಜನ ಆರೋಪಿತರ ವಿರುದ್ದ ಕ್ರಮ ಕೈಕೊಳ್ಳಲು ವರದಿಯ ಮೂಲಕ ಆದೇಶಿದ ಪ್ರಕಾರ ಠಾಣೆ ಗುನ್ನೆ ನಂಬರ 156/2017 ಕಲಂ 41[ಡಿ] 102 ಸಿ.ಆರ್.ಪಿ.ಸಿ ಮತ್ತು ಕಲಂ 379 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
  
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 157/2017 ಕಲಂ 279. 337, 338 304(ಎ) ಐಪಿಸಿ;- ದಿನಾಂಕ 16/05/2017 ರಂದು ಮುಂಜಾನೆ 09-30 ಗಂಟೆಗೆ ಫಿರ್ಯಾದಿ ಶ್ರೀಮತಿ ಅಂಬ್ಲಮ್ಮ ಗಂಡ ಹಣಮಂತ ಕಟ್ಟಿಮನಿ ವಯ 55 ವರ್ಷ ಜಾತಿ ಮಾದಿಗ ಉಃ ಹೊಲ ಮನೆ ಕೆಲಸ ಸಾಃ ಬೇವಿನಹಳ್ಳಿ[ಜೆ] ತಾಃ ಶಹಾಪೂರ ಇವರು ಠಾಣೆಗೆ  ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 16/05/2017 ರಂದು ಮುಂಜಾನೆ 07-15 ಗಂಟೆಗೆ ಸುಮಾರಿಗೆ ಫಿರ್ಯಾದಿ ಮತ್ತು ಫಿರ್ಯಾದಿಯ ಗಂಡ ಮೃತ ಹಣಮಂತ ಇಬ್ಬರೂ ಬೇವಿನಹಳ್ಳಿ ಗ್ರಾಮದಿಂದ ಶಹಾಪೂರಕ್ಕೆ ಕಿರಾಣಿ ಮತ್ತು ತರಕಾರಿ ಸಾಮಾನು ಖರೀದಿ ಮಾಡಲು ತಮ್ಮೂರ ಆಟೋ ಸ್ಟ್ಯಾಂಡ ಹತ್ತಿರ ನಿಂತಿದ್ದ ಆಟೋ ನಂ ಕೆಎ-33-ಎ-6203 ನೇದ್ದರಲ್ಲಿ ಕುಳಿತುಕೊಂಡು ಶಹಾಪೂರಕ್ಕೆ ಬರುತಿದ್ದಾಗ ಮುಂಜಾನೆ 07-45 ಗಂಟೆಗೆ ಶಹಾಪೂರ-ಯಾದಗಿರಿ ಮುಖ್ಯೆ ರಸ್ತೆಯ ಮೇಲೆ ಆಟೋಚಾಲಕ ಮಂಜು ತಂದೆ ಸಿದ್ದಣ್ಣ ನರಬೋಳಿ ಸಾಃ ಬೇವಿನಹಳ್ಳಿ [ಜೆ] ಇವನು ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತಿದ್ದಾಗ ರೋಡಿನ ಮೇಲೆ ಒಂದು ನಾಯಿ ಅಡ್ಡ ಬಂದಿದ್ದರಿಂದ ಆಟೋ ಚಾಲಕ ಒಮ್ಮಿಂದೊಮ್ಮಲೆ ಕಟ್ ಮಾಡಿದ್ದರಿಂದ ವಾಹನ ಹಿಡಿತ ತಪ್ಪಿ ರೋಡಿನ ಮೇಲೆ ಬಿದ್ದಾಗ ಆಟೋದಲ್ಲಿದ್ದ ಫಿರ್ಯಾದಿ ಮತ್ತು ಫಿರ್ಯಾದಿಯ ಗಂಡ  ಹಣಮಂತ ಮತ್ತು ಬೇವಿನಹಳ್ಳಿ ಗ್ರಾಮದ ಸಂಗಣ್ಣ ದೋರಿ, ಹಣಮಂತ ಪರಮ್ ಹಾಗೂ ದೋರನಳ್ಳಿ ತಾಂಡಾದ ಸಕ್ರಿಬಾಯಿ ಇವರಿಗೆ ಸಾದಾ ಹಾಗೂ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರ ಮಾಡಿಸಿಕೊಂಡು ಹೆಚ್ಚಿನ ಉಪಚಾರ ಕುರಿತು ಫಿರ್ಯಾದಿಯು ತನ್ನ ಮಗನೊಂದಿಗೆ ತನ್ನ ಗಂಡನನ್ನು ಹಾಗೂ ಸಕ್ರಿಬಾಯಿ ಇವಳನ್ನು 108 ವಾಹನದಲ್ಲಿ ಕಲಬುರಗಿಗೆ ಕರೆದುಕೊಂಡು ಹೋಗುತಿದ್ದಾಗ ಮಾರ್ಗ ಮದ್ಯ ಭೀಮರಾಯನ ಗುಡಿ ಪೊಲೀಸ ಠಾಣೆಯ ಎದರುಗಡೆ ಮುಂಜಾನೆ 08-45 ಗಂಟೆಗೆ ಹಣಮಂತ ಈತನು ಮೃತ ಪಟ್ಟಿರುತ್ತಾನೆ ಅಂತ ತಿಳಿಸಿರುತ್ತಾರೆ. ಮೃತನ ಸಾವಿಗೆ ಆಟೋ ಚಾಲಕನ ಅತಿ ವೇಗ ಮತ್ತು ಅಲಕ್ಷತನದಿಂದ ಈ ಅಪಘಾತವಾಗಿರುತ್ತದೆ ಸದರಿ ಚಾಲಕನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 157/2017 ಕಲಂ 279, 337, 338, 304[ಎ] ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  
  
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 143/2017 ಕಲಂ 379 ಐ.ಪಿ.ಸಿ.  ಮತ್ತು ಕಲಂ. 21 (3) 21(4) 22 ಎಮ್. ಎಮ್. ಡಿ. ಆರ್. ಆಕ್ಟ;- ದಿನಾಂಕ:14-05-2017 ರಂದು 4:45 ಪಿ.ಎಮ್.ಕ್ಕೆ ಮಾನ್ಯ ಶ್ರೀ ಆರ್.ಎಫ್ ದೇಸಾಯಿ ಪಿ.ಐ. ಶೋರಾಪೂರ ಠಾಣೆ ರವರು ಠಾಣೆಗೆ ಬಂದು ಮುದ್ದೇಮಾಲು ಹಾಜರು ಪಡಿಸಿ ವರದಿ ಕೊಟ್ಟಿದ್ದೇನಂದರೆ,  ಇಂದು ದಿನಾಂಕ:14-05-2017 ರಂದು 02:15 ಪಿ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಲಕ್ಷ್ಮೀಪೂರ ಕ್ರಾಸ ಕಡೆಗೆ ಕೃಷ್ಣಾನದಿಯ ಮರಳನ್ನು ಯಾರೋ ತಮ್ಮ ಟ್ರ್ಯಾಕ್ಟರಗಳಲ್ಲಿ ಕಳ್ಳತನದಿಂದ  ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರಾದ 1) ವೆಂಕಟೇಶ ತಂದೆ ರಾಮಣ್ಣ ಕಿಲಾರಿ ವಯ:33 ವರ್ಷ ಜಾ: ಬೇಡರ ಉ: ಕೂಲಿ ಸಾ:ವೆಂಕಟಾಪೂರ 2) ಮುನಿಯಪ್ಪ ತಂದೆ ಭಿಮಣ್ಣ ಶುಕ್ಲ ವಯ:55 ವರ್ಷ ಜಾ: ಬೇಡರ ಉ:ಕೂಲಿ ಸಾ:ಲಕ್ಷ್ಮೀಪೂರ ತಾ:ಸುರಪೂರ ಇವರನ್ನು ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಸದರಿ ಪಂಚರೊಂದಿಗೆ ಮತ್ತು ಸಿಬ್ಬಂದಿಯವರಾದ 1) ಶ್ರೀ ಪರಮೇಶ ಪಿಸಿ-142 2) ಸೋಮಯ್ಯ ಪಿ.ಸಿ-235 ಕೂಡಿ ಒಂದು ಖಾಸಗಿ ವಾಹನದಲ್ಲಿ ಠಾಣೆಯಿಂದ 02:25 ಪಿ.ಎಮ್ಕ್ಕೆ ಹೊರಟು 02:45 ಎ.ಎಮ್ ಕ್ಕೆ ಲಕ್ಷ್ಮಿಪೂರ ಕ್ರಾಸ ಹತ್ತಿರ ಹೊರಟಾಗ 2 ಟ್ರ್ಯಾಕ್ಟರಗಳು  ಮರಳು ತುಂಬಿಕೊಂಡು ಬರುತ್ತಿದ್ದು ಅವುಗಳನ್ನು ತಡೆದು ನಿಲ್ಲಿಸಲಾಗಿ ಎರಡೂ ಟ್ರ್ಯಾಕ್ಟರಗಳ ಚಾಲಕರು ತಮ್ಮ ಟ್ರ್ಯಾಕ್ಟರಗಳನ್ನು ಅಲ್ಲೆ ಬಿಟ್ಟು ಓಡಿ ಹೊದರು.ಸದರಿ ಟ್ರ್ಯಾಕ್ಟರಗಳನ್ನು ಪರಿಶೀಲಿಸಿ ನೋಡಲಾಗಿ1) ಟ್ರ್ಯಾಕ್ಟರ ನಂಬರ ಕೆ.ಎ.33. ಟಿಎ-2400 ಇದ್ದು ಅದರ ಟ್ರ್ಯಾಲಿ ನಂ ಕೆ-33 ಟಿ-205 ಅಂತ ಇರುತ್ತದೆ. ಸದರಿ ಟ್ರ್ಯಾಕ್ಟರದಲ್ಲಿ 2 ಘನ ಮೀಟರ ಮರಳು  ತುಂಬಿದ್ದು ಸದರಿ ಟ್ರ್ಯಾಕ್ಟರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕನ ಹೆಸರು ಬಸವರಾಜ ತಂದೆ ಚಂದಪ್ಪ ಸಡಿಕೇಪೂರ ಸಾ: ಹಸನಾಪೂರ ಸುರಪೂರ ಅಂತ ಗೊತ್ತಾಯಿತು. ಸದರಿ ಟ್ರ್ಯಾಕ್ಟರದಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅದರ ಅ.ಕಿ. 1600/- ಆಗುತ್ತದೆ.2) ಟ್ರ್ಯಾಕ್ಟರ ನಂಬರ ನೋಡಲಾಗಿ ಕೆ.ಎ-33. ಟಿಎ-6323 ಇದ್ದು ಟ್ರ್ಯಾಲಿ ನಂ ಕೆ.ಎ.33ಟಿ.ಎ7649 ಇರುತ್ತದೆ. ಸದರಿ ಟ್ರಾಕ್ಟರದಲ್ಲಿ 2 ಘನ ಮೀಟರ ಮರಳು ತುಂಬಿದ್ದು ಇರುತ್ತದೆ. ಸದರಿ ಟ್ರ್ಯಾಕ್ಟರ ಚಾಲಕ  ಓಡಿ ಹೋಗಿರುತ್ತಾನೆ. ಅದರ ಚಾಲಕನ  ಹೆಸರು ಈರಪ್ಪ ತಂದೆ ನಾರಾಯಣ ಕಮತಗಿ ಸಾ: ಹಸನಾಪೂರ ಅಂತಾ ಗೋತ್ತಾಯಿತು ಸದರಿ ಟ್ರ್ಯಾಕ್ಟರದಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅದರ ಅ.ಕಿ.1600/- ಆಗುತ್ತದೆ. ಹೀಗೆ ಒಟ್ಟು 2 ಟ್ರ್ಯಾಕ್ಟರಗಳಲ್ಲಿ ಒಟ್ಟು 4 ಘನಮೀಟರ ಮರಳು ಅಕ್ರಮವಾಗಿ ಸಾಗಿಸುತ್ತಿದ್ದು ಒಟ್ಟು ಮರಳಿನ  ಅ.ಕಿ. 3200/-ರೂ.ಆಗುತ್ತದೆ. ಸದರಿ ಟ್ರ್ಯಾಕ್ಟರಳ ಚಾಲಕರು ಮತ್ತು  ಮಾಲಿಕರು ಕೂಡಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು  ಮತ್ತು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಸಾಗಾಣಿಕೆ  ಮಾಡುತ್ತಿದ್ದು ಸದರಿ ಟ್ರ್ಯಾಕ್ಟರಗಳನ್ನು  ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 02.55 ಪಿ.ಎಮ್ ದಿಂದ 3.55 ಪಿ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ. ಆದ್ದರಿಂದ ಸದರಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 2 ಟ್ರ್ಯಾಕ್ಟರಗಳನ್ನು  ವಶಕ್ಕೆ ತೆಗೆದುಕೊಂಡು ಮರಳಿ  ಠಾಣೆಗೆ   ಬಂದು 2 ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಮತ್ತು ಜಪ್ತಿ ಪಂಚನಾಮೆಯನ್ನು ಒಪ್ಪಿಸುತ್ತಿದ್ದು ಸದರಿ ಟ್ರ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರ  ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ. ಅಂತಾ ಇದ್ದ ವರದಿಯ ಆಧಾರದ ಮೇಲೆ ಠಾಣಾ ಗುನ್ನೆ ನಂ.143/2017 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 144/2017 ಕಲಂ: 147.148.323.324. 504. 354.498(ಎ) 448 ಸಂ:149 ಐಪಿಸಿ ಮತ್ತು 3 & 4 ಡಿ.ಪಿ.ಯ್ಯಾಕ್ಟ ;- ದಿನಾಂಕ 16/05/2017 ರಂದು 11.15 ಎ.ಎಂ ಕ್ಕೆ ಠಾಣೆಯ ನ್ಯಾಯಾಲಯ ಕರ್ತವ್ಯದ ಶ್ರೀ ಮಾನಪ್ಪ ಪಿಸಿ-171 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ಪಿರ್ಯಾದಿ ನಂ 12/2017 ನೇದ್ದು ತಮದು ಹಾಜರ ಪಡಿಸಿದ್ದರ ಸಾರಾಂಶವೇನೆಂದರೆ ಪಿರ್ಯಾದಿಗೆ ಈಗ ಸುಮಾರು 6 ವರ್ಷಗಳ ಹಿಂದೆ ದೇವಾಪೂರದ ಜಡಿಲಿಂಗೇಶ್ವರ ದೇವಸ್ತಾನದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆ ಯಾಗಿದ್ದು  ಲಗ್ನವಾದ ನಂತರ 3 ವರ್ಷ ಗಂಡ ಹೆಂಡತಿ ಇಬ್ಬರು ಅನ್ಯೋನ್ಯವಾಗಿದ್ದು ನಂತರದ ದಿನಗಳಲ್ಲಿ ಗಂಡ ಮತ್ತು ಉಳಿದ ಆರೋಪಿತರು ಮಾನಸಿಕ ಹಾಗು ದೈಹಿಕ ಕಿರುಕುಳ ಕೊಟ್ಟು ಅವಾಚ್ಯ ಶಬ್ದಗಳಿಂದ ಬೈಯ್ದುದ್ದಲ್ಲದೆ ಆರೋಪಿ ನಂ 1 ಮತ್ತು 3 ಇತರೆ ಆರೋಪಿತರು ಪಿರ್ಯಾದಿಗೆ ನಿನ್ನ ತವರು ಮನೆಯಿಂದ ಹೆಚ್ಚುವರಿ ವರದಕ್ಷಿಣೆಯಾಗಿ 2 ತೋಲಿ ಬಂಗಾರ ಮತ್ತು 50 ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಬಾ ಎಂದು ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಟ್ಟ ಬಗ್ಗೆ ಪಿರ್ಯಾದಿ  ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 144/2017 ಕಲಂ 147.148.323.324.504.354.498(ಎ)448 ಸಂ149 ಐಪಿಸಿ ಮತ್ತು ಕಲಂ 3 & 4 ಡಿ ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು.       
 
ಕಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 42/2017  ಕಲಂ:279, 304(ಎ) ಐಪಿಸಿ & 187 ಐ.ಎಮ್.ವಿ. ಆಕ್ಟ್ ;- ದಿನಾಂಕ:14/05/2017 ರಂದು ಮಧ್ಯಾಹ್ನ 3:00 ಗಂಟೆಗೆ ಫಿಯರ್ಾದಿ ಶ್ರೀ.ಪರಮಣ್ಣ ತಂದೆ ಹಣಮಂತ್ರಾಯ ಸೊಲ್ಲಾಪೂರ, ವಯ:30 ವರ್ಷ, ಜಾತಿ:ಎಸ್.ಟಿ ಉ||ಆಟೋ ಡ್ರೈವರ್, ಸಾ||ಸೊಲ್ಲಾಪೂರ ದೊಡ್ಡಿ, ಕಕ್ಕೇರಾ ಇವರ ಕೊಡೇಕಲ್ ಪೊಲೀಸ್ ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಕೊಟ್ಟಿದ್ದೇನೆಂದರೆ, ಇಂದು ದಿನಾಂಕ:14/05/2017 ರಂದು ಬೆಳಗ್ಗೆ ನಾನು ನನ್ನ ಆಟೋ ತೆಗೆದುಕೊಂಡು ಹುಣಸಗಿಗೆ ಹೋಗಿರುತ್ತೇನೆ. ನನ್ನ ತಂದೆಯಾದ ಹಣಮಂತ್ರಾಯರವರು ನಮ್ಮ ಕುರಿಗಳನ್ನು ಮೇಯಿಸಲು ಬೈಲಾಪೂರ ರೋಡಿಗೆ ಇರುವ ನಮ್ಮ ಹೊಲಕ್ಕೆ ಹೋಗಿದ್ದರು. ಮಧ್ಯಾಹ್ನ 1:45 ಗಂಟೆಯ ಸುಮಾರಿಗೆ ನನಗೆ ಪರಿಚಯದ ಪರಮಣ್ಣ ತಂದೆ ನಿಂಗಪ್ಪ ಬಿರಾದಾರ, ಸಾ:ಬೈಲಾಪೂರ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ಈಗ ತಾನು ಭೈಲಾಪೂರದಿಂದ ಕಕ್ಕೇರಾದ ಕಡೆಗೆ ಹೋಗುವಾಗ ಮಲ್ಲಣ್ಣ ತಂದೆ ಹಯ್ಯಾಳಪ್ಪ ಕಿಲೇದಾರ್, ಸಾ||ಚಿಂಚೊಡಿಯವರದೊಡ್ಡಿ ಈತನು ತನ್ನ ಮೋಟರ್ ಸೈಕಲ್ ಮೇಲೆ ಅತೀವೇಗವಾಗಿ ಕಕ್ಕೇರಾ ಕಡೆಗೆ ಹೋಗುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ನಿನ್ನ ತಂದೆ ಹಣಮಂತ್ರಾಯನಿಗೆ ಡಿಕ್ಕಿಹೊಡೆದು ಅಪಘಾತಪಡಿಸಿ ಓಡಿಹೋಗಿದ್ದು, ನಿನ್ನ ತಂದೆಗೆ ಮುಖಕ್ಕೆ, ಕಾಲುಗಳಿಗೆ ಭಾರಿಗಾಯಗಳಾಗಿ ಭೇಹೋಶ್ಆಗಿ ಬಿದ್ದಿದ್ದಾನೆ ಅಂತಾ ತಿಳಿಸಿದ ಕೂಡಲೇ ನಾನು ಕಕ್ಕೇರಾಕ್ಕೆ ಬಂದು ನಮ್ಮ ದೊಡ್ಡಿಗೆ ಹೋಗಿ ನನ್ನ ತಮ್ಮಂದಿರಿಗೆ ಕರೆದುಕೊಂಡು ಬಂದು ಕಕ್ಕೇರಾ-ಭೈಲಾಪೂರ ರಸ್ತೆಯ ಬಂಡಿನಾಲಾದ ಸಮೀಪ ರಸ್ತೆಯ ಪಕ್ಕದಲ್ಲಿ ನನ್ನ ತಂದೆ ಬಿದ್ದಿದ್ದು, ನೋಡಲಾಗಿ ಮೃತಪಟ್ಟಿದ್ದನು. ನನ್ನ ತಂದೆಗೆ ಮುಖಕ್ಕೆ, ಮೂಗಿಗೆ, ಹಣೆಗೆ ರಕ್ತಗಾಯಗಳಾಗಿದ್ದು, ಬಲಕಾಲು ಮುರಿದಂತೆ ಆಗಿತ್ತು. ಕಾರಣ ನನ್ನ ತಂದೆಗೆ ಅಪಘಾತಪಡಿಸಿ ಓಡಿಹೋದ ಮಲ್ಲಣ್ಣ ತಂದೆ ಹಯ್ಯಾಳಪ್ಪ ಕಿಲೇದಾರ, ಸಾ||ಚಿಂಚೋಡಿಯವರದೊಡ್ಡಿ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಲಿಖಿತ ದೂರಿನ ಮೇಲಿಂದ ಠಾಣೆ ಗುನ್ನೆ ನಂ:42/17 ಕಲಂ:279, 304(ಎ)ಐ.ಪಿ.ಸಿ. ಮತ್ತು ಕಲಂ: 187 ಐ.ಎಮ್.ವಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!