Yadgir District Reported Crimes Updated on 10-05-2017

By blogger on ಬುಧವಾರ, ಮೇ 10, 2017

                                        

                               Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 86/2017 ಕಲಂ 323,324,504 ಸಂ 34 ಐ.ಪಿ.ಸಿ;- ದಿನಾಂಕ 09-05-2017  ಬೆಳ್ಳಗ್ಗೆ 07-00 ಗಂಟೆಯ ಸುಮಾರಿಗೆ ನನಗೆ ನನ್ನ ಟ್ರ್ಯಾಕ್ಟರ ಸಲುವಾಗಿ ಡಿಜೇಲ್ ಅವಶ್ಯಕ ಇರುವದ್ದರಿಂದ 20 ಲೀಟರ ಕ್ಯಾನ ಬೇಕಾಗಿದ ಕಾರಣ ನನ್ನ ಅಣ್ಣನ ಮನೆಗೆ ಹೋಗಿ ಕರೆಯಲಾಗಿ ಮನೆಯಿಂದ ಹೊರಗಡೆ ನನ್ನ ಅಣ್ಣನ ಮಗನಾದ ಹಣಮೇಶ ತಂದೆ ತಿಮ್ಮಯ್ಯ ಈತನು ಬಂದು ಏನು ಅಂತಾ ವಿಚಾರಿಸಲಾಗಿ ನಾನು ಈ ಹಿಂದೆ ಕೊಟ್ಟ 20 ಲೀಟರ ಕ್ಯಾನ ಕೊಡು ಅಂತಾ ಕೇಳಿದಾಗ ಆತನು ಯಾವ ಕ್ಯಾನ ಯಾರು ಕೊಟ್ಟಿದ್ದು ನನಗೆ ಏನು ಗೊತ್ತಿಲ್ಲ ಅಂತಾ ತಿರಸ್ಕರಿಸಿದ್ದಕ್ಕೆ ನಾನು ಈ 2 ತಿಂಗಳ ಹಿಂದೆ ನಿನಗೆ ಡಿಜೈಲ ಡಬ್ಬಿ ಕೊಟ್ಟಿದ್ದೇನೆ ಕೊಡು ಅಂತಾ ಹೇಳಲು ಆಗ ಆತನು ಸಿಟ್ಟಿನಿಂದ ಹೋಗಲೇ ಹೋಗು ನಾನು ಯಾವ ಕ್ಯಾನ ತೆಗೆದು ಕೊಂಡಿಲ್ಲ ಸುಮ್ಮನೆ ಹೇಳಬೇಡ ನನ್ನ ಹತ್ತಿರ ನಾ ಖರೀದಿಸಿದ 20 ಲೀಟರ ಕ್ಯಾನ ಅದ್ದ ನೀ ಸುಳ್ಳ ಹೇಳಬೇಡ ಸೂಳೆ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತಾ ಹೀಗೆ ಸುಳ್ಳ ಹೇಳತ್ತಿ ಅಂದವನೆ ತನ್ನ ಕೈಯಿಂದ ನನ್ನ ಮುಖಕ್ಕೆ ಮುಷ್ಟಿಮಾಡಿ ಹೊಡೆದು ರಕ್ತಗಾಯ ಮಾಡಿದ್ದನು ಮತ್ತು ಅಲ್ಲಿಯೇ ಬಿದ್ದ ಒಂದು ಕಟ್ಟಿಗೆ ತೆಗೆದು ಕೊಂಡು ಕಟ್ಟಿಗೆಯಿಂದ ನನ್ನ ಮೊಳಕಾಲು, ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದ್ದನು. ಮನೆಯ ಒಳಗಿನಿಂದ ಅಲ್ಲಿಗೆ ಬಂದ ಮಲ್ಲಮ್ಮ ತಂದೆ ಭೀಮರಾಯ  ಇವಳು ಸಹ ನನಗೆ ಕೈಯಿಂದ ಹೊಟ್ಟೆಗೆ ಹೊಡೆದಳು ಸದರಿ ನನಗೆ ಹೊಡೆಬಡೆ ಮಾಡಿದವರ ಮೇಲೇ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 69/2017 ಕಲಂ 504,354 ಐಪಿಸಿ ;- ದಿನಾಂಕ: 09/05/2017 ರಂದು 6-15 ಪಿಎಮ ಕ್ಕೆ ಶ್ರೀಮತಿ ದೇವಿಂದ್ರಮ್ಮ ಗಂಡ ಯಂಕೋಬ ಕಲಾಲ ಸಾ:ಹಾಲಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖೀತ ಫಿರ್ಯಾಧಿ ಸಲ್ಲಿಸಿದ್ದನಂದರೆ ತಾನು ದಿನಾಂಕ: 08/05/2017 ರಂದು ಬೆಳಗ್ಗೆ 11 ಗಂಟೆಗೆ ಹೊರಟೂರ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ನಾನು ನಮ್ಮ ಹೊಲಕ್ಕೆ ಹೋಗುತ್ತಿರುವಾಗ ನಮ್ಮ ಗ್ರಾಮದವನಾದ ರಾಮಯ್ಯ ತಂದೆ ಭೀಮರಾಯ ಕಲಾಲ ಎಂಬಾತ ದ್ವಿಚಕ್ರ ವಾಹನದಲ್ಲಿ ಬಂದು ನನ್ನ ಮುಂದೆ ಅಡ್ಡಗಟ್ಟಿ ದ್ವಿಚಕ್ರ ವಾಹನದಲ್ಲಿ ಕುಳಿತುಕೊಳ್ಳಲು ಬೆದರಿಸಿದನು. ಆಗ ನಾನು ತಿರಸ್ಕರಿಸಿದ್ದಕ್ಕೆ ನನಗೆ ಲೇ ಸೂಳಿ ಬಾ ಕುಳಿತುಕೊ ಎಂದು ಬೆದರಿಸಿ, ನನ್ನ ಕೈ ಹಿಡಿದು ಹಾಗೆ ನನ್ನ ಸೀರೆಯನ್ನು ಹಿಡಿದು ಎಳೆದಾಡಿರುತ್ತಾನೆ. ನಾನು ಚೀರಾಡಿ ಅವನ್ನು ತಳ್ಳಿ ತಪ್ಪಿಸಿಕೊಂಡು ಗ್ರಾಮಕ್ಕೆ ಓಡಿ ಬಂದು ಮನೆಯಲ್ಲಿ ಹೇಳಬೇಕೆಂದಾಗ ನನ್ನ ಗಂಡ ಹಾಗೂ ಇಬ್ಬರೂ ಮಾವನವರು ಮನೆಯಲ್ಲಿ ಇರಲಿಲ್ಲ. ನನ್ನ ಗಂಡ ಹಾಗೂ ಮಾವನವರು ರಾತ್ರಿ ಮನೆಗೆ ಬಂದಾಗ ನಾನು ಅವರಿಗೆ ನಡೆದ ವಿಷಯ ತಿಳಿಸಿದೆ. ಮಾರನೆ ದಿನ ದಿನಾಂಕ: 09/05/2017 ರಂದು ನನ್ನ ಮಾವನವರೊಂದಿಗೆ ವಡಗೇರಾ ಪೊಲೀಸ್ ಠಾಣೆಗೆ ಬಂದಿದ್ದು, ರಾಮಯ್ಯ ಎಂಬ ವ್ಯಕ್ತಿಯ ವಿರುದ್ದ ದೂರು ದಾಖಲಿಸಿರುತ್ತೇನೆ. ಆದ ಕಾರಣ ದಯಮಾಡಿ ತಾವು ಆ ರಾಮಯ್ಯನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಂಡು ನನಗೆ ನ್ಯಾಯ ಒದಗಿಸಬೇಕೆಂದು ವಿನಂತಿ ಎಂದು ಕೊಟ್ಟ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 69/2017 ಕಲಂ: 504,354 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 80/2017 ಕಲಂ 279.337 ಐ ಪಿ ಸಿ;- ದಿನಾಂಕ 09-05-2017 ರಂದು 4 ಪಿ ಎಂ ಕ್ಕೆ ಪಿಯರ್ಾದಿ ಶ್ರೀ ಮಹಾದೇವ ತಂದೆ ಶರಣಪ್ಪ ಮಳ್ಳಿ ವಯಾ|| 21 ವರ್ಷ ಜಾ||  ಲಿಂಗಾಯತ ಉ|| ಕ್ಲೀನರ ಸಾ|| ರಾಮನಗರ ಕಲಬುಗರ್ಿ ಇವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಪಿಯರ್ಾದಿಯನ್ನು ನೀಡಿದ್ದು ಏನಂದರೆ, ನಾನು ಈಗ್ಗ ಸುಮಾರು ಎರಡು ವರ್ಷಗಳಿಂದ ಕಲಬುಗರ್ಿಯ ಶ್ರೀ ಚನ್ನಬಸಪ್ಪ ತಂದೆ ಮಾಣೀಕೆಪ್ಪ ಇವರ ಲಾರಿ ನಂ ಕೆಎ-32-ಎ-9303 ಅಶೋಕ ಲೈಲ್ಯಾಂಡ ಲಾರಿಯಲ್ಲಿ ಕ್ಲೀನರನಾಗಿ ಕೆಲಸ ಮಾಡಿಕೊಂಡಿದ್ದು. ಅದರಂತೆ ಸದರಿ ಲಾರಿಗೆ ವಿರೇಶ ತಂದೆ ಶಿವಯೋಗಿ ಇವರು ಚಾಲಕನಾಗಿರುತ್ತಾರೆ. ನಿನ್ನೆ ಶಕ್ತಿನಗರದಲ್ಲಿ ಬೂದಿ ಲೋಡ ತರಬೇಕೆಂದು ಹೇಳಿದ್ದರಿಂದ ನಾನು ನನ್ನ ಚಾಲಕ ಕೂಡಿ ಲಾರಿ ನಂ ಕೆಎ-32-ಎ-9303 ನೇದ್ದನ್ನು ತೆಗೆದುಕೊಂಡು ರಾಯಚೂರ ಶಕ್ತಿನಗರಕ್ಕೆ ಹೋಗಿ ರಾತ್ರಿ ಅಲ್ಲೆ ಇದ್ದು ಇಂದು ಬೆಳೆಗ್ಗೆ ಬೂದಿ ಲೋಡ ಮಾಡಿಕೊಂಡು 11 ಎ ಎಂ ಕ್ಕೆ ರಾಯಚೂರ ಶಕ್ತಿನಗರದಿಂದ ಬಿಟ್ಟು ಗುಲಬಗರ್ಾದ ಕಡೆಗೆ ಹೊರಟೆವು. ಇಂದು ದಿನಾಂಕ 09-05-2017 ರಂದು 2-30 ಪಿ ಎಂ ದ ಸುಮಾರಿಗೆ ಬರುವಾಗ ಕಡೇಚೂರ ಕ್ರಾಸ ದಾಟಿ ಮುಂದೆ ಬರುವಾಗ ನಮ್ಮ ಲಾರಿ ಚಾಲಕ ವಿರೇಶ ಇವರು ಲಾರಿಯನ್ನು ಅತೀ ವೇಗದಿಂದ ಹಾಗು ನಿರ್ಲಕ್ಷತನದಿಂದ ಓಡಿಸಿದ್ದರಿಂದ ಕಡೆಚೂರ ದಾಟಿ ಸ್ವಲ್ಪ ದೂರ ಬಂದಾಗ ಲಾರಿ ರೋಡಿನ ಎಡಗಡೆ  ಪಲ್ಟಿಮಾಡಿದನು. ಆಗ ನಾನು ಮತ್ತು ಚಾಲಕ ಲಾರಿಯಲ್ಲಿ ಒಳಗೆ ಆದೆವು ನಂತರ ನಾನು ಗ್ಲಾಸ ಒಡೆದಿದ್ದರಿಂದ ನಾನು ಅದರಿಂದ ಹೊರಗೆ ಬಂದೆನು ಚಾಲಕ ಹೊರಗಡೆ ಬಿದ್ದಿದ್ದ. ನನಗೆ ಬಲಗೈ ಹೆಬ್ಬೆರಳಿಗೆ ತರಚಿದ ಗಾಯವಾಗಿದೆ. ಮತ್ತು ಎರಡು ಕಾಲುಗಳಿಗೆ ಪಾದದ ಹತ್ತಿರ ತರಚಿದಗಾಯಗಳು ಆಗಿದೆ. ಚಾಲಕ ವೀರೇಶ ಇವರಿಗೆ ನೋಡಲಾಗಿ ತಲೆಯ ಮುಂದಿನ ಬಾಗ ಹಣೆಯ ಮೇಲೆ ತರಚಿದಂತೆ ಹಾಗು ಎಡಗಡೆ ಮೆಲಕಿನ ಹತ್ತಿರ ಗುಪ್ತಗಾಯಗಳು ಆಗಿವೆ. ಆಗ ನಾನು ರಸ್ತೆಗೆ ಬಂದಾಗ ಒಂದು ಗೂಡ್ಸ ಗಾಡಿ ಬಂತು ನಾನು ಅದನ್ನು ನಿಲ್ಲಿಸಿ ಕೇಳಿಕೊಂಡಾಗ ಅವರು ನನಗೆ ಮತ್ತು ಚಾಲಕನಿಗೆ ಉಪಚಾರಕ್ಕಾಗಿ ಸೈದಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದರು.
    ಸದರಿ ಘಟನೆಯು ನಮ್ಮ ಲಾರಿ ನಂ ಕೆಎ-32-ಎ-9303 ನೇದ್ದರ ಚಾಲಕ ವಿರೇಶ ತಂದೆ ಶಿವಯೋಗಿ ಸಾ|| ಕಲಬುಗರ್ಿ ಇವರು ಲಾರಿಯನ್ನು ಅತೀ ವೇಗ ಹಾಗು ನಿರ್ಲಕ್ಷತನದಿಂದ ಓಡಿಸಿದ್ದರಿಂದ ಪಲ್ಟಿಯಾಗಿದ್ದು ಲಾರಿ ಮಾತ್ತು ಚಾಲಕನ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಸೈದಾಪೂರ ಗುನ್ನೆ ನಂ 80/2017 ಕಲಂ 279.337 ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 73/2017 ಕಲಂ: 302 ಐಪಿಸಿ;- ದಿನಾಂಕ:09/05/2017 ರಂದು 2.30 ಪಿಎಮ್ಕ್ಕೆ ಶ್ರೀ ಮಾನಪ್ಪ ತಂದೆ ರಾಯಪ್ಪ ಬಡಿಗೇರ ಸಾ|| ತೆಗ್ಗೆಳ್ಳಿ ಇವರು ಠಾಣೆೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆಯಿಸಿದ ಫಿಯರ್ಾದಿಯನ್ನು ಹಾಜರ ಪಡಿಸಿದ್ದು ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ 3ಜನ ಹೆಣ್ಣುಮಕ್ಕಳು ಹಾಗೂ 2 ಜನ ಗಂಡು ಮಕ್ಕಳಿರುತ್ತೇವೆ. ಎಲ್ಲಾ ಹೆಣ್ಣುಮಕ್ಕಳ ಮದುವೆ ಮಾಡಿಕೊಟ್ಟಿದ್ದು ಅವರಲ್ಲಿ ಅಕ್ಕಳಾದ ಲಕ್ಷ್ಮೀ ವಯಾ|| 35 ವರ್ಷ ಇವಳಿಗೆ ಸುಮಾರು 15 ವರ್ಷಗಳ ಹಿಂದೆ ಚಿಗರಿಹಾಳ ಗ್ರಾಮದ ಅಯ್ಯಪ್ಪ ತಂದೆ ಬೀರಪ್ಪ ಬಾಗಲಕೋಟ ಈತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಮದುವೆಯಾದ ಸುಮಾರು 10-12 ವರ್ಷಗಳವರೆಗೆ ನಮ್ಮ ಅಕ್ಕ ಲಕ್ಷ್ಮೀ ಹಾಗೂ ಮಾವ ಅಯ್ಯಪ್ಪ ಅನ್ಯೋನ್ಯವಾಗಿದ್ದು ಅವರಿಗೆ 2 ಗಂಡು, 1 ಹೆಣ್ಣು ಮಗು ಇರುತ್ತದೆ. ಈಗ್ಗೆ ಸುಮಾರು 3-4 ವರ್ಷಗಳ ಹಿಂದೆ ನಮ್ಮ ಮಾವ ಅಯ್ಯಪ್ಪ ಈತನು ನನ್ನ ಅಕ್ಕ ಲಕ್ಷ್ಮೀ ಇವಳ ಶೀಲದ ಮೇಲೆ ಸಂಶಯಪಟ್ಟು ನನ್ನ ಅಕ್ಕ ಹಾಗೂ 3 ಜನ ಮಕ್ಕಳನ್ನು ಬಿಟ್ಟು ಮತ್ತೊಂದು ಮದುವೆಯಾಗಿರುತ್ತಾನೆ. ನನ್ನ ಅಕ್ಕ ತನ್ನ 3ಜನ ಮಕ್ಕಳನ್ನು ಕರೆದುಕೊಂಡು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದರು. ನಮ್ಮ ಮಾವನಾದ ಅಯ್ಯಪ್ಪ ಈತನು ಸಹ ಬೆಂಗಳೂರಿನಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿಯೂ ಸಹ ನನ್ನ ಅಕ್ಕ ಲಕ್ಷ್ಮೀ ಇವಳೊಂದಿಗೆ ಅನೈತಿಕ ಸಂಬಂದದ ವಿಷಯವಾಗಿ ತಕರಾರು ಮಾಡುತ್ತಿದ್ದನು. ಹೀಗಿರುತ್ತಾ ನಿನ್ನೆ ದಿನಾಂಕ: 08/05/2017 ರಂದು ನನ್ನ ಮಾವನಾದ ಅಯ್ಯಪ್ಪ ಈತನು ತನ್ನ ಮಗ ಬೀರಲಿಂಗ ಈತನಿಗೆ ಬೆಂಗಳೂರಿನಿಂದ ಕರೆದುಕೊಂಡು ಬಂದ ವಿಷಯ ನನಗೆ ಫೋನ್ ಮುಖಾಂತರ ತಿಳಿಸಿದ್ದು, ನಾನು ಊರಿಗೆ ಬಾ ಹಿರಿಯರಿಗೆ ಹೇಳಿ ನಿನ್ನ ಮಗ ಬೀರಲಿಂಗ ಈತನನ್ನು ಕರೆಸೋಣ ಅಂತ ಹೇಳಿದೆನು. ಹೀಗಿದ್ದು ಇಂದು ದಿನಾಂಕ: 09/05/2017 ರಂದು ಬೆಳಿಗ್ಗೆ 9 ಗಂಟೆಗೆ ನಮ್ಮ ಅಕ್ಕ ಲಕ್ಷ್ಮೀ ಇವಳು ತನ್ನ ಇನ್ನಿಬ್ಬರು ಮಕ್ಕಳಾದ ಶಂಕರನಾಗ ಹಾಗೂ ಅಂಜುಳಾದೇವಿ ಇವರನ್ನು ಕರೆದುಕೊಂಡು ಕೆಂಭಾವಿಗೆ ಬಂದು ಕೆಂಭಾವಿಯಲ್ಲ್ಲಿ ನನ್ನ ತಂಗಿ ಯಲ್ಲಮ್ಮಳ ಗಂಡ ದುರ್ಗಪ್ಪ ಚಿಂಚೋಡಿ ಈತನು ಭೇಟಿಯಾಗಿದ್ದು ನಂತರ ಎಲ್ಲರು ಕೂಡಿ ನನ್ನ ಅಕ್ಕ ಲಕ್ಷ್ಮೀ ಇವಳ ಗಂಡನ ಮನೆಯಾದ  ಚಿಗರಿಹಾಳ ಗ್ರಾಮಕ್ಕೆ ಹೋಗಿದ್ದು ಇರುತ್ತದೆ. ನಂತರ 12.45 ಗಂಟೆ ಸುಮಾರಿಗೆ ನಮ್ಮ ತಂಗಿಯ ಗಂಡನಾದ ದುರ್ಗಪ್ಪ ಚಿಂಚೋಡಿ ಈತನು ಫೋನ್ ಮಾಡಿ ನನಗೆ ತಿಳಿಸಿದ್ದೇನೆಂದರೆ  ನಾನು ಹಾಗೂ ನಿಮ್ಮ ಅಕ್ಕ ಲಕ್ಷ್ಮೀ ಇಬ್ಬರೂ ಕೂಡಿಕೊಂಡು ಚಿಗರಿಹಾಳ ಗ್ರಾಮಕ್ಕೆ 12.30 ಪಿಎಮ್ಕ್ಕೆ ಬಂದು ಮಗ ಬೀರಲಿಂಗ ಈತನಿಗೆ ಕಳಿಸಿಕೊಡು ಅಂತ ಕೇಳಿದ್ದಕ್ಕೆ ಸದರಿ ಅಯ್ಯಪ್ಪ ಈತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಒಮ್ಮೆಲೆ ತಲೆಗೆ ಹಾಗೂ ಕುತ್ತಿಗೆಗೆ ಹೊಡೆದು ಕೊಲೆ ಮಾಡಿರುತ್ತಾನೆ ಅಂತ ತಿಳಿಸಿದಾಗ ನಾನು ನಮ್ಮ ತಾಯಿ ಎಲ್ಲರೂ ಕೂಡಿ ಚಿಗರಿಹಾಳ ಗ್ರಾಮಕ್ಕೆ ಬಂದು ನೋಡಲಾಗಿ ನನ್ನ ಅಕ್ಕ ಲಕ್ಷ್ಮೀ ಇವಳು ಅವಳ ಗಂಡ ಅಯ್ಯಪ್ಪ ಈತನ ಮನೆಯ ಮುಂದೆ ಸತ್ತು ಬಿದ್ದಿದ್ದು ನೋಡಲಾಗಿ ತಲೆಗೆ, ಕುತ್ತಿಗೆಯ ಹಿಂದೆ ಹಾಗೂ ಕುತ್ತಿಗೆಯ ಎಡಭಾಗಕ್ಕೆ ಕೊಡಲಿಯಿಂದ ಹೊಡೆಗ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಸತ್ತು ಬಿದ್ದಿದ್ದಳು. ನನ್ನ ಮಾವನಾದ ಅಯ್ಯಪ್ಪ ಈತನು ನನ್ನ ಅಕ್ಕ ಲಕ್ಷ್ಮೀ ಇವಳ ಶೀಲದಲ್ಲಿ ಸಂಶಯಪಟ್ಟು ಅದೇ ದ್ವೇಷದಿಂದ ಕೊಡಲಿಯಿಂದ ತಲೆಗೆ ಹಾಗೂ ಕುತ್ತಿಗೆಗೆ ಹೊಡೆದು ಭಾರಿಗಾಯಪಡೆಸಿ ಕೊಲೆ ಮಾಡಿ ಓಡಿಹೋಗಿದ್ದು ಸದರಿಯವನನ್ನು ಪತ್ತೆ ಹಚ್ಚಿ ಕಾನೂನಿನ ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:73/2017 ಕಲಂ:302 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲಾಗಿದೆ ಅಂತಾ ವಿನಂತಿ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!